Thursday, December 5, 2013

ಕನಸಿನ ಸಾಕಾರ....ಸಾತೋಡ್ಡಿ

ಈ ಮಳೆಗಾಲದಲ್ಲಿ ಜಲಪಾತಗಳ ಪರ್ವ...

ಸಾತೋಡ್ಡಿ Sathoddi Falls, Uttara kannada.
Add caption
       ಹಲವು ದಿನಗಳ ಕನಸು ನನಸಾದ ಅಮೋಘಗಳಿಗೆ...ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದ ಕನಸಿನ ಸಾಕ್ಷಾತ್ಕಾರಕ್ಕಾಗಿ ಕನರ್ಾಟಕದ ನಯಾಗರವೆಂದು ಪ್ರಸಿದ್ಧವಾಗಿರುವ ಸಾತೋಡ್ಡಿಗೆ ಹೊರಟು ನಿಂತಾಗ, ಉಂಟಾದ ತೊಂದರೆಗಳು ಒಂದೆರಡಲ್ಲ. ಸಿರಸಿಗೆ ಬಂದ ದಿನವೇ ನಮಗೆ ಭಾರಿ ಮಳೆ ಭವ್ಯ ಸ್ವಾಗತ ಕೋರಿತು. ನಮ್ಮ ಹೋಟೆಲ್ ಮಾಲಿಕ, "ನಿಮಗೆ ಈ ವಾಹನದಲ್ಲಿ ಹೋಗಲು ಸಾಧ್ಯವಾಗುವುದು ಅನುಮಾನ". ಎಂದಾಗ ತಣ್ಣಿರನ್ನು ಬಕೆಟ್ಗಟ್ಟಲೆ ತಂದು ಸುರಿದ ಅನುಭವ. ನಮಗೆ ದೊರಕಿದ ಕಾರ್ ಚಾಲಕನೂ ಹಾಗೆ ಹೇಳಿದಾಗ ಉಂಟಾದ ನಿರಾಸೆ ಅನುಭವಕ್ಕೆ ನಿಲುಕದು. ಆದರೂ ಸಾವರಿಸಿಕೊಂಡು ಸ್ಥಿತಪ್ರಜ್ಞನಾಗಿರಲು ಪ್ರಯತ್ನಿಸಿದೆ. 
ಚಿಮ್ಮಿದ ಸಾತೋಡ್ಡಿ ಜಲಧಾರೆ. 
ಕೊನೆಗಂತು ಯಲ್ಲಾಪುರದಲ್ಲೊಬ್ಬ ನೀವು ಅಲ್ಲಿಗೀಗ ಹೋಗಬಹುದೆಂದಾಗ ರೋಮಾಂಚಿತನಾಗಿದ್ದೆ. ಅಂತೂ ಅಲ್ಲಿಗೆ ತಲುಪಿದೆವು.  ದಾರಿಯುದ್ದಕ್ಕೂ ನಮ್ಮ ವಾಹನ ರಸ್ತೆಯೊಂದಿಗೆ ಯುದ್ಧಕ್ಕಿಳಿದ್ದಿತ್ತು! ಕಾಡದಾರಿ ಅದ್ಭುತವಾಗಿತ್ತು. ಸುತ್ತಲಿನ ಪರಿಸರ ಉನ್ಮಾದವನ್ನುಂಟು ಮಾಡುತ್ತಿತ್ತು. ಸುಮಾರು 2-3 ಕಿ.ಮೀ. ಕಚ್ಚಾರಸ್ತೆಯಲ್ಲಿ ಸಾಗಿ ಜಲಪಾತದ ಹತ್ತಿರಕ್ಕೆ ತಲುಪಿದೆವು. ಅಲ್ಲಿಂದ 15 ನಿಮಿಷದ ಕಾಲು ಹಾದಿ. 
ಮಾಗೋಡು
ಹಾದಿಯ ರೋಮಾಂಚಕತೆಯದು ಮತ್ತೊಂದು ಕತೆ. ಕೈ ಇಟ್ಟಲ್ಲಿ ಚಿಟ್ಟೆಗಳು ಮುತ್ತಿಕೊಳ್ಳುತ್ತಿದ್ದವು. ಕಾಲು ಹಾಕಿದಲ್ಲೆಲ್ಲಾ ಹಾವು ಮತ್ತು ಹಾವಿನ ಮರಿಗಳು. ಹಿಂದಿನ ದಿನವಷ್ಟೆ ಒಬ್ಬ ಹಾವಿನ ಕಡಿತಕ್ಕೆ ಒಳಗಾಗಿದ್ದವನ್ನು ನೋಡಿ ಸ್ವಲ್ಪ ಗಾಬರಿಗೊಂಡೆವು. 
ಮಾಗೋಡು
ಹಿಂದಿನ ದಿನ ಸುರಿದ ಮಳೆಗೆ ಜಲಪಾತವಂತು ಧುಮ್ಮಿಕ್ಕಿ ಹರಿಯುತ್ತಿತ್ತು. ಜಲಪಾತದಲ್ಲಿ ಮಿಂದು ಖುಷಿಪಟ್ಟೆವು. ಮಂಗಗಳ ಹಾವಳಿಯಂತೂ ಹೇಳ ತೀರದು. ನಮ್ಮ ಪುಟ್ಟನ ಕೈಯಿಂದ ಒಂದು ಇಡ್ಲಿ ಹೊಡೆದುಕೊಂಡು ಹೋಗಿ ಮಜಾ ಮಾಡಿತ್ತು.
ಜೇನು ಕಲ್ಲು ಗುಡ್ಡ
ಜೇನು ಕಲ್ಲು ಗುಡ್ಡ
ಇಲ್ಲಿಂದು ಮಾಗೋಡು ವೀಕ್ಷಣಾ ಸ್ಥಳ, ಜೇನುಕಲ್ಲು ಗುಡ್ಡ ಮನೋಹರತೆ ನೋಡಿದೆವು. ಮುಂದೆ ಯಾಣ, ಸಹಸ್ರಲಿಂಗ ನೋಡಿ ಹಿಂದಿರುಗಿದೆವು.
ಜೇನು ಕಲ್ಲು ಗುಡ್ಡ

ಯಾಣದ ಭೈರವೇಶ್ವರ


ಗೆದ್ದ ಸಂಭ್ರಮ 

ನೀವೊಮ್ಮೆ ನೋಡಿ ಬನ್ನಿ... good luck. 













Sunday, November 17, 2013

ನೆನಪುಗಳ ಮಾತು ಮಧುರ

ನೆನಪುಗಳ ಮಾತು ಮಧುರ


"ನೆನಪು ಹಳೆಯದಾದರೂ
ಭಾವ ನವನವೀನ"


ಗೆಳೆಯರೆ ನೆನಪಿದೆಯೆ ನಿಮಗೆ ನಾವೊಂದು ಪ್ರವಾಸ ಕೈಗೊಂಡಿದ್ದು ಅದೂ ಸೆಪ್ಟೆಂಬರನ ಬಿರು ಮಳೆಯ ನಡುವೆ . ಮಾತು, ಓದಿದ ಪುಸ್ತಕ, ಅವರಿವರ ಸುದ್ದಿ, ನಗೆ, ಜೋಕ್ಸು, ಪಾಲಿಟಿಕ್ಸು, ಮೌನ, ಪ್ರಪಂಚ ಜ್ಞಾನ ಎಲ್ಲಕ್ಕೂ ವೇದಿಕೆ ಆಗುತ್ತಿದ್ದ ಪ್ರವಾಸ ಈಗೊಂದು ನೆನಪಷ್ಟೇ....!

ಮತ್ತೆ ನಿಮ್ಮ ಖುಷಿಗೊಸ್ಕರ ಈ ಪೋಟೋ! 


ನೆನಪುಗಳ ಮಾತು ಮಧುರ...
ಮೌನಗಳ ಹಾಡು ಮಧುರ...
ನೆನಪೇ ಇರಲಿ......

ನೆನಪಾಯಿತೆ  ಮತ್ತೊಮ್ಮೆ ಪ್ರವಾಸ ಹೋಗೋಣ್ವಾ......ತಯಾರಾಗಿರಿ... 


Saturday, September 28, 2013

ಕಾಡ ಝರಿಯ ಜಾಡ ಹಿಡಿದು...

ವಿಜಯ ಕನರ್ಾಟಕದಲ್ಲಿ ಇತ್ತೀಚಿಗೆ ಪ್ರಕಟವಾದ ನನ್ನ ಒಂದು ಲೇಖನ,  ಓದಿ ಪ್ರತಿಕ್ರಿಯಿಸಿ..

ನಾವೊಂದು ಐದಾರು ಸ್ನೇಹಿತರು ಕೂಡಿಕೊಂಡು ಭಾನುವಾರದಂದು ಸಣ್ಣ ಕಾಡ ಝರಿಯ ಜಾಡ ಹಿಡಿದು ಹೊರಟಾಗಿನ ನಮ್ಮ ಅನುಭವಗಳಿವು. ನಮ್ಮ ಸ್ವಾಗತಕ್ಕೆ ನಿಂತ ಗಿರಿಗಳು. ಮ್ಯಾಗಂನೀಸ್ ಅದಿರಿನ ರಾಶಿ ರಾಶಿ ಕಲ್ಲುಗಳು. ಮುಗಿಲ ಚುಂಬಿಸುವ ವೃಕ್ಷಗಳು. ಆಗಾಗ್ಗೆ ಕಾಣಸಿಗುವ ಕಾಡು ಪಕ್ಷಿ ಸಂಕುಲ. ಕಾಡುವ ಇಂಬಳಗಳ ರಾಶಿ. ಇವುಗಳ ನಡುವೆ ಯಾವುದೇ ಅಳುಕಿಲ್ಲದೆ, ನಿರಾಬರಣೆಯಾಗಿ ಹರಿಯುವ ಸಣ್ಣ ತೊರೆಯೇ ಈ ಅಕ್ಕಿನಕೊಡ್ಲು ಜಲಧಾರೆ. ಮುಂದೆ ಇದು  ಚಕ್ರಾ ನದಿಗೆ ಸೇರುತ್ತದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಿ ಧನ್ಯರಾಗುತ್ತಾ ಸಾಗುತ್ತದೆ ಈ ಜಲಧಾರೆ.

ಮೂರು ಕವಲಾಗಿ ಹರಿಯುವ ಈ ಜಲಧಾರೆಯನ್ನು ನೋಡುವುದೇ ಚಂದ. ತಲುಪುವುದೊಂದು ರೋಮಾಂಚನಕಾರಿ ಅನುಭವ. ಇಡುವ ಪ್ರತಿ ಹೆಜ್ಜೆಗೂ ಜಾರಿಕೆಯ ಅನುಭವವಾಗುತ್ತದೆ. ಕಲ್ಲುಗಳ ಇಡುಕಿನಲ್ಲಿ ಹೆಜ್ಜೆ ಇಡುತ್ತಾ ನಿಧಾನವಾಗಿ ಸಾಗಬೇಕು. ಕೆಲವೊಮ್ಮೆ ಅಕ್ಷರಶ ನುಸುಳಬೇಕು. ಜಾರುವ ಬಂಡೆಗಳನ್ನು ದಾಟುವ ಕೆಲವೊಮ್ಮೆ ಜಿಗಿಯುವ, ಕೆಲವೊಮ್ಮೆ ಹುಳುವಿನಂತೆ ತೆವಳುವ ಇಂತಹ ರೋಮಾಂಚನವನ್ನು ಒದಗಿಸುವ ಜಲಧಾರೆ ಕೊನೆ ಮುಟ್ಟಿದಾಕ್ಷಣ ತನ್ನೆಲ್ಲಾ ಸೌಂದರ್ಯದಿಂದ ಮಂತ್ರ ಮುಗ್ದಗೊಳಿಸುತ್ತದೆ. ಹೂ ಪಕಳೆಗಳಂತ ನೀರ ಹನಿಗಳ ಸಿಂಚನಗೈವ, ಮೂರು ಕವಲಾಗುವ ಈ ಜಲಧಾರೆ  ನೋಡುಗರಿಗೆ ಆನಂದಾನುಭೂತಿಯನ್ನುಂಟುಮಾಡುತ್ತದೆ. ನೀರ ಹನಿಗಳ ಕೆಳಗೆ ಕುಳಿತರಂತೂ ಅನಿರ್ವಚನೀಯವಾದ ಆನಂದವನ್ನುಂಟುಮಾಡುತ್ತದೆ. ಜಲಧಾರೆ ಜಳಕವಾಡುವಷ್ಟು ಜಾಗ ಇಲ್ಲಿರುವುದು ವಿಶೇಷ! ಜಲಪಾತ ವೀಕ್ಷಿಸಿ ವಾಪಾಸಾಗುವ ವರೆಗೂ ಇಂಬಳಗಳು ನಮ್ಮನ್ನು ಬಿಳ್ಕೊಟ್ಟವು.
ಈ ಜಲಧಾರೆಯ ಮೂಲ ತಲುಪಲು, ಜಲಧಾರೆಯ ಬದಿಯಲ್ಲಿಯೇ ಸಾಗಿ ಮುಂದೆ ಸಣ್ಣ ಬೆಟ್ಟದ ತುದಿಗೆ ತಲುಪಬೇಕು. ಅಲ್ಲಿ ಸಣ್ಣ ಜಿನುಗಾಗಿ ಪ್ರಾರಂಭವಾಗುವ ಇದು ಅನಂತರ ವಿವಿಧ ಮೂಲಗಳಿಂದ ನೀರನ್ನು ಸಂಗ್ರಹಿಸಿಕೊಂಡು ಜಲಪಾತವಾಗುತ್ತದೆ. ಹರಿವಿನ ಬದಿಯಲ್ಲಿ ಹೋಗುವ ಅವಕಾಶವಿದೆ. ಆದರೆ ಬಹಳ ಜಾರಿಕೆ ಇರುತ್ತದೆ ಅಲ್ಲಿ ಜಾಗರೂಕರಾಗಿ ಹೋಗಬೇಕು.



ತಲುಪುವುದು ಹೀಗೆ:- ಉಡುಪಿಯಿಂದ 55 ಕಿ.ಮಿ. ದೂರದ ಸಿದ್ದಾಪುರ ತಲುಪಿ ಅಲ್ಲಿಂದ ಹಳ್ಳಿಹೊಳೆ ಮಾರ್ಗವಾಗಿ ಬರಬೇಕು. ಕಮಲಶಿಲೆಯ ನಂತರ ಶೆಟ್ಟಿಪಾಲು ಎನ್ನುವ ಸಣ್ಣ ಹಳ್ಳಿಯಲ್ಲಿ ಇಳಿದು, ಎಡಗಡೆಯ ಮಣ್ಣುದಾರಿಯಲ್ಲಿ 2 ಕಿ.ಮಿ. ಸಾಗಿದಾಗ ಸಣ್ಣ ಝರಿ ಕಾಣುತ್ತದೆ. ಅದರ ಜಾಡು ಹಿಡಿದು ಬೆಟ್ಟವೇರಿದರೆ ಸಿಗುವುದೇ ಈ ಅಕ್ಕಿನಕೊಡ್ಲು ಜಲಧಾರೆ. ಅಜ್ಞಾತವಾಗಿರುವುದರಿಂದ ಸ್ಥಳಿಯರ ಸಹಾಯ ಪಡೆಯವುದು ಸೂಕ್ತ ಇಲ್ಲವಾದರೆ ದಾರಿ ತಪ್ಪುವಿರಿ ಜೋಕೆ.

ಸುತ್ತ ಮುತ್ತಲು:- ಇಲ್ಲಿಂದ ಬಿಳ್ಕಲ್ ತೀಥವೆಂಬ ಜಲಪಾತ, ಮೂಡಗಲ್ಲು ಗುಹಾಂತರ ದೇವಾಲಯ, ದೇವರ ಬಾಳು ಜಲಪಾತ ವೀಕ್ಷಿಸಿಲು ಹೋಗಬಹುದು. ಅಲ್ಲದೆ ಕಮಲಶಿಲೆಯ ದುಗರ್ಾಪರಮೇಶ್ವರಿ ದೇವಾಲಯ, ದೇವಸ್ಥಾನದ ಮೂಲ ಗುಹೆ ಪ್ರಕೃತಿ ನಿಮರ್ಿತ ಅತಿ ಸಮೀಪದ ಸುಂದರ ಸ್ಥಳಗಳು. ಅರೆಮನೆ ಕೊಡ್ಲು ಎಂಬ ಸಣ್ಣ ಜಲಧಾರೆ ಹಳ್ಳಿಹೊಳೆಯ ಸಮೀಪವಿದೆ. ಇಲ್ಲಿನ ಎಲ್ಲಾ ಜಲಧಾರೆಗಳನ್ನು ತಲುಪಲು ಸ್ಥಳಿಯರ ಸಹಾಯ ಪಡೆದುಕೊಳ್ಳುವುದು ಉತ್ತಮ. ಇಲ್ಲವಾದರೆ ದಾರಿ ತಪ್ಪುವುದು ಖಂಡಿತ!

ಶ್ರೀಧರ್. ಎಸ್. ಸಿದ್ದಾಪುರ, ಕುಂದಾಪುರ ತಾಲೂಕು

ಮಕ್ಕಳ ದನಿ

ಮಕ್ಕಳ ದನಿ ಮತ್ತು ಪ್ರತಿಬಿಂಬ ಪತ್ರಿಕೆ ಬಿಡುಗಡೆ


ನಮ್ಮ ಶಾಲೆಯಲ್ಲಿ ನಡೆದ ಪತ್ರಿಕೆ ಬಿಡುಗಡೆ ಮತ್ತು  ಮಕ್ಕಳ ದನಿ ಎನ್ನುವ ಮಕ್ಕಳೇ ರೂಪಿಸಿದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು. ಅದರ ಎರಡು ತುಣುಕುಗಳು. 





Tuesday, August 20, 2013

ವಿಚಾರ ಮಾಡಬೇಕಾದ ವಿಚಾರ!


ಇಂದಿನ ಸಮಾಜವು ನಮ್ಮ ಹಳೆಯ ಶಾಲೆಗಳ ಪ್ರತಿನಿಧಿ ಎನಿಸುವುದಿಲ್ಲವೇ? ಮುಂದೆಯೂ ಇದಕ್ಕಿಂತ ಉತ್ತಮ ಸಮಾಜ ನಿರೀಕ್ಷಿಸುತ್ತೇವಲ್ಲವೆ? ಈ ನಿರಿಕ್ಷೆಗೆ ನೀರೆರೆಯ ಬೇಕಾದುದು ನಮ್ಮ ಶಾಲೆಗಳು ಮತ್ತು ಸಮಾಜ. ಇನ್ನು ಮುಂದೆ ನಮ್ಮ ಎಲ್ಲಾ ಶೌಚಾಲಯಗಳ ಗೋಡೆಗಳು ಸ್ವಚ್ಚ ಸುಂದರವಾಗಿರುತ್ತವೆ! ಏಕೆಂದರೆ ಮಗುವಿಗೆ ತನ್ನ ಬಾವನೆಯನ್ನು ಹೊರ ಹಾಕಲು ಒಂದು ಸುವರ್ಣ ಅವಕಾಶವನ್ನು ಹಲವಾರು ಶಾಲೆಗಳು ಮಾಡುತ್ತಿವೆ. ಅದು ಶಾಲಾ ಗೋಡೆ ಮತ್ತು ಮಾಸಿಕ ಪತ್ರಿಕೆಗಳ ಮೂಲಕ. ಅವುಗಳಿಗೆ ಸಮುದಾಯದ ಅಭೂತಪೂರ್ವ ಬೆಂಬಲವೂ ದೊರಕಿದೆ ಎನ್ನುವುದು ಖುಷಿಯ ವಿಚಾರ. ವಿಚಾರ ಮಾಡಬೇಕಾದ ವಿಚಾರವಲ್ಲವೇ?
ನಮ್ಮ ಶಾಲಾ ಇಂತಹ ಒಂದು ಸಣ್ಣ ಪ್ರಯತ್ನವೇ 'ಪ್ರತಿಬಿಂಬ' ಪತ್ರಿಕೆ. ಊರಿನವರ ಸಮಸ್ತ ಜನರ ಸಹಕಾರ ಹಾಗು ಶಾಲಾ ಸಹಶಿಕ್ಷಕಿಯರ ಸಂಪೂರ್ಣ ಸಹಕಾರದೊಂದಿಗೆ ಎರಡನೇ ವರ್ಷದ ಶಿಶುವಾಗಿದೆ. ಮುಂದೆಯೂ ಸಹ ಇಂತಹದೇ ಪ್ರೋತ್ಸಾಹ ದೊರಯಲಿಯೆಂದು ಹಾರೈಸುತ್ತೇವೆ.
ನಾವು ಕಲಿತಂತೆ ನಮ್ಮ ಮುಂದಿನ ಜನಾಂಗ ಕಲಿಯದೇ ಹೊಸ ಹೊಸ ತಂತ್ರಜ್ಞಾನವನ್ನು ಕಲಿಯುತ್ತಾ ಮೌಲ್ಯಗಳನ್ನು ಸಹ ಕಲಿಯುತ್ತಾ ಸಾಗಬೇಕಲ್ಲವೆ? ಹಾಗಾಗಿ ಶಾಲೆಗೆ ಬೇಕಾದ ಕಂಪ್ಯೂಟರ್ ಮತ್ತು ಎಜುಸ್ಯಾಟ್ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದೇವೆ.
ಇಲ್ಲಿ ನಮ್ಮ ಶಾಲಾ ಪತ್ರಿಕೆಯ ಎರಡನೆಯ ಸಂಚಿಕೆಯಿದೆ. ಸಹೃದಯಿ ಓದುಗರು ತಮ್ಮ ಅನಿಸಿಕೆ ತಿಳುಸುವಿರಲ್ಲಾ. ವಂದನೆಗಳೊಂದಿಗೆ.






















Saturday, July 20, 2013

ಶಿವಮೊಗ್ಗ ಜಿಲ್ಲೆಯ ಅನನ್ಯ ಅವಶೇಷಗಳು..


 ವಿದ್ವಂಸಗಳನ್ನು ಮತ್ತು  ವಿದ್ರೋಹಗಳನ್ನು ಈ ದೇಶ ಬಹಳಷ್ಟು ಕಂಡಿದೆ. ಉಚ್ಚ ನೈತಿಕತೆಯನ್ನು ಹೊಂದಿದ ದೇಶ ಹೀಗೆಕಾಯಿತು ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಉತ್ತರ ಹುಡುಕುವುದು ಬಲು ಕಠಿಣ. ನಮಗೆ ನಮ್ಮ ಇತಿಹಾಸದ, ಸಾಹಿತ್ಯದ ಬಗೆಗೆ ಹೆಮ್ಮೆ ಉಳಿಯದಂತಾಗುವಷ್ಟು ಕೊಡಲಿ ಏಟನ್ನು ಬ್ರಿಟಿಷ್ರಿಂದ ತಿಂದ್ದಿದ್ದೇವೆ. ಮೊದಲು ನಾನು ನಂತರ ದೇಶವೆನ್ನುವ ಭಾವ ನನ್ನಂಥ ಯುವ ಜನರಲ್ಲಿ ಮನೆ ಮಾಡಿರುವುದು ಕಳವಳಕಾರಿ ಸಂಗತಿ. ದೇಶದ ಬಗೆಗೆ ಅಭಿಮಾನ ಕೆಲವೇ ಕೆಲವು ಜನರಲ್ಲಿ ಮಾತ್ರ ಉಳಿದಿದೆಯೇನೋ ಎನ್ನುವಷ್ಟು ಕಳವಳವಾಗುತ್ತದೆ. ಹೀಗೇಕಾಯಿತೆಂದು ನಮ್ಮ ಹಿರಿಯರು ಚಿಂತಿಸಿದ್ದಲ್ಲ, ನಾವು ಚಿಂತಿಸುತ್ತಿಲ್ಲ?!  17 ಬಾರಿ ದಂಗೆಗಳಾದಾಗ ನಾವು ಸುಮ್ಮನಿದ್ದೆವು. ನಮ್ಮ ಕಿರೀಟವೇ ಜಾರಿ ಹೋಗುವ ಸ್ಥಿತಿ ಬಂದರೂ ನಾವು ಸುಮ್ಮನಿದ್ದೇವೆ! ಇನ್ನೆಷ್ಟು ದಿನ ಈ ಗೊಂದಲ. ನಮ್ಮ ಶಿಕ್ಷಣದ ಗುಣಮಟ್ಟವೇ ಕಳಪೆಯೇ ಎನ್ನುವ ಸಂಶಯವೇ ನಮ್ಮನ್ನು ಕಾಡುತ್ತವೆ.
ಶಿವಮೊಗ್ಗದ ಹಲವು ಶಿಲ್ಪಕಲಾ ವೈಭವಗಳನ್ನು, ಹೊಯ್ಸಳ, ಚಾಲುಕ್ಯ ರಚನೆಗಳನ್ನು ಕಂಡು ಬಂದ ನಂತರ ನನಗನಿಸಿದ್ದು ಇದು. ಹೊಳೆ ಕೆರೆಗಳಲ್ಲಿ ಬಿದ್ದಿರುವ ಮೂತರ್ಿಗಳು, ನರಿ ನಾಯಿಗಳ ಮೂತ್ರ ಕುಡಿಯುತ್ತಾ ಬಿದ್ದಿರುವುದು ಅತಿಯಾದ ಆಶ್ಚರ್ಯಕ್ಕೆ ತಳ್ಳಿತು. ಸರಕಾರಕ್ಕೆ ಕಣ್ಣಿಲ್ಲವೆಂದು ತಿಳಿಯೋಣ ಆದರೆ ಅಲ್ಲಿನ ಸಹೃದಯರಿಗೆ, ಇತಿಹಾಸದ  ಆಸಕ್ತರಿಗೆ, ಸಾಹಿತ್ಯದ ಸಹೃದಯದ ಓದುಗರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅನಿಸಲಿಲ್ಲವೇ?? ಅಯ್ಯೋ...
ಸೆಪಿಯಾ ಬಣ್ಣದಲ್ಲಿ ಅದ್ದಿದ ಈ ಚಿತ್ರ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 




Sunday, June 30, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...4

ಇಲ್ಲೂ ಇದೆ ನೋಡಿ ಒಂದ್ ಶಾಲೆ:- 
10,200 ಅಡಿ ಎತ್ತರ. 3,000 ಜನಸಂಖ್ಯೆಯ ಈ ಹಳ್ಳಿಯಿರುವ ಪರ್ವತದ ತುತ್ತ ತುದಿಯಲ್ಲಿ ಶಾಲೆ ಇದೆ ಎನ್ನುವುದೊಂದು ವಿಶೇಷ. ಶಾಲೆಯನ್ನು ಕಡಿದಾದ ಪರ್ವತಗಳು ಸುತ್ತುವರಿದಿದೆ. ಈ ಶಾಲೆ ಕೇವಲ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.  
ಮಕ್ಕಳ ಸಂಖ್ಯೆ 300ಕ್ಕೂ ಅಧಿಕ. ಪ್ರತಿದಿನವು ಇಬ್ಬರು ಶಿಕ್ಷಕರು 2.5 ಗಂಟೆಗಳ ಪರ್ವತಗಳ ಸೆರಗನ್ನು ಕಡಿದಾದ ಕಡೆಗಳಲ್ಲಿ ಹತ್ತಿ ಬರುತ್ತಾರೆನ್ನುವುದು ವಿಶೇಷ. ನಾವು ಕೇವಲ 1 ಕಿ.ಮಿ. ನಡಿಗೆಗೆ ಹೆದರುವಾಗ ಈ ಶಿಕ್ಷಕರು ವರ್ಷವಿಡಿ ನಾಜೂಕಾದ ಪರ್ವತ ಎರುತ್ತಾ, ಮಳೆಗಾಳಿಗೆ ಲೆಕ್ಕಿಸದೆ ಪಾಠ ಪ್ರವಚನ ಮಾಡುವುದನ್ನು ನೋಡುವುದೊಂದು ರೋಮಾಂಚನ. 
ನಾವು ಪರ್ವತವೇರುವ ಸಂದರ್ಭ ಅಲ್ಲಿನ ಶಿಕ್ಷಕರನ್ನು ನೋಡಿ ಮಾತನಾಡಿಸಿದೆವು. ಸಂಜೆಯ ವೇಳೆಗೂ ಅವರು ಲವಲವಿಕೆಯಿಂದ ಮಾತನಾಡಿಸಿ ಉಪಚರಿಸಿದರು. ಸರಳ ಕಟ್ಟಡದ ಈ ಶಾಲೆ ಮನ ಸೆಳೆಯಿತು. ಶಾಲೆ ಬಿಟ್ಟ ಕೂಡಲೆ ಕೆಲವು ಮಕ್ಕಳು ಮರದ ಮೇಲೆ ಹತ್ತಿ ನಮಗೆ ಸರ್ಕಸ್ ತೋರಿಸತೊಡಗಿದರು. ನಾವು ಅವರ ಕೆಲವು ಪೋಟೊ ತೆಗೆದುಕೊಂಡೆವು ಅವರೆಲ್ಲಾ ನಾಚಿಕೆಯಿಂದ ಮುಖ ತಪ್ಪಿಸಿಕೊಂಡರು. ನಮಗೋ ಮಲಾನ ಸಂದಶರ್ಿಸಿದ ಖುಷಿಯಲ್ಲಿ ತೇಲುತ್ತಾ ಸಾಗಿದೆವು. ಸರಿಯಾಗಿ ಪೋಟೊ ತೆಗೆಯಲಾಗಲಿಲ್ಲ. ಮಲಾನಕ್ಕೆ ನಮಗೆ ಮೊದಲು ಸ್ವಾಗತಿದ್ದೆ ಈ ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರು ಎನ್ನುವುದು ವಿಶೇಷ. ದಾರಿ ತಪ್ಪಿತೆನ್ನುವಾಗ ಸಿಕ್ಕದ ಖುಷಿಯಲ್ಲಿದ್ದೆವು.



 ಇಲ್ಲಿಂದ ಎಲ್ಲಿಗೆ:-

ಇಲ್ಲಿಂದ ಅನೇಕ ಸುಂದರವಾದ ಸ್ಥಳಗಳನ್ನು ನೋಡಬಹುದು. ಮಣಿಕರಣ್, ನಗ್ಗರ್ನ ರೋರಿಚ್ ಮ್ಯೂಸಿಯಂ, ಬಿಜಲಿ ಮಹಾದೇವ, ಮಹಾದೇವ ತೀರ್ಥ ಮುಂತಾದ ಅತಿ ಹತ್ತಿರದ ಸ್ಥಳಗಳಿವೆ. ಅಲ್ಲದೇ ಮನಾಲಿ, ಹಿಡಿಂಬಾ ದೇವಸ್ಥಾನ, ಮನು ದೇವಸ್ಥಾನ, ರೋಥಾಂಗ್ ಪಾಸ್, ಬಿಯಾಸ್ ಕುಂಡ್ ಮುಂತಾದ ಪಟ್ಟಿ ಮಾಡಲಾಗದಷ್ಟು ಅನೇಕ ಸ್ಥಳಗಳಿವೆ. ಇಲ್ಲಿಂದ ಮಲಾನ ಕಣಿವೆಯನ್ನು ನೋಡಬಹುದು. 
ಚಂದ್ರಕಣಿ ಪಾಸ್ ಎನ್ನುವ ಸುಂದರ ಸ್ಥಳ ನೋಡಲು ಇಲ್ಲಿಂದ ಕೇವಲ 4 ಗಂಟೆಯ ದಾರಿ. ಚಂದ್ರಕಣಿ ಚಾರಣವನ್ನು ಸಹ ಇಲ್ಲಿಂದಲೂ ಕೈಗೊಳ್ಳಬಹುದು. ಅದ್ಭುತವಾದ ಪಾರ್ವತಿ ಕಣಿವೆ, ಹಿಮಾಲಯದ ವಿವಿಧ ಬೆಟ್ಟಗಳ ದರ್ಶನಮಾಡಲು ಚಂದ್ರಕಣಿ ಪಾಸ್ ಚಾರಣ ಮಾಡಬಹುದು.
(ಮುಂದುವರಿಯುವುದು .... )

Thursday, June 6, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...3

ಹಾಳುಗೆಡವಿದ ಹೈಡೋ ಪ್ರಾಜೆಕ್ಟ್
ನಿನಾದದ ಮಲಾನಾ ನದಿ. 
ಮಲಾನದ ಜನರು  ತಮ್ಮಷ್ಟಕ್ಕೆ ತಾವು ಆರಾಮವಾಗಿದ್ದರು. ಅವರದ್ದೇ ಕೃಷಿ, ಹೈನುಗಾರಿಕೆ  ಮತ್ತಿತರೇ ಉದ್ಯೋಗದಲ್ಲಿ ಅವರದೇ ಆಟಗಳಲ್ಲಿ  ಮಜವಾಗಿದ್ದರು. ಆದರೆ ದಶಕದಿಂದೀಚಗೆ ಅಲ್ಲೊಂದು ಹೈಡ್ರೋಪ್ರಾಜೆಕ್ಟ್ ಕಾಲಿಟ್ಟಿತು ನೋಡಿ ಅಲ್ಲಿಂದ ಮಲಾನದ ನಕ್ಷೆಯೇ ಬದಲಾಯಿತು. ಮಲಾನ ನದಿಯಲ್ಲಿ ಕಷ್ಟ ಪಟ್ಟು ದಾಟಿ ಜನರು ಅಲ್ಲಿಗೆ ಹೋಗ ಬೇಕಾಗಿತ್ತು. ಹಾಗಾಗಿ ಜನರಿಗೆ ಹೊರಗಿನ ಸಂಪರ್ಕವೇ ಇರಲಿಲ್ಲ, ನೋಡ ಬೇಕೆಂದರೆ ಕನಿಷ್ಟ 20 ಕಿ.ಮೀ ನಡೆಯಬೇಕಿತ್ತು. ಅಲ್ಲಿನ ಜನರ ಮುಗ್ದತೆ ಹಾಗೆ ಉಳಿಯುತ್ತಿತ್ತು. ಹಿಂದೆ ಹೋದವರು ಅಲ್ಲಿನ ವರ್ಣನೆ ಕೇಳಿ ಹೋದರೆ ಬ್ರಮನಿರಸನವಾಗುದರಲ್ಲಿ ಆಶ್ಚರ್ಯವಿಲ್ಲಾ. 
     


ಹೈಡ್ರೋ ಪ್ರಾಜೆಕ್ಟ್ ಗೆ ಮಾಡಿದ ರಸ್ತೆಯ ವಿಹಂಗಮ ನೋಟ. 
ಅಂಥ ಸೌಂದರ್ಯದಿಂದ ಕೂಡಿದ ಮಲಾನ ಈಗ ಮಲೀನವೆನ್ನುವಷ್ಟು ಮಲೀನವಾಗಿದೆ. ಶುದ್ಧ ಜಲಮೂಲಗಳು ಸಹ ಹಾಳಾಗಿವೆ ಎನ್ನುವಾಗ ವಿಷಾದವಾಗುತ್ತದೆ. ಮಲಾನದಲ್ಲಿ ಈಗ ಪ್ಲಾಸ್ಟಿಕ್ಮಯ ವಾತವಾರಣ. ಅಲ್ಲಲ್ಲಿ ಲೇಸ್ ಪ್ಯಾಕೆಟ್ಟುಗಳನ್ನು, ಚಾಕಲೇಟ್, ಐಸ್ಕ್ರೀಮ್ ತಟ್ಟೆಗಳು ಕಾಣಸಿಗುತ್ತವೆ. ಐಸ್ಕ್ರೀಮ್ ಮಾರುವವರು 20-30 ಕಿ.ಮೀ. ನಿಂದಾಚೆಯಿಂದ ತಂದು ಇಲ್ಲಿ ಮಾರುತ್ತಾರೆ! ಮಾರುವವರು ಮಕ್ಕಳು ನಡೆದೇ ಬರುತ್ತಾರೆ!
ಆದಷ್ಟು ಇಲ್ಲಿನ ಪರಿಸರವನ್ನಾದರೂ ರಕ್ಷಿಸುವುದು ಅಗತ್ಯ.

ಧಮ್ ಹೊಡಿ ಬೇಕೆ?
ಇಲ್ಲಿನ ಇನ್ನೊಂದು ವಿಶೇಷತೆ, ನಮ್ಮ ಕಾನೂನುಗಳು ಇವರಿಗೆ ಲಾಗೂ ಆಗದೇ ಇರುವುದು. ಇಲ್ಲಿ ಪೋಲಿಸ್ ಹಸ್ತಕ್ಷೇಪವಾಗಲೀ, ರಾಜಕೀಯ ಹಸ್ತಕ್ಷೇಪ ಇಲ್ಲದೇ ತಮ್ಮದೇ ವಿಶೇಷವಾದ ಸರಕಾರ ಸ್ಥಾಪಿಸಿಕೊಂಡು ಆಡಳಿತ ನಡೆಸುತ್ತಾರೆ. ಎಲ್ಲದಕ್ಕೂ ಗ್ರಾಮದ 'ಮುಖ್ಯ' ನೋಡಿಕೊಳ್ಳುತ್ತಾನೆ. ಎಲ್ಲದೂ ಅವನ ಮೇಲುಸ್ಥುವಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿನ ಜನರು ಸ್ವತಂತ್ರರು. ಇವರ ಅವಶ್ಯಕತೆಗಳು ತುಂಬಾ ಕಡಿಮೆ ಹಾಗಾಗಿ ನಿತ್ಯ ಸಂತೋಷಿಗಳು. ಯಾಕೊ ಏನೋ ಸರಕಾರದ ಹಸ್ತಕ್ಷೇಪ ಇಲ್ಲಿ ಬಹಳ ಕಡಿಮೆ. ಹಾಗಾಗಿ ಇವರು ಅಮಲು ಪದಾರ್ಥ ಬೆಳೆಯುತ್ತಾರೆ. 
ಅಲ್ಲಿನ ಕುರಿ ಕಾಯುವ ಅಜ್ಜನೊಂದಿಗೆ. 



    ನಾವಿಲ್ಲಿಗೆ ಹೋದಾಗ ಅಲ್ಲಿನ ಕುರಿಕಾಯುವವ ನಿಮಗೆ ಜರಸ್ ಬೇಕೆ ಎಂದು ಕೇಳಿದ. ಅದೂ ಯಾವುದೇ ಆತಂಕವಿಲ್ಲದೇ! ನಾವಂತೂ ದಂಗು ಬಡಿದು ಕುಳಿತೆವು, ನಿರಾಕರಿಸಿದೆವು. ಇಲ್ಲಿ ಜರಸ್ ಎನ್ನುವುದು ಅತಿ ಸಾಮಾನ್ಯವಾದ ಸಂಗತಿ! ಶಾಲಾ ಮಸ್ತರರನ್ನು ಭೇಟಿಯಾದೆವು! ಇಲ್ಲಿಯೂ ಒಬ್ಬ ಶಾಲಾ ಮಾಸ್ತರರೆ ಎಂದು ಕೇಳಬೇಡಿ. ಇಲ್ಲಿಯೂ ಒಂದು ಶಾಲೆ ಇದೆ ಅದರ ಬಗ್ಗೆ ಟಿಣಜಡಿಣಟಿರ ಆದ ವಿಷಯ ಮುಂದಿನ ಬಾರಿ ತಿಳಿಸುವೆ. ಅಲ್ಲಿಯವರೆಗೆ ವಿರಾಮ...



ಮಲಾನಾದ ಹಳೆ ಕಟ್ಟಡ ಸಣ್ಣ ದೇವರ ಗುಡಿ . 

Saturday, June 1, 2013

ಕೌತುಕಮಯ ಮಲಾನದ ಮೌನ ಕಣಿವೆಯಲ್ಲಿ...2

ಚಾರಣದ ಅನುಭವ

ಚಾರಣದ ನಡುವೆ 
ಹಿಮಾಲಯವೆಂದರೆ ಮೊದಲಿಗೆ ನೆನಪಿಗೆ ಬರುವುದು ಹಿಮ ಮತ್ತು ಇಲ್ಲಿನ ಚಾರಣದ ಕ್ಲಿಷ್ಟತೆ. ಸಾದಾರಣ ದೇಹ ಸ್ಥಿತಿಯವರಿಗೆ ಅಸಾಧ್ಯವೆಂಬ ಬಾವ. ಅಂತಹ ಆತಂಕಗಳೊಂದಿಗೆ ಹಿಮಾಲಯ ತಪ್ಪಲಿನ ಮಲಾನದ ಬಳಿಯ ಪರ್ವತವೇರಲು ತೀಮರ್ಾಸಿದೆವು. ದೂರದಿಂದ ನೋಡಿದರಂತೂ ಅಸಾಧಾರಣ ಗಿರಿ ಶ್ರೇಣಿಗಳಂತೆ ಅದು ಭಾಸವಾಗುತ್ತದೆ. 








10,200 ಅಡಿಗಳ ಎತ್ತರ. ಕಡಿದಾದ ಶಿಖರಗಳು. ಆಮ್ಲಜನಕದ ಕೊರತೆ. ಪೈನ್ಮರಗಳ ಎಲೆಗಳಿಂದ ಇಚಿಂಚಿಗೂ ಜಾರುವ ಕಲ್ಲುಗಳು. ಎರಡಿಂಚೂ ವ್ಯತ್ಯಾಸವಾದರೂ ಕಣಿವೆ ಪಾಲಾಗುವ ಭೀತಿ ಎಂತಹ ಗಂಡೆದೆಯನ್ನು ನಡುಗಿಸಿ ಬಿಡುವುದು. ಅನಿರೀಕ್ಷಿತವಾಗಿ ಬೀಳುವ ಮಳೆ, ಚಾರಣಿಗರನ್ನು ಮತ್ತೂ ಹೈರಾಣ ಮಾಡಿಬಿಡುತ್ತದೆ. ಸುಂದರ ಪ್ರಕೃತಿಯೂ ಭೀಕರವಾಗಿ ಕಾಣಿಸುತ್ತದೆ.








ಬೆಟ್ಟದ ಮೇಲಿಂದ ಕಾಣುವ ಹಿಮ ಬೆಟ್ಟಗಳ ಮನ್ಮಯ ನೋಟ 
ಬುಂತರ್ ಎಂಬ ಊರಿನಿಂದ ನಾವಿಲ್ಲಿಗೆ ಕಾಲಿಟ್ಟಾಗ ಸುಮಾರು ಒಂದು ಗಂಟೆಯ ಸಮಯ. ಗಿರಿಯ ಸಮೀಪದ ವರೆಗೆ ವಾಹನ ಸೌಲಭ್ಯವಿದೆ. ಅಲ್ಲಿಂದೇನಿದ್ದರು ನಿಮ್ಮ ಕಾಲುಗಳು ನಿಮ್ಮ ಸಹಾಯಕ್ಕೆ. ನಿಧಾನಕ್ಕೆ ಮೋಡವೂ ಆವರಿಸುತ್ತಾ ಇರುವ ಸಮಯವದು. ಅಲ್ಲಿನ ಹತ್ತಿರದ ಹಳ್ಳಿಯವನೊಬ್ಬನಲ್ಲಿ ಮಲಾನಕ್ಕೆ ದಾರಿ ಕೇಳಿದೆವು. ಆತ ನಮಗೆ ಹೇಳಿದ ಪ್ರಕಾರ ನಾವಿರುವ ಸ್ಥಳದಿಂದ ಸುಮಾರು ಒಂದು ಗಂಟೆಯ ದಾರಿ. 





ಗೆಳೆಯ ನಾಗರಾಜನ ಫೋಟೋ ಸೆಶನ್ 

ಸರಿ ಕೇವಲ ಒಂದು ಗಂಟೆ ಎಂದು ಆತ ಹೇಳಿದ ದಾರಿಯಲ್ಲಿ ನಡೆಯ ತೊಡಗಿದೆವು. ನೆಡೆದು ನೆಡೆದು 3 ಗಂಟೆಯ ದಾರಿ ಸವೆಸಿದರೂ ಮಲಾನ ಹಳ್ಳಿ ಸಿಗಲಿಲ್ಲ! ಯಾವ ಒಂದು ಗಂಟೆ ಇದು ಎಂದು ಕೊಂಡೆವು. ನಾಳೆ ಮಧ್ಯಾಹ್ನ ಒಂದು ಗಂಟೆಯೆ? ಗೊಂದಲಕ್ಕೆ ಬಿದ್ದೆವು. ನಾವು ಖಂಡಿತವಾಗಿ ದಾರಿ ತಪ್ಪಿದವೆಂದು ತೀಮರ್ಾನಿಸಿದೆವು. ಏನಾದರಾಗಲಿ ಈ ಬೆಟ್ಟ ಹತ್ತಿಯೇ ನೋಡೊಣವೆಂದು ಹತ್ತ ತೊಡಗಿದೆವು. ಕಡಿದಾದ ದಾರಿ, ಆಮ್ಲಜನಕದ ಕೊರತೆಯಿಂದಾಗಿ ಅಲ್ಲಲ್ಲಿ ಕುಳಿತುಕೊಂಡು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿದೆವು.

ಪರ್ವತದ ಇಳಿಜಾರಿನಲ್ಲಿ 

 ಕೇವಲ ಹತ್ತಿ ಬಟ್ಟೆ ಮತ್ತು ಬಮರ್ುಡದಲ್ಲಿ ಹತ್ತಿದ ನನಗೆ ಮಳೆ ಬಂದಿದ್ದರೆ 0 ಡಿಗ್ರಿಗೆ ಜಾರುವ ಉಷ್ಣಾಂಶವು ಪಚೀತಿಯನ್ನುಂಟುಮಾಡುತ್ತಿತ್ತು. ಅಲ್ಲದೇ ಮಳೆ ಬಂದರೆ ಮೋಡದಿಂದ ದಾರಿ ಕಾಣಿಸದೆ ದಾರಿ ತಪ್ಪುವ ಅವಕಾಶ ಬಹಳವಾಗಿತ್ತು. ದಾರಿ ತಪ್ಪಿದ ಹಿಮಾಲಯದ ಚಾರಣಿಗರು ಅಲ್ಲಿಯೇ ಲೀನವಾದ್ದದೂ ಇದೆ. ಹಾಗಾಗಿ ಜಾಗ್ರತೆಯಿಂದ ಒಟ್ಟಿಗೆ ಸಾಗಿದೆವು. ಅಂತೂ ಪರ್ವತದ ತುತ್ತ ತುದಿಯ ತನಕವೂ ಮೋಡಗಳು ಮಾತ್ರ ನಮ್ಮನ್ನು ಸ್ವಾಗತಿಸಿದವು. 





ದೂರದಲ್ಲಿನ ಕೆಲವು ಮನೆಗಳು 




ಪರ್ವತದ ತುದಿಗೇರಿದಾಗ ಹಲವು ಸಂದೇಹಗಳು ಉಂಟಾದವು. ಅಲ್ಲಿ ಯಾವುದೇ ಮನೆಗಳು ಇರದೇ ಇದ್ದದ್ದು, ದೂರದಲ್ಲಿ ಕೆಲವು ಮನೆಗಳು ಕಾಣಸಿಕ್ಕವು. ಅದೇ ಮಲಾನವಿರಬಹುದೇ ಎಂದುಕೊಂಡೆವು. ಅವು ಇರುವ ದೂರವನ್ನು ನೋಡಿದರೆ ಅಲ್ಲಿಗೆ ತಲುಪಲು ನಮಗೆ ಎನಿಲ್ಲವೆಂದರೂ ಇನ್ನರ್ಧ ದಿನ ಬೇಕಾಗಿತ್ತು. ನಿರಾಶೆಯ ಗಡಲಲ್ಲಿ ಮುಳುಗಿರುವಾಗ ಅಲ್ಲಿಗೊಬ್ಬ ಕುರಿ ಕಾಯುವವ ಕಾಣಿಸಿದ. 


ಆತನನ್ನು ಮಾತನಾಡಿಸಿದೆವು, ಮಲಾನಕ್ಕೆ ಹೋಗುವುದು ಹೇಗೆಂದು ಕೇಳಿದೆವು. ಇಲ್ಲಿಂದ ಕೇವಲ ಐದು ನಿಮಿಷದ ದಾರಿ ಎಂದ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲಿ. ಏನೋ ಸಾಧಿಸಿದ ತೃಪ್ತಿ. ಸರಿ ಎಂದು ಅವನಿಗೆ ವಂದಿಸಿ, ಸ್ವಲ್ಪ ಒಣ ದ್ರಾಕ್ಷಿಯನ್ನು ಕೊಟ್ಟೆವು. ಆತ ಸಿಗರೇಟ್ ಇಲ್ಲವೇ? ಎಂದ. ಮುಂದಿನ ಬಾರಿ ಬರುವಾಗ ನಿಮಗೆ ಖಂಡಿತಾ ಸಿಗರೇಟ್ ತರುತ್ತೇವೆಂದು ಹೇಳಿ ಮುಂದುವರಿದೆವು. ಹಿಂದಿನ ಹಳ್ಳಿಗ ಕೇವಲ ಒಂದು ಗಂಟೆಯಲ್ಲಿ ಏರಬಹುದೆಂದಿದ್ದ. ನಮಗೆ 3 ಗಂಟೆ ಹಿಡಿಯಿತು. ಇತನ 5 ನಿಮಿಷ ನಮಗೆಷ್ಟು ಹೊತ್ತೊ ಎಂದು ಮನದಲ್ಲೇ ಲೆಕ್ಕಚಾರ ಹಾಕುತ್ತಾ ಸಾಗಿದೆವು.

ಅಂತೂ ಬಂತು ಮಲಾನ
ಪರ್ವತ ಏರಿ ಸ್ವಲ್ಪವೇ ಇಳಿದಾಗ ಅಚ್ಚರಿ ಕಾದಿತ್ತು. ನಿಜವಾಗಿ ನಾವು ಮಲಾನದ ಹಾದಿಯಲ್ಲಿದ್ದೆವು ಎಂಬ ಸಂತೋಷವೇ ಬೇಗ ಬೇಗ ಹೆಜ್ಜೆ ಹಾಕುವಂತೆ ಮಾಡಿತು. ನನ್ನ ಗೆಳೆಯ ನಾಗರಾಜನಂತು ಚಿಗರೆಯಂತೆ ಜಿಗಿಯುತ್ತಾ ಆ ವಿಶಿಷ್ಟ ಜನರನ್ನು ಭೇಟಿಯಾಗಲು ಓಡತೊಡಗಿದ! ಈ ವಿಶಿಷ್ಟಾನುಭೂತಿಯನ್ನು ಅನುಭವಿಸಲು ಕಾತರರಾಗಿ ಹಳ್ಳಿ ಕಡೆಗೆ ನಡೆದೆವು.
ಮಲಾನ ಕಣಿವೆಯ  ಒಂಟ ಮನೆ 
ಹಲವು ವಿಶಿಷ್ಟತೆಗೆ ಹೆಸರು ಮಾಡಿದ ಈ ಹಳ್ಳಿ ನನ್ನಲ್ಲಿ ಸಂಚಲನೆಯನ್ನೇ ಉಂಟುಮಾಡಿತು. ಅದನ್ನು ಮುಂದೆ ನಿಮ್ಮೊಂದಿಗೆ ಹಂಚಿಕೊಳ್ಳವೆ.

ಪರ್ವತ ಸೆರಗಿನಲ್ಲಿರುವ ಮೋಹಕ ಮಲಾನ ಹಳ್ಳಿ 

















ಮುಂದುವರಿಯುವುದು......

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...