Wednesday, February 20, 2013

ಹಿಗೊಂದು ಪ್ರವಾಸ



ಚಾರಣ ಪ್ರವಾಸ!
ಕವಲೇ ದುರ್ಗಾ ಕೋಟೆ 
ಮಕ್ಕಳಿಗೆ ಪ್ರಕೃತಿ, ಚಾರಣ ಮತ್ತು ಇತಿಹಾಸದ ಅನುಭವ ಕೊಡಲು, ನಮ್ಮ ಪೂವರ್ಿಕರ ಬಗ್ಗೆ ಅಭಿಮಾನ ಮೂಡಿಸುವ ಸಲುವಾಗಿ ಕವಲೇ ದುರ್ಗ ಎನ್ನುವ ಕೋಟೆಗೆ ಭೇಟಿಕೊಟ್ಟೆವು. ಇದೊಂದು ಅದ್ಭುತವಾದ ಐತಿಹಾಸಿಕ ತಾಣ. (ವಿವರಗಳಿಗೆ ಹಿಂದಿನ POST ನೋಡಿ)


ಐತಿಹಾಸಿಕ ತಾಣ ಹುಂಚ 
 ನಮ್ಮ ಮುಂದಿನ ತಾಣ ಕದಂಬರಿಂದ ಚಾಲುಕ್ಯರತನಕ ಆಳಲ್ಪಟ್ಟ ಹುಂಚ. ಇದೊಂದು ಪ್ರಮುಖ ಜೈನ ಕೇಂದ್ರ. ಇತಿಹಾಸದ ಅನೇಕ ಚಿತ್ರಗಳು ನಮಗಿಲ್ಲಿ ಸಿಗುತ್ತವೆ. ಜೈನ ಪರಂಪರೆಯ ಕುರುಹುಗಳು ಅಲ್ಲದೆ, ಹೇಗೆ ಅವಸಾನದತ್ತ ಹೊರಳಿಕೊಂಡಿತ್ತೆಂದು ಇತಿಹಾಸಕಾರರು ಹುಡುಕಬಹುದು. ಆಸಕ್ತಿಕರವಾದ ಲಿಪಿಗಳು ಶಾಸನಗಳು ಕಂಡುಬರುತ್ತವೆ. ನಗರ ಪ್ರದಕ್ಷಿಣೆ ಮಾಡಿಬಂದರೆ, ಇತಿಹಾಸದ ಕುರುಹು ಅಲ್ಲಲ್ಲಿ ಕಾಣಸಿಗುತ್ತದೆ. ತನ್ನ ಆಕಾರ ಸ್ವರೂಪ ಜನಜೀವನದಿಂದ ಅದಿನ್ನು ಐತಿಹಾಸಿಕ ನಗರವಾಗಿಯೇ ಉಳಿದಿದೆ ಎನ್ನಬಹುದು. ಶಿಕ್ಷಕರಿಗೆ ಅಮೂಲ್ಯ ತಾಣಗಳನ್ನು ತೋರಿಸಿದ ತೃಪ್ತಿ ಮಕ್ಕಳಿಗೆ ಚಾರಣದ ವಿಶೇಷ ಅನುಭೂತಿ ನೀಡಿ ರೋಮಾಂಚಿತರಾದರು. 
ಹುಂಚದಲ್ಲಿನ ಮಾಹಿತಿ ಫಲಕ 


ಪಾಳಿ ಲಿಪಿಯ ಶಾಸನ 

ಕುವೆಂಪುವನ್ನು ಸಕ್ಷಾತ್ಕರಿಸಿದಾಗ ಅವರ  ಮನೆ ಎದುರಿಗೆ 
ನಮ್ಮ ಹೆಮ್ಮೆಯ ಕವಿ ಕುವೆಂಪು ಮನೆಗೆ ಅಡಿಯಿಟ್ಟು ಆನಂದಿಸಿದೆವು. ಪ್ರಕೃತಿಯೊಂದಿಗೆ ಸರಸವಾಡುತ್ತಾ ಅವರ ಮನೆ, ಸಮಾಧಿ, ಬಂದಿರುವ ಪ್ರಶಸ್ತಿ, ಬಿಡುಗಡೆಗೊಳಿಸಿದ ಕೃತಿ ವೀಕ್ಷಿಸಿ ಧನ್ಯರಾದೆವು.
ನಮ್ಮ ಸೈನ್ಯ!







Tuesday, February 19, 2013

ಒಂದು ದಿನದ ಪಿಕ್ನಿಕ್ಗೆ ಹೋಗಬೇಕೆಂದಿದ್ದರೆ....

ಜಲ ಧಾರೆಯಂತೆ ಮನಸು ಕೊಡು ಹರಿಯೆ! 


  
  ಕಾನನದ ಕುಸುಮ ಹಳ್ಳಿಹೊಳೆ ಸಮೀಪದ ಅಕ್ಕಿನಕೊಡ್ಲು ಜಲಧಾರೆ. ನೋಡಿ ಮೈಮರೆಸುವ ಜಲರಾಶಿ. ಸಾಕಷ್ಟು ಸಾಹಸ ಮಾಡಿಯೇ ಅದರ ಶಿಖರವನ್ನು ತಲುಪಿದೆವು. ನೀರ ಸೆಳೆತಕ್ಕೆ ಮತ್ತೆ ಮತ್ತೆ ಮೈಯೊಡ್ಡಬೇಕೆನಿಸುವ ನಿಜ ಪ್ರಕೃತಿಯ ನಡುವೆ ಇರುವ ಜಲಧಾರೆ. 

ಹೋಗೋದು ಹೇಗೆ:- ಸಿದ್ದಾಪುರದಿಂದ ಹಳ್ಳಿಹೊಳೆ ರಸ್ತೆಯಲ್ಲಿ ಶಟ್ಟಿಪಾಲ್ ತನಕ ಮುಖ್ಯರಸ್ತೆಯಲ್ಲಿ ಸಾಗಿ ಅಲ್ಲಿಂದ 2 ಕಿ.ಮೀ. ಕಚ್ಚಾರಸ್ತೆಯಲ್ಲಿ ಸಾಗಿ ಬಲಬದಿಗೆ ಇರುವ ಸಣ್ಣ ಗುಡ್ಡ ಏರಿದರೆ ನೀವು ಈ ಜಲಪಾತದ ತುದಿಯವರೆಗೆ ಸಾಗಬಹುದು. ಸಾಹಸಕ್ಕೆ ಮನೆಮಾಡುವಿರಾದರೆ ಮೂಲಕ್ಕೂ ತಲಪಬಹುದು! 


Saturday, February 2, 2013

ಸೃಜನಾತ್ಮಕತೆ

ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು.

ಸೃಜನಾತ್ಮಕತೆ ಎಂದರೇನು? ಹೇಗೆ ಅದನ್ನು ಬೆಳೆಯುವಂತೆ ಮಾಡು ವುದು. ಹೊಸ ಹೊಸ ಸೃಷ್ಟಿ ನಮ್ಮಿಂದೇಕೆ ಸಾಧ್ಯವಿಲ್ಲ? ಹಳೆಯದು ಮಾಸಿ ಹೊಸತೊಂದನ್ನು ನೀಡಲೇಕೆ ಸಾಧ್ಯವಿಲ್ಲ!

ಕುಟುರ Green Barbet
'ತನಹಾ ದಿಲ್'' ಹಾಡಿನ ಕತರ್ೃ 'ಶಾನ್' ಮತ್ತೊಮ್ಮೆ ಅಂತಹ ಹಾಡು ರಚಿಸಲೇಕೆ ಸಾಧ್ಯವಾಗಿಲ್ಲ! ಸೃಜನಾತ್ಮಕತೆಗೆ ಮಿತಿ ಇದಯೆ? ಅಥವಾ ನಮಗೆ ನಾವೆ ಮಿತಿಯನ್ನು ಹಾಕಿಕೊಂಡಿದ್ದೇವೆಯೆ? ಹಾಕಿ ಕೊಂಡಿದ್ದರೆ ಈ ಮಿತಿಗಳಿಂದ ಹೊರ ಬರುವುದು ಹೇಗೆ? ಸಂಕೊಲೆಯಿಂದ ಬಂಧಿಸಿದ ಮರಿ ಆನೆ ದೊಡ್ಡದಾದ ಮೇಲು ಏಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರುವುದು ಅದರ ಮಿತಿ ಇರಬಹುದು. ಹಾಗೆ ನಾವು ನಮ್ಮ ಚೌಕಟ್ಟಿನಲ್ಲಿದ್ದೇವೆಯೆ? ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. 

Crimson Red Barbet 


ಬ್ರಹ್ಮ ಕಮಲ

ಕಮಲಗಳ gÁt §æºÀä PÀªÀÄ®


ಕಮಲ ಅರಳುವುದು ಹಗಲಿನಲ್ಲಿ ಅಲ್ಲವೇ? ಆದರೆ ಈ ಕಮಲವೋ ಅರಳುವುದು ರಾತ್ರಿ! ಒಂದೇ ದಿನದ ಬದುಕು. ನಿಡುವ ಕುಷಿ ಅಪಾರ. ನೀಲಿ ಮಿಶ್ರಿತ ಅದರ ಓ೦ದೊ೦ದು ಎಸಳು ಎಂತಾ ಸೌಂದರ್ಯದ ಪ್ರತೀಕ. ನೋಡುತ್ತಾ ಇರೋಣವೆನಿಸುತ್ತದೆ. ದಿನವೂ ಹೊಸತಾಗುವ, ಹಳೆಯ ವಿಷದ ಬೇರನೆಲ್ಲ ಮರೆತು ನಲಿವ ಅದರ ಗುಣಕ್ಕೆ ತಲೆಬಾಗೋಣ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...