Saturday, June 9, 2018

ಹೊಸ ಕತೆಗಾರ ಮತ್ತು ಹಳೇ ಓದುಗ...


ಬರೆಹ ಎಲ್ಲೂ ಭಾರವಾಗದೇ ಓದುಗನೆದುರು ತೆರೆದುಕೊಳ್ಳಬೇಕು. ಹಳೇ ರದ್ದಿಯಲ್ಲಿ ಅದ್ದಿದ ಶೈಲಿಯಲ್ಲಿ 'ಹೋರಿ ಉಚ್ಚೆ ಹೊಯ್ದಂತೆ'  ಬರೆದ ಬರೆಹಗಳನ್ನು ಹಳೇ ಓದುಗ ಚಪ್ಪರಿಸಿ ಓದಲಾರ. ಆತನಿಗೆ ಹೊಸ ಉಪಮೆಗಳು, ನವೀನ ನುಡಿಗಟ್ಟುಗಳು ಬೇಕು. ಹೊಸ ಹೊಸ ವಿಷಯಗಳು ಬೇಕು. ಇಲ್ಲವಾದರೆ ಬರೆಹ ಹಿಡಿದಿಡಲಾರದು. ವಯ್ಯಕ್ತಿಕ ವಿಷಯ, ಕೇವಲ ವಿವರಣೆಗಳನ್ನು ಹಿಂಜಿ ಹಿಂಜಿ ಎಳೆದು ಬರೆದರೆ ಓದುವವರ್ಯಾರು? ಹಳೆಯ ಪ್ರೇಮ ಕತೆಗಳನು ಹೊಸ ಚೌಕಟ್ಟಿನೊಳಗೆ ಕಟ್ಟಿ ಕೊಡಬೇಕು. ಕತೆ ಎಂದರೆ ಹೀಗಿರಬೇಕು ಎಂಬುದ ಮುರಿದು ಕಟ್ಟಿದವರು ಕುಂದಾಪುರದ ಕತೆಗಾರ ವಿಕ್ರಂ ಹತ್ವಾರ್. ತೀರ ವಿಭಿನ್ನ ವಿಷಯ, ನೈಪುಣ್ಯಪೂರ್ಣ ನಿರೂಪಣೆಯಿಂದ ಪ್ರತೀ ಕತೆಯೂ 'ಕುರುಂ ಕುರುಂ ಕಡ್ಲೆ ಪುರಿ'.

ಕತ್ತಲನ್ನು ಸೀಳಿಕೊಂಡು ಬಂದ ಬೆಳಕಿನ ಬೆಟ್ಟ, ಚಿಮ್ಮುವ ಕಾರಂಜಿ, ವಿದ್ಯುತ್ ಸಂಚಾರ. ಎಂತಹ ರೋಮಾಂಚಕ ಕತೆಗಳು. ಚಿತ್ರ-ವಿಚಿತ್ರ ಕತೆಗಳು. ಅಸಹಜ ಎನಿಸಿದರೂ ಈ ಸಂಕೀರ್ಣ ಬದುಕಿನಲಿ ಅವೆಲ್ಲವೂ ಸಹಜವೇ ಆಗಿವೆಯಲ್ಲವೇ?
ಕತೆ ಮತ್ತು ವಾಸ್ತವಕ್ಕೂ ಸಂವಾದಿಯಾಗಿ ಸಾಗುತ್ತಾ ಕತೆಯೇ ವಾಸ್ತವವಾಗುತ್ತಾ, ವಾಸ್ತವವೇ ಕತೆಯಾಗುತ್ತಾ ಬೆಳೆಯುವ 'ಕಥಾಸ್ತು' ಒಂದು ವಿಭಿನ್ನ ಕತೆ. ಅನಾಮಿಕ, ಕನಕಾಭಿಷೇಕ, ಸಾಪ್ಟವೇರ್ ಜಗತ್ತಿನ ಜಂಜಢಗಳ ಅನಾವರಣಗೊಳಿಸುವ ಪ್ರಾಜೆಕ್ಟ್ ಬ್ರೀಜ್, ಬದುಕಿನ ಆಧ್ಯಾತ್ಮಿಕತೆಯನ್ನು ವಿವರಿಸುವ, ಬದುಕು ಮತ್ತು ಕಂಪ್ಯೂಟರ್ ಎರಡುಕ್ಕಿರುವ ಸಾಮ್ಯಾತೆ 'ಜೀರೋ ಮತ್ತು ಒಂದು' ಕತೆಗಾರ ವಿವರಿಸುವ ಪರಿ ಅನನ್ಯ. ಇಂತಹ ಅನೇಕ ವಿಶಿಷ್ಟ ಕತಾ ಗುಚ್ಚವೇ ವಿಕ್ರಮ್ ಹತ್ವಾರ ಬರೆದ 'ಜೀರೋ ಮತ್ತು ಒಂದು'.

ಸಾಧ್ಯವಾದರೆ ಕೊಂಡು ಓದಿ...

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...