Friday, June 6, 2014

ಹೊಸ ಸಾಧ್ಯತೆಗೆ ಬದುಕು ಮಗ್ಗಲು ಬದಲಿಸಿದೆ



ಹೊಸ ಮನ್ವಂತರಕೆ, ಹೊಸ ಹೊಳಹಿಗೆ, ಹೊಸ ಜಾಗಕ್ಕೆ ಮಗ್ಗಲು ಬದಲಿಸಿದೆ ಬದುಕು. ನಿನ್ನೆಯ ಮೈಲಿಗಲ್ಲಿಗೂ ಇಂದಿನದಕೂ ಸ್ಪಷ್ಟವಾಗಿದೆ ಅಂತರ. ಮುಂದಿನದೂ ಕಾಣಿಸಿದೆ ಮೆಲ್ಲಗೆ. ಅನಂತ ಸಾಧ್ಯತೆಯ ಕಡೆಗೆ ಅನಂತಶಕ್ತಿ ಒಗ್ಗೂಡಿಸಿ ಹೊರಟಿದೆ. ಈ ನಡುವೆ ಸ್ವಲ್ಪ ಮುನಿಸು, ಇನಿತು ಬೇಸರ, ಕೊಂಚ ದುಃಖವೂ ಬೆರತಿದೆ.
ಬದುಕ ಪಯಣದ ಒಂದಿನದಲಿ ಬೆಸ್ತರೀರ್ವರು ದಿನವ ಮುಗಿಸಿ ಮನೆಕಡೆ ಹೊರಟಿಹರು. ಈ ದೃಶ್ಯಾವಳಿಗೆ ಕಣ್ಣಾಗಿದ್ದು ನಿಕಾನ್ ಡಿ 7000. ನಮ್ಮೂರಿನ ಪಂಚಗಂಗಾವಳಿಯ, ಐದು ನದಿಗಳು ಸೇರುವ ತಾಣದಲಿ ಕಂಡ ಸಮ್ಮೋಹಕ ದೃಶ್ಯಾವಳಿ. ಕತೆ ಹೇಳುವ ಚಿತ್ರಗಳು ನಿಮಗಾಗಿ ನೋಡಿ ಪ್ರತಿಕ್ರಿಯಿಸಿ.

ನೇರಳೆ ಬಣ್ಣದಲ್ಲಿ ಸಂಜೆ. 


ಪಯಣ, ಈ ನಡುವೆ ಗೂಟದ ಮೇಲಿರುವ ಹಕ್ಕಿಯನ್ನು ಗಮನಿಸಿ. 


Returning home.


ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...