Tuesday, February 28, 2017

ಎರಡು ವಿಭಿನ್ನ ಕಾರ್ಯಾಗಾರಗಳು...


    ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ಆಯೋಜಿಸಲಾದ ಪರಿಸರ ಪ್ರೀತಿ ಬೆಳೆಸುವ ಎರಡು ಕಾರ್ಯಾಗಾರಗಳು.

ಮಕ್ಕಳೊಂದಿಗೆ ಚರ್ಚೆಯಲ್ಲಿ.
ಆಯರ್ುವೇದ ವೈದ್ಯರಾದ ಶ್ರೀ ರಾಜಗೋಪಾಲ್ ನಂಬಿಯಾರ್ ಮಕ್ಕಳಿಗೆ 30 ವಿಧದ ಔಷಧೀಯ ಸಸ್ಯಗಳನ್ನು ಪರಿಚಯಿಸಿದರು. ಅದರ ಔಷಧಿ ಗುಣಗಳನ್ನು ಮತ್ತು ತಯಾರಿಸ ಬಹುದಾದ ವಿವಿಧ ಔಷಧಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ವಿವರಿಸಿದರು.


ಶಾಲೆಯಿಂದ ನೆನಪಿನ ಕಾಣಿಕೆ 'ಜಾನಕಿ ಕಾಲಂ' ಪುಸ್ತಕ.
ಮಕ್ಕಳೇ ತಂದ ವಿವಿಧ  50 ಔಷಧಿ ಗಿಡಗಳನ್ನು ಪ್ರದಶರ್ಿಸಿದರು. ಮಕ್ಕಳೇ ತಮ್ಮ ಮನೆಯಿಂದ ತಂದ ವಿವಿಧ ಗಿಡಗಳ ಮಾಹಿತಿ ನೀಡಿದರು. ದೃಷ್ಠಿ ಎಲೆ, ಪಾಷಾಣ ಬೇಧ, ಕೆಪ್ಪಟನ ಎಲೆ ಗಮನ ಸೆಳೆಯಿತು. ಮಕ್ಕಳು ಶಿಕ್ಷರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ತಮ್ಮ ಅನುಭವನ್ನು ಹಂಚಿಕೊಂಡರು. ಈ ಸಂಬಂಧ ಕತೆಗಳು ಉಪಕತೆಗಳನ್ನೂ ಹೇಳಿದರು. ಕಾರ್ಯಾಗಾರದಲ್ಲಿ ಸುರೇಶ್ ಹೆಬ್ಬಾರ್, ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಭಾಗವಹಿಸಿದರು.

No comments:

Post a Comment

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...