Thursday, October 11, 2018

ಹೊಸದು ಹೊಸೆದು ಹೊನ್ನಾಗಿಸಬೇಕು...


         ನಡೆದದಾ ದಾರಿಯಲಿ ನಡೆವ ರೋಮಾಂಚನವೆಲ್ಲಿ? ಹೊಸದಾರಿಯಲ್ಲಿ ಪುಳಕದ ಪುಗ್ಗವು ಊದಿಕೊಳ್ಳುವುದು. ಹಾಕಿದ ಹಳಿಗಳ ಮೇಲೆಯೇ ರೈಲು ಬಿಟ್ಟವರಿಗೆ ಹೊಸದು ಅರ್ಥವಾಗುವುದಾದರೂ ಹೇಗೆ? ಎಂದು ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ಕವನದಲ್ಲಿ ಮಥಿಸಿದ್ದಾರೆ, ಕಥಿಸಿದ್ದಾರೆ.

ಏನೋ ಹೊಸದು ಮಾಡುವಲ್ಲಿ ಎಡವುದು ಸಹಜ. ಕಷ್ಟ ಕೋಟಲೆಗಳು ನೂರಾರು. ಅವನ್ನೆಲ್ಲಾ ಮೆಟ್ಟಿ ನಿಂತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿ ಈ ವರ್ಷ ಮಕ್ಕಳ ಅಜ್ಜಿಯಂದಿರಿಂದ ಸಂಗ್ರಹಿಸಿದ 'ಅಜ್ಜಿ ಮದ್ದು' ಎಂಬ ಕಿರು ಹೊತ್ತಗೆಯನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಸಸ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಹೆಬ್ಬಾರ್ ಅವರು ಪತ್ರಿಕೆ ಪ್ರಾಯೋಜಿಸಿ ಅನಾವರಣಗೊಳಿಸಿ ಮಾತನಾಡಿದರು.



ಮಕ್ಕಳ,  ಶಿಕ್ಷಕರ ಪ್ರಯತ್ನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಇನ್ನೂ ಹೆಚ್ಚಿನ ಸಂಚಿಕೆಗಳು ಹೊರ ಬರಲಿ ಎಂದು ಆಶಿಸಿದರು.

No comments:

Post a Comment

ವಾರೆ ನೋಟ

ಹೊಷಾಯ್ ಹೊಸೆದ ಹೊಸ ಕತೆ….

  ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...