Saturday, September 30, 2017

ಕೆಂಪಿರುವೆ ಎಲ್ಲಾ ಕಡೆ ನೀ ನಿರುವೆ...

ಒಂದಿರುವೆಗೆ ಎತ್ತಲಾಗದಷ್ಟು ದೊಡ್ಡದಿತ್ತು ಅದು. ಆದರೂ ಬಿಡದೆ ಎಳೆದಾಡುತ್ತಿತ್ತು. ಒಂದಿರುವೆ ಜೊತೆಗೆ ಮೊತ್ತೊಂದು ಜೊತೆಯಾಯಿತು.
 



ಎಳೆತ ಜೋರಾಯಿತು. ಮಧ್ಯಾಹ್ನದಿಂದ ಸಂಜೆವರೆಗೂ ಎಳೆದಾಡಿ ಹುಳದ ರಗಳೆ ತೆಗೆದೆವು.


ಈ ನಡುವೆ ಮತ್ತೊಂದು ಇರುವೆ ಬೀಟಲ್ ಒಂದನ್ನು ಎತ್ತಿಕೊಂಡು ಓಡುತ್ತಾ ಬಂದು ಇವುಗಳ ಮೈ ಮೇಲೆಲ್ಲಾ ಓಡಾಡಿ ಗೂಡು ಸೇರಿತು. ಮುಂದೇನಾಯಿತೆಂದು ಗೊತ್ತಿಲ್ಲ. ಸಂಜೆಗೆ ಭಾರಿ ಮಳೆ ಹೊಡೆಯಿತು ನೋಡಿ. ಅವು ಅಲ್ಲಿರಲಿಲ್ಲ. ಸುಮಾರು ನಾಲ್ಕು ಗಂಟೆಗೂ ಮಿಕ್ಕಿ ಅವುದನ್ನು ಕಚ್ಚಿಕೊಂಡಿದ್ದವು ಪಾಪ!













No comments:

Post a Comment

ವಾರೆ ನೋಟ

ಸೋಲೆಂಬ ಅಲ್ಪ ವಿರಾಮದ ನಡುವೆ.

  ತೇಜಸ್ವಿಯ ನೆನಪಿಗೆ ನಡೆಸಿದ ಮೂರು ದಿನಗಳ ಕರ‍್ಯಾಗಾರದಲ್ಲಿ ನನ್ನ ಚಿತ್ರ ಪಟ ಕಥನ ಓದಲಿತ್ತು. ಹೇಗೂ ಹೊರಟಿದ್ದೆನಲ್ಲಾ ಎಂದು ಕೊಂಡು ದೇವರ ಮನೆಯಿಂದ ಅನತಿ ದೂರದ ನಾಣ್...