ಒಂದು ವಿಭಿನ್ನ ಕತಾ ಸಂಕಲನ ಮತ್ತು ನನ್ನನ್ನು ಪ್ರಭಾವಿಸಿದ ಎರಡು ಕತೆ ಬಗ್ಗೆ ನಿಮಗೆ ಹೇಳ್ಬೇಕು ಅಂತಾ ಅನಿಸಿದೆ. ನುಡಿಸಿರಿಯಲ್ಲಿ ಕೊಂಡ ಪುಸ್ತಕ ಮೊನ್ನೆ ಓದಿ ಮುಗಿಸಿದೆ. ಸಾಮಾನ್ಯವಾಗಿ ಸಾಮಾನ್ಯ ಲೇಖಕರು ಬರೆಯುವ ಕತಾ ಸಂಕಲನ ಓದುವವರು ಕಡಿಮೆ. ಹಾಗಾಗಿ ಈ ಪರಿಚಯ ಲೇಖನ. ಮುಖಪುಟದಿಂದಲೇ ನನ್ನನ್ನು ಆಕಷರ್ಿಸಿದ ಈ ಸಂಕಲನ ಕೆಲವು ಪ್ರಶಸ್ತಿಗಳನ್ನು ಗಳಿಸಿದೆ ಕೂಡ! ಲೇಖಕರ ವಿಶಿಷ್ಟ ಶೈಲಿ ಓದಿಸಿಕೊಂಡು ಹೋಗುತ್ತೆ. ಸಾಕೆನಿಸುತ್ತೆ ಅಲ್ವಾ. ಕತೆಗೆ ಬರೋಣ.ಉತ್ಸರ್ಗ ಎಂಬ ವಿಭಿನ್ನ ಕತೆ:-ಪಾತ್ರವೊಂದು ವಾಸ್ತವಕ್ಕೂ ಕತೆಗೂ ಏಕಕಾಲಕ್ಕೆ ಬಂದು ಹೋಗುವ ಉತ್ಸರ್ಗವೆಂಬ ಕತೆ. ಕತೆಗಾರ ಓದುಗನಿಗೆ ನೀಡುವ ವಿಶಿಷ್ಟ ಸೂಚನೆಗಳಿಂದ ಈ ಕತೆ ನಮ್ಮನ್ನು ಆಕಷರ್ಿಸುತ್ತೆ. ಕಾಯಿಲೆಯಿಂದ ಬಳಲುವ ಕತಾ ನಾಯಕನಿಗೆ ಆತನ ಮೂತ್ರ ಕುಡಿಸುವ ಪ್ರಯತ್ನದ ಮೂಲಕ ಕತೆ ಪ್ರಾರಂಭವಾಗುತ್ತದೆ! 'ಅಗ್ಗದ ಆಕರ್ಷಣೆಗಾಗಿ ಈ ರೀತಿ ನಾ ಹೇಳುತ್ತಿಲ್ಲ' ಎಂದು ಕತೆಗಾರ ಎಚ್ಚರಿಸುತ್ತಾನೆ. ಕತೆಗಾರ ಆಗಾಗ ಕತೆಯಿಂದ ಹೊರ ಬರುತ್ತಾನೆ. ಮೂರು ಮಜಲುಗಳಲ್ಲಿ ನಡೆಯುತ್ತಾ ಸಾಗಿ ಮುಕ್ತ ಅಂತ್ಯ ಕಾಣುತ್ತೆ.'ವದ್ಧಾ' ವೆಂಬ ವಿಚಿತ್ರ ಹೆಸರಿನ ಕತೆ:-'ಮೋ' ಎಂಬ ವಿಚಿತ್ರ ಹೆಸರಿನ ಮತ್ತು ಕತೆಗಾರನ ನಡುವೆ ನಡೆಯುವ ವಿಶಿಷ್ಟ ಕತೆ ವದ್ಧಾ. ಎರಡು ವಿಭಿನ್ನ ಪರಿಸರದ ಇಬ್ಬರು ವ್ಯಕ್ತಿಗಳು ಎದುರಾಗಿ ಎದುರಿಸುವ ಸಂಘರ್ಷ, ತಾತ್ವಿಕ ಭಿನ್ನಾಭಿಪ್ರಾಯಗಳ ಸರಮಾಲೆಯನ್ನು ಬಿಚ್ಚಿಡುತ್ತಾ ಸಾಗುತ್ತೆ ಕತೆ. ಕತೆಗಾರನ ಆಂತರ್ಯದಲ್ಲಿನ ತೊಳಲಾಟಗಳ ದರ್ಶನ ಮಾಡಿಸುತ್ತಾ ಆ ತೊಳಲಾಟಗಳೂ ನಮ್ಮವೂ ಆಗುತ್ತಾ ಸಾಗುತ್ತೆ. ಮಧ್ಯಮ ವರ್ಗದ ಸಾಮಾನ್ಯರ ತೊಳಲಾಟಗಳು, ಪೊಳ್ಳು ಹೆಚ್ಚುಗಾರಿಕೆಯನ್ನು ಬಿಚ್ಚುತ್ತಾ ಹೋಗುವುದು. ಸುಡೊ ದೊಡ್ಡಸ್ತನಗಳ ಅನಾವರಣ ಮಾಡಿಸುತ್ತೆ. ಅದಕ್ಕಾಗಿ ಕತಾ ನಾಯಕ ಪಡುವ ಪಾಡು ಅಯ್ಯೋ ಅನಿಸುತ್ತೆ.ಮುಕ್ತ ಅಂತ್ಯದೊಂದಿಗೆ ಓದುಗರನ್ನು ಚಿಂತನೆಗೆ ಹಚ್ಚುತ್ತೆ! ಮುಗಿಯಲೇ ಬೇಕೆನ್ನುವವರಿಗೆ ಹಿಡಿಸದೇ ಹೊಗಬಹುದಾದ ಹಲವು ಕತೆಗಳನ್ನು ಈ ಒಳಗೊಂಡು ನೈಜತೆಗೆ ಅತಿ ಸಮೀಪವೂ ಇದೆ ಎನ್ನಬಹುದು. ತಡ ಮಾಡದೇ ಕೊಂಡು ಓದಿ.
Saturday, March 31, 2018
ಎರಡು ವಿಭಿನ್ನ ಕತೆ ಮತ್ತು ಒಂದು ಕತಾ ಸಂಕಲನ.
Labels:
Karki Krishana Murthy,
ಪುಸ್ತಕ ಮಸ್ತಕ,
ಬುಕ್ Rack
Subscribe to:
Post Comments (Atom)
ವಾರೆ ನೋಟ
ಹೊಷಾಯ್ ಹೊಸೆದ ಹೊಸ ಕತೆ….
ಕಾರ್ಕಳದ ಗೊಮ್ಮಟ ಗಿರಿಯ ಪ್ರತೀ ಮೆಟ್ಟಿಲುಗಳು ಹೊಷಾಯ್ ಕತೆಯನ್ನು ಪ್ರತಿಫಲಿಸುತ್ತದೆ . ಬದುಕಿನ ಬವಣೆಯ ಸಾರವನ್ನು ತೆರೆದಿಡುತ್ತದೆ. ಆತನ ಆರ್ತತತೆ ಪ್ರತೀ ಮೆಟ್ಟಿಲು...

No comments:
Post a Comment