Saturday, January 7, 2023

ಆರ್ಕಿಡ್‌ ಅಂಗಳದಲ್ಲಿ ಆ ಏಳು ದಿನಗಳು..


    ಹಿಮಾಲಯದ ಮಡಿಲಲ್ಲಿ ಮಗುವಾಗುವ ಆಸೆಗಳು ಗರಿಗೆದರಿದ್ದವು. ಭಾರತದಅತಿ ವಿಶಿಷ್ಟ ಕಾಶ್ಮೀರದ ಏಳು ಸರೋವರಗಳ ಚಾರಣಕ್ಕೆ ಹೊರಟು ನಿಂತಾಗ ಪುಳಕ !ಕೋವಿಡ್ಎರಡನೆಯ ಅಲೆ ಉತ್ತುಂಗದಲ್ಲಿತ್ತು! ಮನಸ್ಸಿನ ತಳಮಳವೂ. ಅಂಜಿ ಹೆದರಿ ವಿಮಾನವೇರಿದರೆ ಮನವೆಲ್ಲಾಆತಂಕದಗೂಡು. ಶ್ರೀನಗರದಲ್ಲಿ ಇಳಿಯುತ್ತಲೇ ಮೂಗಿನ ಹೊಳ್ಳೆಗಳೆಲ್ಲಾ ಕೆರೆದುಕುಪ್ಪೆ ಹಾಕಿ ಪೋನ್ ನಂಬ್ರತೆಗೆದುಕೊಂಡು ಕೈಗೆ ಸೀಲು ಒತ್ತಿ ಕಳುಹಿಸಿದರು. ಎದೆಯಲ್ಲಿಢವಢವ ! ಪಾಸಿಟಿವ್ ಬಂದರೆ ಎಂಬ ಭಯ !

ಪುಣ್ಯಕ್ಕೆ ನಮ್ಮತಂಡದಲ್ಲಿಯಾರದ್ದೂ ಪಾಸಿಟಿವ್ ಬರಲ್ಲಿಲ್ಲ. ತಿಳಿ ನೀಲಿ ದಾಲ್ ಸರೋವರದ ಅಂಚಿನ ನೆಹರು ಹೋಟೆಲ್ನಲ್ಲಿರೂಂ ಕಾದಿರಿಸಿದ್ದೆವು. ಕೆಹವಾದ ಕೇಸರಿಯುಕ್ತ     ಉಗಿ ಸೇವಿಸುತ್ತಾ ದಾಲ್ ಸರೋವರಕ್ಕೆ ಸುತ್ತು ಬರಲು ಹೊರಟು ನಿಂತಾಗ ಎಳೆ ಬಿಸಿಲು ನೀರಿಗೆ ಚಿಮ್ಮಿ ಅಹಲಾದಕರ ವಾತಾವರಣಏರ್ಪಟ್ಟಿತ್ತು. ನೀರ ಮೇಲೆ ತೇಲುತ್ತಾ ಚಹಾ ಕಾಯಿಸುವವರು, ಕೇಸರಿಮಾರುವವರು, ಓಲೆ ಮಾರುವವರುದೋಣಿ ಹಿಡಿದೇ ಬರುತ್ತಿದ್ದರು. ಕೊನೆಗೆಲ್ಲವೂ ನೀಲಿಯಾಗಿ ಸಂಪೂರ್ಣಕರುಗುತ್ತಿತ್ತು. ಬರೋಬ್ಬರಿ 5 ಲಕ್ಷಜನ ವಾಸಿಸುವ ಇಲ್ಲಿನ ವಿಶೇಷತೆ ಅನ್ಯಾದರ್ಶ. ಇಲ್ಲಿನ ಬದುಕಿನಕತೆಯೂರೋಚಕ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ನೀರುಇಲ್ಲಿನ ಮನಸ್ಸುಗಳನ್ನೂ ಹೆಪ್ಪುಗಟ್ಟಿಸುತ್ತಾಎಂದು ತಿಳಿಸುವ ತವಕ. ಸರಕಾರಿಕಛೇರಿ, ಪೋಲಿಸ್ ಕಾವಲಿನ ಮುಂದೆ ಸುರುಳಿ ಸುತ್ತಿದ ಸರಿಗೆ ಮನದತುಂಬಾ ವಿಶಾದದ ನೆರಿಗೆ.

ಮೊದಲ ನಂಬ್ರದಗೇಟಿನೆದುರು ನಮ್ಮ 40 ಚಾರಣಿಗರ ಸಂತೆ ನೆರೆದಿತ್ತು. ನನಗಂತೂ ತವಕ ತಲ್ಲಣ.ಎಲ್ಲರೂ ಸಪ್ತ ಸರೋವರದ ಕನಸಿನಲ್ಲಿದ್ದರು. ನಮ್ಮಟೆಂಪೊಟ್ರಾವೆಲ್ಲರ್ನಲ್ಲಿ ನಾವೆಲ್ಲಾ ಸೋನ್ ಮಾರ್ಗದ ದಾರಿ ಹಿಡಿದೆವು.

ಸೋನ್ ಮಾರ್ಗ ಎಂಬ ಭೂ ಸ್ವರ್ಗ:-

    ಕರ್ಕಶ ಶಬ್ದ ಮಾಲಿನ್ಯದಿಂದ ನಿಶಬ್ಬದ ಸ್ಚಪ್ನ ಲೋಕವೊಂದಕ್ಕೆಕಾಲಿಟ್ಟೆವು.  ಎತ್ತರೆತ್ತರದ ಪರ್ವತಗಳು ಸೈನಿಕರಂತೆ ನಮ್ಮ ಸುತ್ತುವರಿದ್ದವು ನದಿಯೊಂದು ನಿಶಬ್ಬವಾಗಿ  ಹರಿಯುತ್ತಾ ಸ್ವರ್ಗ ಲೋಕವೊಂದನ್ನುಉಂಟುಮಾಡಿತ್ತು. ಸೋನ್ ಮಾರ್ಗಕ್ಕೆ ಕೆಲವೇ  ಕಿಲೋಮೀಟರ್ ಹಿಂದೆ ನಮ್ಮಕ್ಯಾಂಪ್ ಸಪ್ನಲೋಕ ಸೃಷ್ಟಿಸಿದ ನದಿ ರಾತ್ರಿದುಸ್ವಪ್ನದಂತೆಕಾಡಿತ್ತು. ಇಷ್ಟು ದಿನ ಹಂಸ ತೂಲಿಕದ ಮೇಲೆ ಮಲಗಿದ ನನಗೆ ಒಂಟೆ ಮೇಲೆ ಮಲಗಿದ ಅನುಭವ, ನದಿ ಭೋಗರ್ೆರೆತಕ್ಕೆ ನಿದ್ದೆ ಹಾರಿ ಹೋಗಿತ್ತು ಸ್ವಪ್ನ ಸೌಂದರ್ಯದ ಕನಸು ಕಾಣುತ್ತಾರಾತ್ರಿ ಕಳೆದೆವು

KISHAN SAR LAKE AND VISHNU SAR LAKE
KISHAN SAR LAKE AND VISHNU SAR LAKE (KGL)


DAL LAKE


LIDER RIVER SONA MARG.

ದಿನ 2


ಸೋನ್ ಮಾರ್ಗದಿಂದ ನಿಚ್ ನಾಯ್ ಪಾಸ್ ವರೆಗೆ....


         ಕನಸು ಹೆಕ್ಕುತ್ತಾ ಕಪ್ಪಿರುವೆ ಸಾಲಿನನಂದದಿ ಹೊರಟಿತ್ತು ಚಾರಣಿಗರ ಮೆರವಣಿಗೆ. ದೂರದ ಸೋನ್ ಮಾರ್ಗಎದ್ದಿತ್ತಷ್ಟೆ.ಏರುದಾರಿಯ ಏರು ದಾರಿಯುದ್ದಕ್ಕೂ ಕುರುಬರ ಹಿಂಡು. ಜೊತೆಗೆ ಮೆವ ಕುರಿಗಳ ದಂಡು. ನೋಡಿ ನಮ್ಮ ಕಣ್ಣುಗಳು ದಂಗು.  ನಮ್ಮ ಕುಶಲೋಪರಿಯ ಪರಿ ಪರಿಯಾಗಿ ವಿಚಾರಿಸಿಕೊಂಡರು. ಮನೆಯಲ್ಲದ ಮನೆಗೆ ನಮ್ಮ ಆಹ್ವಾನಿಸಿದರು. ಮನಸೋ ಇಚ್ಛೆ ಲಸ್ಸಿ ಕುಡಿಸಿದರು. 
KEHVA KETAL

            ಬೆಳಗಿನ ಅವಲಕ್ಕಿ 12 ರ ಸುಮಾರಿಗೆ ಮನೆಯ ಹಾದಿ ತುಳಿದಿತ್ತು. ಮಧ್ಯಾಹ್ನಕ್ಕೆ  ತಂದ ಬುತ್ತಿ ಬಿಚ್ಚಿ ಹರಿವ ಜಲದ ಸನಿಹವೆ ತಿಂದು ಹಿಮಾಲಯದ ನೀರು ಕುಡಿದು ಖುಷಿ ಪಟ್ಟೆವು. ಓಕ್ ಟ್ರೀಗಳ ನೆರಳಿನಲ್ಲಿ ತಂದ ಕೆಲವು ತಿಂಡಿಗಳನ್ನು ಹಂಚಿತಿಂದು ಹೆಜ್ಜೆಎಣಿಸುತ್ತಾ ಸಾಗಿದೆವು.
ಎತ್ತರೆತ್ತರಕ್ಕೆ ಏರಿದಂತೆ ಚಳಿ ತನ್ನ ಪ್ರಭಾವ ತೋರ ಹತ್ತಿತು. ಅತ್ಯಂತ ಎತ್ತರ ಜಾಗದಲ್ಲಿ ಅಧ್ಭುತ ರುಚಿಯ ಬಿಸಿ ಬಿಸಿ ಕೆಹವಾ ಒಂದು  ನಮಗಾಗಿ ಕಾಯುತಲಿತ್ತು. ಕೆಹವಾ ಗಂಟಲಿಗೆ ಇಳಿಯುತ್ತಲೇ ಸ್ವರ್ಗೋಲ್ಲಾಸ! ಇಷ್ಟು ಎತ್ತರದ ಜಾಗದಲ್ಲಿ ಚಹ ಅಂಗಡಿ ಹಾಕಿದವನಿಗೆ ಸಾವಿರ ನಮನ ಸಲ್ಲಿಸಿದೆ. ಮನೆಯಲ್ಲಿ ಮ್ಯಾಗಿ ತಿಂದಿದ್ದು ಸಾಲದೆಂಬಂತೆ ಇಲ್ಲೂ ಕೆಲವರು ಮ್ಯಾಗಿಗೆ ಆರ್ಡರಿಸಿದರು. ಅವರಿಗೆ ನನ್ನ ಅನುಕಂಪ.  

LIDDER RIVER
   

     
 ಹರ್ಕಿದುನ್ ಚಾರಣದಲ್ಲಿ ಭೇಟಿಯಾದ ಇಬ್ಬರು ಗೆಳೆಯರು ಆಕಸ್ಮಿಕವಾಗಿ ಸಿಕ್ಕರು! ಈ ಭೂಮಿ ದುಂಡಗಿದೆ ಅನಿಸಿತು. ಜೊತೆಗೊಂದಿಷ್ಟು ಪೋಟೋ ಸಮಾರಾಧನೆ. 
ಇಲ್ಲಿಂದ ಮುಂದೆ ಇಳಿಜಾರಿನ ಹಾದಿಯಲಿ ಲಿಡ್ಡರ್ ನದಿಗುಂಟ ಸಾಗಿ ಸಣ್ಣತೊರೆಯ ಬಳಿ ನಮ್ಮಕ್ಯಾಂಪ್ ನಮಗಾಗಿ ಕಾದಿತ್ತು. ನಾನು ಮತ್ತು ಗೆಳೆಯ ನಾಗರಾಜ ಹಿಮಾಲಯದ ಹೂಗಳನ್ನು ನೋಡುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಾಗುರಿ ಸೇರಿದೆವು. ಬೃಹತ್ ಬೆಟ್ಟದ ಬುಡದಲ್ಲಿ ನಮ್ಮ ಕ್ಯಾಂಪ್ ಕಾಣಿಸುತ್ತಲೇ 11.6 ಕಿ. ಮಿ. ನಡೆದ ದಣಿವೆಲ್ಲಾ ಕಣಿವೆಯಲಿ ಕರಗಿತು. ಸುತ್ತಲೂ ಹಳದಿ ಆರ್ಕಿಡ್ ಹೂಗಳು ಸಂಭ್ರಮವನು ಇಮ್ಮಡಿಗೊಳಿಸಿದವು. ಬಿಸಿಲಿಗೂ ಹಳದಿ ಛಾಯೆ. ಸೂರ್ಯನಿಲ್ಲಿ ರಜೆಯ ಮೇಲಿದ್ದ. ಕೆಲವರು ಧ್ಯಾನಕ್ಕಿಳಿದರು. ನಾ ಝರಿಯ ಮಾತನಾಡಿಸ ಹೊರಟೆ.  

ಹೂವ ಪಕಳೆ ಹರಡಿದಾಗ


ಕಶ್ಮೀರಿ ಹುಕ್ಕಾ ಸೇದುತ್ತಾ ಕುಳಿತ ಅಜ್ಜನೊಬ್ಬ ನನ್ನ ಕ್ಯಾಮರಾದೊಳಗೆ ಬಂದಿಯಾದ. ಸಣ್ಣಝರಿಯ ಜೋಗುಳದಲಿ ನಕ್ಷತ್ರಗಳ ಹೊದಿಕೆ ಅಡಿಯಲಿ ನಿದ್ರಾದೇವಿಯ ವಶವಾಗಿದ್ದು ತಿಳಿಯಲೇ ಇಲ್ಲ!

Snow stream crossing.



ದಿನ 3

ನಿಚನಾಯಿಯಿಂದ ವಿಷ್ಣು ಸರ್ ಲೇಕ್.....

ನಿಚ್‌ ನಾಯ್‌ ಪಾಸ್‌ ಕಡೆಗೆ ಪ್ರಯಾಣ.
        
        ಶೀತಲಮಯವಾದ ನಿಚನಾಯಿಯ ಮೋಡ ಕವಿದ ವಾತಾವರಣದಲ್ಲಿ ಶಾಸ್ತ್ರಕ್ಕೆಂಬಂತೆ ಬೆಳಗಿನ ಉಪಹಾರ ಸೇವಿಸಿ ಸೋನ್ ಮಾರ್ಗನ್ನು ಹಸಿರುಕ್ಕಿಸುವಂತೆ ಮಾಡುವ ನದಿ ಗುಂಟ ಬೃಹತ್ ಕಲ್ಲುಗಳ ಮೇಲೆ ಮಂಗನಂತೆ ಜಿಗಿಯುತ್ತಾ ಚುಮುಗುಡುವ ನದಿ ನೀರಿನಲಿ ಕಾಲು ತೋಯಿಸಿ ಜಾರದಂತೆ ದಾಟಿಕೊಂಡು ಕಲ್ಲು ಬಂಡೆ ಮೇಲೆ ಕೂತು ಶೂಧರಿಸುವಾಗಲೇ ಬಂದ ಕುದುರೆಗಳು ನೀರಿಗಿಳಿಯಲು ಹಠಮಾಡತೊಡಗಿದವು. ಅಂತೂ ಕುದುರೆಗಳನ್ನು ಅವುಗಳ ಮಾಲಿಕರು ಪುಸಲಾಯಿಸಿ ಝರಿ ದಾಟಿಸಿದರು. 

ನಾನು ಜಾರಿ ಬಿದ್ದ ಜಾಗ....


ನಿಚ್‌ ನಾಯ್‌ ಪಾಸ್‌ ಎಂಬ ಸ್ವರ್ಗ. 

            ಮುಂದಿನದು ಸಣ್ಣ ಕಲ್ಲುಗಳ ಏರುದಾರಿ. ಎರಡು ಬೃಹತ್ ಪರ್ವತಗಳ ನಡುವಿನ ಕವಲ ನಡುವೆ ಪ್ರಯಾಣ. ಅಲ್ಲಲ್ಲಿ ಹಿಮ ದರ್ಶನ. ಹಿಮವನ್ನುಎಂದೂ ನೋಡದವರಂತೆ ಮುಟ್ಟಿ, ತಿಂದು ಅಲ್ಲಿ ಜಿಗಿದು ಖುಷಿಪಟ್ಟೆವು. ಇಲ್ಲಿನತುದಿಯಎತ್ತರ ಸುಮಾರು13,615 ಅಡಿ 10.30 ರೊಳಗೆ ನಮ್ಮತಂಡದಐವರು ಬೆಟ್ಟದತುದಿಯಲ್ಲಿದ್ದೆವು. ಇಲ್ಲಿಒಂದು ಮ್ಯಾಗಿ ಮತ್ತು ಅವರು ಕೊಟ್ಟ ಜ್ಯೂಸ್ ಸವಿದು ನಿಚ್ನಾಯ್ ಪಾಸ್ಕ್ರಾಸ್ ಮಾಡಲು ತಯಾರಾದೆವು. 

Nich Nayi Pass

    

    ನಿಚ್ ನಾಯ್ ಪಾಸ್ ಸಂಪೂರ್ಣ ಹಿಮಭರಿತವಾಗಿತ್ತು. ಈ ಹಿಂದೆ ಹಿಮದಲ್ಲಿ ನಾನುಬಿದ್ದುದರಿಂದ ಪಾಸ್ದಾಟಲು ನಮ್ಮತಂಡದ ಸತೀಶ್ ಅವರ ಸಹಕಾರ ಪಡೆದು ನಿಧಾನಕ್ಕೆ ಪಾಸ್ದಾಟಿ ಪಾರಾದೆ. ಪಾಸ್ದಾಟುವಲ್ಲಿ ಅನೇಕ ಮ್ಯೂಲ್ ಮತ್ತು ಕುದುರೆಗಳು ಎಡವುತ್ತಿದ್ದವು. ಬೆಟ್ಟಗಳ ರಕ್ಷಣಿಯಲ್ಲಿ ಸುತ್ತಲು ಹಳದಿ, ಬಿಳಿ, ಮತ್ತು ನೀಲಿ ಹೂಗಳು ಅರಳಿನಿಂತಿದ್ದವು. ನಡುವೆ ಹಾವು ಹರಿದಂತಹದಾರಿ. ಪಾಸ್ನಿಂದ ಇಳಿದು ಕಣಿವೆಯ ಬಯಲಿಗೆ ಇಳಿದಾಗ ಮನಸ್ಸು ಇಲ್ಲಿನ ಸೌಂದರ್ಯಕ್ಕೆ ಮುದಗೊಂಡಿತ್ತು. ಅಲ್ಲಲ್ಲಿ ಕುರಿಗಾಹಿಗಳ ಹಿಂಡು, ನಿತ್ರಾಣಗೊಂಡ ಮನಸ್ಸಿಗೂ, ದೇಹಕ್ಕೂ ಅಹ್ಲಾದ. ನಿಚ್ನಾಯ್ ಪಾಸ್ನಲ್ಲಿ ಹುಟ್ಟುವ ಝರಿಯೊಂದು ಪೂವರ್ಾಭಿಮುಖವಾಗಿ ಹರಿಯುತ್ತಿತ್ತು. ಅದರದಂಡೆಯಲ್ಲೆ ಕೂತು ತಂದ ತಣ್ಣಗಿನ ಬುತ್ತಿ ಬಿಚ್ಚಿತಿಂದೆವು. ವಾಹ್ಅಹ್ಲಾದ. ಝರಿಯನ್ನೆ ನೋಡುತ್ತಾ ಹಲವು ಸಮಯ ಮೈಮರೆತೆ. ಕಣ್ಣು ಹಾದಲೊರೆಗೂಕಣಿವೆ. ಒಂದೆರಡುಅತ್ಯುತ್ತಮ ಚಿತ್ರಗಳು ದೂರಕಿದ್ದು ಇಲ್ಲೇ. ಝರಿಯ ನೀರುಆಕಾಶವನ್ನು ಪ್ರತಿಫಲಿಸಿ ಸೌಂದರ್ಯವನ್ನು ಹೆಚ್ಚಿಸಿತ್ತು. ನನ್ನಅಬ್ಬೆಪಾರಿ ಮನಸ್ಸುಕಣಿವೆ ತುಂಬಾ ಅಡ್ಡಾಡಿ ಬಂತು. ನನ್ನೊಳಗೆ ಕಣಿವೆ ಸೌಂದರ್ಯವನ್ನು ಇಳಿಸುತ್ತಾ ನಿಧಾನಕ್ಕೆಎಲ್ಲರಿಗಿಂತಕೊನೆಯವನಾಗಿತಲುಪಿದೆ.   ಕಣ್ಣಿನಲ್ಲೆಕಣಿವೆ ಹೀರಿದ ಸುಖ ಕಣ್ಣಿನಲ್ಲಿ ನಳನಳಿಸುತ್ತಿತ್ತು.ಸ್ವಲ್ಪ ಹೊತ್ತುಕ್ಯಾಂಪನಲ್ಲಿ ವಿರಮಿಸಿ ಸಂಜೆ ಹೊತ್ತಿಗೆ ಸ್ನಾನಮಾಡಿ ವಿಷ್ಣು ಸರ್ ಸರೋವರಕ್ಕೆ ಹೋಗಿ ಬಂದೆವು. ವಿಷ್ಣು ಸರ್ದ ಸೌಂದರ್ಯ ಮತ್ತುಅಗಾಧತೆಗೆ ಮನಸ್ಸು ಭಯಗೊಂಡಿತ್ತು. ಕಾಲು ತೋಯಿಸಿಕುಳಿ? ಲೋಕ ಮರೆತಅನುಭವ. ಸಮತಟ್ಟಿನಲ್ಲಿಝರಿಯೊಂದು ವಿಷ್ಣು ಸರ್ನಿಂದಹೊರಟು ಬಂದಿತ್ತು ಹಿಮನದಿಯಲ್ಲಿ ಮಿಂದ ಪುಳಕ. ಸಂಜೆಗೆಕೆಂಪಾದ ಸೂರ್ಯತನ್ನೆಲ್ಲಾ ಬಣ್ಣಗಳ ತೋರುತ್ತಾ ನನ್ನ ಕೆಮರಾದಲ್ಲಿ ಸೆರೆಯಾದ. ಉಳಿದವರು ಆಟಗಳಲ್ಲಿ ತಲ್ಲಿನರಾದರೆ ನಾನು ಪೋಟೋಗ್ರಾಪಿಯಲಿ.

Vishnu Sar in the evening. 


ವಿಷ್ಣು ಸರ್‌ ಸರೋವರದಲಿ ಹುಟ್ಟುವ ಹಿಮ ನದಿ ದಾಟುವ ಚಾರಣಿಗ..


    ಮೇ ತಿಂಗಳಿನಲ್ಲಿ ಇಂತಿಷ್ಟು ಕುರಿಗಳ ಹಿಂಡುಕಟ್ಟಿಕೊಂಡು ಅಲೆದ ಕುರಿಗಾಹಿಗಳ ಒಂದೆರಡುಕುಟುಂಬ ನಮ್ಮಜೊತೆ ಬಿಡಾರ ಹೂಡಿದ್ದವು. ಅವರನ್ನೆಲ್ಲಾ ಮಾತಾಡಿಸಿ ಬಂದೆವು. ಹಿಮ ಬೀಳುವ ಮೊದಲುತಮ್ಮೂರಿಗೆ ಹಿಂದಿರುಗುವ ಭಾಗಶಃ ಅಲೆಮಾರಿಗಳು. ಹೆಚ್ಚಿನವರು ಲಕ್ಷಾಧೀಶರು. ಬೇಕಷ್ಟೆ ಕುರಿ ಮಾರಾಟ ಮಾಡಿ ಸುಖವಾಗಿರುವರು. ಕುರಿಗೊಬ್ಬರದಿಂದಲೂ ಸಂಪಾದನೆ!

ಹಿಮ ನದಿಗಳಲ್ಲಿ ಕಂಡು ಬರುವ ವಿಶಿಷ್ಟ ಟ್ರೋಟ್ ಮೀನಿನ ಸಮಾರಾಧನೆ ನಡೆದಿತ್ತು. ಇವರ ಬಾಯಿ ಚಪಲಕ್ಕೆ ಬಲಿಯಾದ ಮೀನುಗಳಿಗೆ ನನ್ನ ಅನುಕಂಪಗಳು.

ಅಬ್ಬಾ ಹಿಮವೇ!

ಬೋಗುಣಿ ಕಣಿವೆಯ ಅಂಚಿನಲಿ ಅಲೆಯುತ್ತಾ...


ದಿನ 4
ವಿಷ್ಣು ಸರ್ ಲೇಕ್ನಿಂದ ಗಡಸರ್ ಲೇಕ್-


Towards Gad Sar.
ಇಂದು  ಅತಿ ಹೆಚ್ಚು ದೂ ನಡೆಯ ಬೇಕಾದುದರಿಂದ ದಿನವಾದುದರಿಂದ ಬೆಳಿಗ್ಗೆ 7.15 ಕ್ಕೆಲ್ಲಾ ತಿಂಡಿ ತಿಂದು ಪ್ಯಾಕ್ಡ್ ಲಂಚ್ ಹಿಡಿದು ಶಾಲಾ ಮಕ್ಕಳಂತೆ ಪುಳಕದಿಂದ ಹೊರಟು ನಿಂತೆವು. ಇದೊಂದು ಸುದೀಘ ದಿನವಾಗುತ್ತದೆಂದು ಎಲ್ಲರೂ ಮಾನಸಿಕವಾಗಿ ತಯಾರಾದೆವು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಕೃಷ್ಣ ಸರ್ ಮತ್ತು ಅದ್ಭುತವಾದ ಗಡ ಸರ್ ಲೇಕ್ ಮತ್ತು 14,000 ಅಡಿ ಎತ್ತರದ  ಗಡಸರ್ ಪಾಸ್ ದಾಟುತ್ತೇವೆಂಬ ಪುಳಕ!!
ವಿಷ್ಣು ಸರ್ ಲೇಕ್ ನೋಡಿಕೊಂಡುಕಿಷನ್ ಸರ್ ಲೇಕ್ನ ಬಳಿ ಬರುತ್ತಲೆಎದೆ ಬಡಿತ ವಿಪರೀತ ! ಲೇಕನ ಸನಿಹವೇ ಇದ್ದ ದುರಂಧರನಂತಹ ಶಿಖರಾಗ್ರ ಕಾಣುತ್ತಲೇ ಮನವೇಕೋ ಕಸಿವಿಸಿ.  ದೈತ್ಯ ಕಿಶನ್ ಸರ್ ಸರೋವರದ ಸೌಂದರ್ಯ ಸವಿಯದಂತೆ ಮಗ್ಗುಲ ಮುಳ್ಳಾಗಿ ನಿಂತಿತು ಉಚಿಜಚಿಡಿ ಠಿಚಿ. ಎದೆಝಲ್ ಎನಿಸುವ ಎತ್ತರ. ಸ್ಪಲ್ಪ ಯಾಮಾರಿದರೂಕಿಶನ್ ಸರ್ ಪಾಲು. ಮ್ಯೂಲ್ಗಳು ಚಲಿಸುವ ಓಣಿಯಂತಹ ದಾರಿ. ಮೂಲ್ಗಳ ಕಾಲ್ ತುಳಿತಕ್ಕೆ ಸಿಕ್ಕದೇ ಏರುವುದು ಬಲು ಕಠಿಣ.
ತೀವ್ರಕಡಿದುಕೊನೆಯ ಹಂತವಂತೂ ಬಲು ಕಠಿಣ. ಸಣ್ಣ ಕಲ್ಲುಗಳು ಬೂಟುಗಾಲಿಗೆ ಸಿಕ್ಕಿ ಕಾಲು ಜಾರುತಲಿತ್ತು. ಯಾವನೋ ಪುಣ್ಯಾತ್ಮ ನನ್ನತುದಿ ತಲುಪಿಸಿದ. 10ರ ಸುಮಾರಿಗೆ ನಮ್ಮತಂಡದಅರ್ಧಕ್ಕರ್ಧ ಮಂದಿ 14,000 ಅಡಿ ಎತ್ತರದ ನೆತ್ತಿಯಲ್ಲಿದ್ದೆವು. ನೆತ್ತಿಯಿಂದ ಕಾಣುವಾಗ ಎಡಕ್ಕೆ ಕಿಶನ್ಸರ್ ಬಲಕ್ಕೆ ಗಡ್ಸರ್ನ ವಿಹಂಗಮತೆ ಅದ್ಭುತ! ಆರೇಳು ಸಣ್ಣ ಸಣ್ಣ ಸರೋವರ ಸಂಗಮತೆಯ ಗಡ್ ಸರ್. ಹಿಮದ ನೆತ್ತಿ ಮೇಲೆ ಗೆಳೆಯರ ದಂಡು12ರ ಸುಮಾರಿಗೆಎಲ್ಲಾ ಮ್ಯೂಲ್, ಕುದುರೆಗಡಸರ್ ಪಾಸ್ಗೆ ಬಂದು ಅಲ್ಲೊಂದು ಉತ್ಸವ ನೆರೆದಿತ್ತು. ಸಕತ್ ಪೋಟೋ ಸಮಾರಾಧನೆ. ಮ್ಯೂಲ್ಗಳ ಮೆರವಣಿಗೆ ಮುಗಿದ ಮೇಲೆ ನಮ್ಮತಂಡದವರ ಮೆರವಣಿಗೆ ಹೊರಟು ನಿಂತಿತ್ತು. ನಮ್ಮತಂಡದ ಆಮೆ ವೇಗದ ಚೆಲ್ಲಾಟದ ನವತರುಣಿಯರಿಬ್ಬರು ಬಂದು ತಲುಪ ಬೇಕಿತ್ತು. ಆದರೂ ಅವರಿಗಾಗಿ ಕಾಯದೆ ನಾವು ಹೊರಟು ನಿಂತೆವು.

ಹೂವ ಗಂಧ ತೇಲಿ ಬಂತು....



FLOWERS VALLEY!


    ಗಡಸರ್ ಪಾಸ್ನ ನೆತ್ತಿಯಲ್ಲಿ ಪೋಟೋ ಸಮಾರಾದನೆ ನಡೆಯುತಲಿತ್ತು. ಸಿಕ್ಕ ಸಿಕ್ಕಂತೆ ಕ್ಲಿಕ್ಕಿಸಿ ಖುಷಿಪಟ್ಟೆವು. ಶೀತಲ ವಾತಾವರಣದಲ್ಲೂ ಬಿಸಿಲತಾಪಕ್ಕೆ ತೊಯ್ದುತೊಪ್ಪೆಯಾಗಿದ್ದೆವು. ಸ್ನೋ ಬಳಿದುಕೊಂಡು ಚಂದ ಇದ್ದೇನಾ ಎಂದು ನೋಡಿಕೊ ಎಂದ ಪರ್ವತಗಳನ್ನೆಲ್ಲಾ ಕ್ಲಿಕಿಸಿ ಸುಮ್ಮನಾದೆ. ಯಾವುದೂ ಹಲ್ಕಿರಿಯಲ್ಲಿಲ್ಲ. 

GADSAR LAKE WITH A WALKING PATH.


    ಹಸಿರು ಪಾಚಿ ಕಟ್ಟಿದಂತಹಒಂದೊಂದು ಸರೋವರದ ತುಣುಕುಗಳು ಆಕಾಶದಿಂದಉದುರಿದ ವಿಶಿಷ್ಟ ತುಣುಕುಗಳಂತೆ ಗೋಚರಿಸುತ್ತಿದ್ದವು. ಪಾಸ್ನ ಬಲ ಮಗ್ಗುಲಿಗೆ ಇದ್ದಎಲ್ಲಾ ಹಿಮಕರಗಿತ್ತು. ಜೊತೆಗೆ ಬಿಸಿಲು ಬಂದು ನಮ್ಮಅದೃಷ್ಟಕ್ಕೆ ನಿರಾಯಾಸವಾಗಿ ಪರ್ವತಏರಿ??್ದವು. ತೀವ್ರ ಇಳಿಜಾರಿನ ಕಣಿವೆ ಇಳಿಯುತ್ತಲೇ ಕಾಶ್ಮೀರದ ಹೂ ಕಣಿವೆ ಎದುರಾಗಿತ್ತು. ನೆತ್ತಿಯ ಮೇಲೆ ಕಂಡದಂತಹ ಕಡು ಕೆಂಪು ಕುಸುಮಗಳು ಇಲ್ಲೆಲ್ಲೂ ಕಾಣಲಿಲ್ಲ. ಪ್ರತೀ ಸ್ತರಕ್ಕೂ ತನ್ನದೇ ಲೆಕ್ಕಚಾರದ ಹೂಗಳ ಬೆಳೆಸಿತ್ತು ಪ್ರಕೃತಿ! ಶ್ವಾಸಕೋಶದೊಳಗೆ ನುಗ್ಗುವ ಪ್ರತಿ ಉಸಿರಿನಲ್ಲೂ ಹೂವಗಂಧ. ಯಾವುದೋ ಪುಷ್ಪೋಧ್ಯಾನದಲ್ಲಿದ್ದಂತೆ. ಸ್ನೋ ಬಳಿದುಕೊಂಡು ನಿಂತ ಪ್ರತೀ ಶಿಖರದಿಂದ ಸಣ್ಣಗೆ ಝರಿಗಳು ಉದಿಸಿದ್ದವು. ಸ್ವಲ್ಪ ದೂರದಲ್ಲೇ ಮಿಲಿಟರಿ ತಪಾಸಣಿ.  ಪುಷ್ಪಕಣಿವೆಯಲಿ ಅಂಗಾತ ಮಲಗಿ ಹೂ ಪರಿಮಳ ಹೀರಿದೆವು. ಶ್ವಾಸಕೋಶದ ತುಂಬಾ  ಹೂ ಗಂಧ. ಕ್ಯಾಮರ ಜೋಳಿಗೆಗೆ ಒಂದಿಷ್ಟು ಚಿತ್ರ ಸೇರಿದವು. ಅಲ್ಲೇ ಬುತ್ತಿಯನ್ನು ಹೊಟ್ಟೆ ದೇವರಿಗೆ ಅಪರ್ಿಸಿದೆ ! ಜಠರಾಗ್ನಿಆರಲಿಲ್ಲ!
ಮಧ್ಯಾಹ್ನದ ನಡುವಿಗೆ ತಲುಪಿದ ಗಡಸರ್ ಸುಂದರಿ ನಮ್ಮೆದುರು ನಗ್ನಳಾಗಿದ್ದಳು! ಮುಡಿಯತುಂಬಾ  ಸ್ನೋ ಬಳಿದು ಸೊಂಟಕ್ಕೆ ಹೂವ ಹೊದ್ದು ಗಿರಿಗಳ ನಡುವೆ ವೈಯಾರ          ತೋರಿದಳು. ನಾಚುತ್ತಲೇ ನೋಡಿಕೊ ಎಂದಳು! ಅವಳನ್ನೇ ಧ್ಯಾನಿಸುತ್ತಾ ತುಂಬಾ ಹೊತ್ತು ಕಳೆದೆ. ಮನಸೊ ಇಚ್ಚೆ ಕ್ಯಾಮಾರದಲ್ಲಿ ಗಡಸರ ಸರೋವರದ ಸೌಂದರ್ಯ ತುಂಬಿಕೊಂಡೆ. 14,000 ಅಡಿಗಳೇರಿದ ಸಾಹಸಕ್ಕೆ ಕೊಂಬು ಮೂಡಿಸಿತ್ತು ನಮಗೆ. ಮುಂದಿನ ಮೂರು ಗಂಟೆಗಳ ನಡಿಗೆ ಎಲ್ಲಾ ಕೊಂಬು ಕಹಳೆಯನ್ನು ಕತ್ತರಿಸಿ ಹಾಕಿ ಬಿಟ್ಟಿತ್ತು. ಹೂ ಪ್ರಾರ್ಥನೆಗೂ ಕರಗದ ಕಣಿವೆಯ ಕಾಲು ಹಾದಿ. ಹೂವ ಹಾಸಿಗೆಯಲಿ ಸೀಳು ಮಾಡಿದಂತಹ ಎಂದೂ ಮುಗಿಯದ ತಿರುವು ಮುರುವು ದಾರಿ. ಸೂರ್ಯನಾಗಲೇ ನೆತ್ತಿ ಸುಡುತಲಿದ್ದ. ಅತಿ ವಿಶಿಷ್ಟ ಕ್ಯಾಂಪ್ ಸೈಟ್ಗೆ ತಲುಪಿದಾಗ ಐದುಗಂಟೆ. ಬಂದವರೆಲ್ಲಾ ಸುಸ್ತಾಗಿ ಬಿಡಾರದಲ್ಲಿ ಕನಸ ಹೆಕ್ಕ ತೊಡಗಿದ್ದರು. ನಾನು ಝರಿಯೊ ಂದರಲಿ ಸ್ನಾನಕ್ಕಿಳಿದೆ. ಐಸ್ ಬಗರ್್ಒಂದನ್ನು ಮಾತಾಡಿಸಿ ಬಂದೆ. ಅದರ ರಸ ಹೀರಿದೆ. ನಮ್ಮೆಲ್ಲಾ ಶಕ್ತಿಯನ್ನು ಬೆತ್ತಲೆಮಾಡಿಕೊಂಬು ಮುರಿದ ಶ್ರೇಯಾ ಇಂದಿನ ದಿನಕ್ಕೆ ಸಲ್ಲುತ್ತದೆ. ಬರೋಬ್ಬರಿ 16.ಕಿ.ಮೀ ನಡಿಗೆ ಎಲ್ಲರನ್ನೂ ಹೈರಾಣವಾಗಿಸಿತ್ತು. ನಾನಂತೂ ಪ್ರೆಶ್ ಇದ್ದೆ. ಏನೋ ಸಾಧಿಸಿದ ಪುಳಕ ನನ್ನ ಆವರಿಸಿತ್ತು. 
ಮೇ ತಿಂಗಳನಲಿ ಕುರಿ ಮೇಯಿಸಲು ಬಂದಕುಟುಂಬ ಒಂದು ಹೊಟ್ಟೆ??ರಿ?? ಲಸ್ಸಿ ಕೊಟ್ಟು ಹೊಟ್ಟೆತಂಪು ಮಾಡಿದರು. 200ಕ್ಕೂ ಹೆಚ್ಚು ಕುರಿಗಳ ಮಾಲಿಕನಾತ. ಒಂದುಕುರಿ 20 ರಿಂದ 100 ಸಾವಿರದವರೆಗೆ??ಕರಿಆಗುತ್ತೆಎಂದ. ಅಕ್ಕಿ ದಾಲ್ಎಲ್ಲವನ್ನೂಗಂಗ್ ಬಲ್ನಿಂದತರಬೇಕುಎಂದು ನಮ್ಮನ್ನುಅಚ್ಚರಿಗೆ??ಡಹಿದ. ನಮ್ಮ ನಾಲ್ಕು ಪಟ್ಟುಇವರ ನಡಿಗೆ.ದೈಹಿಕ ಪರಿಶ್ರಮಅಚ್ಚರಿಪಡುವಂತಹದು. ಅರ್ಧಲೀಟರ್ ಹಾಲು ಕೊಡುವಕುರಿಇಲ್ಲಿನತಂಪು ಹವೆಗೆ ಒಂದುವರೆ ಲೀಟರ್ ಹಾಲು ಕೊಡುತ್ತದೆ. ಎಂದು ಸಂತಸದಿಂದ ಮತ್ತಷ್ಟು ಲಸ್ಸಿ ಸುರಿದ. ಗುಡ್ಡಗಳಲ್ಲಿ ಬೆಳೆದ ಸೊಪ್ಪನ್ನುತನ್ನ ವಿಶಿಷ್ಟ ಕತ್ತಿಯಿಂದ ಕತ್ತರಿಸಿ ದಾಲ್ನೊಂದಿಗೆ ಸೇರಿಸಿ ವಿಶಿಷ್ಟ್ಯ ಅಡುಗೆ ಮಾಡುವರು. ನಮ್ಮನ್ನು ಉಣ್ಣಲು ಆಹ್ವಾನಿಸಿದ್ದರು. ಇವರು ಪ್ರಕೃತಿಯೊಂದಿಗೆ ಬೆರೆತು ಬದುಕುವ ಪರಿ ಅಚ್ಚರಿ !
ಅನಾಮಿಕ ಕುರಿಗಾಹಿ 


ನಮ್ಮ ಗುಡಾರಗಳ ಸನಿಹವೇ ಒಂದು ಕುಟುಂಬ ವಾಸವಾಗಿತ್ತು. ಅವರನ್ನೂ ಮಾತನಾಡಿಸಿ ಬಂದೆವು. ಒಂದಿಷ್ಟು ಪೋಟೋ ನೈವೇದ್ಯವಾಯಿತು. ಸಂಜೆ ಹೊತ್ತಿಗೆ ನಾವು ತೆರಳುವ ಗಂಗ್ಬಲ್ ಸರೋವರದಲಿ ಮಳೆರಾಯನ ಆರ್ಭಟವಿದೆ ಎಂದು ಆಕಾಶವಾಣಿ ಆಯಿತು. 
ಏಳು ಮವತ್ತರ ಸುಮಾರಿಗೆ ಉಂಡು ಗುಡಾಣವಾದ ಹೊಟ್ಟೆಯೊಂದಿಗೆ ಗುಡಾರ ಸೇರಿ ನಿದ್ರಾ ನದಿಯಲಿ  ಈಸತೊಡಗಿದೆವು!   
ದಿನ :5-

ಗಡ ಸರ್ ನಿಂದ ಗಂಗ್ ಬಲ್ ವರೆಗೆ 

ಗಡ್‌ ಸರ್‌ ಪಾಸ್



ಗಡ ಸರ್ನಿಂದ ಸಾತ್ಸರ್ ಸರೋವರದವರೆಗೆ ಮುಂದಿನ ಕತೆಯನ್ನು ಸ್ಪಲ್ಪ ಫಾಸ್ಟ್ ಪಾರ್ವಡ್ ಮಾಡುವೆ. 

ಚುಮು ಚುಮು ಚಳಿಗೆ ಕಾಫಿ ಹೀರಿ ತಿಂಡಿ ಸವಿದು ಜಾರುವ ಹಿಮಗಡ್ಡೆಯಲಿ ಸತೀಶ ಅಣ್ಣನ ಕೈ ಹಿಡಿದು ಬೆಟ್ಟದಲಿ ್ಲ  ಕಾಣುವ ಗೆರೆಗಳಂತಹ ದಾರಿಗೆ ದಾಟಿಕೊಂಡೆವು. ಏರು ಪ್ರಯಾಣ. ನಮ್ಮ ಏಕಾಂತಕ್ಕೆ ಸಾವಿರ ಸಾವಿರ ಹೂಗಳ, ಸ್ಟ್ರಾಬೆರಿ ಹಣ್ಣುಗಳ ಸಾತ್. ಹನಿ ಮಳೆಗೆ ಮನಸ್ಸು ನವಿಲಾಗಿತ್ತು. ಹನಿ ಮಳೆಗೆ ಚಿತ್ರ ತೆಗೆಯದಂತೆ ತಡೆದ ಹನಿ ಮಳೆಗೆ ಹನಿ ಶಾಪ! ಸುತ್ತಲಿನ ಆಹ್ಲಾದಕರ ವಾತಾವರಣಕ್ಕೆ ಮನಸೊತಿತ್ತು. 



ಏರಿಳಿತದ ದಾರಿಯಲಿ ಗೆಳೆಯರನ್ನು ಗೋಳು ಹೊಯ್ದುಕೊಳ್ಳುತ್ತಾ ಅತಿ ಸುಂದರ ಸಾತ್ ಸರ್ ಸರೋವರವನ್ನು ತಲುಪಿಸಿದೆವು. ಜಾರುವ ಕಲ್ಲುದಾರಿ, ಹಿಮಝರಿಗಳು ನಮ್ಮ ತಂಡದವರನ್ನು ಸಾಕಷ್ಟು ಗೋಳು ಹೊಯ್ದುಕೊಂಡಿತು. ಎರಡು ಝರಿಗಳನ್ನು ದಾಟಿದ್ದು ಎಲ್ಲರಿಗಿಂತ ಮೊದಲಿಗನಾಗಿ ಬಂದಿದ್ದು ನನ್ನ ಸಾಧನೆ.


ಸಾತ್‌ ಸರ ಸರೋವರದ ಸನಿಹದ ಗುಡಾರಗಳು..


ಚಳಿಯಲ್ಲಿ ಕುಳಿತು ದಾಲ್ ಚಾವಲ್ ಸವಿದಿದ್ದು ಒಂದು ಅನನ್ಯ ಅನುಭೂತಿ. ಸಹ ಚಾರಣಿಗರು ಶತಮಾತದಿಂದ ನಿದ್ದೆಯೇ ಮಾಡದವರಂತೆ ತಮ್ಮ ನಿದ್ರಾ ಚೀಲದೊಳಗೆ ಅವಿತರು. ಹೊರಗಡೆಯ ಮಳೆಗೆ ಹೊಟ್ಟೆಯೊಳಗಿನ ದಾಲ್ ಚಾವಲ್ನ ಜುಗಲ್ ಬಂದಿ. ಸಂಜೆ ಹೊತ್ತಿಗೆ ಯಾರಿಗೂ ಸತ್ ಸರ್ ಸರೋವರ ನೋಡುವ ಮನಸ್ಸು ಯಾರಿಗೂ ಇರಲಿಲ್ಲ. ಗುಡಾರದಲ್ಲೇ ಅವಿತೆವು.

ಕುತ್ತಿಗೆ, ಕೈಯಚರ್ಮ ಬಿಸಿಲಿಗೆ ಸುಟ್ಟು ಗರಿಗರಿ ಹಪ್ಪಳದಂತಹ ತುಣುಕುಗಳು ಎದ್ದು ಬರುತ್ತಿದ್ದವು. ಆಕಾಸವು ಬಿಕ್ಕುತ್ತಿತು. ಗೆಳೆಯ ನಾಗರಾಜ ವೈದ್ಯರ ಸಲಹೆ ಧಿಕ್ಕರಿಸಿ ಸ್ಟ್ರಾಬೆರಿ ಮುಕ್ಕಿ ಪಾಯಿಖಾನೆಗೆ ಮಾರ್ಚ್ ಫಾಸ್ಟ್ ಮಾಡಿದ. ನನಗೂ ಹೊಟ್ಟೆಯಲ್ಲಿ ಸಣ್ಣ ಗುಡು ಗುಡು. ಪುಣ್ಯಕ್ಕೆ ಏನೂ ಆಗದೆ ಬಚಾವ್ ಆದೆ.  

ಅಂದು ಬಹು ಬೇಗ ನಿದ್ದೆ ಮಾಡಿ ದಿನಕ್ಕೆ ಚಾದರ ಹೊದಿಸಿದೆವು.

ಗಡ್‌ ಸರ್‌ ಸರೋವರ ಗಡ್‌ ಸರ್‌ ಪಾಸ್‌ ನಿಂದ

ದಿನ -6 

ಸಾತ್ ಸರ್ ನಿಂದಗಂಗ್ ಬಲ್ ಸರೋವರಕ್ಕೆ.


ಸಾತ್ ಸರ್ಗುಡಾರದಿಂದ ಗಂಗ್ಬಲ್ ಕಡೆಗೆ ಬೆಳಿಗ್ಗೆ 8ಕ್ಕೆ ಹೊರಟೆವು. ಮೊದಲೆರಡುಗಂಟೆ ಕಲ್ಲುಗಳೊಂದಿಗೆ ಸರಸಕ್ಕೆ ಬಿದ್ದೆವು. ದಾರಿಯುದ್ದಕ್ಕೂ ಬಂಡೆಗಳೇ ಬಂಡೆಗಳು ಅವುಗಳಿಂದ ದಾರಿತಪ್ಪಿದ್ದೂ ತಿಳಿಯಲಿಲ್ಲ.
ಸುಮಾರು ಮೂರುಗಂಟೆ ಮಂಜು ಕವಿದದಾರಿಯಲಿ ನಡೆದು ಮೂರನೆಯ ಜಾಜ್ ಪಾಸ್  ತಲುಪುವಷ್ಟರಲ್ಲಿ ಎಲ್ಲರೂ ಸುಸ್ತೋ ಸುಸ್ತು. ತುದಿಯಲಿ ಸ್ವಲ್ಪವೇ ಹಿಮ ಕವಿದಿತ್ತುತುದಿ ತುಲುಪಿ ಹಿಮದಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಜಾಜ್ ಪಾಸ್ ತುದಿಯಲ್ಲಿ  ಕುಳಿತು ಸುಮದುರ ಹಿಂದಿ ಕವಿತೆ ಹಾಡಿಕೊಂಡೆವು. ಮೊದಲುತಲುಪಿದ ನಮಗೆ ಗಂಗ್ ಬಲ್ ಸರೋವರ ತನ್ನ ಅಪೂರ್ವ ದೃಶ್ಯಾವಳಿಯನ್ನು ತೋರಿಸಿ ತಣಿಸಿತ್ತು. ನಾವು ಏರಿದ ಸ್ವಲ್ಪ ಸಮಯಕ್ಕೆ ಮೋಡ ಮುಸುಕಿ ಕಾಣದಾಗಿತ್ತು. ಎರಡು ದಿನಗಳಿಂದ ಮಳೆ ಮೋಡದ ಕಣ್ಣಾಮುಚ್ಚಾಲೆ ನಡದೇ ಇತ್ತು. ಮನಮೋಹಕ ಗಂಗ್ಬಲ್ ತಲುಪುವುದು ಯಾವಾಗ ಎಂದು ತವಕಿಸುತ್ತಲೇ ಕಣಿವೆಗೆ ಇಳಿಯ ತೊಡಗಿದೆವು. ಸುಮಾರುಎರಡುಗಂಟೆಯ ಹೊತ್ತಿಗೆ ಗಂಗ್ ಬಲ್ ಸರೋವರದಲ್ಲಿದ್ದೆವು. ಗಂಗ್ ಬಲ್ನ ಸೌಂದರ್ಯವನ್ನು ಮನಸಾರೆ ಸವಿದು ಹರಮುಖ್ ಶಿಖರವನ್ನು ಕಣ್ಣಲೇ ಧ್ಯಾನಿಸಿ ಅಲ್ಲೇ ಬಿಡಾರ ಹೂಡಿದ್ದ ಮೀನುಗಾರರನ್ನು ಮಾತಾಡಿಸಿದೆವು.
ಸರೋವರದ ನೋಟ

ಬೆಳಕಿನಾಟ ಗಂಗ್‌ ಬಲ್‌ ಸರೋವರದಲಿ.


ಗಂಗ್ ಬಲ್ ಸರೋವರ ನಾವು ನೋಡಿದ ಸರೋವರಗಳಲ್ಲಿ ಅತ್ಯಂತದೊಡ್ಡದ್ದು. ಇದರ ನೀರು ಹರ್ಮುಖ ಶಿಖರದ ಎಂದೂ ಮುಗಿಯದ ಹಿಮದಿಂದ ಉತ್ಪತ್ತಿಯಾಗುತ್ತದೆ. 
ಯಾರು ಚಾರಣ ಮಾಡದ ಹರಮುಖ ಶಿಖರದ ಹಿಮದಿಂದಲೇ ತನ್ನೊಡಲನ್ನು ತುಂಬಿಸಿಕೊಳ್ಳುತ್ತಿರುವ ಗಂಗ್ ಬಲ್ ಸರೋವರ ನೋಡುತ್ತಲೇ ದಂಗಾದೆವು. ವಿಶಾಲ ಆಕಾಶ ಚಪ್ಪರದಡಿ ಒಂದೆಂಡೆ ಗಂಗ್ ಬಲ್ ಸ್ಥಿರವಾಗಿನಿಂತಿದೆ. ಶಿಖರದ ನೆತ್ತಿಯಲಿ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿಗೆ ಮೊದಲ ಚಾರಣ 1856ರಲ್ಲಿ ನಡೆದಿತ್ತು. ಆಗ ಏ-2  ನ ಇರುವಿಕೆಯನ್ನು ಗುರುತಿಸಲಾಯಿತು. ಅಲ್ಲಿನ ಮಿಲಿಟರಿಯವರು ವಿವರಿಸುವಂತೆ ಈ ಶಿಖರವನ್ನು ಹೆಲಿಕಾಫ್ಟರ್ ಸಹ ದಾಟಿ ಹೋಗಲ್ಲ. ಗಂಗ್ ಬಲ್ ಸರೋವರದ ಸನಿಹವೇ ನಂದಕೋಲ್ ಸರೋವರ ಹರಡಿ ಹಬ್ಬಿದೆ. ಸಪ್ತ ಸರೋವರದ ಕೊನೆಯ ಸರೋವರ ನಂದ್ಕೋಲ್ ಸರೋವರ. ಅದನ್ನು ಕಣ್ತುಂಬಿ ಕೊಂಡು ಗುಡಾರದ ಕಡೆ ನಡೆದೆವು.
ನಂದ್ ಕೋಲ್ ಸರೋವರದಿಂದ ಹೊರಟ ಝರಿಯೊಂದು ಕಣಿವೆಗೆ ಇಳಿಯುತ್ತಿತ್ತು. ಜೊತೆಗ ಅದನ್ನು ದಾಟಲು ನಮ್ಮನ್ನು ಸುಸ್ತು ಬೀಳಿಸಿತ್ತು. ಪ್ರವಾಹೋಪಾದಿಯಲಿ ಹರಿವ ನೀರಿಗೆ ಕಿರಿದಾದ ಮರದ ದಿಮ್ಮಿಯೊಂದನ್ನು ಅಡ್ಡಲಾಗಿ ಇರಿಸಲಾಗಿತ್ತು. ದಾಟುವಾಗ ಹೃದಯವೇ ಬಾಯಿಗೆ ಬಂದಿತು. ಸ್ನೇಹಿತರ ಹಾಗೂ ಗೈಡ್ ನ ಸಹಾಯ ಪಡೆದು ಅಂತೂ ದಾಟಿದೆ. ಪಾಪಿ ಚಿರಾಯು!

ಗುಡಾರಗಳ ಎದುರಿಗೆ.

ಸತೀಶ್‌ ನಾಗರಾಜ್‌ ಮತ್ತು ಲಕ್ಷೀ ನಾರಾಯಣ. 

ಆರ್ಕಿಡ್ಗಳ ಗುಚ್ಚ

ಗಂಗ್‌ ಬಲ್‌ ಸರೋವರ


ನಮ್ಮ ಗುಡಾರಕ್ಕೆ ಬರುತ್ತಲೇ ಬಿಸಿ ಚಹ, ಬೋಂಡಾ ಮತ್ತು ವಿಪರೀತ ಮಳೆ ಸ್ವಾಗತ ಕೋರಿತು.  ಮಳೆ ಹನಿಗೆ ಪುನಃ  ಮಗುವಾಗಿ ಚಹ ಹೀರತೊಡಗಿದೆ.
ನಮ್ಮ ತಂಡದ ಅನೇಕರು ಗಂಗ್ಬಲ್ ನೋಡದೆ ಗುಡಾರಕ್ಕೆ ಬಂದು ಬಿದ್ದು ಮರುದಿನವೂ ನೋಡಲಾಗದೆ ಕೈ ಕೈ ಹಿಸುಕಿ ಕೊಂಡರು.

ದಿನ -7

ಗಂಗ್ಬಲ್ ಸರೋವರದಿಂದ ನಾರಾನಾಗಕ್ಕೆ

ಎಷ್ಟೊಂದು ರೋಚಕ ಸಾಹಸಗಳಿಗೆ ಮುನ್ನುಡಿ ಬರೆದ ಚಾರಣದ ಬೆನ್ನುಡಿ ಇನ್ನೂ ರೋಚಕ!
ಏಳು ಸರೋವರನೋಡಿದ ಖುಷಿ, ಮಳೆ ಹಿಡಿಸಿದ ಕಸಿವಿಸಿಯಿಂದ ಪ್ರಾರಂಭವಾದ ದಿನ ಕೊನೆಗೆ ಸುಖವಾದ ಸುಪತ್ತಿಗೆಯ ಜೊತೆಗೆ ಹಂಸತೂಲಿಕದ ಯೋಚನೆಯಿಂದ ಕೊನೆಯ ದಿನದ ತೂಕವೇ ಬೇರೆ. ವಿಪರೀತ ಕಲ್ಲಿನ ರಾಶಿಯನ್ನು ದಾಟಿಕೊಂಡು, ಓಕ್ ಮರಗಳ ದಾರಿಯಲ್ಲಿ ಹನಿಮಳೆಯಲ್ಲಿ ನಡೆಯುತ್ತಾ ಸುಮಾರು 16 .ಕಿಮೀ ಚಾರಣವನ್ನು ಜಾರುವ ಹಾದಿಯಲ್ಲಿ ಸುಮನೋಹರ ಚಿತ್ರಗಳನ್ನು ತೆಗೆಯುತ್ತಾ ಸಂಜೆ 4ರ ವೇಳೆಗೆ ನಾರಾನಾಗ್ ಪಟ್ಟಣತಲುಪಿ ಅಲ್ಲಿಂದ ಶ್ರೀನಗರಕ್ಕೆ ಬಂದೆವು. ಅತ್ಯಂತ  ಕಠಿಣವೂ ಅಹ್ಲಾದಕರವೂ ಚಾರಣಕ್ಕೆ ತೆರೆಬಿದ್ದಿತು. 
ಸಪ್ತ ಸರೋವರದ ಚಾರಣ ಚಿತ್ರ ಹರವಿ ಕೂತಾಗ ಉಂಟಾಗುವ ಪ್ರಸನ್ನತೆ ಹೇಳ ತೀರದು. ಈ ವಿಶಿಷ್ಟ ಚಾರಣ ಸದಾ ನನ್ನ ನೆನಪಿನ ಕನ್ನಡಿಯೊಳಗೆ ಜೀವಂತ!  ಮಿಲಿಟರಿಯವರ ಜೀವನ ಹಾಗೂ ಕುರುಬರ ಜೀವನ ತಿಳಿಯಲು ಹೂ ಘಮವನ್ನು ಆಘ್ರಾಣಿಸಲು ನೀವೊಮ್ಮೆ ಕಾಲಿನಲ್ಲಿ ಕುಸುವಿರುವಾಗಲೇ ಬರಬಾರದೇಕೆ?


ನಾರಾನಾಗನ ವಿಹಂಗಮ ನೋಟ.



Wednesday, December 28, 2022

ಕವಿ ಶೈಲದಲ್ಲೊಂದು ಬೈಗು ಮತ್ತು ಬೆಳಗು..



    
                    ಸುಸಂಜೆಯಲಿ ಕವಿ ಮನೆಗೆ ಭೇಟಿ ಇತ್ತು ಕವಿ ಶೈಲ ಹೊಕ್ಕ ಹೊತ್ತದು. ಮುಕ್ಕೋಟಿ ಜೀವರಾಶಿಗಳ ಗೀತ ಗಾಯನ ನಾವು ಕವಿ ಶೈಲಕ್ಕೆ ಕಾಲಿಟ್ಟಾಗ ಶುರುವಿಟ್ಟಿತ್ತು. ಹಕ್ಕಿಗಳು ಮನೆ ತಲುಪುವ ಕಾತುರತೆಯಲ್ಲಿದ್ದವು. ಜೀರುಂಡೆಗಳು ತಮ್ಮ ಶೃತಿ ಪೆಟ್ಟಿಗೆ ತೆಗೆದು ವಾದನಕ್ಕೆ ಭರ್ಜರಿ ತಯಾರಿಯಲ್ಲಿದ್ದವು. ಒಂದಿಷ್ಟು ಜನ ಸಹೃದಯರು ಸೃಷ್ಠಿಯ ಕೌತುಕವನು ಕಣ್‌ ತುಂಬಿಕೊಳ್ಳಲು ಕಾತರಿಸಿದ್ದರು. ಕವಿ ವರೇಣ್ಯರ ಹಸ್ತಾಕ್ಷರಕ್ಕೆ ಸಾಕ್ಷಿಯಾಗಿ ಕಲ್ಲು ಹಾಸಿನಲಿ ಕೂತು ಕವಿ ಸಮಯವ ಆಹ್ವಾನಿಸುತ್ತಾ ರವಿ ಆಗಮನವನ್ನೇ ಧ್ಯಾನಿಸುತಲಿತ್ತು ಮನ. ಎಷ್ಟು ಬೈಗು ಮತ್ತು ಬೆಳಗಿನ ಚಿತ್ತಾರವನು ಉಂಡರೋ ಆ ಮಹಾ ಕವಿ! ಆ ರಸ ಗಳಿಗೆಯ ಮೆಲುಕು ಹಾಕುತ್ತಾ ಈ ಸಮಯವನು ಮನೋಹರಗೊಳಿಸಿತ್ತು. ಆ ಮಧುರಾತಿ ಮಧುರ ಮುಸ್ಸಂಜೆಯ ಹಿಂಬೆಳಕಿನ ಚಿತ್ರಗಳು ನಿಮ್ಮ ನೋಟಕ್ಕೆ. ಒಪ್ಪಿಸಿಕೊಳ್ಳಿ. 

 


 


Kavi Shaila Kuppalli 
























Wednesday, November 16, 2022

ಭಿನ್ನ ಸಂಸ್ಕೃತಿಯ ಜಾಡು ಹಿಡಿದು…

        ಪ್ರವಾಸ ಉಣಬಡಿಸುವ ಅಚ್ಚರಿಗಳು ನೂರಾರು. ಅಂತಹ ಒಂದು ಅಚ್ಚರಿಯ ಬೆನ್ನು ಹತ್ತಿ ಹೋದ ನಮಗೆ ದಕ್ಕಿದ್ದು ಇಷ್ಟು. 



ಮೀನು ಮಾರಾಟ ಮಳಿಗೆ, ಹೋಟೆಲ್‌, ದಿನಸಿ ಅಂಗಡಿ, ಬಟ್ಟೆ ಅಂಗಡಿ ಹೀಗೆ ಎಲ್ಲಿ ಕಂಡರೂ ಮಹಿಳಾ ಮಣಿಗಳದ್ದೇ ಪಾರುಪತ್ಯ. ಏನು ೯೦ ಶೇಕಡಾ ಮೀಸಲಾತಿ ಎನಾದರೂ ತಕ್ಷಣಕ್ಕೆ ಜಾರಿಗೆ ಬಂತಾ ಎಂದು ಅಂದುಕೊಂಡರಾ? ಅದೇ ಅಲ್ಲಿನ ವಿಶೇಷ. ಇದೇ ಅಲ್ಲಿನ ವಿಶೇಷ.  ಮಣಿಪುರದ ವಿಶೇಷ ಐಮಾ ಮಾರುಕಟ್ಟೆ.



ಭೂಮಿಯ ಮೇಲಿರುವ ಹೆಚ್ಚಿನ ಎಲ್ಲಾ ಸಮುದಾಯಗಳು ಪಿತೃ ಪ್ರಧಾನ. ಕೆಲವೇ ಕೆಲವು ಸಮುದಾಯಗಳು ಮಾತ್ರ ಮಾತೃ ಪ್ರಧಾನ. ಸಿಕ್ಕಿಂನ ಹೆಚ್ಚಿನ ಸಮುದಾಯಗಳು ಇನ್ನೂ ಮಾತೃ ಪ್ರಧಾನವಾಗಿ ಉಳಿದಿವೆ. ಇವುಗಳ ನಡುವೆ ಭಿನ್ನವಾಗಿ ನಿಲ್ಲುವುದು ಐಮಾ ಮಾರುಕಟ್ಟೆ. 

ಲೋಕದ ಪ್ರಧಾನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಪುರುಷರಾದರೆ ಸ್ತ್ರೀ ಇಲ್ಲಿ 

ಅತಿಥಿ ಕಲಾವಿದರು. 



ಅದು ಹೋಟೆಲ್‌, ಕೃಷಿ, ವ್ಯಾಪಾರ ಯಾವುದೇ ಇದ್ದರೂ ಇಲ್ಲಿ ಪುರುಷರೇ ಪ್ರಧಾನ. ಸ್ತ್ರೀ ಏನಿದ್ದರೂ ಸೈಡ್‌ ಆಕ್ಟರ್.‌ ಇಂಪಾಲದ ಐಮಾ ಮಾರುಕಟ್ಟೆಗೆ ಬಂದರೆ ನೀವು ದಂಗಾಗುವಿರಿ. ಏಷ್ಯಾ ಖಂಡದಲ್ಲೇ ಇಷ್ಟು ದೊಡ್ಡ ಮಾರುಕಟ್ಟೆ ಮತ್ತೊಂದಿಲ್ಲ. ಸುಮಾರು ೪೦೦೦ ಅಂಗಡಿ ಇರುವ ಇದರ ವಿಸ್ತಾರವನ್ನು ಒಳ ಹೊಕ್ಕು ತಿಳಿಯಬೇಕು. . ಏನಿಲ್ಲ ಇಲ್ಲಿ ಎಲ್ಲಾ ಇದೆ. ಮೀನು, ತೆಂಗಿನ ಕಾಯಿ, ಪಾತ್ರೆ, ಹಳೆ ನಾಣ್ಯ, ತಿಂಡಿ ತಿನಿಸು, ಮಡಿಕೆ,  ಮುಂತಾದ ದಿನ ನಿತ್ಯದ ವಸ್ತುಗಳು. ಎಲ್ಲಾ ಮಳಿಗೆ ಸುತ್ತಿ ಬಂದರೂ ವ್ಯಾಪಾರಕ್ಕೆ ನಿಂತ ಒಬ್ಬನೇ ಒಬ್ಬ ಗಂಡಸು ನಿಮಗಿಲ್ಲಿ ಕಾಣ ಸಿಗಲಾರ. ಇಲ್ಲಿರುವ ಪುರುಷನೆಂದರೆ ಗ್ರಾಹಕ ಮಾತ್ರ! ಮಹಿಳೆಯರದ್ದೇ ಪಾರುಪತ್ಯ. ಎಲ್ಲಾ ಅಂಗಡಿಗಳ ಮಾಲೀಕರೂ ಹೆಂಗಸರು. ಕೆಲಸಗಾರರೆಲ್ಲಾ ಹೆಂಗಸರು. 



ಇತಿಹಾಸ:-

ಇಲ್ಲಿನ ಮಹಿಳಾ ಪಾರುಪತ್ಯದ ಬೆನ್ನತ್ತಿ ಹೋದರೆ ಸಿಗುವುದು ಕೆಲವು ಅಚ್ಚರಿ. ಹಿಂದಿನ ಕಾಲದಲ್ಲಿ ನಡೆದ ಅನೇಕ ಯುದ್ಧಗಳಲ್ಲಿ ಪುರುಷರು ಭಾಗವಹಿಸಬೇಕಾಗಿ ಬಂದುದರಿಂದ ಅವಶ್ಯಕವಾಗಿ ಆಗ ಪ್ರಾರಂಭವಾದ ಮಹಿಳಾ ಪಾರುಪತ್ಯ ಇಂದಿಗೂ ಮುಂದುವರಿದಿದೆ. ಪುರುಷನೇನಿದ್ದರೂ ಅತಿಥಿ ಕಲಾವಿಧ. ಮುಖ್ಯ ಭೂಮಿಕೆಗೆ ಬಂದ ಮಹಿಳೆಯರು ಹಿಂದೆ ಸರಿಯಲೇ ಇಲ್ಲ. 

ಇಲ್ಲಿನ ಹೆಚ್ಚಿನವರು ಸ್ನೇಹ ಶೀಲರು. ಬಹಳ ಬೇಗ ಸ್ನೇಹಿತರಾಗುವರು. ಯಾರಿಗೂ ಇಲ್ಲಿ ಇಂಗ್ಲೀಷ್‌ ಆಗಲಿ ಹಿಂದಿಯಾಗಲಿ ಬಾರದು. ಸಂವಹನವೇ ಮುಖ್ಯ ತೊಡಕು. ಮಡಿಕೆ ಮಾರಟದಲ್ಲಿ ತೊಡಗಿದ್ದ ಅಜ್ಜಿಯನು ಮೂಕ ಭಾಷೆಯಲ್ಲೆ ಮಾತಾಡಿಸಿ ಪೋನ್‌ ಸಂಖ್ಯೆ ಪಡೆಯುವಲ್ಲಿ ಯಶಸ್ವಿಯಾದೆ. ನಾ ತೆಗೆದ ಚಿತ್ರಗಳ ಬೇಡಿಕೆ ಇಟ್ಟ ಅಜ್ಜಿಗೆ ನೆನಪಿನಿಂದ ಅನೇಕ ಚಿತ್ರ ಕಳುಹಿಸಿ ಖುಷಿ ಪಟ್ಟೆ. 



ನನಗೆ ಇಂತಹ ಅಜ್ಜಿಯಂದಿರ ಆಶೀರ್ವಾದ ಸದಾ ಇರಲಿ. ಹಾಗೆ ಇಲ್ಲಿನ ಲಕ್ಷ್ಮೀ ಹೋಟೆಲ್‌ ನಲ್ಲಿ ಮಣಿಪುರಿ ತಾಲಿ ಜೊತೆಗೆ ನೀಡುವ ಸಿಹಿಯಾದ ದೇಸಿ ತಳಿಯ ಅನ್ನವನು ಸವಿಯಲು ,  ಐಮಾ ಮಾರುಕಟ್ಟೆ ನೋಡಲು ಮರೆಯದಿರಿ. 



ನವೆಂಬರ್‌ ನಲ್ಲಿ ನಡೆಯುವ ಶಂಗೈ ಹಬ್ಬಕ್ಕೂ ಹೋಗಿ ಬನ್ನಿ. 


Sunday, November 6, 2022

ದೂದ್‌ ಸಾಗರ ಒಂದು ಸ್ವಪ್ನ ವಿಲಾಸ

 


ಶ್ರಾವಣದ ಮಳೆ ಇಳೆಗೆ  ಮುತ್ತಿಕ್ಕುವ ಹೊತ್ತು. ಭುವಿಗೆ ಛತ್ರಿ ಹಿಡಿದಂತಿರುವ ಮಂಜನು ಸೀಳುವ ಚುಕ್‌ ಬುಕ್‌ ಬಂಡಿ.  ನೆಲದೊಡಲಿನಿಂದಲೂ ಕಿವಿಯ ಕುಹರ ತುಂಬುವ ಚುಕ್‌ ಬುಕ್‌ ಸದ್ದು. ರೈಲು ದೂದ್‌ ಸಾಗರವೆಂಬ ಅಗಾಧ ಜಲರಾಶಿ ಎಡೆಗೆ ಮಲಗಿದ ನೂರಾರು ಭತ್ತದ ಗದ್ದೆಗಳನ್ನು ಎಬ್ಬಿಸುತ ಸೂರ್ಯನೇಳುವ ಮುನ್ನ ಬೆಳಗಾವಿಯಿಂದ ಹೊರಟಿತ್ತು. ರೈಲು ಲೊಂಡ ಜಂಕ್ಷನ್‌ನಲ್ಲಿ ಟಿಫಿನ್‌ ಮಾಡತೊಡಗಿತ್ತು. ನಾವೂ ಕೂಡ. ಹಿಮ್ಮುಖವಾಗಿ ಎಳಿಯುತ್ತಿದ್ದ ರೈಲು ಮುಂದೆ ಚಲಿಸಲು ತೊಡಗಿತ್ತು.

  ಬೆಳಗಾವಿಯಿಂದ ಬಂಡಿಯ ಜೊತೆಯಲಿ ಸರಿಗಮ…



ಸದಾ ಖಾಸಗೀತನ ಬಯಸುವ ನನ್ನಂತವರಿಗೆ ಹೇಳಿ ಮಾಡಿಸಿದ ಪ್ರಯಾಣ. ದಿವ್ಯ ಏಕಾಂತ. ವೇಗದ ವ್ಯಾಧಿಗಂಟದ ಸಹನ ಶೀಲ ಬಂಡಿ. ಏಕಾಂತದಲಿ ಬೆರೆತ ಪ್ರಕೃತಿ. ಸ್ವಾಗತ ಕಾರರಂತೆ ನಿಂತ ಸಾಲು ಮರಗಳು.  ಹೃದಯದ ಏರಿಳಿತಗಳನು ಸರಿಪಡಿಸಬಲ್ಲ ಅಗಾಧ ಪ್ರಕೃತಿ. ಮನದ ಕಾನನದಿ ಸೈಕ್ಲೊ ಸೈಲ್‌ ಶಬ್ದ ಚುಕ್‌ ಬುಕ್‌, ಚುಕ್‌ ಬುಕ್. ರೈಲೊಳಗೂ ನುಗ್ಗಿ ಎಲ್ಲರನೂ ಒದ್ದೆ ಮಾಡಿ ಮೆತ್ತಗೆ ಮಾಡುವ ಸೂಜಿ ಮಳೆ ಬೆಳಗಿನಿಂದಲೂ ಜೋಗುಳ ಹಾಡುತ್ತಿತ್ತು. ಪ್ರಕೃತಿ ಆನಂದ ಮಯ ಈ ಜಗ ಹೃದಯ ಎನ್ನುವ ಗೀತೆಯನು ಹಾಡುತ್ತಿರುವಂತಹ ಅನುಭೂತಿ. ಎಲ್ಲೆಲ್ಲೂ ನೀರ ಸಂಗೀತ. ಮಂಜಿನ ತಂಪಾದ ರಗ್‌ ಹೊದ್ದ ಪ್ರಕೃತಿ ಅತಿ ರಮ್ಯ. ದಿವ್ಯ ಏಕಾಂತ.



ಇಲ್ಲಿನ ಗುಡ್ಡದ ತುಂಬಾ ನೆಕ್ಲೆಸ್‌ ನಡುವಿನ ಹವಳದಂತೆ ಹರವಿನಿಂತ ಹೂಗಳು. ನನ್ನ ಕಂಡು ಕ್ರೀಮು ಬಳಿದುಕೊಂಡತಿರುವ  ಗುಡ್ಡಗಳು ಹಲ್ಕಿರಿದು ನಕ್ಕವು. ಗುಡ್ಡದ ತುಂಬಾ ನೀರ ಹನಿಗಳು ಸಂಪಿಗೆ ಮೂಗಿನ ಸುಂದರಿ ಮುತ್ತಿನ ಹಾರ ತೊಟ್ಟಂತೆ ತೊಟ್ಟಿಕ್ಕುತಲಿದೆ. ಮನಸ್ಸಿನ ಏಕಾಂತಕ್ಕೆ ಸಾತ್‌ ನೀಡುವ ರೈಲಿನ ಚುಕ್‌ ಬುಕ್‌ ಚುಕ್‌ ಬುಕ್.‌ ಗುಡ್ಡಗಾಡಿಗೆ ತೊಂದರೆ ಕೊಡ ಬಾರದೆಂದು ಸೂರ್ಯ ರಜೆ ಮೇಲಿದ್ದ. ಇಲ್ಲಿನ ಪ್ರತೀ ಸುರಂಗವೂ ಹೆಬ್ಬಾವಿನ ಹೊಟ್ಟೆ ಹೊಕ್ಕು ಬಂದಂತಹ ಅನುಭವ. 



ಕಾತರಕ್ಕೊಂದು ಕಾವ್ಯ ತೆರೆ…



ಹಳ್ಳ ಕೊಳ್ಳ ಹಾದು ಜಲಪಾತದ ಸನಿಹಕೇ ಬಂದಿದೆ ಬಂಡಿ. ರೈಲಿನೊಳಗಿರುವವರ ಎದೆಯಲಿ ವಿದ್ಯುತ್‌ ಸಂಚಾರ. ಈ ಅಗಾಧ ಜಲರಾಶಿಯನ್ನು ಕಣ್‌ ತುಂಬಿಕೊಳ್ಳುವ ತವಕ ಪ್ರತಿಯೊಬ್ಬರಲ್ಲೂ. ಜಲರಾಶಿ, ರೈಲು, ಹೃದಯದ ಶಬ್ದಗಳ ಕಲಸು ಮೇಲೊಗರ. ಕಣ್ಣಿಗೆ ಸುಗ್ಗಿ. ಮನಸ್ಸಿಗೆ ಸಿಹಿ ಹುಗ್ಗಿ. ಮಂಜಿನ ರಗ್ಗಿನಿಂದ ಧುಮ್ಮಿಕ್ಕುವಂತೆ ಧುಮ್ಮಿಕ್ಕುತ್ತಿದೆ ಹಾಲ್ನೊರೆ!  ಅಬ್ಬಾ ಎಂತಹ ಸುಮನೋಹರ ದೃಶ್ಯ. ಒಂಟಿ ಮರವೊಂದು ಕಾಲಾತೀತ ಆನಂದದಲಿ ಜಲಪಾತದ ನಡುವಿನಲಿ ರಕ್ಷಕನಂತೆ ಸಂಭ್ರಮದಿ ನಿಂತೇ ಇದೆ. ಎಳೆಯ ಎದೆಗಳಿಂದ ವಾವ್‌ ಎಂಬ ಚೀತ್ಕಾರ. ಕೆಲವರು ಮೂಕವಿಸ್ಮಿತ. ರೈಲಿನಲ್ಲಿರುವ ಪ್ರತಿಯೊಬ್ಬರಲ್ಲೂ ವಿದ್ಯುತ್‌ ಸಂಚಾರ. ಇಣುಕಿ ನೋಡಿದಷ್ಟೂ ಮುಗಿಯದ ತವಕ. ಎಲ್ಲವೂ ವಿಸ್ಮಯವಿಲ್ಲಿ. ನೋಟಕನ ದೃಷ್ಟಿ ಗಮ್ಯವಾದುದಿಲ್ಲಿ ಎಲ್ಲವೂ ಅತಿ ರಮ್ಯ… ನಾನಿಂತ ಬಾಗಿಲ ತುದಿಗೊಬ್ಬಳು ಮುದುಕಿ ಪದೇ ಪದೇ ಬಂದು ಓಡೋಡಿ ಬಂದು ಪ್ರಕೃತಿಯ ರಮಣೀಯತೆ  ಸವಿದು ಹೋಗುತ್ತಿದ್ದಳು. ಅವಳ ಉತ್ಸಾಹ ಕಂಡು ಬೆರಗಾದೆ.

ಚಾರಣಿಗರ ಸಂತೆಯಲಿ ಬೆರಗಾಗಿ…




ಎಲ್ಲೆಲ್ಲೋ ಜಿನುಗಿದ ಹನಿಯೊಂದು ನದಿ  ಸೇರುವಂತೆ ಸೇರುವ ಚಾರಣಿಗರ ಹಿಂಡು. ಹೃದಯದ ಕವಾಟ ತೆರೆವ ನೋಟ. ಎಲ್ಲಾ ವೈಯಕ್ತಿಕ ಸುಖ ದುಃಖ ಕರಗುವ ಏಕೈಕ ಪ್ಲಾಟ್‌ ಪಾರಂ. ದುಃಖಗಳೆಲ್ಲಾ ಕರಗಿ ನೀರು ಕೆಂಪಾಗಿ ಹರಿಯುತ್ತಿರುವುದೋ ಎಂಬಂತೆ ಭಾಸ. ಮೈ ಕೈಗಳಲೆಲ್ಲಾ ನೀರ ಕಾರು ಬಾರು. ಅದ್ರಿಯ ತುದಿಯಲ್ಲಿ ಬೋರ್ಗರೆಯುತಾ ನಡುವಿನಲಿ ನಯವಾಗಿ ನುಗ್ಗುವ ದೂದ್‌ ಸಾಗರದ ರಮ್ಯತೆ ಅಪಾರ. 



ರ್ಭಾವುಕವಾಗಿ ಚಲಿಸುವ ರೈಲು ಮಳೆಯ, ಮಂಜಿನ ಚಾದರಕ್ಕೆ ಮೆತ್ತಗಾಗಿದೆ. ಜಾರದಂತೆ ಜಾಗರೂಕವಾಗಿ ಚಲಿಸುತ್ತಿದೆ. ನಿರ್ಭಾವುಕ ಕಣ್ಣುಳ್ಳ ತಮ್ಮ ತುತ್ತಿನ ಬುತ್ತಿ ಅರಸಿ ಹೊರಟ ಅರಸಿಕರು ಹೊರಗೆ ಇಣುಕದೆ ಸುಮ್ಮನಿದ್ದರು! ಅವರನ್ನೆಲ್ಲಾ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತೆ ಬೆಟ್ಟಗುಂಟ ಪ್ರಯಾಣ ಹೊರಟ ಬಂಡಿ.  ಮನಸ್ಸು ಸುರಿವ ಮಳೆಗೆ ಜಲಪಾತದ ಅಬ್ಬರಕ್ಕೆ ತೊಯ್ದು ತೊಪ್ಪೆಯಾಗಿತ್ತು.

ರೈಲ್ವೆಯ ವಿಕ್ರಮ-

ರೈಲ್ವೆ ಇಲಾಖೆ ಇಂತಹ ದುರ್ಗಮ ದಾರಿಯಲ್ಲೂ ಅತ್ಯಂತ ಸುರಕ್ಷಿತವಾದ ಹಾದಿ ನಿರ್ಮಿಸಿದ ಕತೆ ಇನ್ನೂ ರೋಚಕ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ದಾರಿ ಮಾಡುವುದು ಅಪಾರ ಪರಿಶ್ರಮದ ಕೆಲಸ. ಜೊತೆಗೆ ಇಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ಎದುರಿಸಿ ಕೆಲಸ ಮಾಡುವುದು ಅಸಾಧ್ಯ ದುಸ್ಸಾಹಸದ ಕೆಲಸ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟಗಳ ಒಡಲಿನೊಳಗೆ  ಕೊರೆದ ಹಾದಿಯ ರೋಚಕತೆ ನೆನಪಿಗೆ ಬಂದು ಪುಳಕಗೊಂಡಿತು ಮನ. 

ರೈಲು ಬಲಕ್ಕೆ ಹೊರಳಿ ಆ ಮಹಾ ರುದ್ರ ರಮಣಿಯತೆಯ ದೃಶ್ಯವನ್ನು ನಮಗೆಲ್ಲಾ ಉಣಬಡಿಸಿ ಸೋನಾಲಿಮ್‌ ಸ್ಟೇಷನ್‌ನಲ್ಲಿ ನಿಶ್ಚಲವಾಯಿತು. ಈ ಅಮೋಘ ಜಲೌಗಕ್ಕೆ ಮನಸೋತ ಗೆಳೆಯ ಮಧ್ಯ ರೈಲಿನಿಂದ ಜಿಗಿಯಲು ತಯಾರಾಗಿದ್ದ. ಅವನನ್ನು ತಡೆದೆ. ಸೋನಾಲಿಮ್‌ ಬರುತ್ತಲೇ ರೈಲಿನಿಂದ ಜಿಗಿದು ಜಲಪಾತದತ್ತ ಹೊರಟೆವು. ಪಾಕಿಸ್ಥಾನದ ಉಗ್ರಗಾಮಿಗಳನ್ನು ಕಂಡವರಂತೆ ಅಲ್ಲೇ ನಿಂತಿದ್ದ ಪೋಲಿಸರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ಏನೋ ಕದ್ದವರಂತೆ ಓಡುತ್ತಾಬಂದು ರೈಲು ಹತ್ತಿದೆವು.

ಲಾಠಿ ಬೀಸುತ್ತಲೇ ಕರಗಿದ ನಮ್ಮ ಅಹಂಕಾರ ನೀರಿನೊಂದಿಗೆ ಸೇರಿ ಧುಮ್ಮಿಕ್ಕುತ್ತಲೇ ಇದೆ. ನೀರೂ ತನ್ನ ಬಣ್ಣ ಬದಲಿಸಿದೆ.  ಎಷ್ಟು ಸುರಿದರೂ ತಣಿಯದ ಹಾಲ್ನೋರೆ ಯಾರ ಕರುಣೆಗಾಗಿ ಕಾಯುತಿದೆಯೋ? ಜಲಪಾತ್ರೆಯ ಕೆಳಗೆ ತಿನ್ನಲು ಬಚ್ಚಿಟ್ಟ ಎರಡು ವಡಾಪಾವ್‌ ಪೋಲಿಸರನ್ನು ಕಂಡಾಗಲೇ ಹಣಕಿ ಹಾಕಿ ನಗತೊಡಗಿತು.

ಸೊನಾಲಿಮ್‌ನಿಂದ ಜಲಪಾತ ಹತ್ತು ಹಾಡಿನ ದೂರ. ಕೆಲವರ ಕಣ್ಣಾಲಿಗಳಲಿ ಮತ್ತೆ ಜಲಪಾತ ದರ್ಶನ. ನಿರಾಶೆ ಕರಗುವ ಬಿಂದು ಹುಡುಕುತ್ತಾ ನಿಂತೆ. ಕೆಲವರು ಇಷ್ಟಾದರೂ ನೋಡಲು ಸಿಕ್ಕಿತ್ತಲ್ಲ ಎಂದು ಖುಷಿ ಪಟ್ಟರು. ಎರಡು ಭಿನ್ನ ದ್ರುವಗಳು. ಸನಿಹಕ್ಕೆ ಹೋಗಿ ನೋಡದಷ್ಟು ಕಡಕ್‌ ಖಾಕಿ. ಇಂತಹ ಅತಿ ರಮ್ಯ ಜಲಪಾತಕ್ಕೆ ಬೇಲಿ ಹಾಕಿದ್ದು ಬೇಸರ ತರಿಸಿತು. ಇದ್ಯಾವುದನ್ನೂ ಲೆಕ್ಕಿಸದೇ ಹೋದವರು ಪೋಲಿಸರ ಅತಿಥಿಯಾದರು. ಡಕ್‌ ವಾಕ್‌  ಮಾಡಿಸಿಕೊಂಡು ಜಲಪಾತದಿಂದ ಕುಲೆಮ್‌ ರೈಲ್ವೆ ಸ್ಟೇಷನ್‌ ವರೆಗೆ ಎಂಟು ಕಿ.ಮೀ ವರೆಗೆ ಪಾದ ಸೇವೆಗೈದರು. ಬಂದವರೆ ಕುಲೆಮ್‌ ಸ್ಟೇಷನ್‌ ನ ಬಣ್ಣದೊಂದಿಗೆ ಒಂದಾಗಿ ನಿದ್ರಾ ದೇವಿಗೆ ಶರಣಾದರು. ತಮ್ಮ ತಮ್ಮ ರೈಲಿಗಾಗಿ ಕಾಯುತ್ತಾ ಕುಲೆಮ್‌ ನಲ್ಲಿ ಕರಗತೊಡಗಿದರು. ಇವರನ್ನೆಲ್ಲಾ ಮಳೆ ತನ್ನ ಜೋಗುಳದಲ್ಲಿ ಜೀಕತೊಡಗಿತು. 

ಬೀಳುವಾಗಲೂ ಘನತೆ ಉಳಿಸಿಕೊಳ್ಳುವುದು ಜಲಪಾತವೊಂದೇ ಇರಬೇಕು. ಬಿದ್ದಾಗಲೇ ಘನತೆ. ಇದ್ದಲ್ಲೇ ಇದ್ದರೆ ಘನತೆ ಎಲ್ಲಿ? ಬೀಳುವಾಗಲೂ ಘನತೆ ಉಳಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾ ಗಾಂಭೀರ್ಯದಿಂದಲೇ ಧುಮುಕುತ್ತಲೇ ಇದೆ.

ಎಷ್ಟೊಂದು ಬೆಸೆದ ಜೀವಗಳನ್ನು ಕಂಡಿತೋ ಅದು. ಮತ್ತೆ ಮತ್ತೆ ಇವರೆಲ್ಲರ ಬೆಸುಗೆ ಕಾಣಲು ಧುಮುಕುತ್ತಲೇ ಇದೆ.  ವಡಾಪಾವ್‌ ಮಾರುವವನಿಗೆ ನಾಲ್ಕು ಕಾಸು ಆಗುವುದು ಇಲ್ಲೇ. ಜಲಪಾತ ಬಿದ್ದಾಗಲೇ ಅವನ ಜೀವನದ ಬುತ್ತಿ ಕಟ್ಟಿಕೊಳ್ಳುವುದು. ಜಲಪಾತದಂತೆ ಇವನಿಗೂ ಬಹಳ ಅವಸರ. ಅವನ ಮನೆಯಲ್ಲಿ ಯಾರಿದ್ದಾರೋ ಕಾಯುವವರು.

ಬನ್ರಿ ಮತ್ತೆ-

ಬದುಕಿನ ದುಃಖ ದುಮ್ಮಾನ ಏಕತಾನದ ತಂತಿ ಮುರಿಯಲು ಇಂತಹ ರೋಚಕ ಹಾದಿಯನ್ನೊಮ್ಮೆ ತುಳಿದು ನೋಡಿ. ಜೀವಮಾನಕ್ಕಾಗುವಷ್ಟು ಅನುಭವದ ಬುತ್ತಿ ನಿಮ್ಮ ಜೊತೆ! 

ನಿಶ್ಚಲವಾದ ಸನ್ಯಾಸಿಯಂತಹ ಕನಸಿನ ಕುಲೆಮ್‌ನಲ್ಲಿ ಸಿಕ್ಕ ಬಿಸಿ ಬಿಸಿ ಊಟ ಹೊಸ ಚೈತನ್ಯ ಜಗತ್ತಿಗೆ ಕಾಲಿಡುವಂತೆ ಮಾಡಿತು. 



ಕ್ಷಮಿಸಲಾರೆಯ ಧರೆಯೆ –

ಪ್ರಕೃತಿಯ ಋಣಭಾರ ನನ್ನೆದೆಯಲಿ ಹಾಗೇ ಉಳಿಯಿತು. ತೀರಿಸುವ ಹೊಣೆಗಾರಿಕೆಯೊಂದಿಗೆ ಹಿಂದಿರುಗಿದೆ. ಆದರೆ ನೀರ ಸೆರಗಿನಲಿ ಉಳಿದ ನನ್ನಣ್ಣಂದಿರು ಎಸೆದ ಪ್ಲಾಸ್ಟಿಕ್‌ ಇನ್ನೂ ಅಣಕಿಸುತ್ತಲೇ ಸಮುದ್ರ ಸೇರುವ ತವಕದಲ್ಲಿದೆ.

ಕುಲೆಮ್‌ ರೈಲು ನಿಲ್ದಾಣ ಮತ್ತು  ಜಲಪಾತಕ್ಕೆ ಮಿಸ್‌ಯು ಎಂದೆನ್ನುತ್ತಾ ಮತ್ತೆ ಬರುವ ಬರವಸೆಯನ್ನಿತ್ತು ಬಾಯ್‌ ಬಾಯ್ ಹೇಳಿ ಹೊರಟು ನಿಂತೆವು.


ಶ್ರೀಧರ್‌ ಎಸ್.‌ ಸಿದ್ದಾಪುರ. 

Wednesday, May 4, 2022

ನೆನಪುಗಳನ್ನು ನೇಣಿಗೇರಿಸಬೇಕು...

ಹಮಾರ ಬಜಾಜ್‌-




    ನೆನಪುಗಳನ್ನು ನೇಣಿಗೇರಿಸಬೇಕೆಂದು ಹೊರಟವನಿಗೆ ಸಿಕ್ಕ ಹಳೆ ಹೊತ್ತಗೆಯ ನೆನಪುಗಳು ಕಾಡುತಲಿವೆ. ಬೇಡವೆಂದರೂ ಕಹಿಯೇ ಉಳಿದ ಕಾಫಿ ಚರಟದಂತೆ ನೆನಪುಗಳು ಕಾಡುತಲಿವೆ. ಕುಡಿದ ಕಹಿ -ಸಿಹಿ ಕಾಫಿಯ ನೆನಪು ಮಾಸಿದಂತೆ ಕುಣಿಯುತ್ತೆ ಮನಸ್ಸು. ಮತ್ತೇನಕ್ಕೋ ಧ್ಯಾನಿಸುತ್ತೆ ಮನಸ್ಸು. ಮೂಲೆಯಲಿ ಮಲಗಿದ್ದ ಸಣ್ಣ ವೃಣವೊಂದನು ಕೆದಕಿ ಕೆದಕಿ ಮಹಾ ವೃಣವಾಗುವಂತೆ ರಾಡಿ ಎಬ್ಬಿಸುತ್ತೆ.




ನೆನಪುಗಳು, ನೆನಪುಗಳ ಶವ ಪೆಟ್ಟಿಗೆಯಿಂದ ಹೊರ ಬರಲಾರದಂತೆ ಮೊಳೆ ಜಡಿಯಬೇಕು ಬಿಡಿಸಿಕೊಳ್ಳಲಾರದಂತೆ, ಆಗುತ್ತಿಲ್ಲ. ಅದು ಕಾಡಿದಂತೆ ಮತ್ಯಾವುದೂ ಕಾಡವುದಿಲ್ಲ. ಸುಡುವ ಬೆಳದಿಂಗಳು. ನೆನಪಿಗೆ ವಾರಸುದಾರನಿಲ್ಲ. ಹೊರ ಹಾಕಿದರೂ ಹಾಕದೇ ಇದ್ದರೂ ನೆನಪುಗಳು ಒಮ್ಮೊಮ್ಮೆ ಮೆರವಣಿಗೆ ಹೊರಡುತ್ತವೆ. ತಟ್ಟುತ್ತವೆ. ದಿಗ್ಗನೇಳುತ್ತವೆ ಮುಂಗಾರಿನ ಮೋಡದಂತೆ. ಕಾಡುವ ಅನಂತ ಪ್ರಲೋಭನೆಗಳೂ ಇದರ ಎದುರು ಮಂಡಿಯೂರಲೇ ಬೇಕು ಜೋಗಿಯಂತೆ. ಅಕ್ಷರವೇ ಅಳಿಯುತ್ತವೆ ಇನ್ನೆಲ್ಲಿಯ ನೆನಪುಗಳು ಎಂಬ ಸಿನಿಕ ವಾಕ್ಯವೂ ಕ್ಷಣಿಕ. ಮತ್ತೆ ತೆರೆಯಂತೆ ದಡಕ್ಕೆ ಬಡಿಯುತ್ತವೆ. 


ಇಂತಹ ನೆನಪುಗಳ ನೊರೆ ಉಕ್ಕಿಸುವ ಕತೆಗಳ ಗುಚ್ಚ ನನ್ನೆದುರಿಗಿದೆ. ಎಲ್ಲಾ ಕತೆಯ ಹೆಣಿಗೆಯೂ ವಿಶಿಷ್ಟವಾದ ಪ್ಲಾಟ್‌ ಫಾರಂನಲ್ಲಿ ಕಟ್ಟಿರುವಂತಹ ನಿರ್ಮಿತಿ. ಎಲ್ಲೆಲ್ಲೂ ನೆನಪುಗಳದ್ದೇ ಮುಖ್ಯ ಭೂಮಿಕೆ.

ನೀವಾದರೂ ಓದಿ ಕತೆಗಳ ಸಿಕ್ಕನ್ನೂ ಬಿಡಿಸಿಕೊಳ್ಳಿ. ಒಂದೊಂದು ಕತೆಗಳು ತೆರೆಗಳಂತೆ ನನ್ನನ್ನು ಮತ್ತೆ ಮತ್ತೆ ತಟ್ಟುತ್ತಲೇ ಇವೆ. ನಿಮಗೂ ತಟ್ಟಿದರೆ ಹೇಳಿ. ತಕರಾರಿದ್ದರೂ.

 

ಯಾವ ಉಡುಗೊರೆ ಕೊಡಲಿ-

ಭಟ್ಟರ ಸಿನೆಮಾ ನೆನಪು ಮಾಡಿಕೊಡುವಂತಹ ವಿಶಿಷ್ಟ ಕತೆ ಯಾವ ಉಡುಗೊರೆ ಕೊಡಲಿ. ಕತೆಯ ಎಳೆ ವಿಧಾಯದಲಿ ಮಡುಗಟ್ಟುವ ವಿಶಾದ. ವಿಶಾಧವೇ ಕತಾ ನಾಯಕನೊ ಎಂಬಂತೆ ಭಾಸವಾಗುತ್ತದೆ. ಅದಮ್ಯವಾಗಿ ಪ್ರೇಮಿಸುವ ಗಂಡು ಹೆಣ್ಣು ವಿಧಾಯವನ್ನೇ ಅತ್ಯಂತ ರೋಚಕವಾಗಿ ವಿಧಾಯದ ಬಿಸಿ ಓದುಗನಿಗೂ ತಟ್ಟುವಂತೆ ವರ್ಣಿಸುತ್ತಾ ಕತೆಗಾರ ಕತೆಯಲ್ಲಿ ಸಾಧಿಸುವ ತಾಧ್ಯಾತ್ಮ ಅಪೂರ್ವವಾದುದು. ಎಲ್ಲಿಯೂ ಒಂದೇ ಒಂದು ವಾಕ್ಯವೂ ಭಾರವಾಗದಂತೆ ವಿಧಾಯದ ಕಹಿಯೇ ಹೃದಯ ತುಂಬುವಂತಹ ಮ್ಯಾಜಿಕ್ ಕತೆಯುದ್ದಕ್ಕೂ ಸಾಧ್ಯವಾಗಿಸಿದ್ದು ಕನ್ನಡದ ಕತೆಗಳ ಮಟ್ಟಿಗೆ ವಿಶೇಷ.‌ ಎರಡು ಹೃದಯಗಳ ತೊಳಲಾಟವನ್ನು, ಅವರು ಜೊತೆಯಾಗುವರಾ ಇಲ್ಲವಾ ಒಂದೂ ಗೊತ್ತಾಗದಂತೆ ಮುಕ್ತ ಅಂತ್ಯ ಕಾಣುವ ವಿಶಿಷ್ಟ ಕತೆ.

ಜೆಜೆ ಬಂದಿದ್ದ –

            ಇಬ್ಬರು ಗೆಳೆಯರ ನಡುವೆ ನಡೆವ ಆಪ್ತ ಮಾತುಕತೆಯಂತೆ ಕಂಡರೂ ಇಲ್ಲೊಂದು ವಿಶೇಷತೆ ಇದೆ. ಮಾನವ ಸಂಬಂಧಗಳ ನಡುವೆ ಗುಪ್ತವಾಗಿ ಹರಿಯುವ ಹೊಟ್ಟೆ ಕಿಚ್ಚು ಕತೆಯುದ್ದಕ್ಕೂ ಹರಿದು ಅದೇ ಕತಾ ನಾಯಕನಿರಬೇಕೆಂಬ ಗುಮಾನಿ ನಮಗೆ ಹುಟ್ಟಿಸುತ್ತದೆ. ಪ್ರೀತಿಸಿದ  ಹುಡುಗಿಯನ್ನು ಬಿಟ್ಟುಕೊಟ್ಟ ನೆನಪುಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಈ ಕತೆಯ ಪ್ರಧಾನ ಭೂಮಿಕೆಯು ನೆನಪೇ.  ಹೆಚ್ಚು ಕಡಿಮೆ ಮೇಲ್ಮೆಗಳ ತಾಕಲಾಟಗಳು ಕತೆಯ ನೇಯ್ಗೆಯಲ್ಲಿ ಸೇರಿಸಿ ಅತ್ಯಂತ ಸುಶಿಕ್ಷಿತರೂ ಈ ಮೇಲ್ಮೆಗಳ ಹೊಡೆದಾಟದಲ್ಲಿ ಭಾಗಿದಾರರು ಎಂಬ ಅಚ್ಚರಿಯು ಟಿಸಿಲೊಡೆಯುತ್ತದೆ. ಜೆಜೆಯ ವಿಶಿಷ್ಟ ವಿಕ್ಷಿಪ್ತ ವ್ಯಕ್ತಿತ್ವದ ಹೊರತಾಗಿಯೂ ಅದು ನಮಗೆ ಕಾಡುತ್ತದೆ.

ಹಮಾರ ಬಜಾರ್‌-

ಹಿಮ್ಮುಖವಾಗಿ  ಚಲಿಸುವ ತಂದೆಯ ನೆನಪಿನ ವಿಶಿಷ್ಟ ನೀಳ್ಗತೆ  ʼ ಹಮಾರ ಬಜಾಜ್‌ʼ. ಡೈರಿಯ ಪುಟಗಳಿಂದ ಹಿಮ್ಮುಖವಾಗಿ ಶುರುವಾಗಿ ಅಂತ್ಯದಲ್ಲಿ ಮುಂದೆ ಚಲಿಸುತ್ತಾ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತದೆ.

ತಂದೆಯ ನೆನಪಿನಿಂದ ಹೊರ ಬರಲಾರದ ಮಗ ತನಗೆ ತಾನು ಬರೆದುಕೊಂಡ ಸ್ವಗತದ ಕಿಂಡಿಯಂತೆ ಕೆಲವೊಮ್ಮೆ ಭಾಸ ಆಗುವುದು. ನೆನಪೆಂಬ ಗಾಳಿ ಪಟ ಮನದ ತುಂಬಾ ಹಾರಾಡುವಂತೆ ಮಾಡಿ ವಿಶಿಷ್ಟವಾಗಿಸಿದ್ದಾರೆ ವಿಕ್ರಂ.

ಬಜಾಜ್‌ ಸ್ಕೂಟರ ಅವರ ನೆನಪಿನ ಅಥವಾ ಅವರದ್ದೇ ಒಂದು ಭಾಗವೇನೋ ಅನ್ನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾರೆ. ಸಾವಿನಿಂದ ಮೊದಲ್ಗೊಂಡು ವಿಚಿತ್ರ ಸನ್ನಿವೇಶಗಳನ್ನು ವಿರಚಿಸುತ್ತಾ ಅವರ ಬದುಕಿನ ವಿವರಗಳನ್ನು ಡೈರಿಯ ಪುಟಗಳ ಮೂಲಕ ಮರಳಿಸುವ ಪ್ರಯತ್ನ. ಗಾಢ ವಿಶಾದದಲಿ ಅದ್ದಿ ತೆಗೆದ ಚಿತ್ರದಂತೆ ಚಿತ್ತದಲಿ ಉಳಿದು ಹೋಗುತ್ತದೆ. ತಂದೆಯ ಬದುಕಿನೊಂದಿಗೆ ಆಪ್ತವಾಗಿ ತಳುಕು ಹಾಕಿ ಕೊಂಡವರನ್ನೆಲ್ಲಾ ಇಲ್ಲಿ ಮತ್ತೊಮ್ಮೆ ಜೀವಂತಿಸಿದ್ದಾರೆ. ತಂದೆಯ ಗೆಳೆಯರಾದ ಪೆಜತ್ತಾಯರು, ಉಡುಪರನ್ನು ಪುನಃ ಬದುಕಿಸಿ ಆಪ್ತವಾಗಿಸಿದ್ದಾರೆ.

ಯಾರನ್ನೇ ಆಗಲಿ ನಾವು ಪ್ರಯತ್ನ ಪೂರ್ವಕ ನೆನಪು ಮಾಡಿಕೊಳ್ಳಬೇಕೊ ಅಥವಾ ಅದಾಗಿಯೇ ನೆನಪುಗಳು ತೆರೆಗಳಂತೆ ಮನ ಪಟಲದಲಿ ಆವರಿಸುವುದೋ ಎಂಬ ಗುಮಾನಿ ನನಗೆ ಕಾಡುವುದು.

ತೀವ್ರ ವಿಶಾದಕ್ಕೂ ಎಳಸದೇ ಕತೆ ಸತ್ವಯುತವಾಗಿ ಅಂತ್ಯ ಕಾಣುವುದು ಕತೆಯ ಮಗದೊಂದು ವಿಶೇಷತೆ.



Monday, March 21, 2022

ಬೇಟೆ ಹಕ್ಕಿಯ ಬೆನ್ನಟ್ಟಿ!

ಶಿಖ್ರಾ

    ಹಲವು ವರುಷಗಳ ಹಿಂದೆ ಪಕ್ಷಿ ಛಾಯಾಗ್ರಹಣದ ಬೆನ್ನು ಹತ್ತಿದ ಸಮಯ. ಕಾಗೆ ಗಾತ್ರದ ಹಕ್ಕಿಯೊಂದು ನೀಲಾಕಾಶದಲಿ ನಿರುಕಿಸುತ್ತಾ ವೃತ್ತಾಕಾರದ ಸುತ್ತು ಬರುತಲಿತ್ತು. ಎಷ್ಟು ಹೊತ್ತು ಕಾದರೂ ಕೆಳಗಿಳಿಯುತ್ತಿರಲಿಲ್ಲ. 
    ಯಾಕೆ ಇದು ಹೀಗೆ ವೃತ್ತಾಕಾರವಾಗಿ ಸುತ್ತುತ್ತಿದೆ. ಯಾವುದಾದರೂ ಹರಕೆ ಉಂಟಾ ಎಂದು ತಲೆ ಕೆರೆದುಕೊಳ್ಳತೊಡಗಿದೆ. ತಿಳಿಯಲೇ ಇಲ್ಲ. 

ಈ ಹಕ್ಕಿ ಹೇಗಿದೆ? ಯಾವ ಪಂಗಡಕ್ಕೆ ಸೇರಿದುದು ಎಂದು ತಿಳಿವ ಕುತೂಹಲ ತೀವ್ರವಾಗಿತ್ತು. ಆಗ ನನ್ನ ಬಳಿ ಉತ್ತಮ ದರ್ಜೆಯ ಕ್ಯಾಮರವೂ ಇರಲಿಲ್ಲ. ಅದರ ಮಿತಿಯನು ಮೀರಿ ಆ ಹಕ್ಕಿಯ ವಿವರಗಳನ್ನು ಹೆಕ್ಕಲು ಯತ್ನಿಸಿದ್ದೆ. ಸಾಧ್ಯವಾಗಲೇ ಇಲ್ಲ. ವಿಫಲತೆಯೇ ಬೆನ್ನು ಹತ್ತಿದ ವರ್ಷಗಳು ಅವು. ಮತ್ತೆ ಮತ್ತೆ ಮುಗಿಲಿಗೆ ಹಾರಿ ನೆಲದ ನೋಟಗಳನ್ನು ತನ್ನ ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ನನ್ನ ನಿದ್ದೆಕೆಡಿಸುತಲಿತ್ತು. ಹೀಗೆ ಕೆಲ ವರುಷ ಅದರ ಗುಂಗಿನಲ್ಲೇ ಕಳೆದೆ. ಅಲ್ಲದೇ ಅದರ ವಿಚಿತ್ರ ಕೂಗಿನಿಂದ ನಮ್ಮ ಮನೆಯ ಸನಿಹದವರೆಲ್ಲಾ ಅದರ ಕೂಗು ಅಪಶಕುನವೆಂದು ಹೇಳುತ್ತಿದುದು ನನ್ನ ನಿದ್ದೆ ಕೆಡಿಸಿತ್ತು. ತನ್ನ ಒಡಲ ದನಿ ನಮಗೆ ಅಪಶಕುನವಾಗುವುದು ಹೇಗೆಂದು ತಿಳಿಯದೆ, ಅವರಿಗೆ ಪ್ರಶ್ನೆಗಳ ಸರ ತೊಡಿಸಿ ʼಫಟಿಂಗʼ ಎಂಬ ಬಿರುದನ್ನೂ ಸಂಪಾದಿಸಿದ್ದೆ. ಈ ಹಕ್ಕಿಯ ಚಿತ್ರಕ್ಕಾಗಿ ಹತ್ತಾರು ಗಂಟೆಗಳ ವ್ಯಯಿಸಿದಿದೆ. ಒಂದು ಚಿತ್ರಕ್ಕಾಗಿ ಹಲವಾರು ಕಿಲೋ ಮೀಟರ್‌ ಪಯಣಿಸಿದ್ದೆ. ಕೆಲವರುಷದ ಬಳಿಕ ದೊಡ್ಡ ಲೆನ್ಸ್‌ ಸಿಕ್ಕ ಮೇಲೆ ಅದರ ಜಾತಕದ ಒಂದೊಂದೇ ವಿವರಗಳು ಲಭ್ಯವಾದವು. ಇಂತಿಪ್ಪ ಅದರ ವಿವರಗಳು ಈ ಕೆಳಗಿನಂತಿವೆ. 

ಸೂಕ್ಷ್ಮ ದೃಷ್ಟಿ ಪಾದರಸದ ಚುರುಕು ವ್ಯಕ್ತಿತ್ವದ ಜಾಣ ಬೇಟೆಗಾರ ಈ ಹಕ್ಕಿ. ಕಾಲು, ಕೊಕ್ಕು ಎಲ್ಲವೂ ಹದ್ದಿನಂತೆ! ದೇಹ ಚಿಕ್ಕದು. ಸುಮಾರು ಕಾಗೆ ಗಾತ್ರ. ಹೆಸರು ಶಿಖ್ರಾ .  ಹೊಟ್ಟೆ ಮತ್ತು ಗರಿಗಳು ಬಿಳಿ ಬಣ್ಣ. ತನ್ನ ದೃಷ್ಟಿ ಗಮ್ಯವಾದ ಎಲ್ಲವನ್ನೂ ಬಕಾಸುರನಂತೆ ಕಬಳಿಸುತ್ತದೆ.  ಒಂದೆರಡು ಬಾರಿ ಇದರ ಅದ್ಭುತ ಬೇಟೆಯನ್ನು ಕಣ್ಣಾರೆ ಕಂಡು ಧನ್ಯನಾಗಿದ್ದೆ. ಆದರೆ ಚಿತ್ರ ಮಾತ್ರ ಮರೀಚಿಕೆಯಾಗುಳಿಯಿತು. 

ಚೈತ್ರ ಮಾಸದ ಏರು ಹೊತ್ತು ಸೂರ್ಯ ಇಬ್ಬನಿಗೆ ಮುತ್ತಿಕ್ಕಿ ಮೇಲೇರುವಾಗಲೇ ದೊಡ್ಡದೊಂದು ಲೆನ್ಸ್ ಹಿಡಿದು ವಾರಾಹಿ ತಟದ ಝರಿಯೊಂದರ ಸನಿಹ ಹೈಡ್‌ ರಚಿಸಿ ನಿಂತಿದ್ದೆ. ಝರಿಯ ಸನಿಹದಿಂದ ಏನೋ  ನೆತ್ತಿಯ ಮೇಲಿಂದ ಕೇತಾನ್‌ ಫ್ಯಾನ್‌ ಗಾಳಿ ಬೀಸಿದಂತೆ ಗಾಳಿ ಬೀಸಿತು. ನನ್ನ ಹೈಡ್‌ನ ಕೇವಲ ೫ ಮೀಟರ್‌ ಅಂತರದಲ್ಲೇ ತನ್ನ ಬೇಟೆಯೊಂದನ್ನು ಹಿಡಿದು ಭಕ್ಷಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಹೈಡನ ರಂಧ್ರವನ್ನು ಬದಲಾಯಿಸುವುದರೊಳಗೆ ಅದರ ಭಕ್ಷಣೆ ಮುಗಿದು ತಣ್ಣಗೆ ಸನಿಹದ ಹಣ್ಣಿನ ಮರವೇರಿ ಪೋಸು ಕೊಡಲಾರಂಬಿಸಿತ್ತು. ನನ್ನ ನೋಡಿದ್ದೆ ಪಲಾಯನಗೈಯಿದಿತು. ಅಷ್ಟರೊಳಗೆ ಕ್ಯಾಮರದಲ್ಲೊಂದು ಸುಂದರ ಚಿತ್ರ ದಾಖಲಾಗಿತ್ತು. ಕೆಮರಾ ಖುಷಿ ನಗೆ ನಕ್ಕಿತು! 

***

ಕತ್ತಲಿಗೆ ಕಾಲಿಡಲು ಹೊರಟ ಸೂರ್ಯ ಕಿರಣಗಳಿಗೆ ಗಿಡಗಂಟೆಗಳೆಲ್ಲಾ ಪ್ರತಿಸ್ಪಂದಿಸುವ ಹೊತ್ತಲ್ಲಿ ಕೆರಾಡಿಯಿಂದ ವಾಪಾಸಾಗುತ್ತಿದ್ದೆ. ಪಶ್ಚಿಮದಲ್ಲಿ ಬಣ್ಣಗಳ ಓಕಳಿಯಾಟ. ಯಾವುದೋ ಗಿಡದ ಸಂಧಿಯಲಿ ಸಣ್ಣ ಅಲುಗಾಟ. ನೋಡಿದರೇ ಅದೇ ಶಿಖ್ರಾ ಕುಳಿತು ನನಗಾಗಿ ಕಾದಿದೆಯೋ ಏನೋ ಎಂಬಂತೆ ಕುಳಿತಿತ್ತು. ಒಂದೆರಡು ಚಿತ್ರ ತೆಗೆದೆ. ಒಂದು ಚಿತ್ರ ಸ್ಪಷ್ಟ ಬಂದಿತು. ಅಂದು ಅತ್ಯಂತ ಖುಷಿಯ ದಿನ ನನ್ನ ಪಾಲಿಗೆ. ಇಂತಹ ಸ್ವರ್ಗ ಸದೃಶ ಹಕ್ಕಿಯನ್ನು ನೋಡಿದ್ದು ನನ್ನ ಪುಣ್ಯವೇ ಸರಿ. 

ಜೀವನ:

ಮಾರ್ಚ್‌ ನಿಂದ ಜೂನ್‌ ವರೆಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಕಾಗೆಯಂತೆ ಸಪಾಟಾದ ಗೂಡು ನಿರ್ಮಿಸುತ್ತದೆ. ತನ್ನ ಕಾಲುಗಳಲ್ಲಿ ಕಡ್ಡಿಯನ್ನು ತೆಗೆದುಕೊಂಡೊಗಿ ಗೂಡನ್ನು ನಿರ್ಮಿಸುತ್ತದೆ. ೩-೪ ಮೊಟ್ಟೆಗಳನ್ನು ಒಮ್ಮೆಗೆ ಇರಿಸುತ್ತದೆ. ಜೀವ ವಿಸ್ಮಯದ ಅತ್ಯಂತ ನಾಜೂಕಾದ ಕೊಂಡಿ ಇದಾಗಿದ್ದು ಇಲಿ ಮುಂತಾದ ದಂಶಕಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...