Showing posts with label ಒಂದಿಷ್ಟು ಜೇಡಗಳು. Show all posts
Showing posts with label ಒಂದಿಷ್ಟು ಜೇಡಗಳು. Show all posts

Saturday, February 22, 2020

ಪ್ರಸ್ಥದ ಕೋಣೆಯಲ್ಲೊಂದು ಕೊಲೆ.


oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ.   

ಯಾವುದೋ ಪತ್ತೆದಾರಿ ಕಾದಂಬರಿಯ ಕುರಿತು  ಹೇಳುತ್ತಾನೆಂದು ಸೀಟಿನ ತುದಿಗೆ ಬಂದಿರಾ? ವಿಷಯ ಆಸಕ್ತಿದಾಯಕವಾಗಿದೆ. ಸ್ವಲ್ಪ ಇರಿ.
ಪ್ರತೀ ಜೀವಿಯು ಈ ಜಗತ್ತಿನಲ್ಲಿ ಭಿನ್ನ. ಅವುಗಳಿಗೆ ಪ್ರಕೃತಿ ನೀಡಿದ ಸಂಸ್ಕಾರ ಬೇರೆ ಬೇರೆ. ಹಾಗಾಗಿ ಅವು ಒಂದರಂತೆ ಮೊತ್ತೊಂದಿಲ್ಲ. ಪರಿಸರದ ಒತ್ತಡಗಳು ಅವನ್ನು ವಿಭಿನ್ನವಾಗಿ ರೂಪಿಸಿವೆ. ನಾನು ಹೇಳುವ ಕತೆಯೂ ಅಂತಹುದೇ ಒಂದು ತುಣುಕು.
       
ಕ್ರಾಬ್ ಜೇಡವನ್ನು ಹಿಡಿದಿರುವ ಮತ್ತೊಂದು ಜೇಡ. 
ಜೀವಿಗಳು ತಮ್ಮ ಸಂತಾನವನ್ನು ಮುಂದುವರಿಸುವ ಸಲುವಾಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಸಹಜವಾದುದು. ಸಂತಾನೋತ್ಪತ್ತಿಯಾಗಲು ಗಂಡು ಹೆಣ್ಣನ್ನು ಕೂಡ ಬೇಡವೇ?
ಹೀಗಿರುವ ಪ್ರಸ್ಥದ ಕೋಣೆಯಲ್ಲಿಯೇ ವರನಿಗೆ ಮರಣ ಬಂದರೆ ಹೇಗೆ? ಪ್ರಸ್ತದ ಮನೆಯಲ್ಲಿಯೇ ಒಂದು ಕೊಲೆ ಅದೂ ಮದುಮಗನದ್ದು! ಕೊಲೆಗಾರ ಯಾರೆಂದಿರಾ? ಬೇರಾರೂ ಅಲ್ಲ, ಒಲಿಸಿಕೊಂಡವಳು! ಅಚ್ಚರಿಯಾಯಿತೆ? ಓಡಿದಾಗಲೋ, ಕೆಲಸ ಮಾಡಿದಾಗ ಹಸಿವಾಗೋದು ಸಹಜ. ಆದರೆ ಜೇಡಗಳಿವೆಯಲ್ಲ ಅವುಗಳಿಗೆ ಪ್ರಸ್ಥದ ಕೊನೆಗೆ ಹೆಣ್ಣಿಗೆ ವಿಪರೀತ ಹಸಿವು! ಹಸಿವು ಆರಲು ಕೊಲೆ ಮಾಡಲು ಹೇಸುವುದಿಲ್ಲ. ಹೆಣ್ಣು ಗಂಡಿನ ಚರಮಗೀತೆ ಬರೆಯುವವು. ಗಂಡು ಜಾಣನಾದರೆ ಉಪಾಯವಾಗಿ ತಪ್ಪಿಸಿಕೊಳ್ಳುವುದು. ಆದರೆ ಕೆಲವೊಮ್ಮೆ ಸಿಕ್ಕಿ ಬೀಳುವುದು ಮಾಮೂಲು. ಹೆಣ್ಣು ಸ್ವಲ್ಪ ಯಾಮಾರಿದರೂ ಗಂಡು ತಪ್ಪಿಸಿಕೊಳ್ಳುವುದು.
ಇಲ್ಲಿರುವ oxyopes shweta   ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. ಇದಕ್ಕೆ cannibalism ಎನ್ನುವರು. ಅದು ಸಂಗದ ತರುವಾಯ. ಅಚ್ಚರಿಯಾಯಿತೇ? ಇನ್ನೆಷ್ಟು ಅಚ್ಚರಿಗಳು ಪ್ರಕೃತಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವಳೋ ಗೊತ್ತಿಲ್ಲ. ಗುಟ್ಟು ರಟ್ಟಾದಂದು ನಿಮಗೆ ತಿಳಿಸುವೆ. ಅಲ್ಲಿವರೆಗೆ ನಮಸ್ಕಾರ...
 ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,



      

Friday, January 24, 2020

ಚಿನಕುರುಳಿ ಚೇಳಿನ ಮರಿ!

"ಲೋ ಶ್ರೀಧರಾ ಏನು ಮಾಡ್ತಿದ್ದಿಯೋ, ಬೇಗ ಬಾ" ಅಮ್ಮನ ಆರ್ತನಾದ. "ಈ ಹಾಳು ಪುಸ್ತಕದಲ್ಲಿ ಮುಳುಗಿದರೆ ಲೋಕ ಮುಳುಗಿದರೂ ತಿಳಿಯಲ್ಲ" ಎಂದು ಒಂದೇ ಸಮನೆ ವಟ ವಟಿಸುತ್ತಲೇ ಇದ್ದಳು.
ಚೇಳಿನಂತಿರುವ  ಊರ್ಣ ನಾಭ!

ಎದ್ದೆನೋ ಬಿದ್ದೆನೊ ಎಂದು ಅಮ್ಮನಿದ್ದಲ್ಲಿಗೆ ಓಡಿದೆ. "ಚೇಳಿನ ಮರಿ ಮರಾಯ ಕಚ್ಚಲಿಕ್ಕೆ ಬರುತ್ತೆ ನೋಡು" ಎಂದು ಕಥೆ ಹೇಳಲು ಶುರುವಿಟ್ಟಳು. ನೋಡಿದೆ. ಪುಟಾಣಿ ಚೇಳಿದ್ದರೆ ಅದರ ಅಮ್ಮನೂ ಇರಬೇಕಲ್ಲ ಎಂದು ಯೋಚಿಸುತ್ತಾ ಬಗ್ಗಿ ನೋಡಿದೆ. ಪುಸ್ತಕದ ಮೇಲೆ ಕುಳಿತು ತಬ್ಬಿಕೊಳ್ಳುವಂತೆ ತನ್ನೆರಡೂ ಬಾಹುಗಳನ್ನು ಚಾಚಿತು. ಅಮ್ಮ ಮತ್ತೆ ಚೀರಿದಳು. 'ನಿಂದೇನೋ ಪ್ರಯೋಗ ಅದರ ಮೇಲೆ, ಕಡಿಯುತ್ತೆ ನೋಡು ಹೊರಗೆ ಬಿಟ್ಟು ಬಾ ಮರಾಯ' ಎಂದು ಬೇಡಿಕೊಂಡಳು. ನನಗೇನೋ ಸಂದೇಹ. ಚೇಳಿನ ಮರಿ ಇರಲಿಕ್ಕಿಲ್ಲವೆಂದು. 'ಅಮ್ಮಾ ಇದು ಚೇಳಿನ ಮರಿ ಅಲ್ಲಾ, ಜೇಡವಿರಬೇಕು' ಎಂದೆ. 'ನಿನ್ನ ತಲೆ' ಸರಿಯಾಗಿ ನೋಡು ದೊಡ್ಡ ಕೊಂಬಿದೆ. ಆದರೂ ಪರೀಕ್ಷಿಸುವ ದೃಷ್ಟಿಯಿಂದ ನಿಧಾನಕ್ಕೆ ಪುಸ್ತಕವನ್ನೆತ್ತಿ ಮನೆಯ ಹೊರಗೋಡಿದೆ. ಅದನ್ನು ಕೆಸುವಿನ ಗಿಡದ ಮೇಲೆ ಬಿಟ್ಟೆ. 'ಚೇಳಿನ ಮರಿಯೇ ಅದು' ಎಂದು ವಟ ವಟಿಸುತ್ತಲೇ ಇದ್ದಳು. ಮನೆಯೊಳಗೋಡಿ ಕ್ಯಾಮಾರ ಹಿಡಿದು ಬಂದೆ. ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಬೆಳಕನ್ನು ಅವನ ಮೇಲೆ ಚಿಮುಕಿಸಿದೆ. ಚಿತ್ರವನ್ನು ಕೂಡಲೇ ಕಂಪ್ಯೂಟರಿಗೆ ವರ್ಗಾಯಿಸಿ ನೋಡಿದೆ. ಗುರುತು ಹತ್ತಿತ್ತು. ಇವನಾ ಗೊತ್ತುಂಟು.      'ಇಂಡೊಪಡಿಲಾ'    ಪ್ರಬೆಧಕ್ಕೆ ಸೇರಿದ ಪೋರ, ಮರಿ ವೀರ. ಯಾರ ಕೈಗೂ ಸಿಗದಂತೆ ವೇಷ ಮರೆಸಿ ಚೇಳಿನಂತೆ ತೋರಿಸಿಕೊಳ್ಳುತ್ತಾ ಓಡಾಡುತ್ತಾನೆ! ನೋಡಿದವರೂ ಮೋಸ ಹೋಗಲೇ ಬೇಕು ಹಾಗಿದ್ದಾನೆ ಪುಣ್ಯಾತ್ಮ. ಹಾಗೇ ಅಮ್ಮನೂ ಮೋಸ ಹೋಗಿದ್ದಾಳೆ. ಇವನು ಅವನ್ನವೆಂದರೂ ಕೇಳುತ್ತಿಲ್ಲ. ಕೊನೆಗೆ ಅಂತಜರ್ಾಲದಿಂದ ಒಂದೆರಡು ಚಿತ್ರವಿಳಿಸಿ ತೋರಿಸಿದೆ. ಕೊನೆಗೂ ಅವಳಿಗೆ ಆತ್ಮ ಸಾಕ್ಷತ್ಕಾರವಾಯಿತು! ಜೇಡವೆಂದು ಒಪ್ಪಿದಳು. ಈಗ ಹುಲ್ಲುಕಡ್ಡಿಯನ್ನು ತೋರಿಸಿ ಇದೊಂದು ಜೇಡ ಎಂದರೂ ನಂಬುವ ಸಿತ್ಥಿಗೆ ತಲುಪಿದ್ದಾಳೆ!
,
ಹಿಮ್ಮುಖ ನೋಟದ ಆಕರ್ಷಕ ಕಣ್ಣುಗಳು 



ಶ್ರೀಧರ್. ಎಸ್. ಸಿದ್ದಾಪುರ.

Monday, June 17, 2019

ಕರಿ ಸಾಕ್ಸು ತೊಟ್ಟ ತುಂಟಿಯ ಸ್ವಗತ!



Angaeus sp. [Thomisidae family]
 ದಟ್ಟ ಕಾನನದ ನಡುವೆ ಹೊಳೆಯಂತೆ ಹರಿವ ಸರ ಹದ್ದಿನ ಹರ ದಾರಿಯಲಿ ಸ್ವಚ್ಚಂದವಾಗಿ, ರಾತ್ರಿಯವರೆಗೆ ಏಳಬಾರದೆಂದು ಸಣ್ಣ ಪೊದೆಯ ಟೊಂಗೆ ಮೇಲೆ ಮಲಗಿದ್ದೆ. 
 ಚಿಕ್ಕ ಗಿಡವೇ ನನ್ನ ಮನೆ. ಧೂಳೆಬ್ಬಿಸಿ, ಬರ್ರೆಂದು ಬರುವ ಬೈಕುಗಳ ಹಿಂಡು ಒಂದರ ಹಿಂದೊಂದು. ಎಲ್ಲರೂ ಮುಂದೆ ಮುಂದೆ ಹೋಗುವವರೇ. ಒಬ್ಬರೂ ನೋಡೋರೇ ಇಲ್ಲ! ನನ್ನ ಪುಣ್ಯ. ನನ್ನ ಜಾಗದ ಸನಿಹವೇ ಹಾದು ಹೋಗುವರು. ಆದರೆ ನನ್ನ ನೀಳ ನೀಳ ಕಾಲುಗಳು. ಕಾಲ ಬುಡದಲಿ ಮುಳ್ಳಿನಂತಹ ರಚನೆ. ಜೊತೆಗೆ ಸಾಕ್ಸ್ ತೊಟ್ಟಂತೆ ಕಾಣುವ ಕಪ್ಪು ಕಪ್ಪು ಕಾಲುಗಳು. ಕಣ್ಣುಗಳೋ ದುಂಡಗೆ ಕೆಂಪು ಕೆಂಪು. ಕಣ್ಣು ಗುಡ್ಡೆ ಎದ್ದಂತಿರುವ ನನ್ನ ಕಣ್ಣು ಕಂಡರೆ ನಿಮಗೆ ಭಯವಾಗಬಹುದು. ಭಯ ಪಡುವ ಅಗತ್ಯವಿಲ್ಲ. ಹಗಲಿನಲ್ಲಿ ತಣ್ಣಗೆ ಮಲಗುವ ನಾ ರಾತ್ರಿ ಕಾವಲುಗಾರ! 
spider ನ ಹಿಂಬಾಗ....
 ಕೈ ಕಾಲು ಮಡಚಿ ಮಲಗಿದವನ ಪಕ್ಕ ಪುಸಕ್ಕನೆ ಬೆಳಕಬಿಟ್ಟು ಎಬ್ಬಿಸಬೇಕೆ ಈ ಪುಣ್ಯಾತ್ಮ? ನನ್ನ ಇಷ್ಟು ಹತ್ತಿರ ಬಂದವರಿಲ್ಲ. ಒಮ್ಮೆಗೆ ಹೆದರಿಕೆಯೂ ಆಯಿತು. ಸುದಾರಿಸಿಕೊಂಡೆ. ಹಿಂದಿನಿಂದ ಮುಂದಿನಿಂದ ನನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನುಷ್ಯನ ಮುಖವನ್ನು ಹೋಲುವ ನನ್ನ ಹೊಟ್ಟೆ ಭಾಗವನ್ನೂ ಈ ಪುಣ್ಯಾತ್ಮ ಕ್ಲಿಕ್ಕಿಸಿಕೊಂಡ. ಸಾಕ್ಸು ತೊಡಿಸಿದ್ದು ಯಾರೆಂದು ಕೇಳಬೇಡಿ. ಇಷ್ಟವಾದರೆ ಕ್ಲಿಕ್ಕಿಸಿ ಒಂದು ಲೈಕು!

ಶ್ರೀಧರ್. ಎಸ್. ಸಿದ್ದಾಪುರ.

ವಾರೆ ನೋಟ

ಅಲೆಮಾರಿಯ ಆಗುಂಬೆ ಹಾಗೂ ಟ್ರೋಗನ್

  ‌ಆಗುಂಬೆ ಎಂಬ ಲಾಂಚ್‌ ಪ್ಯಾಡ್‌  ನಾನಿದನ್ನು ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯುವೆ. ಯಾವುದೇ ಊರಿಗೆ ಹೋಗಬೇಕಾದರೂ ಉಡುಪಿಯ ನೀವು ಆಗುಂಬೆಯ ದಾಟಿಯೇ ಹೋಗಬೇಕು. ಮೂಡಿಗೆರೆ...