Tuesday, March 24, 2015

ಕುಂದಾಪುರದಲ್ಲಿ ಪಕ್ಷಿ ಸಂತೆ..

ಚಂದದ ಕನ್ನಡ ಪ್ರಭದಲ್ಲಿ ನನ್ನದೊಂದು ಸಣ್ಣ ಲೇಖನ.. 

Tuesday, February 17, 2015

ವಿಜಯ ಕರ್ನಾಟಕದ ಬ್ಲಾಗಿಲು

ವಿಜಯ ಕರ್ನಾಟಕ  ಪ್ರಕಟಿಸುವ 'ಬ್ಲಾಗಿಲು' ಅಂಕಣದಲ್ಲಿ ಪ್ರಕಟವಾದ ನನ್ನ ಬ್ಲಾಗಿನದೊಂದು ಪುಟ್ಟ ಲೇಖನ....

Wednesday, January 21, 2015

ನಿಸರ್ಗ ಕೆತ್ತಿದ ದೃಶ್ಯ ಕಾವ್ಯ

ಹೀಗೊಂದು ಬೈಕ್ ಸಾಹಸ 
        ತಿರುವು ಮುರುವು ರಸ್ತೆ. ಧೂಳುಮಯವಾದ ಕಣಿವೆಯಂತಿರುವ ದಾರಿ. ದಾರಿಯುದ್ದಕ್ಕೂ ಯುದ್ದಕ್ಕೆ ನಿಂತಂತಿರುವ ಕಲ್ಲುಗಳು! ಅಲ್ಲಲ್ಲಿ ಜಾರಿಕೆ. ಒಂದು ಕಡೆ ಆಳ ಪ್ರಪಾತ. ಸುತ್ತಲೂ ಪಶ್ಚಿಮಘಟ್ಟದ ದುರ್ಗಮ ಕಾಡು. ವಿವಿಧ ಪ್ರಾಣಿ ಪಕ್ಷಿಗಳ ದನಿ. ಮಲೆನಾಡಿನ ವಿರಳ ಮನೆ ಸರಣಿ. ಇವುಗಳ ನಡುವೆ ನಮ್ಮ ಬುಲೆಟ್ ಸವಾರಿ. ಕನರ್ಾಟಕದ ಐದನೇ ಅತಿ ಎತ್ತರದ ಶಿಖರ ಕೊಡಚಾದ್ರಿಯತ್ತ ಗೆಳೆಯ ನಾಗರಾಜ್ ಜೊತೆ ದುರ್ಗಮ ರೋಮಾಂಚಕ ಪಯಣ!
       ಈ ಬೈಕ್ ಸಾಹಸವಂತೂ ಮರೆಯಾರದ ರೋಚಕ ಅನುಭವ. ಒಂದೆಡೆ ಶೋಲಾ ಕಾಡುಗಳು, ನಿಸರ್ಗ ಕೆತ್ತಿದ ಚಲುವಿನ ವಿಸ್ತಾರದ ಬೆಟ್ಟ ಸರಣಿ. ಒಂದಕ್ಕೆ ಏರಿ ಮೊತ್ತೊಂದಕ್ಕೆ ಜೀಕಿಕೊಳ್ಳುವ ಅಪೂರ್ವ ಅವಕಾಶ. ಸುಂದರಿಗೆ ಬೈದಲೆ ತೆಗೆದಂತೆ  ಹಾವು ಹರಿದ ದಾರಿಯಲ್ಲಿ ಪಯಣ. ದಾರಿಯುದ್ದಕ್ಕೂ ಬೈಕ್ ಎತ್ತೆತ್ತಿ ಹಾರುತ್ತಿತ್ತು. ತೆವಳುವ ವೇಗದಲ್ಲಿ ತುದಿ ತಲುಪಿದಾಗ ಯುದ್ಧ ಗೆದ್ಧ ಸಂಭ್ರಮ. ಧನ್ಯತಾ ಭಾವ.ಎಳೆ ಬಿಸಿಲಿಗೆ ಮೈಯೊಡ್ಡುತಾ ಸರ್ವಜ್ಞ ಪೀಠಕೆ ದಾರಿ ಬೆಳೆಸಿದೆವು. ಚಳಿಗಾಳಿಗೆ ಮೈಯೊಡ್ಡಿ ಸೂಯರ್ಾಸ್ತ ಸವಿದು ಅಲ್ಲೇ ಉಳಿದು ಸೂಯರ್ೋದಯವನ್ನೂ ಸವಿದೆವು. 
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು. 
ಬೆಟ್ಟದ ಸುತ್ತಲಿನ 64 ತೀರ್ಥಗಳ ನೀರು ಸೇರಿ ಸೌಪಣರ್ಿಕೆಯಾಗಿ ಕೊಲ್ಲೂರಿನ ಜನತೆಯ ದಾಹ ಹಿಂಗಿಸುವಳು. ಅಗಸ್ತ್ಯ ತೀರ್ಥ ಮತ್ತು ನಾಗ ತೀರ್ಥ ನೋಡುವಂತಹದು. ಮರಳುವಾಗ ಹೊಸ ಕಾಡ ಹಾದಿ ಹಿಡಿದೆನು. ಇಲ್ಲಿ ಗೆಳೆಯರಾದ ರಾಘು, ಸಂತೋಷ, ವಿಶ್ವಾಸ್ ಜೊತೆಯಾದರು. ಕಾಡದಾರಿಯಂತೂ ಮೈಮನಗಳಿಗೆ , ಕ್ಯಾಮರಕ್ಕೆ ಸುಗ್ರಾಸ ಭೋಜನವನ್ನೇ ನೀಡಿತು. ಅಪರೂಪದ ಕರಿ ಹದ್ದು ಆಗಾಗ ದರ್ಶನವಿತ್ತಿತು. 

Jaint Squirrel
ವಿದೇಶಿ ಹಕ್ಕಿಗಳಾದ ಕೆಸ್ಟ್ರಾಲ್, ಕುಂಡೆಕುಸ್ಕ ಸುಂದರ ಫೋಜ್ ನೀಡಿದವು. ಅಳಿವಿನಂಚಿನ ದೊಡ್ಡ ಅಳಿಲು ನನ್ನ ಫೋಟೊ ತೆಗೆಯಿರೆಂದು ಹಟಕ್ಕೆ ಬಿದ್ದು ಫೋಸ್ ನೀಡಿ ಪರಾರಿಯಾಯಿತು. ಪಶ್ಚಿಮ ಘಟ್ಟಗಳ ವಿಶಿಷ್ಟ ಚಿಟ್ಟೆ, ರಾಬರ್ಟ ಪ್ಲೈ ಕಾಣಸಿಕ್ಕವು.
On the summit


Namma Team
ಕಡಿದಾದ ಬೆಟ್ಟವೊಂದನ್ನು ಇಳಿದಾಗ ಕಾಣಸಿಕ್ಕ ಕಾಡ ಸುಂದರಿ 'ಎಮ್ಮೆಹೊಂಡ' ಜಲಧಾರೆ ಬಹಳವೇ ಚೇತೋಹಾರಿ ಅನುಭವ. ಔಷಧಿಯುಕ್ತ ನೀರಲಿ ಸ್ನಾನ ಮಾಡಿ, ಹಳ್ಳಿಗರಿತ್ತ ವಿಶಿಷ್ಟ ತಂಬಳಿಯುಂಡು ಹಿಂತಿರುಗಿದೆವು.
ಇನ್ನೇಕೆ ತಡ. ಚಳಿ ಮುಗಿಯುವ ಮುನ್ನ ಕ್ಯಾಮರ ಹೆಗಲಿಗೇರಿಸಿ ಹೊರಡಿ ಆದರೆ ಪ್ರಕೃತಿ ಮಾತೆಯನ್ನು ಪ್ಲಾಸ್ಟಿಕ್ ಕಸದಿಂದ ಮಲಿನಗೊಳಿಸದಿರಿ. ಮರೆಯಲಾರದ ಅನನ್ಯ ಅನುಭವ ನಿಮ್ಮದಾಗುದರಲ್ಲಿ ಅನುಮಾನವಿಲ್ಲ.
ಶ್ರೀಧರ್. ಎಸ್. ಸಿದ್ದಾಪುರ 

Wednesday, January 7, 2015

ಪುಟ್ಟ ಊರಿನ ಪುಟ್ಟ ಪುಟ್ಟ ಸುಂದರ ಜಲಪಾತಗಳು..

ಆ ಪುಟ್ಟ ಊರಿನಲ್ಲಿ ಪುಟ್ಟ ಪುಟ್ಟ ಸುಂದರ ಜಲಪಾತಗಳು... ಆ ಜಲಪಾತಗಳ ಕುರಿತು ಪುಟ್ಟ ಲೇಖನ... ಈ ಪುಟ್ಟ ಲೇಖನವನ್ನು ನಮ್ಮ ಕನ್ನಡ ಪ್ರಭ ಪ್ರೀತಿಯಿಂದ ಪ್ರಕಟಿಸಿದೆ, ಅದರ ಸಂಪಾದಕರಿಗೆ ಧನ್ಯವಾದಗಳು. ಓದಿ ಪುಟ್ಟದಾಗಿ ಕಮೆಂಟ್ ಮಾಡಿ...

ಗಾಳಿ ದೇವರ ಗುಡ್ಡದ ಅಜ್ಞಾತ ಸುಂದರಿ!









ಕಾಡುವ ಹನಿಗಳ ಅಮರ ಸಿಂಚನ. ಮಳೆಯುಕ್ಕುವ ಆ ದಿನಗಳಲ್ಲಿ ಮತ್ತೆ ಒಂದಿನ ಕಾಡಿನಂಚಿನ ಅಜ್ಞಾತ ಹಾಲ್ನೊರೆ ನೋಡಲು ಹೊರಟೆವು. ಜಾರವ ದಾರಿ ನಡುವೆ ದ್ವಿಚಕ್ರದ ಪಥ. ಸಾವರಿಸಿ, ಇಳಿದು, ಹತ್ತಿ, ಜಿಗಿದು ನೆಗೆವ ಪಯಣ.
ಇರುವ ಹತ್ತು ಹನ್ನೆರಡು ಮನೆಗಳಲ್ಲಿ ದುಂಬಾಲು ಬಿದ್ದು ರಾಜಣ್ಣ ನಮ್ಮೊಡನೆ ಬಿಮ್ಮಲ್ಲದೆ ಸೇರಿಕೊಂಡರು. ಕಿರೀಟವಿಟ್ಟಂತೆ ಅಲ್ಲಲ್ಲಿ ಹಿಮ ಆವರಿಸಿ ಗಿರಿಯ ಮುಸುಕಿತ್ತು, ಮಂಜು ಹರಡಿತ್ತು. ಮಣ್ಣ ಮನೆಗಳಿಂದ ಮಧ್ಯಾಹ್ನದಡುಗೆಗೆ ಕುಚ್ಚಲಕ್ಕಿ ಅನ್ನದ ಘಮಲು ಹೊಮ್ಮುತ್ತಿತ್ತು. ಮಡಿಸಾಲು ಹೊಳೆ ಬದಿಗೆ ಮೀನು ಹಿಡಿಯಲು ತೆರಳಿದ ತಮ್ಮ ಇನಿಯನಿಗಾಗಿ ಕಾಯುತಿರುವ ಒಂಟಿ ಮನೆಯ ಯಜಮಾನ್ತಿಯರು. ದಣಿವರಿಯದ ಕ್ಯಾಮರ ಕ್ಲಿಕ್ ಕ್ಲಿಕ್ ಎನುತ್ತಿತ್ತು.


ರಾಜಣ್ಣ ತೋರಿದ ದಾರಿ ಹಿಡಿದು, ಹೊಳೆಯೊಂದ ದಾಟಿ ಮಂದುವರಿದೆವು. ಕಾಲ ನೋವಿನಲೂ ಜನಪರವಾಗಿರುವ ಅವರನ್ನು ಮೆಚ್ಚಲೇಬೇಕು. ಕಾಲಿಗೆಲ್ಲ ನಶ್ಯ ಸವರಿಕೊಂಡು ನಡುವೆ ಸಿಗುವ ತೊರೆಯ ನೀರು ಕುಡಿದು ನಡೆಯದೆವು. ಅಲ್ಲಿ ಇಲ್ಲಿ ಕಚ್ಚಿದ ಇಂಬಳವನ್ನು ತೆಗೆಯುತ್ತಾ ಸಾಗಿತ್ತು ಪಯಣ.ನಡುವೆ ಸಿಕ್ಕ ಕಡಂಬಳಕ ಎಂಬ ಸಣ್ಣ ಜಾತಿಯ ಹಾವನ್ನು ನೋಡಿ ಕ್ಲಿಕ್ಕಿಸಿದೆವು. ಹಾವು ಚಿಕ್ಕವಾದರೂ ವಿಷ ಬಹಳ! ಅಪರೂಪದ ಕಪ್ಪೆ ಸಿಕ್ಕು ನೋಡಿ ನಾವು ನಲಿದೆವು.


ಮಧ್ಯದಾರಿಯಲ್ಲಿ ದೊಡ್ಡ ಮಂಗಟೆಯ ದರುಶನವಾಯಿತು. ಎರಡು ಕ್ಲಿಕ್ಕಿಗೆ ಸಿಕ್ಕ ಹಕ್ಕಿಯ ಮತ್ತೆ ನೆನೆದು. ನೊಣ ಹಿಡುಕಗಳ ಕೂಗ ಕೇಳುತ್ತಾ ಕಾಡ ನಡುವೆ ಬಂದಿದ್ದೆವು. ಸೂರ್ಯ ಕಾಣದ ನೆಲ, ಫಲವತ್ತಾದ ಮಣ್ಣು. ಗೆಳೆಯರೊಡನೆ ತಾವು ಕಂಡ ಹಕ್ಕಿಗಳ ಕುರಿತು ಚಚರ್ೆ ನಡೆಯಿತು. ಮತ್ತೆ ಮತ್ತೆ ಮಾತು ಕತೆಯಾಗಲು ದೊಡ್ಡದೊಂದು ಜಲಧಾರೆ ನಮ್ಮದುರೇ ಪ್ರತ್ಯಕ್ಷ. ಮೂರು ಹಂತಗಳಲ್ಲಿ ಬೀಳುವ ಅದನ್ನು ನೋಡಿ ಕ್ಯಾಮರಕ್ಕೆ ಕೆಲಸ ಕೊಟ್ಟೆವು. ನೀರ ನಡುವೆ ಕುಳಿತು ಇಡ್ಲಿ ಸಾಂಬಾರ್, ಚಿತ್ರಾನ್ನ ಹೊಡೆದೆವು. ಇಲ್ಲಿ ಕಾವ್ಯವೇ  ದೃಶ್ಯವಾದಂತೆ. ಕಲ್ಲು ಕಲ್ಲೂ ಶಿಲ್ಪದಂತೆ, ಎಂತಹ ಅರಸಿಕನ ಹೃದಯ ಅರಳಿಸುವಂತಹ ತಾಣ.


ಅಲ್ಲಿಯೇ ಮಿಂದು ನಲಿದೆವು. ದಣಿದ ದೇಹಕ್ಕೆ ಮೇಲಿನಿಂದ ಬೀಳುವ ನೀರು ಒಳ್ಳೇ ಮಸಾಜ್ ಮಾಡಿದಂತ್ತಿತ್ತು. ಹೀಗೆ ಈ ದಿನ ಸಾರ್ಥಕ್ಯವನ್ನು ಪಡೆದುಕೊಂಡು ನಮ್ಮನ್ನು ಬೀಳ್ಕೊಡಲು ಅನುವಾಗಿತ್ತು. ಇಲ್ಲಿಂದಲೇ ಕಾಡ ನಡುವೆ ಭೋರ್ಗರೆವ ಮತ್ತೊಂದು ಕಾಡ ಸುಂದರಿ ನೋಡಲು ಅನುವಾದೆವು!
ಆ ಕತೆಯನ್ನು ಇನ್ನೊಮ್ಮೆ ಹೇಳುವೆ....



ಶ್ರೀಧರ. ಎಸ್. ಸಿದ್ದಾಪುರ.

Sunday, January 4, 2015

ಅಜ್ಞಾತ ಸುಂದರಿ!

   ಕಾಡುವ ಹನಿಗಳ ಅಮರ ಸಿಂಚನ. ಮಳೆಯುಕ್ಕುವ ಆ ದಿನಗಳಲ್ಲಿ ಮತ್ತೆ ಒಂದಿನ ಕಾಡಿನಂಚಿನ ಅಜ್ಞಾತ ಹಾಲ್ನೊರೆ ನೋಡಲು ಹೊರಟೆವು. ಜಾರವ ದಾರಿ ನಡುವೆ ದ್ವಿಚಕ್ರದ ಪಥ. ಸಾವರಿಸಿ, ಇಳಿದು, ಹತ್ತಿ, ಜಿಗಿದು ನೆಗೆವ ಪಯಣ. 
     

 ಇರುವ ಹತ್ತು ಹನ್ನೆರಡು ಮನೆಗಳಲ್ಲಿ ದುಂಬಾಲು ಬಿದ್ದು ರಾಜಣ್ಣ ನಮ್ಮೊಡನೆ ಬಿಮ್ಮಲ್ಲದೆ ಸೇರಿಕೊಂಡರು. ಕಿರೀಟವಿಟ್ಟಂತೆ ಅಲ್ಲಲ್ಲಿ ಹಿಮ ಆವರಿಸಿ ಗಿರಿಯ ಮುಸುಕಿತ್ತು, ಮಂಜು ಹರಡಿತ್ತು. ಮಣ್ಣ ಮನೆಗಳಿಂದ ಮಧ್ಯಾಹ್ನದಡುಗೆಗೆ ಕುಚ್ಚಲಕ್ಕಿ ಅನ್ನದ ಘಮಲು ಹೊಮ್ಮುತ್ತಿತ್ತು. ಮಡಿಸಾಲು ಹೊಳೆ ಬದಿಗೆ ಮೀನು ಹಿಡಿಯಲು ತೆರಳಿದ ತಮ್ಮ ಇನಿಯನಿಗಾಗಿ ಕಾಯುತಿರುವ ಒಂಟಿ ಮನೆಯ ಯಜಮಾನ್ತಿಯರು. ದಣಿವರಿಯದ ಕ್ಯಾಮರ ಕ್ಲಿಕ್ ಕ್ಲಿಕ್ ಎನುತ್ತಿತ್ತು.


ರಾಜಣ್ಣ ತೋರಿದ ದಾರಿ ಹಿಡಿದು, ಹೊಳೆಯೊಂದ ದಾಟಿ ಮಂದುವರಿದೆವು. ಕಾಲ ನೋವಿನಲೂ ಜನಪರವಾಗಿರುವ ಅವರನ್ನು ಮೆಚ್ಚಲೇಬೇಕು. ಕಾಲಿಗೆಲ್ಲ ನಶ್ಯ ಸವರಿಕೊಂಡು ನಡುವೆ ಸಿಗುವ ತೊರೆಯ ನೀರು ಕುಡಿದು ನಡೆಯದೆವು. ಅಲ್ಲಿ ಇಲ್ಲಿ ಕಚ್ಚಿದ ಇಂಬಳವನ್ನು ತೆಗೆಯುತ್ತಾ ಸಾಗಿತ್ತು ಪಯಣ.ನಡುವೆ ಸಿಕ್ಕ ಕಡಂಬಳಕ ಎಂಬ ಸಣ್ಣ ಜಾತಿಯ ಹಾವನ್ನು ನೋಡಿ ಕ್ಲಿಕ್ಕಿಸಿದೆವು. ಹಾವು ಚಿಕ್ಕವಾದರೂ ವಿಷ ಬಹಳ! ಅಪರೂಪದ ಕಪ್ಪೆ ಸಿಕ್ಕು ನೋಡಿ ನಾವು ನಲಿದೆವು. ಮಧ್ಯದಾರಿಯಲ್ಲಿ ದೊಡ್ಡ ಮಂಗಟೆಯ ದರುಶನವಾಯಿತು. ಎರಡು ಕ್ಲಿಕ್ಕಿಗೆ ಸಿಕ್ಕ ಹಕ್ಕಿಯ ಮತ್ತೆ ನೆನೆದು. ನೊಣ ಹಿಡುಕಗಳ ಕೂಗ ಕೇಳುತ್ತಾ ಕಾಡ ನಡುವೆ ಬಂದಿದ್ದೆವು.
 ಸೂರ್ಯ ಕಾಣದ ನೆಲ, ಫಲವತ್ತಾದ ಮಣ್ಣು. ಗೆಳೆಯರೊಡನೆ ತಾವು ಕಂಡ ಹಕ್ಕಿಗಳ ಕುರಿತು ಚಚರ್ೆ ನಡೆಯಿತು. ಮತ್ತೆ ಮತ್ತೆ ಮಾತು ಕತೆಯಾಗಲು ದೊಡ್ಡದೊಂದು ಜಲಧಾರೆ ನಮ್ಮದುರೇ ಪ್ರತ್ಯಕ್ಷ. ಮೂರು ಹಂತಗಳಲ್ಲಿ ಬೀಳುವ ಅದನ್ನು ನೋಡಿ ಕ್ಯಾಮರಕ್ಕೆ ಕೆಲಸ ಕೊಟ್ಟೆವು.


  ನೀರ ನಡುವೆ ಕುಳಿತು ಇಡ್ಲಿ ಸಾಂಬಾರ್, ಚಿತ್ರಾನ್ನ ಹೊಡೆದೆವು. ಇಲ್ಲಿ ಕಾವ್ಯವೇ  ದೃಶ್ಯವಾದಂತೆ. ಕಲ್ಲು ಕಲ್ಲೂ ಶಿಲ್ಪದಂತೆ, ಎಂತಹ ಅರಸಿಕನ ಹೃದಯ ಅರಳಿಸುವಂತಹ ತಾಣ.
ಅಲ್ಲಿಯೇ ಮಿಂದು ನಲಿದೆವು. ದಣಿದ ದೇಹಕ್ಕೆ ಮೇಲಿನಿಂದ ಬೀಳುವ ನೀರು ಒಳ್ಳೇ ಮಸಾಜ್ ಮಾಡಿದಂತ್ತಿತ್ತು. ಹೀಗೆ  ದಿನ ಸಾರ್ಥಕ್ಯವನ್ನು ಪಡೆದುಕೊಂಡು ನಮ್ಮನ್ನು ಬೀಳ್ಕೊಡಲು ಅನುವಾಗಿತ್ತು. ಇಲ್ಲಿಂದಲೇ ಕಾಡ ನಡುವೆ ಭೋರ್ಗರೆವ ಮತ್ತೊಂದು ಕಾಡ ಸುಂದರಿ ನೋಡಲು ಅನುವಾದೆವು!
ಆ ಕತೆಯನ್ನು ಇನ್ನೊಮ್ಮೆ ಹೇಳುವೆ....

Saturday, December 20, 2014

ಹೊಸ ಮನ್ವಂತರದತ್ತ....


ಚಿತ್ರ ಇಂಟರ್ ನೆಟ್.
ಪರಮ ಅದ್ಭುತ ಈ ದ್ರಾವಣ
ಕುಡಿದವರು ರಾವಣ!
ಹನಿ ಹನಿಯೂ ವಿಷದ ತೊಟ್ಟು
ಜನ್ಯವು ಸೋಜಿಗದ ಬಿಕ್ಕಟ್ಟು.

        ಹೊಸ ಮನ್ವಂತರದ ರಾವಣ
        ಹುಟ್ಟಿಕೊಂಡಿದ್ದಾನೆ.
        ಎಲ್ಲಿ? ಎಲ್ಲಿ? ಅಲ್ಲಿ ಅಲ್ಲಿ
        ಗಲ್ಲಿ ಗಲ್ಲಿ ನೋಡಲ್ಲಿ!

ರಾವಣ, ಕಂಸ, ಜರಾಸಂದ
ಕುಡಿದಿರ್ಪರು ಈ ಪೇಯ
ಕೃತಿಯೆಲ್ಲವೂ ಹೇಯ.

        ಅಪ್ಪ ಅಮ್ಮ ಅಕ್ಕ ತಂಗಿಯರಿಲ್ಲ
        ನ್ಯಾಯ ಅನ್ಯಾಯ ಇವರಲ್ಲೇ ಇಕ್ಯ
        ತತ್ವ ಆದರ್ಶಗಳಿಲ್ಲ.
ಹಾದಿ ಹಾದಿಯಲೂ ಜನಿಪರು
ಕೊಂದರೂ ಹುಟ್ಟಿ ಬರುವರು
ರಕ್ತ ಬೀಜಾಸುರರಂತೆ
ಮತ್ತೊಬ್ಬರು,
ನುಂಗಿ ನೀರ್ ಕುಡಿವರು.
        ವಾಸ್ತವದ ಬೇರನು
        ಕೆದಕಿದರೆ ಬರಿಕಣ್ಣೀರು.
        ಇದಕೆಲ್ಲಿಯ ಕೊನೆ
        ದಿನ ದಿನವೂ ಹಿಗ್ಗುತಿದೆ
        ಪೂತನಿಯ ವಿಷದ ಮೊಲೆ!

Friday, November 28, 2014

ನಿನ್ನ ಸಂಗ ನನಗೆ ಮೃತ್ಯು!

ಕ್ಯಾಮರ ಕೊಂಡ ನಂತರದ ಉತ್ತಮ ಚಿತ್ರ ಇದಲ್ಲ! ಆದರೂ  ನಿಮಗಾಗಿ ಈ ಕೀಟದ ಚಿತ್ರ.       Mate ಆದ ನಂತರ ಹೆಣ್ಣು ಗಂಡನ್ನು ಕೊಲ್ಲುವ ದೃಶ್ಯ!




FINAL TOUCH

Monday, October 27, 2014

ಕ್ಯಾಮರ ಕಾವ್ಯ

ºÉƸÀ aUÀÄj£À vÀAqÀPÉÌ ºÉƸÀ ¸ÉÃ¥ÀðqÉ ¤PÁ£ï r 7000 r.J¸ï.J¯ï.Dgï. EzÀgÀ°è QèQ̹zÀÀ £À£Àß ªÀÄvÀÄÛ PÉ®ªÀÅ QÃlUÀ¼À gÀhÄ®Pï. ಇಷ್ಟವಾದರೆ...ತಿಳಿಸಿ.








Friday, October 10, 2014

ಮರೆತು ಹೋದ ಗೆಳಯನಿಗೆ.

ಮರೆತು ಹೋದ ಗೆಳಯನಿಗೆ...
ಹಲವು ದಿನಗಳಿಂದ ಕಾಡಿದ ವಿಷಯ ಒಂದರ ಕುರಿತು ನನಗನಿಸಿದ್ದು. ನಿಮಗೂ ಹಿಗನಿಸಿದ್ದರೆ ತಿಳಿಸಿ...

ಕೈಯಲ್ಲೊಂದು ಕರಟ ಹಿಡಿದು
ನೆಲದೊಡಲ ಬಗೆದು
ಮತ್ತೆ ಮತ್ತೆ ಜಿಗಿದು
ಸಿಪ್ಪೆ ದೋಣಿ ಮಾಡಿಕೊಂಡು
ತೇಲಿ ಬಿಟ್ಟ ದೋಣಿ ನೆನಪ ಮರೆತು
ಗಣಕದೊಂದಿಗಾಡುತಿರುವೆ
ಉಸಿರು ಅದುವೆ ಎಲ್ಲಾ ನಿನಗೆ...
ನೆನಪನೆಲ್ಲಾ ದೋಣಿಯಲ್ಲಿ..
ಒಂದು ಬಿಡದೇ ತೇಲಿ ಬಿಟ್ಟೆ.
ಗೆಳೆಯನೆಂದು ಬರುವೆ
ನಿನ್ನ ನೆನದು ಕಾಯುತಿರುವೆ


ತೆೇಲಿ ಬಿಟ್ಟ ದೋಣಿ
ಎಂದೊ ಮಗುಚಿದೆ.
ಎಷ್ಟು ದಿನವೊ ನಿನ್ನ ಆಟ
ಎಂದು ಮುಗಿಯುವುದೊ?
ಎಲ್ಲೆಲ್ಲೊ ತೇಲಿ ಹೋದೆ
ಮತ್ತೆ ಬಾರ ದೂರಿಗೆ.
ಬಿಟ್ಟ ದೋಣಿ ಕಾಯುತಿಹುದು
ಒಮ್ಮೆ ಬಾರೊ ತೇರಿಗೆ

ಶ್ರೀಧರ. ಎಸ್.

Tuesday, July 1, 2014

ಕಡಬು


    ಕಡುಬೆಂದರೆ ನನಗೆ ನೆನಪಾಗುವುದು ನನ್ನ ದೊಡ್ಡಮ್ಮ ಮತ್ತು ಅಮ್ಮಮ್ಮ. ಅವರ ಕೈರುಚಿಯ ಕಡುಬು ತಿಂದವರು ಮರೆಯಲಾರರು. ಇದಕ್ಕೆ ಅವರು ತಯಾರಿಸುತ್ತಿದ್ದ ಬೆಳ್ಳುಳ್ಳಿ ಹಾಕಿದ ಚಟ್ನಿ ಎಂತಹ ಅರಸಿಕರ ಬಾಯಿಯಲ್ಲಿ ನೀರೂರುವಂತೆ ಮಾಡುತ್ತಿತ್ತು. ಅವರು ತಯಾರಿಸುತ್ತಿದ್ದ ಕಡುಬಿನ ರುಚಿ ಇನ್ನೂ ನನ್ನ ನಾಲಗೆಯ ಮೇಲಿದೆ! ಮಳೆಗಾಲದಲ್ಲಿ ಈ ತಿಂಡಿ ತಯಾರಿಸಿ ಬಾಯಿ ಚಪ್ಪರಿಸಿ.



    ನಮ್ಮೂರ ತಿಂಡಿಗಳಲ್ಲಿ ಇದು ಅತ್ಯಂತ ಪ್ರಮುಖವಾದುದು. ಜಂಕ್ ಆಹಾರಕ್ಕಿಂತ ಎಷ್ಟೋ ಉತ್ತಮವಾದುದು. ಪೋಷಕಾಂಶ ಒದಗಿಸುವ ಜೊತೆ-ಜೊತೆಗೆ ಅನೇಕ ಕಾಯಿಲೆ ಬರದಂತೆ ಇವು ತಡೆಯುತ್ತವೆ(ಗೇರು ಎಲೆಯಿಂದ ತಯಾರಿಸಿದ್ದು). ಈ ಕಡಬು ಗೇರು ಎಲೆಯಿಂದ ತಯಾರಿಸಲಾಗಿದೆ. ಇದರಿಂದ ತಯಾರಿಸಿದರೆ ಕಡಬು ಅತ್ಯಂತ ಪರಿಮಳಯುಕ್ತವಾಗಿರುತ್ತದೆ. ಒಮ್ಮೆ ತಿಂದವರು ಮತ್ತೊಮ್ಮೆ ತಿನ್ನದೇ ಬಿಡರು!.

Friday, June 6, 2014

ಹೊಸ ಸಾಧ್ಯತೆಗೆ ಬದುಕು ಮಗ್ಗಲು ಬದಲಿಸಿದೆ



ಹೊಸ ಮನ್ವಂತರಕೆ, ಹೊಸ ಹೊಳಹಿಗೆ, ಹೊಸ ಜಾಗಕ್ಕೆ ಮಗ್ಗಲು ಬದಲಿಸಿದೆ ಬದುಕು. ನಿನ್ನೆಯ ಮೈಲಿಗಲ್ಲಿಗೂ ಇಂದಿನದಕೂ ಸ್ಪಷ್ಟವಾಗಿದೆ ಅಂತರ. ಮುಂದಿನದೂ ಕಾಣಿಸಿದೆ ಮೆಲ್ಲಗೆ. ಅನಂತ ಸಾಧ್ಯತೆಯ ಕಡೆಗೆ ಅನಂತಶಕ್ತಿ ಒಗ್ಗೂಡಿಸಿ ಹೊರಟಿದೆ. ಈ ನಡುವೆ ಸ್ವಲ್ಪ ಮುನಿಸು, ಇನಿತು ಬೇಸರ, ಕೊಂಚ ದುಃಖವೂ ಬೆರತಿದೆ.
ಬದುಕ ಪಯಣದ ಒಂದಿನದಲಿ ಬೆಸ್ತರೀರ್ವರು ದಿನವ ಮುಗಿಸಿ ಮನೆಕಡೆ ಹೊರಟಿಹರು. ಈ ದೃಶ್ಯಾವಳಿಗೆ ಕಣ್ಣಾಗಿದ್ದು ನಿಕಾನ್ ಡಿ 7000. ನಮ್ಮೂರಿನ ಪಂಚಗಂಗಾವಳಿಯ, ಐದು ನದಿಗಳು ಸೇರುವ ತಾಣದಲಿ ಕಂಡ ಸಮ್ಮೋಹಕ ದೃಶ್ಯಾವಳಿ. ಕತೆ ಹೇಳುವ ಚಿತ್ರಗಳು ನಿಮಗಾಗಿ ನೋಡಿ ಪ್ರತಿಕ್ರಿಯಿಸಿ.

ನೇರಳೆ ಬಣ್ಣದಲ್ಲಿ ಸಂಜೆ. 


ಪಯಣ, ಈ ನಡುವೆ ಗೂಟದ ಮೇಲಿರುವ ಹಕ್ಕಿಯನ್ನು ಗಮನಿಸಿ. 


Returning home.


Wednesday, March 12, 2014

ವಿಸ್ಮಯಗಳ ತಾಣ ಮನೋಹರ ಮಣಿಕರಣ


ಹಿಮಾಲಯ ಪರ್ವತ ಹಲವು ಅಚ್ಚರಿಗಳ ತವರೂರು ಅಂತಹ ಅಚ್ಚರಿಯನ್ನು ತವಕದಿಂದ ಎದುರುಗೊಳ್ಳಲು ನಾವು ತಯಾರಾದೆವು. ಕುಲ್ಲು ಜಿಲ್ಲೆಯ ಮಲಾನ ಎಂಬ ಮಾಯಾನಗರಿಯ ಐದು ಗಂಟೆಯ ಟ್ರಕ್ಕಿಂಗ್ ಮುಗಿಸಿ ಮತ್ತೆ ಸಂಜೆ ಆರು ಗಂಟೆಗೆ ನಾವು ಕಾರಿನ ಬಳಿಗೆ ಬಂದಿದ್ದೆವು .ಕೈ ಕಾಲುಗಳೆಲ್ಲ ಬಳಲಿದ್ದರೂ ಉತ್ಸಾಹ ಪುಟಿಯುತಿತ್ತು. ಕಾರಿನ ಡ್ರೈವರ್ ಮತ್ತು ಗೆಳೆಯ ನಾಗರಾಜ್ ಮುಂದಿನ ತಾಣಗಳ ರೋಚಕ ಕತೆಯನ್ನು ಹೇಳಲಾರಂಬಿಸಿದರು. ಆ ವರ್ಣನೆಗೆ ಮನತೂಗಿ ಕನಸು ಕಾಣಲಾರಂಭಿಸಿದೆ. ಸುಮಾರು ಸಂಜೆ ಗತ್ತಲಿನಲ್ಲಿ ಬಿಳಿನೊರೆಯಿಂದ ಬಳಕುವ ಬಿಯಾಸ್ ನದಿ ತಟದ ಪ್ರಶಾಂತ ಮಣಿಕರಣಕ್ಕೆ 6.45 ಕ್ಕೆ ತಲುಪಿದೆವು. 
ಊರಿಗೂರು ಸೂಚಿಪರ್ಣ ಮರಗಳಿಂದ ಹಿಮಚ್ಛಾದಿತ ಬೆಟ್ಟಗಳಿಂದ ಸುತ್ತುವರಿದು ನಯನ ಮನೋಹರವಾಗಿತ್ತು. ಸೂರ್ಯ ರಜೆ ಮೇಲಿದ್ದ ಮತ್ತೆ ಮುಂದುವರಿಯಲಾರದಂತೆ ಬೆಟ್ಟಗಳು ಸುತ್ತುವರಿದಿದ್ದವು. 
ಬಿಯಾಸ್ ನದಿ ತಟದ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದೆವು. ಪಾರ್ವತಿ ಕಣಿವೆಯ ಮಗುಲಿನ ಸ್ವಲ್ಪವೇ ಸ್ವಲ್ಪ ಸಮತಟ್ಟಾದ ಪ್ರಕೃತಿ ವಿಸ್ಮಯದ ವಿಶಿಷ್ಟ ತಾಣ ಮಣಿಕರಣ. 
ವಿಸ್ಮಯದ ಬುಗ್ಗೆಗಳು : ಮಣಿಕರಣದ ವಿಸ್ಮಯ 2 ಬಿಸಿ ನೀರಿನ ಬುಗ್ಗೆಗಳು, ಯಾರೋ ಅಗಾದ ಪ್ರಮಾಣದ ಕಟ್ಟಿಗೆಯಿಂದ ನೀರನ್ನು ಕಾಯಿಸುತ್ತಿರುವಂತೆ ನೀರಿನ ಹೊಂಡಗಳಲ್ಲಿ ಹೊಗೆಯೇಳುತ್ತಿತ್ತು. ಸುಮಾರು 0  ಹೊರಗಿನ ಉಷ್ಣಾಂಶವಿರುವಗಲೂ ನೀರು ಕುದಿಯುತ್ತಿರುತ್ತದೆ! ಇಂತಹ ಎರಡು ಕೆರೆಗಳಲ್ಲಿ ಅಲ್ಲಿನ ಜನರು ಬಟ್ಟೆಯಲ್ಲಿ ಕಡಲೆ, ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ಇಳಿ ಬಿಟ್ಟು ಕಾಯುತಿದ್ದರು. ಇವೆಲ್ಲಾ ವಸ್ತುಗಳು ಎರಡು ನಿಮಿಷದಲ್ಲಿ ಹದವಾಗಿ ಬೆಂದಿತ್ತು! ಆಶ್ಚರ್ಯವೋ ಆಶ್ಚರ್ಯ.
ರೋಗ ನಿವಾರಿಸುವ ವಿಶೇಷವಾದ ಶಕ್ತಿ ಈ ನೀರಿಗಿದೆ ಎಂದು ನಂಬುತ್ತಾರೆ ಅಲ್ಲದೆ ಇಲ್ಲಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ವಿಶಿಷ್ಟ ಗುಹೆಗಳಿವೆ!
ಅಡುಗೆ ಮಾಡಲ್ಲ!: ಈ ಊರಿನ ಜನರ್ಯಾರು ಮನೆಯಲ್ಲಿ ಬೆಂಕಿ ಹೊತ್ತಿಸಲ್ಲ! ಕಾರಣವೇನೆಂದರೆ ಈ ಬಿಸಿ ನೀರಿನ ಬುಗ್ಗೆ ಬಳಸಿ ತಮ್ಮ ಅಡುಗೆ ತಯಾರಿಸಿಕೊಳ್ಳುತ್ತಾರೆ!.ಇಲ್ಲಿನ ಗುರುದ್ವಾರದಲ್ಲೂ ಊಟದ ವ್ಯವಸ್ಥೆಗೆ ಈ ಬಿಸಿ ನೀರಿನ ಬುಗ್ಗೆಯನ್ನೇ ಬಳಸುತ್ತಾರೆ!. 
ಇಲ್ಲಿನ ಗುರುದ್ವಾರ ಮತ್ತು ದೇವಿ ಮಂದಿರಗಳಲ್ಲಿ ಪ್ರಸಾದ ಬೇಯಿಸಲು ಇಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನೇ ಬಳಸುತ್ತಾರೆ! ಭಕ್ತರಿಗೆ ಉಣಬಡಿಸುವ 'ದಾಲ್', ಅನ್ನವನ್ನು ಈ ನೀರಿನಲ್ಲೆ ಬೇಯಿಸಿ ತಯಾರಿಸಲಾಗುತ್ತದೆ.
ಬಿಸಿ ನೀರಿನ ಸ್ಪಾ:- 
ಈ ಎರಡು ಬಿಸಿ ಬೀರಿನ ಬುಗ್ಗೆಯ ನೀರನ್ನು 80 ಅಡಿ ಉದ್ದ 20 ಅಡಿ ಅಗಲದ ಕೆರೆಗೆ ತಣ್ಣೀರಿನೊಂದಿಗೆ ಮಿಶ್ರಮಾಡಿ ಹಾಯಿಸಲಾಗುತ್ತದೆ. 1600 ಚದರ ಅಡಿ ವಿಸ್ತೀರ್ಣದ ಸುಮಾರು 7 ಅಡಿ ಆಳವಿರುವ ಕೊಳಕ್ಕೆ ಸ್ವಲ್ಪವೇ ಬಿಸಿ ನೀರನ್ನು ಹಾಯಿಸಿ ಭಕ್ತಾದಿಗಳು ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಷ್ಟು ದೊಡ್ಡ ಕೊಳದ ನೀರು ಕೈ ಕಾಲು ಹಾಕಲಾರದಷ್ಟು ಬಿಸಿ ಇರುತ್ತದೆ!. ವಾತಾವರಣದ ಉಷ್ಣತೆ 10 ಗಿಂತ ಕಡಿಮೆ ಬಂದರೂ ಈ ನೀರಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಷ್ಟು ಬಿಸಿ, ಇಂತಹ ನೀರಲ್ಲಿ ಸಂಜೆ ಒಂದು ಗಂಟೆ ಮನನಸೋ ಇಚ್ಛೆ ಸ್ನಾನ ಮಾಡಿ ಟ್ರಕ್ಕಿಂಗ್ ಮಾಡಿದ ಆಯಾಸವನ್ನು ಪರಿಹರಿಸಿಕೊಂಡೆವು. ಮಾಂಸಖಂಡಗಳಿಗೆ ಅದ್ಭುತವಾದ ಮಸಾಜ್ ಹೊಂದಿ ರಿಲ್ಯಾಕ್ಸ್ ಆದೆವು. 
ಇಲ್ಲಿಂದ ನಾವು 'ಆವಿ ಸ್ನಾನ' ಮಾಡಿಕೊಳ್ಳಲು ಇಲ್ಲಿನ ಗುಹೆಗಳಿಗೆ ತೆರಳಿದೆವು. ಇವೆಲ್ಲವು ಭೂಮಿ ಆಳದಿಂದ ಬರುವ ಬಿಸಿ ನೀರು ಇವುಗಳ ಸುತ್ತ ಹರಿದು ಬಿಸಿಯಾಗುವ ಗುಹೆಗಳು, ಸ್ವಾಭಾವಿಕವಾಗಿ ಬಿಸಿಯಾಗುವ ಇಲ್ಲಿ ಉತ್ತಮವಾದ ಮಸಾಜ್ ಮಾಡಿಕೊಂಡು 'ಆವಿ ಸ್ನಾನ' ಮಾಡಿದೆವು. ಮೈ ಮನಸ್ಸು ತಣಿದ ನಂತರ ನಮ್ಮ ಹೋಟೆಲ್ಗೆ ತೆರಳಿದೆವು. 
ಇತಿಹಾಸ:- ಮಣಿಕರಣ ಇತಿಹಾಸ ಬಹಳ ರೋಚಕವಾಗಿದೆ, ಹಿಂದುಗಳ ನಂಬಿಕೆಯಂತೆ ಒಮ್ಮೆ ಶಿವ ಪಾರ್ವತಿ ಈ ಪ್ರದೇಶದಲ್ಲಿ ಸುತ್ತಾಡುತ್ತಾ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ 1100 ವರ್ಷ ನೆಲೆಸಿದರು. ಒಮ್ಮೆ ಪಾರ್ವತಿ ಒಂದು ಕೊಳದ ಬಳಿ ಬರುವಾಗ ಅವಳ ಕಿವಿಯ ಮಣಿ ನೀರಿನಲ್ಲಿ ಬಿದ್ದು ಕಾಣೆಯಾಯಿತು. ಅದಕ್ಕಾಗಿ ಆಕೆ ಪರಿಪರಿಯಾಗಿ ಹುಡುಕಿದಳು. ಅವಳ ಕಿವಿ ಮಣಿಯನ್ನು ಹಿಂದೆ ಪಡೆಯಲು ಶಿವ ತಾಂಡವ ನೃತ್ಯ ಮಾಡಿದಾಗ ಮಣಿ ನುಂಗಿದ ಶೇಷನಾಗ ಅದನ್ನು ಮರಳಿಸಿದ. ಇಲ್ಲಿನ ಬುಗ್ಗೆಗಳಲ್ಲಿ 1905ರ ವರೆಗೂ 'ಚಿನ್ನ' ಸಿಗುತ್ತಿತ್ತು! ಎನ್ನುವುದು ಒಂದು ಸ್ಫೋಟಕ ಮಾಹಿತಿ. ಈ ವಿಷಯವನ್ನು ವಿಜ್ಞಾನಿಗಳೇ ವಿವರಿಸಬೇಕು. ಈ ಎಲ್ಲಾ ವಿಷಯಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕಾಗಿದೆ. 
ಸಿಖ್ ನಂಬಿಕೆಗಳ ಪ್ರಕಾರ ಸಿಖ್ಗುರು ಗುರುನಾನಕ್ 1574 ರಲ್ಲಿ ಇಲ್ಲಿಗೆ ಆಗಮಿಸಿದ ಸಂದರ್ಭ ಒಬ್ಬ ಶಿಷ್ಯನಿಗೆ ಬಹಳ ಹಸಿವೆಯುಂಟಾಗಿ, ಚಪಾತಿಯ ಹಿಟ್ಟಿಗಾಗಿ ಇಲ್ಲಿ ಹಲವರನ್ನು ಬೇಡಿ ತಂದ ಹಿಟ್ಟಿನಲ್ಲಿ ಚಪಾತಿ ಮಾಡಿದ. ಆದರೆ ಬೇಯಿಸಲು ಯಾವುದೇ ಪಾತ್ರೆಯಿಲ್ಲದೇ, ಇಲ್ಲಿನ ಕೆರೆಗಳಲ್ಲಿ ಮುಳಿಗಿಸಿದ ನಂತರ ದೇವರ ಪ್ರಾರ್ಥನೆ ಮಾಡಿದಾಗ ಆ ಕೆರೆಗಳಲ್ಲಿ ಬಿಸಿ ನೀರು ಬಂದು ಚಪಾತಿ ಬೆಂದು ಹೋಯಿತು ಎಂಬುದು ಸ್ಥಳ ಪುರಾಣವಿದೆ. 
ಇಲ್ಲಿ ಸುಂದರವಾದ ರಾಮ ಮಂದಿರ, ಶಿವ ಮಂದಿರ, ದೇವಿ ಮಂದಿರ ಮತ್ತು ಗುರುದ್ವಾರವಿದೆ. ದೇವಿ ಮಂದಿರದ ಸೂಕ್ಷ್ಮ ಕೆತ್ತನೆ ಬಹಳ ಸುಂದರವಾಗಿದೆ. ಇಲ್ಲಿನ ದೇವಾಲಯಗಳನ್ನು ಬೆರಗುಗಣ್ಣಿನಿಂದ ನೋಡಿದೆವು. 
ಹತ್ತಿರದ ಸ್ಥಳಗಳು:- ಇಲ್ಲಿ ಸುತ್ತಮುತ್ತ ಹಲವಾರು ಸುಂದರ ಸ್ಥಳಗಳಿವೆ ಬಿಜಲಿ, ಮಹಾದೇವ, ಮಲಾನ, ಜಾನಾಪಾಲ್ಸ, ಮನಾಲಿ, ಅಜರ್ುನ್ ಗುಫಾ, ಹಿಂಡಿಬಾ ದೇವಸ್ಥಾನ ಮುಂತಾದ ಸುಂದರ ಸ್ಥಳಗಳಿವೆ. ಬಿಯಾಸ್ ನದಿಯಲ್ಲಿ ರಾಫ್ಟಿಂಗ್ ಮಾಡಲು ಮರೆಯದಿರಿ. ಅದು ನಿಮಗೆ ವಿಶಿಷ್ಟಾನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. 
ವಿಶಿಷ್ಟ ಹಣ್ಣುಗಳು:- ಹಿಮಾಲಯದಲ್ಲಿ ಹಲವು ವಿಶಿಷ್ಟ ಜಾತಿಯ ಹಣ್ಣುಗಳಿವೆ, ಎಲ್ಲಾ  ಜಾತಿಯ ಹಣ್ಣುಗಳ ರುಚಿ ನೋಡಿದೆವು. ಅತಿ ಮುಖ್ಯವಾದವು ಚೆರಿ, ಎಗ್ರೋಟ್, ಮೆದುಳಿನಾಕಾರದ ವಾಲ್ನಟ್ ಧಾರಾಳವಾಗಿ ಸಿಗುತ್ತದೆ. ಇನ್ನೂ ಹೆಸರು ಕೇಳದ ಕಂಡರಿಯದ ಹಲವು ಹಣ್ಣುಗಳ ರುಚಿ ನೋಡಿದೆವು, ವಾಲ್ನಟ್ ಹಣ್ಣು ಮೆದುಳಿಗೆ ಬಹಳ ಒಳ್ಳೆಯದೆಂದು ಯಾರೋ ಹೇಳಿದರು. ನನ್ನ ಸ್ನೇಹಿತ ಸುಮಾರು 2 ಕೆ.ಜಿಯಷ್ಟು ಹಣ್ಣು ಕೊಂಡು ಬೆಳಿಗ್ಗೆ ಸಂಜೆ ಅದನ್ನೇ ತಿಂದ.
ಎಲ್ಲಿಂದ ಎಸ್ಟೆಷ್ಟು :- ಇಲ್ಲಿಗೆ ಬರಬೇಕಾದರೆ ಬುಂತರ್ ವಿಮಾನ ನಿಲ್ದಾಣದಿಂದ ಯಾ ದೆಹಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿ ಅಲ್ಲಿಂದ ಬುಂತರ್ ಅಲ್ಲಿಂದ ಮಣಿಕರಣ್ ತಲುಪಬಹುದು. ವಿಮಾನದಲ್ಲಿ ಹೋಗಿಬರುವ ಖಚರ್ು ಸುಮಾರು 14000 ಸಾವಿರ. ರೈಲಿನಲ್ಲಾದರೆ 9000 ಸಾವಿರದಲ್ಲಿ ನೋಡಿ ಬರಬಹುದು. 











ಶಾಪಿಂಗ್:- ಇಲ್ಲಿ ಶಾಪಿಂಗ್ ಮಾಡಲು ಧಾರಾಳ ಅವಕಾಶವಿದೆ ಕುಲ್ಲು ಶಾಲುಗಳು ಬಹಳ ಪ್ರಸಿದ್ಧಿ ಪಡೆದವುಗಳು ಇಲ್ಲಿ ಸಾಕಷ್ಟು ಶಾಲು, ಸೀರೆ, ಚೂಡಿದಾರ್  ಖರೀದಿಸಿದೆವು. ಹುಡುಗರು ತೊಡುವ ಯಾವುದೇ ವಸ್ತ್ರವಿಲ್ಲದೆ ಇದ್ದುದ್ದು ನನಗೆ ಮತ್ತು ಗೆಳೆಯ ನಾಗರಾಜ್ಗೆ ಬಹಳ ಬೇಸರವನ್ಮ್ನಂಟುಮಾಡಿತು. ನಮ್ಮ ಮುಂದಿನ ತಾಣವಾದ ಮನಾಲಿಗೆ ತೆರಳಲನುವಾದೆವು. 
ನಿರ್ಮಲವಾದ ಪಾರ್ವತಿ ತಾಯಿಯ ನಿಶ್ಚಿಂತ ಮಡಿಲಲ್ಲಿ ಮಣಿಕರಣವೆಂಬ ಕಂದ ಮಲಗಿದ್ದ,

ವಿಜ್ಞಾನ ಮೇಳ


   ಹೊಸತೇನ್ನೋ ಸಾಧಿಸಲು ಹಳೆಯ ಪ್ರತಿಮೆಯನ್ನು ದಾಟಿ ನಡೆಯಬೇಕು. ಅದರ ಅರಿವಿರಬೇಕೇ ಹೊರತು ಅದರಲ್ಲೇ ತೊಳಲಾಡಬಾರದು. ಹೇಗೆ ಚಿಟ್ಟೆಯೊಂದು ಸಣ್ಣ ಕಂಬಳಿ ಹುಳವೊಂದು ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು ಹೊಸ ಬಣ್ಣದ ಚಿಟ್ಟೆಯಾಗಿ ರೂಪುಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕ. ಅದು ತನ್ನತನವ ಕಳೆದುಕೊಳ್ಳದೆ ಹೊಸತಾಗುವುದು ಸಾಧ್ಯವಿಲ್ಲ. ಅಲ್ಲವೇ?  ನನ್ನದೊಂದು ಕವನ ಈ ವಿಷಯವಾಗಿ.

ಅಲಂಕಾರಗೊಂಡ ಶಾಲೆ. 




ಕನಸೆಂಬ ಚಿಟ್ಟೆ
ಕನಸೆಂಬ ಚಿಟ್ಟೆ
ಹಾರುವುದದು ಎಂದು
ಕಳಚಿಕೊಂಡರೆ ಅದು
ತನ್ನ ಹಳೆಯ ಬಂದು
ಹಾರುವುದದು ಅಂದು.


Add caption
ತನ್ನ ಗೂಡೊಳಗೆ ಉಳಿಯದೆ ನಿರಂತರ ಪ್ರಯತ್ನದಿಂದ ಚಿಟ್ಟೆಯಾಗಿ ಹೊರ ಹೊಮ್ಮವುದು.  ವಿಧ್ಯಾಥರ್ಿಗಳು ತಮ್ಮ ಜೀವನದಲ್ಲಿ ಎದುರಾದ ತೊಡರುಗಳನ್ನು ಲೆಕ್ಕಿಸದೇ, ಧ್ಯಾನಸ್ಥರಂತೆ ಕೂತು ನಿಷ್ಠೆಯಿಂದ ಕಲಿತರೆ ಯಶಸ್ಸು ನಿಮ್ಮದೇ.
ಸೌರವ್ಯೂಹದ ಮಾದರಿ. 

ಉದ್ಘಾಟನೆ ಮಾಡುತ್ತಿರುವ ಗಣೇಶ್ ಶೆಟ್ಟಿಗಾರ್
ನಿಮ್ಮ ಪರಿಸರದ ಯಾವುದೇ ತೊಂದರೆಗಳನ್ನು ಉಪಾಯವಾಗಿ ನಿಶ್ಚಿಂತೆಯಿಂದ ನಿಭಾಯಿಸಬೇಕು. ಕೆಲವನ್ನು ನಮ್ಮಿಂದ ಈ ಸನ್ನಿವೇಶದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಅದರ ಕುರಿತು ಯೋಚಿಸದೇ ಪುಸ್ತಕದೆಡೆಗೆ ಗಮನ ಕೊಡಿ,  ಗೆಲುವಿಗೆ ನೀವು ಅರ್ಹರು.
ಈ ದಿಶೆಯಲ್ಲಿ ನಮ್ಮ ಪ್ರಯತ್ನ ವಿಜ್ಞಾನ ಮೇಳ.... ಅದರ ಕೆಲವು ಝಲಕ್ ನಿಮಗಾಗಿ...

ಸಬ್ ಮೆರಿನ್

ಗಾಳಿಯಿಂದ ವಿದ್ಯುತ್

ಮ್ಯಾಜಿಕ್ ಕಾರಂಜಿ


ಬಸರ್ ಅಲಾರಾಮ್

ಜ್ವಾಲಾಮುಖಿ. 

ಗ್ರಹಣದ ಮಾದರಿ

ಆಯತದಿಂದ ತ್ರಿಭುಜ ಟಿ ಜೋಡಣೆ

ಸಮುದ್ರ ಜೀವಿಗಳು

ಸಮುದ್ರ ಜೀವಿಗಳು

ತಿರಿ

ಸ್ವಾಗತ ಕಮಾನು

ವಿಜ್ಞಾನ ಮೇಳ ವೀಕ್ಷಿಸುತ್ತಿರುವ ಪತ್ರಕರ್ತ ಜಯಶೇಖರ. 

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...