Monday, March 30, 2020

ಜಾತ್ರೆ ಎಂಬ ನವಿರಾದ ನವಿಲುಗರಿ.



ಜಾತ್ರೆ ಎಂದರೆ ಬಿಡುವು. ಜಾತ್ರೆ ಎಂದರೆ ಸೇರುವಿಕೆ. ಜಾತ್ರೆ ಎಂದರೆ ಜಂಗುಳಿ. ಮಕ್ಕಳಿಗೆ ಜಾತ್ರೆ ಎಂದರೆ ಉತ್ಸಾಹ, ಆಟಿಕೆ ಅಂಗಡಿಗಳು. ಜಾತ್ರೆ ಎಂದರೆ ಏಕತಾನತೆ ಮುರಿವ ಸಂಸ್ಕ್ರತಿಯ ಬಿಂದುಗಳಾಗಿ ನನಗೆ ಕಾಣುತ್ತೆ.
ಈ ಜಾತ್ರೆ ಅಜ್ಜಿಯೂರಾದ ಬೈಂದೂರ ನೆನಪು ಹೊತ್ತು ತರುವುದು. ಜೊತೆ ಜೊತೆಗೆ ಮಾವು ಕದ್ದ, ಚಿಕ್ಕವಯಸ್ಸಿನಲ್ಲೇ ಎಷ್ಟೋ ಕಿಲೋ ಮೀಟರ್ ನಡೆದ, ನವಿರಾದ ಹೆಸರ ಪಾಯಸ ಹೊಡೆದ, ತಮ್ಮನನ್ನು ಗೋಳು ಹೊಯ್ದು ಕೊಂಡ ನೆನಪುಗಳ ತಕದಿಮಿತ.




ಆಗೆಲ್ಲಾ ನಮಗೆ ಜಾತ್ರೆಗಾಗಿ ನೀಡುವ ಹಣ ಅಷ್ಟಕ್ಕಷ್ಟೆ. ಸ್ವಾಭಿಮಾನದಿಂದಾಗಿ ಯಾರಲ್ಲೂ ಬೇಡುವಂತಿರಲಿಲ್ಲ.  ಜಾತ್ರೆಗಾಗಿ ಕಾಸು ಕೂಡಿಸುವ ಕನಸು. ತರೆವಾರಿ ಅಂಗಡಿಗಳ, ಒಂದು ಆಟಿಕೆ ಕೊಳ್ಳುವ ತವಕ. ಹೇಗೆಂಬ ಚಿಂತೆ? ಶಾಲೆಗೆ ಹೋಗಲು ನೀಡುವ ಹಣವನ್ನು ನೆಡದೇ ಹೋಗಿ ಉಳಿಸುವುದು. ಅಡುಗೆಗೆ ಸಹಾಯಕರಾಗಿ ಹೋಗುವುದು. ಬಡಿಸಲು ಹೋಗುವುದು, ನಮ್ಮ ಕೆಲಸವಾಗಿತ್ತು.

ನಾವು ಚಿಕ್ಕವರಿದ್ದಾಗ ನಮ್ಮಜ್ಜಿ ಮನೆಯ ಹತ್ತಿರದಲ್ಲೇ ಅಜ್ಜಿಯ ಅತ್ತೆಯೊಬ್ಬರಿದ್ದರು. ಶಿಕ್ಷಕಿಯಾಗಿ ನಿವೃತ್ತರಾದವರು. ಅವರಿಗೆ ನಡೆಯಲಾಗುತ್ತಿರಲಿಲ್ಲ. ದೊಡ್ಡ ಮನೆ, ದೊಡ್ಡ ಜಾಗ, ನಿವೃತ್ತಿ ವೇತನ ಎಲ್ಲವೂ ಇತ್ತು. ನೋಡಿಕೊಳ್ಳಲು ಮಾತ್ರ ಯಾರಿರಲಿಲ್ಲ. ಗಂಡ ಯಾವಾಗಲೋ ತೀರಿ ಹೋಗಿದ್ದರು. ಮಕ್ಕಳಿರಲಿಲ್ಲ. ನಮ್ಮಜ್ಜಿಯನ್ನು ಗೋಳು ಹೊಯ್ದುಕೊಂಡ ಅವರು ಆಗ ಅಜ್ಜಿಯನ್ನೇ ಅವಲಂಬಿಸಿದ್ದರು. ರಜೆ ಬಂದಿತೆಂದರೆ ಅಜ್ಜಿಗೆ ಅವರ ಸೇವೆಯಿಂದ ಮುಕ್ತಿ. ನಮ್ಮ ಸೇವೆ ಶುರು. ದಿನಾಲೂ ಬೆಳಗ್ಗೆ ಚಹ, ಮಧ್ಯಾಹ್ನ ಊಟ, ಸಂಜೆಗೆ ಚಹ ಇಷ್ಟನ್ನು ಹೋಟೆಲ್ಗೆ ಹೋಗಿ ತಂದು ಕೊಡಬೇಕಿತ್ತು. ಒಂದಿನಕ್ಕೆ ನಮಗೆ, ಅಂದರೆ ನನ್ನಿಬ್ಬರು ತಮ್ಮಂದಿರು ಶ್ರೀಕಾಂತ, ಶ್ರೀಪತಿಗೆ ಸೇರಿ ತಲಾ ನಾಲ್ಕಾಣೆ ಕೊಡುತ್ತಿದ್ದರು. ಆಟದ ನಡುವೆಯೂ ಆಟಿಕೆ ಆಸೆಗೆ ದಿನಾಲೂ ಚಹ ಸೇವೆಗೆ ಹೋಗುತ್ತಿದ್ದೆವು. ಸೇವೆ ಜೊತೆಗೊದಿಷ್ಟು ಹಣ ಸಂಪಾದನೆಯೂ ಆಗುತ್ತಿತ್ತು. ಆಟಿಕೆ ಕೊಂಡು ವಿಶಾಲ ಹರವಿನ ಅಜ್ಜಿ ಮನೆಯಲ್ಲಿ ಆಡುವ ಸಂತೋಷವೇ ಬೇರೆ. ಎಷ್ಟೋ ವರ್ಷ ಅವರಿಗೆ ಚಹ ಸೇವೆ ಮಾಡಿದೆವು. ಜಾತ್ರೆ ಮುಗಿದ ಮೇಲೆ ನಾವು ಮೂವರೂ ಹೊರಡುತ್ತಿದ್ದೆವು. ಕಣ್ಣೀರಾಗಿ ಅಮ್ಮಮ್ಮ ನಮ್ಮನ್ನು ಬೀಳ್ಕೊಡುತ್ತಿದ್ದರು. ಒಲ್ಲದ ಮನಸಿನಿಂದ ನಮಗೆ ಮಾವ, ಅತ್ತೆಯೂ ಪ್ರೀತಿಯ ವಿದಾಯ ಕೋರುತ್ತಿದ್ದರು. ಜಾತ್ರೆ ನೋಡಿ ಆಟಿಕೆಯೊಂದಿಗೆ ಮರಳುತ್ತಿದ್ದೆವು. ಜಾತ್ರೆ ಎಂದರೆ ಆಟಿಕೆ, ಅಮ್ಮಮ್ಮ ಹಾಗೂ ಅವರ ಅತ್ತಿಗೆ ನೆನಪಾಗುತ್ತಾರೆ.

ಜಾತ್ರೆ ಎಂದರೆ ಈಗ ಆಗಿನಷ್ಟು ಕುತೂಹಲ ಉಳಿದಿಲ್ಲ. ಬಹುಶಃ ನಾವು ದೊಡ್ಡವರಾದೆವೆಂದು ಕಾಣುತ್ತೆ. ದ ಲಾ ಆಪ್ ಮಾಜರ್ಿನಲ್ ಯುಟಿಲಿಟಿ ಜಾತ್ರೆಗೂ ಅನ್ವಯಿಸುತ್ತೆ ಅನಿಸಲಿಕ್ಕೆ ಶುರುವಾಗಿದೆ. ಕಳೆ ಕಳೆದುಕೊಂಡ ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಬದುಕಿನ ಸಂತೆಯಲ್ಲಿ ಕಳೆದುಹೋಗಿದ್ದಾರೆ!
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,
ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ-576229.

Thursday, March 26, 2020

ಅಳಿಲ ಧ್ಯಾನ!



ಅಳಿಲ ಮರಿಯೇ
ಅಳಿಲ ಮರಿಯೇ
ಎಲ್ಲಿರುವೆ?
ತುಪಾಕಿಯ ಮೇಲೆ
ಕುಂತಿರುವೆ.
ಅಯ್ಯೋ ರಾಮ
ಏನು ಕೆಲಸ
ಅಲ್ಲಿ ನಿನಗೆ?
ಬೇಗ ಸೇರೆ 
ಮನೆಗೆ.
'ತುಪಾಕಿ ಮಾಮ
ಬಂದರೆ ಕೈಯ
ಮುಗಿವೆ
ಹೊಡೆಯದಿರು ಗುಂಡು
ಎನುವೆ.
ನಾಕು ಜನರ ಪ್ರಾಣ
ಉಳಿಸಿ ಬರುವೆ.

ಶ್ರೀಧರ್ ಎಸ್. ಸಿದ್ದಾಪುರ. ಮಾರ್ಚ್ ೨೨.
#ಪುರುಸೊತ್ತು_2020.

#ಮಕ್ಕಳ_ಪದ್ಯಗಳು.

Tuesday, March 24, 2020

'ಅಂತರಂಗ'ದಲ್ಲಿ ಅನಂತ ಪಯಣ...



ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.

ಶ್ರೀಧರ. ಎಸ್. ಸಿದ್ದಾಪುರ

Wednesday, March 11, 2020

ಬಾಹು ಬಲಿಗೆ ಹೊಯಿಗೆ ಮಜ್ಜನ!



ಏನಿವತ್ತು ಏನೋ ಹೇಳುತ್ತಾನೆಂದು ಹೆದರ ಬೇಡಿ. ನನ್ನ ಬಾಲ್ಯದ ನೆನಪುಗಳನ್ನು ನಿಮ್ಮ ಮುಂದೆ ಹರವಿ ಕುಳಿತಿರುವೆ ಅಷ್ಟೇ.
ಬಾಲ್ಯದ ನೆನಪು ಮಾಸದ ಹೊಂಬಿಸಿಲು. ಅರಳುವ ಕುಡಿ ಮೊಗ್ಗು. ನವಿರಾದ ನವಿಲು ಗರಿ. ಬಾಲ್ಯ ಕಳೆಗಟ್ಟಿದ್ದು ನನ್ನಮ್ಮನ ತವರೂರು ಬೈಂದೂರೆಂಬ ಕಡಲ ತೀರದಲ್ಲಿ. ನನ್ನ ನೆನಪುಗಳಲ್ಲಿ ಬೆಚ್ಚಗಿರುವ ಬೈಂದೂರು. ರಜೆ ಬಂದರೆ ಚೀಲ ಹಿಡಿದು ಬೈಂದೂರಿಗೆ ಪರಾರಿ. ಹಪ್ಪಳ, ಸಂಡಿಗೆಗಳ ಸುವರ್ಣ ಕಾಲ. ಬಾಲ್ಯದ ನೆನಪಿನ ರತ್ನ ನಿಮ್ಮ ಮುಂದೆ.
ಊರ ಜಾತ್ರೆಯ ಸಮಯ. ನನ್ನ ಚಿಕ್ಕಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಬೈಂದೂರಿಗೆ ಬಂದಿದ್ದರು. ನಾನು ಮತ್ತು ಅಕ್ಕನೂ ಹೋಗಿದ್ದೆವು. ಮನಸೋ ಇಚ್ಚೆ ಆಡುತ್ತಿದ್ದೆವು. ನಮ್ಮೊಂದಿಗೆ ಶ್ರೀಕಾಂತ, ಅವನ ತಮ್ಮ ಶ್ರೀಪತಿಯೂ ಆಡುತ್ತಿದ್ದ. ಏನೋ ಕಟ್ಟಿಸಬೇಕೆಂದು ಮಾವ ಒಂದಿಷ್ಟು ಹೊಯಿಗೆ ತಂದು ರಾಶಿ ಹಾಕಿದ್ದ. ಎಲ್ಲಿತ್ತೊ ಸಣ್ಣ ತುಂಟತನ, ಜಾಗೃತವಾಯಿತು. ತಮ್ಮನನ್ನು ಒಂದು ಪೀಠದಲ್ಲಿ ಕೂರಿಸಿದೆವು. ಒಂದಿಷ್ಟು ಹೊಯಿಗೆಯನ್ನು ಅವನ ತಲೆಗೆ ಹೊಯ್ದೆವು. ಆತನು ತುಟಿ ಪಿಟಕ್ ಎನ್ನದೇ ಕೂತಿದ್ದು ನೋಡಿ ಮತ್ತೆರಡು ಡಬ್ಬ ಹೊಯಿಗೆಯನ್ನು  ಅವನ ತಲೆಗೆ ಸುರಿದೆವು. ಅವನಿಗೆ ಹೊಯಿಗೆ ಮಜ್ಜನ. ಆತ ಬಾಹುಬಲಿಯಂತೆ ಅಲುಗಾಡದೇ ಕೂತ! ನಡು ನಡುವೆ ದೊಡ್ಡ ತಮ್ಮನ ಮಂತ್ರ ಘೋಷ. ನಾವು ಮಜ್ಜನ ನಡೆಸಿದ್ದೇ ನಡೆಸಿದ್ದು. ಆತನನ್ನು ಕೂರಿಸಿ ಋಷಿ ಮಾಡಿದೆವು. ಒಂದೆರಡು ದಾಸವಾಳವನ್ನು ಅವನ ಕಿವಿಗಿಟ್ಟೆವು. ಆತ ಕಲ್ಲಿನ ಮೂತರ್ಿಯಂತೆ ಅಲ್ಲಾಡದೇ ಕೂತಿದ್ದ! ನಮ್ಮ ನಡುವಿನಲ್ಲಾದ ಕಾಂಟ್ರಾಕ್ಟ್ ಏನೆಂದು ಈಗ ನೆನಪಿಲ್ಲ. ಆತನೇಕೆ ಸುಮ್ಮನೆ ಕೂತಿದ್ದನೆಂಬುದೂ ಗೊತ್ತಿಲ್ಲ!
ಹಪ್ಪಳದ ಕೆಲಸದಲ್ಲಿ ನಿರತರಾಗಿದ್ದ ಚಿಕ್ಕಮ್ಮ ನಾವಾಡುವಲ್ಲಿಗೆ ಬಂದಳು. ತಮ್ಮನಿಗಾದ ಗತಿ ನೋಡಿ ಕಣ್ಣೀರಾದಳು ನೋಡಿ. ಅಮ್ಮನಿಗೆ ನೋಡಲಾಗಲಿಲ್ಲ. ಸಿಟ್ಟು ನೆತ್ತಿಗೇರಿತು. ಅಮ್ಮ ಸಾಕ್ಷಾತ್ ರಣಚಂಡಿಯಾದಳು. ಕಟ್ಟಿಗೆ ತುಂಡನೆತ್ತಿಕೊಂಡು ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದಳು. ಒಂದು ಪೆಟ್ಟು ಸಾಕಿತ್ತು ನನ್ನ ಕೈಕಾಲು ಊನ ಮಾಡಲು, ಅಷ್ಟು ದೊಡ್ಡದಿತ್ತು ಅದು. ಉಪ್ಪರಿಗೆಯಲ್ಲಿ ತಲೆ ಮರೆಸಿಕೊಂಡೆ. ಉಪ್ಪರಿಗೆಯಲ್ಲೊಂದು ಅಡ್ಡ ದಂಡೆ ಇತ್ತು. ಅಲ್ಲಿ ಉಸಿರಾಡದೇ ಕೂತಿದ್ದೆ. ಅಮ್ಮ ನನ್ನ ಅರಸುತ್ತಾ ಸಿಟ್ಟಿನಲ್ಲಿ ಬುಸುಗುಟ್ಟುತ್ತಾ ಉದ್ದನೇ ಹಜಾರದಂತಿದ್ದ ಉಪ್ಪರಿಗೆಯಿಡಿ ಇಲಿಗಾಗಿ ಅರಸುವ ಬೆಕ್ಕಿನಂತೆ ಹುಡುಕ ತೊಡಗಿದಳು. ಅಡ್ಡ ದಂಡೆಯಿಂದ ಒಮ್ಮೆಲೇ ಸದ್ದಾಗದಂತೆ ದುಮುಕಿ ಪೇರಿ ಕಿತ್ತೆ ನೋಡಿ, ಮತ್ತೆ ಪ್ರತ್ಯಕ್ಷನಾಗಿದ್ದು ಊಟದ ಸಮಯಕ್ಕೇ! ನಾ ಓಡಿದ್ದು ಅಮ್ಮನಿಗೆ ಗೊತ್ತಾಗಲೇ ಇಲ್ಲ. ಇಲಿ ಹುಡುಕುವ ಬೆಕ್ಕಿನಂತೆ ಅಲ್ಲೇ ಹುಡುಕುತ್ತಾ ಸುಸ್ತಾದಳು. ಮುಂದೇ ಹೇಗೆ ಬಚಾವಾದೆನೆಂದು ಈಗ ನೆನಪಿಲ್ಲ. ಎಂದಾದರೂ ನಾವು ಮೂವರು ಪುರುಸೊತ್ತಾದಾಗ ಒಟ್ಟಾಗಿ ನೆನಪನ್ನು ಕೆದಕಿ  ಆಗಾಗ ಖುಷಿ ಪಡುತ್ತೇವೆ. 'ರಣಚಂಡಿ' ಅಮ್ಮನೆಂದು ಈಗಲೂ ಗೇಲಿ ಮಾಡುತ್ತೇನೆ. ತುಂಟ ಮಗನೆಂದು ಆಗ ಅವಳೆನ್ನ ಕಿವಿ ಹಿಂಡುತ್ತಾಳೆ!
ಕಳೆ ಕಳೆದುಕೊಂಡ  ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಕೆಲಸದಲ್ಲಿ ಕಳೆದುಹೋಗಿದ್ದಾರೆ!
ಮತ್ತೆ ಬಾಲ್ಯದಲ್ಲಿ ಮೀಯುವಾಸೆ. ಈ ಜಗವು ಪುರುಸೊತ್ತು ಕೊಟ್ಟರೆ. ಪುರುಸೊತ್ತಾದಗ ಬಾಲ್ಯದ ಕತೆಗಳನ್ನೆಲ್ಲಾ ನಿಮ್ಮ ಮುಂದೆ ಹರವಿ ಕೂರಬೇಕು. ಸಿಗುವಿರಾ ಇನ್ನೊಮ್ಮೆ ವಿರಾಮದಲ್ಲಿ?


ಶ್ರೀಧರ್. ಎಸ್. ಸಿದ್ದಾಪುರ.

Saturday, February 22, 2020

ಪ್ರಸ್ಥದ ಕೋಣೆಯಲ್ಲೊಂದು ಕೊಲೆ.


oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ.   

ಯಾವುದೋ ಪತ್ತೆದಾರಿ ಕಾದಂಬರಿಯ ಕುರಿತು  ಹೇಳುತ್ತಾನೆಂದು ಸೀಟಿನ ತುದಿಗೆ ಬಂದಿರಾ? ವಿಷಯ ಆಸಕ್ತಿದಾಯಕವಾಗಿದೆ. ಸ್ವಲ್ಪ ಇರಿ.
ಪ್ರತೀ ಜೀವಿಯು ಈ ಜಗತ್ತಿನಲ್ಲಿ ಭಿನ್ನ. ಅವುಗಳಿಗೆ ಪ್ರಕೃತಿ ನೀಡಿದ ಸಂಸ್ಕಾರ ಬೇರೆ ಬೇರೆ. ಹಾಗಾಗಿ ಅವು ಒಂದರಂತೆ ಮೊತ್ತೊಂದಿಲ್ಲ. ಪರಿಸರದ ಒತ್ತಡಗಳು ಅವನ್ನು ವಿಭಿನ್ನವಾಗಿ ರೂಪಿಸಿವೆ. ನಾನು ಹೇಳುವ ಕತೆಯೂ ಅಂತಹುದೇ ಒಂದು ತುಣುಕು.
       
ಕ್ರಾಬ್ ಜೇಡವನ್ನು ಹಿಡಿದಿರುವ ಮತ್ತೊಂದು ಜೇಡ. 
ಜೀವಿಗಳು ತಮ್ಮ ಸಂತಾನವನ್ನು ಮುಂದುವರಿಸುವ ಸಲುವಾಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಸಹಜವಾದುದು. ಸಂತಾನೋತ್ಪತ್ತಿಯಾಗಲು ಗಂಡು ಹೆಣ್ಣನ್ನು ಕೂಡ ಬೇಡವೇ?
ಹೀಗಿರುವ ಪ್ರಸ್ಥದ ಕೋಣೆಯಲ್ಲಿಯೇ ವರನಿಗೆ ಮರಣ ಬಂದರೆ ಹೇಗೆ? ಪ್ರಸ್ತದ ಮನೆಯಲ್ಲಿಯೇ ಒಂದು ಕೊಲೆ ಅದೂ ಮದುಮಗನದ್ದು! ಕೊಲೆಗಾರ ಯಾರೆಂದಿರಾ? ಬೇರಾರೂ ಅಲ್ಲ, ಒಲಿಸಿಕೊಂಡವಳು! ಅಚ್ಚರಿಯಾಯಿತೆ? ಓಡಿದಾಗಲೋ, ಕೆಲಸ ಮಾಡಿದಾಗ ಹಸಿವಾಗೋದು ಸಹಜ. ಆದರೆ ಜೇಡಗಳಿವೆಯಲ್ಲ ಅವುಗಳಿಗೆ ಪ್ರಸ್ಥದ ಕೊನೆಗೆ ಹೆಣ್ಣಿಗೆ ವಿಪರೀತ ಹಸಿವು! ಹಸಿವು ಆರಲು ಕೊಲೆ ಮಾಡಲು ಹೇಸುವುದಿಲ್ಲ. ಹೆಣ್ಣು ಗಂಡಿನ ಚರಮಗೀತೆ ಬರೆಯುವವು. ಗಂಡು ಜಾಣನಾದರೆ ಉಪಾಯವಾಗಿ ತಪ್ಪಿಸಿಕೊಳ್ಳುವುದು. ಆದರೆ ಕೆಲವೊಮ್ಮೆ ಸಿಕ್ಕಿ ಬೀಳುವುದು ಮಾಮೂಲು. ಹೆಣ್ಣು ಸ್ವಲ್ಪ ಯಾಮಾರಿದರೂ ಗಂಡು ತಪ್ಪಿಸಿಕೊಳ್ಳುವುದು.
ಇಲ್ಲಿರುವ oxyopes shweta   ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. ಇದಕ್ಕೆ cannibalism ಎನ್ನುವರು. ಅದು ಸಂಗದ ತರುವಾಯ. ಅಚ್ಚರಿಯಾಯಿತೇ? ಇನ್ನೆಷ್ಟು ಅಚ್ಚರಿಗಳು ಪ್ರಕೃತಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವಳೋ ಗೊತ್ತಿಲ್ಲ. ಗುಟ್ಟು ರಟ್ಟಾದಂದು ನಿಮಗೆ ತಿಳಿಸುವೆ. ಅಲ್ಲಿವರೆಗೆ ನಮಸ್ಕಾರ...
 ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,



      

Friday, January 24, 2020

ಚಿನಕುರುಳಿ ಚೇಳಿನ ಮರಿ!

"ಲೋ ಶ್ರೀಧರಾ ಏನು ಮಾಡ್ತಿದ್ದಿಯೋ, ಬೇಗ ಬಾ" ಅಮ್ಮನ ಆರ್ತನಾದ. "ಈ ಹಾಳು ಪುಸ್ತಕದಲ್ಲಿ ಮುಳುಗಿದರೆ ಲೋಕ ಮುಳುಗಿದರೂ ತಿಳಿಯಲ್ಲ" ಎಂದು ಒಂದೇ ಸಮನೆ ವಟ ವಟಿಸುತ್ತಲೇ ಇದ್ದಳು.
ಚೇಳಿನಂತಿರುವ  ಊರ್ಣ ನಾಭ!

ಎದ್ದೆನೋ ಬಿದ್ದೆನೊ ಎಂದು ಅಮ್ಮನಿದ್ದಲ್ಲಿಗೆ ಓಡಿದೆ. "ಚೇಳಿನ ಮರಿ ಮರಾಯ ಕಚ್ಚಲಿಕ್ಕೆ ಬರುತ್ತೆ ನೋಡು" ಎಂದು ಕಥೆ ಹೇಳಲು ಶುರುವಿಟ್ಟಳು. ನೋಡಿದೆ. ಪುಟಾಣಿ ಚೇಳಿದ್ದರೆ ಅದರ ಅಮ್ಮನೂ ಇರಬೇಕಲ್ಲ ಎಂದು ಯೋಚಿಸುತ್ತಾ ಬಗ್ಗಿ ನೋಡಿದೆ. ಪುಸ್ತಕದ ಮೇಲೆ ಕುಳಿತು ತಬ್ಬಿಕೊಳ್ಳುವಂತೆ ತನ್ನೆರಡೂ ಬಾಹುಗಳನ್ನು ಚಾಚಿತು. ಅಮ್ಮ ಮತ್ತೆ ಚೀರಿದಳು. 'ನಿಂದೇನೋ ಪ್ರಯೋಗ ಅದರ ಮೇಲೆ, ಕಡಿಯುತ್ತೆ ನೋಡು ಹೊರಗೆ ಬಿಟ್ಟು ಬಾ ಮರಾಯ' ಎಂದು ಬೇಡಿಕೊಂಡಳು. ನನಗೇನೋ ಸಂದೇಹ. ಚೇಳಿನ ಮರಿ ಇರಲಿಕ್ಕಿಲ್ಲವೆಂದು. 'ಅಮ್ಮಾ ಇದು ಚೇಳಿನ ಮರಿ ಅಲ್ಲಾ, ಜೇಡವಿರಬೇಕು' ಎಂದೆ. 'ನಿನ್ನ ತಲೆ' ಸರಿಯಾಗಿ ನೋಡು ದೊಡ್ಡ ಕೊಂಬಿದೆ. ಆದರೂ ಪರೀಕ್ಷಿಸುವ ದೃಷ್ಟಿಯಿಂದ ನಿಧಾನಕ್ಕೆ ಪುಸ್ತಕವನ್ನೆತ್ತಿ ಮನೆಯ ಹೊರಗೋಡಿದೆ. ಅದನ್ನು ಕೆಸುವಿನ ಗಿಡದ ಮೇಲೆ ಬಿಟ್ಟೆ. 'ಚೇಳಿನ ಮರಿಯೇ ಅದು' ಎಂದು ವಟ ವಟಿಸುತ್ತಲೇ ಇದ್ದಳು. ಮನೆಯೊಳಗೋಡಿ ಕ್ಯಾಮಾರ ಹಿಡಿದು ಬಂದೆ. ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಬೆಳಕನ್ನು ಅವನ ಮೇಲೆ ಚಿಮುಕಿಸಿದೆ. ಚಿತ್ರವನ್ನು ಕೂಡಲೇ ಕಂಪ್ಯೂಟರಿಗೆ ವರ್ಗಾಯಿಸಿ ನೋಡಿದೆ. ಗುರುತು ಹತ್ತಿತ್ತು. ಇವನಾ ಗೊತ್ತುಂಟು.      'ಇಂಡೊಪಡಿಲಾ'    ಪ್ರಬೆಧಕ್ಕೆ ಸೇರಿದ ಪೋರ, ಮರಿ ವೀರ. ಯಾರ ಕೈಗೂ ಸಿಗದಂತೆ ವೇಷ ಮರೆಸಿ ಚೇಳಿನಂತೆ ತೋರಿಸಿಕೊಳ್ಳುತ್ತಾ ಓಡಾಡುತ್ತಾನೆ! ನೋಡಿದವರೂ ಮೋಸ ಹೋಗಲೇ ಬೇಕು ಹಾಗಿದ್ದಾನೆ ಪುಣ್ಯಾತ್ಮ. ಹಾಗೇ ಅಮ್ಮನೂ ಮೋಸ ಹೋಗಿದ್ದಾಳೆ. ಇವನು ಅವನ್ನವೆಂದರೂ ಕೇಳುತ್ತಿಲ್ಲ. ಕೊನೆಗೆ ಅಂತಜರ್ಾಲದಿಂದ ಒಂದೆರಡು ಚಿತ್ರವಿಳಿಸಿ ತೋರಿಸಿದೆ. ಕೊನೆಗೂ ಅವಳಿಗೆ ಆತ್ಮ ಸಾಕ್ಷತ್ಕಾರವಾಯಿತು! ಜೇಡವೆಂದು ಒಪ್ಪಿದಳು. ಈಗ ಹುಲ್ಲುಕಡ್ಡಿಯನ್ನು ತೋರಿಸಿ ಇದೊಂದು ಜೇಡ ಎಂದರೂ ನಂಬುವ ಸಿತ್ಥಿಗೆ ತಲುಪಿದ್ದಾಳೆ!
,
ಹಿಮ್ಮುಖ ನೋಟದ ಆಕರ್ಷಕ ಕಣ್ಣುಗಳು 



ಶ್ರೀಧರ್. ಎಸ್. ಸಿದ್ದಾಪುರ.

Sunday, January 12, 2020

ಚಿತ್ತಾಕರ್ಷಕ ಚಾರ್ಮಾಡಿಯಲ್ಲೊಂದು ಸುತ್ತು.......


ಎರಡು ಪ್ರಾಣಿಗಳು ಪರಸ್ಪರ ಮಾತಾಡುತ್ತಿವೆಯೋ ಎಂಬಂತೆ ಕಾಣುವ 'ಏರಿಕಲ್ಲು' ಬೆಟ್ಟ ಚಿತ್ತಾಕರ್ಷಕ ಚಾಮರ್ಾಡಿಗೆ ಬಂದೊಡನೆ ನಿಮ್ಮನ್ನು ಸ್ವಾಗುತಿಸುತ್ತೆ. ಬೆಟ್ಟದ ತಪ್ಪಲಿನ ತಣ್ಣಗಿನ ಊರು ಚಾಮರ್ಾಡಿ. ಫಾಟಿಯ ಹೆಸರೂ ಊರಿಗೂ ಅಂಟಿದೆ.
ಊರ ಪಕ್ಕದ ಹೋಟೆಲ್ ಗುರುಪ್ರಸಾದ್ಗೆ ದಾಳಿ ಮಾಡಿ ಏಳೇಳು ಇಡ್ಲಿ, ಅವಲಕ್ಕಿ, ಬನ್ಸ್ ಹೊಡೆದು ಹೊರಟಿದ್ದು ಬಾಳೆಕಲ್ಲು, ಕೊಡೆಕಲ್ಲು ಏರಲು. ಹೊಂಡ ಮಯ ಬಸ್ ದಾರಿಯಲ್ಲಿ ಸ್ವಲ್ಪ ಹೊತ್ತು ಪ್ರಯಾಣ. 



ಬಾಳೆ ಗುಡ್ಡದ ನೆತ್ತಿ 

ಏರು ದಾರಿಯ ಚಾಮರ್ಾಡಿ ಗಿರಿಗಳ ಸುತ್ತಿ ಹೊಂಡ ಹಾರಿ ನಿಂತಿದ್ದು ಒಂಟಿ ಮರವೆಂಬಲ್ಲಿ. ಎಡಕೆಲ್ಲಾ ಮರಗಳ ಗಸ್ತು ಬಲಕೆ ಬಾಯಿಬಿಟ್ಟ ಪ್ರಪಾತ. ಚಾಮರ್ಾಡಿಯ ಕನ್ನಿಕೆಯೊಬ್ಬಳು ಅಲ್ಲೇ ನಿಶ್ಶಬ್ದವಾಗಿ ಹರಿವಳಲ್ಲಿ. ಅವಳ ಜಡೆ ಹಿಡಿದು, ಬೇರ ಮುಟ್ಟಿ, ಉಸಿರು ಬಿಟ್ಟು ಸಣ್ಣ ಗುಡ್ಡ ಹತ್ತಿದೊಡೆ ನಿಚ್ಚಳ ಹಾದಿಯ ಸಣ್ಣ ಗೆರೆ ನಮ್ಮ ಮುಂದೆ ತೆರೆದು ಕೊಂಡಿತು. ಅಲ್ಲಲ್ಲಿ ಕರಿಗಳ ಸಗಣಿ. ಚಾಮರ್ಾಡಿ ಸನಿಹದ ಏರಿಕಲ್ಲು ಗುಡ್ಡ ಸೆಲ್ಪಿಗೆ ಬಾಯ್ಕಳೆದು ಸ್ಮಾಯಲ್ ಮಾಡುತಲಿತ್ತು.

ಬಾಳೇ ಗುಡ್ಡ ನೆತ್ತಿಯಿಂದ ಕಾಣುವ ಮನೋಹರ ದೃಶ್ಯ 
ಮೂವತ್ತು ನಿಮಿಷಗಳ ಏರು ದಾರಿ ಏರಿ ಕೊಡೆಕಲ್ಲಿನ ಮೇಲಿದ್ದೆವು. ದೊಡ್ಡ ಬೆಟ್ಟವೇರುವ ಮೊದಲಿನ ಪುಟಾಣಿ ನಿಲ್ದಾಣವಿದ್ದಂತೆ ಈ ಕೊಡೆಕಲ್ಲು ಬೆಟ್ಟ. ಕೊಡೆಯೊಂದು ಬೆಟ್ಟದ ತುದಿಯಲ್ಲಿ ಕೂತು ವಿಶ್ರಾಂತಿ ಪಡೆಯುತ್ತಿದೆಯೋ ಎಂಬಂತಿದೆ. ಏರದೆ ಬಿಡಲು ಸಾಧ್ಯವಿಲ್ಲದಂತಹ ಅಪರಿಮಿತ ಸೌಂದರ್ಯದ ಬೆಟ್ಟ ಎದುರಿಗೆ, ಅದವೇ ಬಾಳೆ ಕಲ್ಲು. ಆರೇಳು ಜನ ಇಲ್ಲಿ ಕುಳಿತು ಬಾಳೆಕಲ್ಲು ಬೆಟ್ಟವನ್ನು ನೋಡುತ್ತಾ ದಿನ ಕಳೆಯಲಡ್ಡಿಯಿಲ್ಲ. ಕೊಡೆ ಕಲ್ಲು ಕರಡಿಗಳ ಅಡಗುತಾಣ. ನಾವು ಬರುವ ನಾಲ್ಕು ದಿನಗಳ ಹಿಂದೆ ಚಾರಣಿಗರ ದೊಡ್ಡ ತಂಡವನ್ನು ಕರಡಿಯೊಂದು ಅಟ್ಟಿಸಿಕೊಂಡು ಬಂದಿತ್ತು. 



ಬಲು ಎಚ್ಚರಿಕೆಯಿಂದ ಸುತ್ತ ದಿಟ್ಟಿಸಿ ನೋಡಿ ಕರಡಿ ಇಲ್ಲದ್ದು ಖಾತ್ರಿಯಾದ ಮೇಲೆ ಮುಂದಡಿ ಇಟ್ಟೆವು! ಆಹಾ ಇದರ ಸೌಂದರ್ಯವೇ. ಹಿಂದಕ್ಕೆ ಏರಿಕಲ್ಲು ಎದುರಿಗೆ ಬಾಳೆ ಕಲ್ಲು. ವಿಶ್ರಮಿಸಿ ಮುಂಬರಿದೆವು. ಅಲ್ಲಲ್ಲಿ ಜರಿದ ಗುಡ್ಡವ ಹಾದು, ಆನೆ ಲದ್ದಿಯ ನೋಡಿ, ಇದು ಆನೆಗಳ ಕಿತಾಪತಿ ಎಂದರಿತು ಒಂದರೆಗಳಿಗೆ ಬೆದರಿ ಬೆವರಿ ಮುಂಬರಿದೆವು. ತಿಂಗಳ ಹಿಂದೆ ನಮ್ಮ ಮಾರ್ಗದರ್ಶಕನಿಗೆ ಆನೆ ಅಟ್ಟಿಸಿಕೊಂಡು ಬಂದ ವಿಷಯ ಹೇಳಿ ಹೆದರಿಸಿದ. ಬಂಜಾರು ಮಲೆಯಲ್ಲಿದ್ದಷ್ಟು ಆನೆ ಇಲ್ಲಿಲ್ಲವೆಂದು ಸಂತೈಸಿದ.


ಗುಡ್ಡದ ಎದುರಿಗೆ ಮಾನವ ಎಷ್ಟು ಸಣ್ಣ  


ಕರಡಿ ಸಿಕ್ಕಿದ ಕೊಡೆಕಲ್ಲು  ಗುಡ್ಡದ ಮೋಹಕ ನೋಟ 

ಬಾಳೆ ಕಲ್ಲಿನ ಕೊನೆಯ ಏರು ದಾರಿ ನಮಗೆ ಕುದುರೆ ಮುಖದ ನೆನಪ ತಂದಿತು. ನಡುವೆ ಸಿಗುವ ಅತ್ತಿ ಮರ, ಕಣಿವೆ ದಾಟಿ ಬಾಳೆ ಗುಡ್ಡದ ನೆತ್ತಿ ಕಡೆ ಹೊರಟೆವು. ಕಡಿದಾದ ಎರಡು ಗುಡ್ಡವೇರಿದರೆ ಬಾಳೆ ಕಲ್ಲು ನಿಮ್ಮ ಕೈವಶ. ನೆತ್ತಿಯ ನೋಟ ಚಿತ್ತ ಬಿತ್ತಿಯಲ್ಲಿನ್ನು ಹಸಿರು. ಇಲ್ಲಿನ ಸೌಂದರ್ಯ ಪದಗಳಲ್ಲಿ ಹಿಡಿದಿಡುವುದೇ ಕಷ್ಟ. ಒಣಗಲು ಹಾಕಿದ ಅಮ್ಮನ ಸೀರೆಯಂತೆ ಹಸಿರು ಹುಲ್ಲು ಗಾಳಿಗೆ ವೈಯಾರ ಮಾಡುತಲಿತ್ತು. ಯುದ್ದಕ್ಕೆ ನಿಂತ ಸೈನಿಕರಂತೆ ಸುತ್ತುವರಿದ ಮಲೆಗಳ ಸಾಲು. ದೂರದಲ್ಲೆರಡು ಜಲಧಾರೆ. ಬಂಡಾಜೆ ಗುಡ್ಡ, ಸುಂಕ ಸಾಲೆ ನದಿಯ ಸೌಂದರ್ಯ. ಬಲ್ಲಾಳರಾಯನ ಕೋಟೆ ಇರುವ ಬೆಟ್ಟ, ನೋಡಲು ಒಂದೇ ಎರಡೇ! ವಾವ್ ಎಂದಿತು ಮನಸ್ಸು. ಗಾಳಿಗೆ ಜೀಕುವ ಹುಲ್ಲು ನೋಡುವುದೇ ಖುಷಿ. ನೆತ್ತಿಯ ಮೇಲೆ ಕೀಟಗಳ ರಾಶಿ. ಪಶ್ಚಿಮ ಘಟ್ಟಕ್ಕೇ ಸೀಮಿತವಾದ ಅಗಣಿತ ಚಿಟ್ಟೆ ಸಮೂಹ. ಅಡಿಗಡಿಗೆ ಕ್ಯಾಮರದ ಮುಡಿಗೇರಿದ ಚಿತ್ರಗಳು ಇಂದಿಗೂ ನನ್ನ ಬಿಡದೇ ಕಾಡುವವು. ಇಂತಹ ಚಿತ್ರಗಳಿಗಾಗಿಯಾದರೂ ಒಮ್ಮೆ ಇವನ್ನೇರಲು ಹೊರಡಬೇಕು. ಅಪರಿಮಿತ ಸೌಂದರ್ಯ ರಾಶಿ ನೋಡಿ ಪುಳಕದಿಂದ ಹಿಂದಿರುಗಿದೆವು.

ಚಾರ್ಮಾಡಿಯಿಂದ ಕಂಡ ಏರಿ ಕಲ್ಲು ಗುಡ್ಡ  ಅಥವಾ ಹುಲಿ ದನ ಬೆಟ್ಟ 

ಕೊನೆಯ ಮುತ್ತು :-
ಪಶ್ಚಿಮ ಘಟ್ಟದ ಅನನ್ಯ ಪರ್ವತ ಶ್ರೇಣಿಗಳಲ್ಲಿ ಚಾಮರ್ಾಡಿ ತೀರಾ ಭಿನ್ನ. ಇಲ್ಲಿನ ಜೀವ ಪರಿಸರವೂ ವಿಭಿನ್ನ. ಕಾಟಿ, ಕರಡಿ, ಕರಿಗಳ ಆಶ್ರಯ ತಾಣ. ಇವುಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸುವುದು ಪ್ರತಿ ನಾಗರಿಕರ ಕರ್ತವ್ಯ. ಇಲ್ಲಿನ ಪರಿಸರವನ್ನು ಪ್ಲಾಸ್ಟಿಕ್ ರಕ್ಕಸನಿಂದ ಕಾಪಾಡಿ. ನೇತ್ರಾವತಿಗೆ ನೀರುಣಿಸುವ ಇಲ್ಲಿನ ಜಲಧಾರೆಗಳಿಗೆ ಪ್ಲಾಸ್ಟಿಕ್ ಸೇರದಂತೆ ಕಾಪಾಡುವುದು ನಮ್ಮ ಕರ್ತವ್ಯವಲ್ಲವೇ?

Saturday, December 28, 2019

ಏಕಶಿಲಾ ಶಿಖರದ ಶಿಖೆಯನ್ನೇರಿ....

ಜಟಕಾ ಬಂಡಿಯ ಹಿಂದೆ  ಓಡುವ ಹುಡುಗಿ


ಇಲ್ಲಿನ ದೃಶ್ಯಗಳು ನಿಮ್ಮನ್ನು ದಂಗು ಬಡಿಸುವುದು. ಗುಪ್ಪೆ ಹಾಕಿದ ದೊಡ್ಡ ಕಲ್ಲು ರಾಶಿ, ನಿದ್ದೆ ಹೋದ ಕುಂಭ ಕರ್ಣನ ಹೊಟ್ಟೆಯನು ನೆನಪಿಸಿ ನಿಮ್ಮಲ್ಲಿ ಬೀಕರವಾದ ಭಯವೊಂದನ್ನು ಹುಟ್ಟಿಸುವುದು. ಭಯವೇ ಕಾವಲಿಗೆ ನಿಂತಂತೆ ಸುತ್ತಲೂ ಕಾಷ್ಠ ಮೌನ.

ಬೆಂಗಳೂರಿನ ಮಾಗಡಿ ಸನಿಹದ ಸಾವನ ದುರ್ಗ ಏಕಶಿಲಾ ಬೆಟ್ಟ ಏಷ್ಯಾದಲ್ಲೇ ಬಹೃತ್ ಬೆಟ್ಟವೆನಿಸಿಕೊಂಡಿದೆ ಎಂಬುದೇ ಒಂದು ಸೋಜಿಗ! ಅದೂ ನಮ್ಮ ಬೆಂಗಳೂರಿನ ಸನಿಹದಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾಗಿಯಾದರೂ ನಾವೊಮ್ಮೆ ಹೋಗಿ ಅದರ ದರ್ಶನ ಪಡೆದು ಧನ್ಯತೆಯ ಪಡೆಯಬೇಕಲ್ಲವೇ? ಹೊಯ್ಸಳ ಕಾಲದಲ್ಲಿ ಸಾವಂದಿ ಎಂದು ಕರೆಸಿಕೊಂಡಿದ್ದ ಊರು. ದಂಗು ಬಡಿಸುವ ಏಕಶಿಲೆಯ ಏರು, ಇಳಿಜಾರುಗಳ ಮೇಲ್ಮೈ ಮೇಲೆ ಎಚ್ಚರ ತಪ್ಪಿದರೆ ಸ್ವರ್ಗಕ್ಕೆ ತೋರಣ ಕಟ್ಟುವ ತಾಣ. ಇದರ ಚಾರಣ ಅನುಭವ ಜೀವಮಾನದ ಒಂದು ರೋಚಕ ಅನುಭವ! ನೆನೆಸಿಕೊಂಡರೆ ಈಗಲೂ ಕಣ್ಣ ರೆಪ್ಪೆಗೆ ನಿದ್ದೆ ಹತ್ತದು! ನೋಡಿದರೆ ನಡುಕ ಹುಟ್ಟಿಸುವ ಇದರ ಇಳಿಜಾರು. ಜೊತೆಗೆ ಇದು ಒಡ್ಡುವ ಸವಾಲು ಎದುರಿಸಿ ಮೇಲೇರಿದರೆ ಆವರಿಸುವ ಧನ್ಯತೆ ಅಪಾರ. ಏಕಶಿಲಾ ಬೆಟ್ಟ ಚಾರಣ ಮಾಡಲು ನಾನು ರೆಡಿ, ನೀವು?



ನಾವಿಲ್ಲಿಗೆ ದಾಂಗುಡಿ ಇಟ್ಟದ್ದು ನಡು ಮಧ್ಯಾಹ್ನದ ಹೊತ್ತು. ಸೂರ್ಯ ನೆತ್ತಿ ಸುಡುತಲಿದ್ದ. ಕಾಯ್ದಿಟ್ಟ ಅರಣ್ಯವಾದ್ದರಿಂದ ತೀರ ಬಿಸಿಲೆನಿಸಲಿಲ್ಲ. ಒಂದು ಕಾಲದಲ್ಲಿ ರಾಜ ಮಹಾರಾಜರು ನಡೆದಾಡಿದ ಭೂಮಿ. ಈಗ ಕಾಡು ಮತ್ತು ನಿರ್ಲಕ್ಷಿತ ಪ್ರದೇಶ. ಸುತ್ತಲಿನ ಅರಣ್ಯಗಳಲ್ಲಿ ಹಿಂದಿನ ಕಾಲದ ಮನೆಗಳ ಹಲವು ಕುರುಹುಗಳು ಕಂಡವು. ಪಾಳು ಬಿದ್ದ ಅಡಿಪಾಯಗಳು ಅಲ್ಲಲ್ಲಿ ಕಾಣಸಿಕ್ಕವು. ನಾಲ್ಕಾರು ಮನೆ ಬಿಟ್ಟರೆ ಹೆಚ್ಚಿನ ಜನವಸತಿ ಇದ್ದಂತಿಲ್ಲ. ಆದರೂ ಬಂದ ಪ್ರವಾಸಿಗರು ಮಾಡಿದ ಗಲೀಜು ಮುಖಕ್ಕೆ ರಾಚುವಂತ್ತಿತ್ತು. ಕುಡಿದ ಎಳನೀರಿನ ರಾಶಿ, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಮುಖಕ್ಕೆ ಹೊಡೆಯುವಂತ್ತಿತ್ತು.


ಮೊದಲ್ಗೊಂಡ ಮಂದ್ರ
ಏಕಶಿಲಾ ಬೆಟ್ಟದ ಸೆರೆಗಿನಲ್ಲಿ ಎರಡು ದೇವಾಲಯಗಳು ತಣ್ಣಗೆ ಕುಳಿತಿದ್ದವು. ಉದ್ಭವ ಉಗ್ರನರಸಿಂಹನಿಗೆ ಕೈಮುಗಿದು, ತೋರಣ ಕಂಬಗಳ ದಾಟಿ ಮತ್ತೊಬ್ಬ ದೇವನಾದ ವೀರಭದ್ರನಿಗೆ ನಮ್ಮ ಮುಡಿಪು ಸಲ್ಲಿಸಿ, ತಂದ ಪೊಂಗಲ್ ಡಬ್ಬಿ ಖಾಲಿಮಾಡಿ ಬೆಟ್ಟವೇರಲು ಶುರುವಿಟ್ಟೆವು. ಅಸಾಧ್ಯವೆನಿಸುವ ಅದರ ಎಡ ಮಗ್ಗುಲಿನ ಇಳಿಜಾರಿನಲ್ಲಿ ಏಕಶಿಲೆಗೆ ಎದೆಯೊಡ್ಡಿ ಚಪ್ಪಲಿ ಕೈಲಿ ಹಿಡಿದು ಕೆಲವರು ಬೆಟ್ಟವೇರುವ ವಿಚಿತ್ರ ಸರ್ಕಸ್ನಲ್ಲಿ ತೊಡಗಿದ್ದರು. ನಡು ನಡುವೆ ಕುಳಿತ ಕೆಲವರು ಮೇಲೂ ಏರಲಾಗದೇ ಕೆಳಗೂ ಇಳಿಯಲಾಗದೆ ತ್ರಿಶಂಕು ಸುಖವನ್ನು ಅನುಭವಿಸುತ್ತಾ ಕುಳಿತ್ತಿದ್ದರು! ಇನ್ನೂ ಕೆಲವರು ಕಾಲು ಸಾಲದೆನಿಸಿ ಕೈಬಳಸಿ ತಮ್ಮ ಪೂವರ್ಾಶ್ರಮಕ್ಕೆ ಮತ್ತೆ ಹಿಂದಿರುಗಿದ್ದರು. ಇವರ ಪಚೀತಿ, ಪೇಚಾಟ ನಮಗೆ ನಗು ತರಿಸುತ್ತಿತ್ತು. ನಮ್ಮ ಗತಿಯೂ ಹೀಗೇ ಆಗುವುದು ಎಂದೆಣಿಸಿ ಒಮ್ಮೆ ಎದೆ ನಡುಗಿತು. ನಾನು ಮತ್ತು ಗೆಳೆಯ ಸಂದೀಪ್ ಬಲ ಮಗ್ಗುಲಿನ ಬೆಟ್ಟದ ಓಣಿ ಬಳಸಿ, ಮಳೆ ಬರದಿರಲಿ ಎಂದು ಮನದಲ್ಲೇ ಪ್ರಾಥರ್ಿಸಿ ಏಕಶಿಲೆಯನ್ನು ಏರಲು ಮೊದಲ್ಗೊಂಡೆವು.



ದಾಟು
ಸಾವನ್ ದುರ್ಗ ಸಮುದ್ರಮಟ್ಟದಿಂದ 1,227 ಮೀಟರ್ ಎತ್ತರದಲ್ಲಿದೆ. ಕೆಲವೊಂದು ಕಡೆ 60 ಡಿಗ್ರಿಯ ಏರು, ಹೆಲವೆಡೆ 80 ಡಿಗ್ರಿಯ ಏರು ನಮ್ಮ ಎದೆ ಬಡಿತ ಹೆಚ್ಚಿಸಿದವು. ಕಾಲು ನಡುಗುತಲಿತ್ತು. ಬೆಣ್ಣೆ ಮುದ್ದೆಯಂತಹ ಮೋಡಗಳು ಆಗೀಗ ಅಡ್ಡ ಬಂದು ಬೆಟ್ಟವೇರುವ ನಮ್ಮ ಕಷ್ಟ ಕಡಿಮೆ ಮಾಡಿದವು. ಮೊದಲ ಕೆಲವು ಹೆಜ್ಜೆಗಳಷ್ಟೇ ಹರ್ಷದಾಯಕ. ಹಿಮ್ಮಖವಾಗಿ ನೋಡಿದರೆ ತಲೆ ಗಿರಕಿ ಹೊಡೆಯುತ್ತೆಂದು ಮುಮ್ಮುಖವಾಗಿ ನೋಡುತ್ತಾ ಏರಿದೆವು. ಅರ್ಧ ದಾರಿ ಏರಿದ್ದೆವಷ್ಟೇ. ಇಲ್ಲಿಂದ ಮೇಲೇರುವುದು ಬಿಡಿ ಕೆಳಗೆ ಬರುವ ಬರವಸೆಯನ್ನೂ ನಾನು ಕಳೆದುಕೊಂಡಿದ್ದೆ. ಅಂತಹ ಇಳಿಜಾರು ಪ್ರಪಾತವೊಂದು ನಮ್ಮನ್ನು 'ಇಷ್ಟಯೇ ನಿನ್ನ ತಾಕತ್ತು!' ಎಂದಣಕಿಸಿದಂತಾಯ್ತ್ತು. ಏರು ನೋಡೋಣವೆಂಬ ಸವಾಲು ಹಾಕಿ ಅಚಲವಾಗಿ ನಿಂತಿತ್ತು ಬೆಟ್ಟ. ಇಲ್ಲಿಗೆ ಯಾಕಾದರೂ ಬಂದೆನೋ ಎಂದು ಮನಸ್ಸಿನಲ್ಲೇ ನನಗೆ ನಾನೇ ಬೈದುಕೊಂಡೆ! ಅದೃಷ್ಟಕ್ಕೇ ಇಲ್ಲಿ ಯಾರೋ ಪುಣ್ಯಾತ್ಮ ಬೆಟ್ಟ ಕೊರೆದು ಸಣ್ಣ ಕುಳಿ ತೋಡಿ ಏರುವ ಕಷ್ಟ ಸ್ವಲ್ಪ ಕಡಿಮೆ ಮಾಡಿದ್ದ. ಮೇಲಿನಿಂದ ಎಳೆದು ಕೊಳ್ಳುವವರಿಲ್ಲದೇ ಇದ್ದರೆ ನನಗಂತೂ ಏರುವುದು ಅಸಾಧ್ಯವಿತ್ತು. ಕುಳಿ ಕೊರೆದ ಪುಣ್ಯಾತ್ಮನಿಗೊಂದು ಧನ್ಯವಾದವನ್ನು ಮನಸ್ಸಿನಲ್ಲೇ ಅಪರ್ಿಸಿ, ಅಂತೂ-ಇಂತು ಆ ಏರನ್ನು ದಾಟಿಕೊಂಡೆವು. ಬೆಟ್ಟದ ಮುಕ್ಕಾಲಂಶ ದಾಟಿದ ಮೇಲೆ ಇಳಿಜಾರಿನ ಕೋಟೆಯಂತಹ ರಚನೆ ಬಹಳ ಆಕರ್ಷಕವೂ ಅಪಾಯಕಾರಿಯೂ ಆಗಿತ್ತು. ಅದರ ಒಂದು ಕಲ್ಲು ಎತ್ತಿಡಲು ಇಂದಿನ ಕನಿಷ್ಠ ನಾಲ್ಕು ಜನರು ಬೇಕು! ಅಲ್ಲಲ್ಲಿ ಬುರುಜುಗಳನ್ನು ನಿಮರ್ಿಸಿದ್ದರು. ಸಮೀಪವೇ ಒಂದು ಕಲ್ಲಿನ ಮಂಟಪವನ್ನು ರಚಿಸಿದ್ದರು. ಹೊಯ್ಸಳ ರಾಜರಾದ ಸಾಮಂತರಾದ ಕೆಂಪೇಗೌಡರ ಕಾಲದಲ್ಲಿ ಎರಡನೇ ಅತಿ ಮುಖ್ಯ ಪಟ್ಟಣ ಇದಾಗಿತ್ತು! ಇಂದು ಕಾಯ್ದಿಟ್ಟ ಅರಣ್ಯ. ಟಿಪ್ಪುವಿನಿಂದ ಈ ಕೋಟೆಯನ್ನು ವಶಪಡಿಸಿಕೊಂಡ ಲಾಡರ್್ ಕಾನರ್್ವಾಲಿಸ್ ಇದನ್ನು 'ಸಾವಿನ ಕೋಟೆ' ಎಂದು ಬಣ್ಣಿಸಿದ್ದು ಅಕ್ಷರಶಃ ಸತ್ಯ ಎಂದು ನಮಗೆ ಮನವರಿಕೆಯಾಯಿತು! ಅಂತಹ ಕಡಿದಾದ ಏರಿನ  ಕೋಟೆಯದು.


ನಾಲ್ಕು ಕಾಲಿನಲಿ ಕೆಲವರ ಸರ್ಕಸ್.
 ಏರಲೂ ಕಷ್ಟಕರ ಜಾಗದಲ್ಲಿನ ಕೋಟೆಯ ಮಹತ್ವ ಇಂದಿನ ನಮಗೆ ಅರ್ಥವಾಗುವುದಾದರೂ ಹೇಗೆ? ಅಷ್ಟೊಂದು ಎತ್ತರದಲ್ಲಿ ಕಟ್ಟಿದ ಈ ಕೋಟೆ ನಮ್ಮನ್ನು ಅಚ್ಚರಿಗೆ ನೂಕಿದವು. ಹಿಂದಿನ ಕಾಲದವರ ಇಂಜಿನಿಯರಿಂಗ್ ಜ್ಞಾನ, ಸಾಹಸೀ ಪ್ರವೃತ್ತಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿ ನಮ್ಮನ್ನು ಕುಬ್ಜರನ್ನಾಗಿಸಿತು! ಬುರುಜುಗಳನ್ನೇ ಧ್ಯಾನಿಸುತ್ತಾ ಕುಳಿತೆವು. ಏರಲು ಇನ್ನೂ ಕಾಲಂಶ ಬೆಟ್ಟವಿತ್ತು. ಕೆಲವೆಡೆ ಅಡ್ಡ ಅಡ್ಡವಾಗಿ ನಡೆಯುತ್ತಾ ಜಾರದಂತೆ ಜಾಗೃತೆವಹಿಸಿ, ಅಂತೂ ಮಧ್ಯಾಹ್ನ ಮೂರಕ್ಕೆ ಸರಿಸುಮಾರು ನೆತ್ತಿಯಲ್ಲಿದ್ದೆವು. ಬೆಟ್ಟವೇರಿದ ಸಂತೋಷದಲಿ ಸುಖಿಸಿದೆ. ನೆತ್ತಿಯ ನೋಟ ನಿಮ್ಮನ್ನು ಮತ್ತೊಂದು ಪ್ರಪಂಚಕ್ಕೆ ಕೊಂಡ್ಯೋಯುವುದು. ಸುತ್ತಲಿನ ಕಲ್ಲುಗಳ ವಿಶಿಷ್ಟಾಕೃತಿಗಳ ವೀಕ್ಷಿಸುತ್ತಾ ಸಮಯ ಕಳೆದೆವು.


ತೀವ್ರ ಇಳಿಜಾರಿನಲ್ಲಿ ನಿರ್ಮಿಸಿದ ಮಂಟಪ 



ಬೆಟ್ಟದ ಇಳಿಜಾರು

ಮಂಗನಾಟ!

ಪ್ರಕೃತಿ  ಎಂಬ ಕಲಾಕಾರ

ಕುಂಭ ಕರ್ಣನಂತಹ ಬೆಟ್ಟ.

ಬಂಡೆಯ ಇಳಿಜಾರುಗಳಲ್ಲಿ ಅಲ್ಲಲ್ಲಿ ಗಿಡಗಂಟಿಗಳಿದ್ದವು. ಒಂದು ಕಳ್ಳಿಯಂತೂ ಓಡುವ ಜಟಕಾ ಗಾಡಿಯಂತೆ ಕಾಣಿಸುತ್ತಾ ಆಶ್ಚರ್ಯ ಹುಟ್ಟಿಸಿತು. ಅದರ ಹಿಂದಿನ ಕಳ್ಳಿ ಗಿಡವೊಂದು ಓಡುತ್ತಿರುವ ಚಿಕ್ಕ ಹುಡುಗಿಯಂತೆ ಭಾಸವಾಯಿತು. ದೂರದಲ್ಲಿ ಕಾಣಿಸುತ್ತಿದ್ದ ಚಿತ್ರ, ವಿಚಿತ್ರ ಬಂಡೆಗಳ ಚಿತ್ರ ತೆಗೆಯುತ್ತಾ ನನ್ನ ಲೋಕದಲ್ಲಿ ನಾ ಮುಳುಗಿದೆ. ಬೇಟೆ ಹಕ್ಕಿಗಳು ಅಲ್ಲಲ್ಲಿ ಓಡಾಡಿ ಬೇಟೆಗಾಗಿ ಅರಸುತ್ತಿದ್ದವು. ಮಾಗಡಿ, ರಾಮನಗರ ಚಿರತೆಗಳ ನಾಡು, ಹಾಗಾಗಿ ಇಲ್ಲಿ ಮೊಲ, ಇತರೇ ದಂಶಕಗಳು ಸಾಕಷ್ಟಿದೆ ಎಂದು ಹೇಳಬಹುದು. ದೂರದಲ್ಲಿ ಅಕರ್ಾವತಿ ಮೆಲ್ಲಗೆ ಹರಿಯುತ್ತಿದ್ದಳು. ಅವಳನ್ನೇ ನೋಡುತ್ತಾ ಸ್ವಲ್ಪ ಹೊತ್ತು ಪರವಶನಾದೆವು. ಏರುವ ಕಷ್ಟಕ್ಕಿಂತ ಇಳಿವ ಕಷ್ಟ ಮತ್ತೊಂದು ರೀತಿ. ಬಾಯಿತೆರೆದು ನುಂಗುವಂತಿರುವ ಪ್ರಪಾತವನ್ನೇ ನೋಡುತ್ತಾ, ಬೆಟ್ಟದ ತುಂಬಾ ಕೆನ್ನೀರ ಓಕಳಿ ಚೆಲ್ಲಿದ ಸೂರ್ಯನೊಂದಿಗೆ ಸ್ಪಧರ್ೆಗಿಳಿದು ಜಾರದಂತೆ ಜಾಗರೂಕ ಹೆಜ್ಜೆ ಇಟ್ಟು, ಬೆಟ್ಟ ಇಳಿದೆವು. ಸೂರ್ಯ ಪೂರ್ವದಲ್ಲಿ ಕರಗುವ ಮುನ್ನವೇ ಅಲ್ಲಿಂದ ಹೊರಟೆವು. ಇಷ್ಟು ಬೇಗ ಹೊರಟಿರಾ ಎಂದು ಬೆಟ್ಟ ನಕ್ಕಂತಾಯಿತು! ಇಂತಹ ಸುಂದರ ಸ್ಥಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ?


ಶ್ರೀಧರ. ಎಸ್. ಸಿದ್ದಾಪುರ.
ವಿಳಾಸ- ಸಿದ್ದಾಪುರ ಅಂಚೆ ಮತ್ತು ಹಳ್ಳಿ,
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576229.

Friday, December 6, 2019

ಝರಿ ಎಂಬ ಜಲ ಕನ್ನಿಕೆಯ ಬೆನ್ನು ಹತ್ತಿ....


ಗವಿಕಲ್ ಗಂಡಿ.

ದೂರದಲ್ಲೆಲ್ಲೋ ಕಾಣುವ ಸಣ್ಣ ಹಳ್ಳಿ. ಕಣ್ಣು ತುಂಬಿಕೊಂಡಷ್ಟು ಮತ್ತೆ ನೋಡುವಂತೆ ಮಾಡುವ ಮುಗಿಲುಗಳ ಮೈ ಮರೆಸುವ ನೋಟ. ವಿವಿಧ ಬಂಗಿಗಳ ಪೋಟೋ ಸೆಷನ್ ನಡೆಯುತ್ತಿತ್ತು. ಸಣ್ಣ ಹೂ ಬಿಡುವ ಗಿಡಗಳು ನಮ್ಮ ಪೋಟೊ ತೆಗೆಯಿರಿ ಎಂದು ವಿನಂತಿಸುತಿರುವವೋ ಎಂದೆನಿಸುತ್ತಿತ್ತು. ಜಾರುವ ಕಲ್ಲುಗಳನ್ನು ಏರಿ ಸ್ವಲ್ಪ ದೂರ ಹೋಗಿ ಮೂಕವಿಸ್ಮಿಯನಾಗಿ ಹಿಂದಿರುಗಿದೆ. ಇಂತಹ ಗವಿಕಲ್ಲು ಗಂಡಿಯ ಸುಮನೋಹರ ನೋಟವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಿರುವಾಗ ನಮ್ಮ ಡ್ರೈವರ್ ಇಲ್ಲೇ ಸನಿಹದಲ್ಲೊಂದು ಜಲಪಾತವಿದೆ ನೋಡೋಣವೇ ಎಂದ. ಸರಿ ಎಂದು ಅಲ್ಲಿಂದ ಹೊರಟೆವು. ಸಿರಿಯುಕ್ಕಿಸುವ ಸುಮನೋಹರ ಮಲೆಗಳ ಸಾಲು ಸಾಲು ದಾಟಿ ಮುಂದಿನ ತಿರುವಿನ ತುದಿಯಲ್ಲಿ ಇಳಿಸಿ, ಇಲ್ಲೇ ಸ್ವಲ್ಪ ದೂರದಲ್ಲಿದೆ ನಡೆದು ಹೋಗಿ ಎಂದ. ಎದುರಿಗೊಂದು ಕಣಿವೆಯೊಂದು ಬಾಯ್ದೆರದು ನಿಂತ್ತಿತ್ತು. 


ಝರಿ ಜಲಧಾರೆ...
ದಾರಿ ಯಾವುದಯ್ಯ?
ಚಿಕ್ಕಮಗಳೂರಿನಿಂದ ಗವಿಕಲ್ಲ್ಗಂಡಿಯಿಂದ ಎರಡು ಕಿಲೋ ಮೀಟರ್ ಚಲಿಸಿ ಎಡಕ್ಕೆ ಹೊರಳಿ ಕೊರಕಲಲ್ಲಿ ಇಳಿದರೆ ಝರಿ ಜಲಧಾರೆ ಯ ದಾರಿ ತೆರೆದುಕೊಳ್ಳುವುದು.

ಜಾರುವ ಇಳಿಜಾರಿನಲ್ಲಿ ಸರ್ಕಸ್-

 ಜಾರುವ ಕೊರಕಲಿನಲ್ಲಿ ಚಿಕ್ಕ ಮಕ್ಕಳೊಂದಿಗೆ  ನಿಧಾನಕ್ಕೆ ಹೆಜ್ಜೆ ಇಡುತ್ತಾ ನಡೆಯ ತೊಡಗಿದೆವು. ಹಾದಿಯುದ್ದಕ್ಕೂ ಕೆಂಪು, ನೀಲಿ ಹೂಗಳನ್ನು ಯಾರೋ ಹರಡಿದಂತ್ತಿತ್ತು. ಹಲವು ಬಗೆಯ ಆಕರ್ಿಡ್ಗಳು ಮರದಿಂದ ಇಣುಕು ಹಾಕುತ್ತಿದ್ದವು. ಕೆಲವು ನೆಲದಲ್ಲಿ ಅರಳಿ ನಿಂತಿದ್ದವು. ಅವನ್ನೆಲ್ಲಾ ಕ್ಯಾಮರದಲ್ಲಿ ಬಂದಿಯಾಗಿಸಿಕೊಂಡೆವು. ಅನೇಕ ಬಳ್ಳಿಗಳು ಬಿಡದಂತೆ ಮರ ಸುತ್ತಿ, ಹೂ ಬಿಟ್ಟಿದ್ದವು. ಮಲಬಾರ್ ವಿಸಲಿಂಗ್ ಥ್ರಷ್ನ ಸಣ್ಣದನಿ ಎಲ್ಲಿಂದಲೋ ಕೇಳಿಬರುತ್ತಿತ್ತು. ದಾರಿಯೂ ಸಣ್ಣಗೆ ಜಾರುತ್ತಿತ್ತು. ಜಾರದಂತೆ ಗಿಡ ಬಳ್ಳಿಗಳನ್ನು ಹಿಡಿದು ನಡೆಯುತ್ತಿದ್ದೆವು. ಕೊರಕಲಿನಲ್ಲಿ 2 ಕಿಲೋ ಮೀಟರ್ ನಡೆದರೂ ಜಲಧಾರೆಯ ಸುಳಿವಿಲ್ಲ್ಲ.  ಕಾನನದಲ್ಲಿ ಯಾರನ್ನು ಕೇಳುವುದು? . ಮೊದಲ ಮಳೆ ಸಣ್ಣಗೆ ಜಿನುಗಿ ನಾಪತ್ತೆಯಾಗಿತ್ತು. ದಾರಿ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಜಲಪಾತದ ಕುರುಹು ಸಹ ಕಾಣಲಿಲ್ಲ. ಹಾವು ಮಲಗಿದಂತೆ ಮಲಗಿದಂತಹ ದಾರಿಯಲ್ಲಿ ನಡೆ ನಡೆದು ಕಾಲು ಮುಷ್ಕರ ಹೂಡಿತ್ತು. ಜೊತೆಯಲ್ಲಿ ಚಿಕ್ಕ ಮಕ್ಕಳನ್ನು ಹೊರುವ ಕಷ್ಟ ಬೇರೆ. ಇಲ್ಲೇ ಹತ್ತಿರದಲ್ಲಿದೆ ಎಂದ ಚಾಲಕನನ್ನು ಮಕ್ಕಳನ್ನು ಹೊತ್ತ ಅಮ್ಮಂದಿರು ಮನಸಾರೆ ಶಪಿಸಿದರು. 
ತಿಳಿಯದ ಹಾದಿಯಲ್ಲಿ ನಡೆವ ಸುಖವನ್ನುಂಡು ಹರಟುತ್ತಾ, ಗಿಡ, ಬಳ್ಳಿ ನೋಡುತ್ತಾ ಲೋಕ ಮರೆತವರಂತೆ ನಡೆಯ ಹತ್ತಿದೆವು. ಸುಂದರ ಜಲಧಾರೆ ನೋಡುವ ಆಸೆ ನಮ್ಮನ್ನು ಇನ್ನೂ ಕೆಳಗಿಳಿಯುವಂತೆ ಪ್ರೇರೆಪಿಸುತ್ತಿತ್ತು. ಒಂದೆರಡು ಸಲ ಮಣ್ಣಿನೊಂದಿಗೆ ಚಕ್ಕಂದವಾಡಿಯಾಗಿತ್ತು. ಅಂತು ಇಂತು ಮಕ್ಕಳನ್ನು ಹೊತ್ತು 2 ಗಂಟೆಯಷ್ಟು ನಡೆದಾಗ ಕೊನೆಗೊಂದು ಮನೋಹರ ಜಲಧಾರೆಯೊಂದು ನಮ್ಮ ಕಣ್ಗಳಿಗೆ ಗೋಚರಿಸಲು ಪ್ರಾರಂಭವಾಯಿತು. ನಡೆದ ದಣಿವಿಗೆ ಅಮೃತ ಸಿಂಚನವಾಯಿತು. ಆತುರಾತುರವಾಗಿ ಇಳಿದು, ಜಲಧಾರೆಯಡಿಯಲ್ಲಿ ತಲೆ ಒಡ್ಡಿದಾಗಲೇ ಸಮಾಧಾನವಾಗಿದ್ದು. ಹಿಮದ ಹನಿಗಳ ಸಿಂಚನದಂತಿತ್ತು  ಜಲಧಾರೆಯ ನೀರು. ಸಣ್ಣ ಹನಿ ಹನಿಯಾಗಿ ಜಿನುಗುವ ಜಲಧಾರೆಯ ಸೊಬಗು ಪದಗಳಲ್ಲಿ ಹಿಡಿದಿಡಲಾರೆ. ಎರಡು ಹಂತಗಳಲ್ಲಿ ಧುಮುಕುವ ಜಲಧಾರೆಯ ಪೂರ್ಣ ಚಿತ್ರ ತೆಗೆಯುವುದು ಸ್ವಲ್ಪ ಕಷ್ಟ ಸಾಧ್ಯ. ಇನ್ನೂ ನಿಗೂಢವಾಗಿರುವ ಇದನ್ನು ಅನೇಕ ಹೆಸರಿನಿಂದ ಕರೆಯುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದರು. ಝರಿ ಜಲಧಾರೆ ಎಂಬುದು ಇದರದೊಂದು ಹೆಸರು. ತೊರೆಯನ್ನು ವಿವಿಧ ಕೋನದಲ್ಲಿ, ಕ್ಯಾಮರದ ವಿವಿಧ ಸೆಟ್ಟಿಂಗ್ ಬಳಸಿ ಕ್ಲಿಕ್ಕಿಸಿದೆ. ಕಾನನದ ನಡುವೆ ಕಾಡುವಂತಹ ಎಷ್ಟು ಸುಂದರಿಯರು ಹೆಸರಿಲ್ಲದೇ ತಣ್ಣಗೇ ಹರಿಯುತಿರುವರೋ ಎಂದು ಅಚ್ಚರಿಯಾಯಿತು. ಮನಸ್ಸು ತಣಿದಿತ್ತು.
ಅರಳಿ ನಿಂತ ಆರ್ಕಿಡ್.

ಹಾದಿ ಬದಿಯಲ್ಲಿ ಬಣ್ಣದ ಗಿಡ.
 ಮಳೆಗಾಲದ ಕೆಲವೊಂದು ಆಕರ್ಿಡ್ ಸಸ್ಯಗಳು ನಮ್ಮ ಚೀಲ ಸೇರಿದವು. ಮರಳುವ ಹಾದಿ ಎಣಿಸಿದಾಗ ಒಮ್ಮೆ ಎದೆ ಜಲ್ಲನೆ ನಡುಗಿತಾದರೂ ಮೇಲೇರಲೇ ಬೇಕಾದುದರಿಂದ ಕಡಿದಾದ ಬೆಟ್ಟವೇರ ತೊಡಗಿದೆವು. ಅಂತೂ ತುದಿ ತಲುಪಿದಾಗ ಸಾರ್ಥಕ ಭಾವ. ಇಳಿಯುವ ಗಡಿಬಿಡಿಯಲ್ಲಿ ಸುತ್ತಲಿನ ಪರಿಸರ ಗಮನಿಸಲಿಲ್ಲವಾಗಿತ್ತು. ಸುತ್ತಲೂ ಚಿತ್ತಾಕರ್ಷಕವಾದ ಮನೋಹರ ಚಿತ್ರವೊಂದು ನಮ್ಮ ಮುಂದೆ ತೆರದುಕೊಂಡಿತು. ಇಲ್ಲಿಂದ ನಮ್ಮ ಪಟಾಲಂ ಹೊರಟಿದ್ದು ಮುಳ್ಳಯ್ಯನ ಗಿರಿಯೆಡೆಗೆ.
 ಸನಿಹದಲ್ಲೇ ಚಿಕ್ಕಮಗಳೂರಿರುವುದರಿಂದ ವಾಸ್ತವ್ಯಕ್ಕೆ ಯಾವುದೇ ಕುಂದಿಲ್ಲ. ನೋಡಲು ಬೇಲೂರು, ಹಳೆಬೀಡು, ದತ್ತ ಪೀಠ, ಮುಳಯ್ಯನ ಗಿರಿಗಳಿವೆ. ನವೆಂಬರ್ನಿಂದ ಮೇ ವರೆಗೆ ಪ್ರಯಾಣಕ್ಕೆ ಸೂಕ್ತ.
     ಶ್ರೀಧರ್. ಎಸ್. ಸಿದ್ದಾಪುರ.

Friday, November 22, 2019

ನೀವು ಓದಲೇ ಬೇಕಾದ ಅಪೂರ್ವ ಪುಸ್ತಕ...



 ನಾಗೇಶ್ ಹೆಗಡೆಯವರ ನಿಲುಕಿಗೆ ದಕ್ಕದ ಬರೆಹ ಇರಲಿಕ್ಕಿಲ್ಲ. ಓದುಗರಿಗೆ ವಿಜ್ಞಾನದ 
ಅವರ ಲೇಖನಗಳು ನೀರಿನಷ್ಟು ಸಲೀಸು, ಸರಾಗ. ಅವರ ಹೊಸ ಕೃತಿಯೊಂದು ಹೊರಬಂದಿದೆ, 'ಅಪೂರ್ವ ಪಶ್ಚಿಮ ಘಟ್ಟ'. ಮತ್ತೊಮ್ಮೆ ನಾಗೇಶ ಹೆಗಡೆ ತಮ್ಮ ಬರಹದ ಚುಬುಕನ್ನು ಒರೆಗೆ ಹಚ್ಚಿ ಬರೆದಿದ್ದಾರೆ. ಎಲ್ಲೂ ಓದುಗನಿಗೆ ಭಾರವಾಗದೆ, ಎಳೆಯದೇ ಪಶ್ಚಿಮ ಘಟ್ಟಗಳ ದರ್ಶನ ಮಾಡಿಸಿದ್ದಾರೆ. ಅದೇ ಚವರ್ಿತ ಚರ್ವಣ ಹೇಳದೆ ಹೊಸದೊಂದು ಲೋಕ ಕಟ್ಟಿ ಕೊಟ್ಟಿದ್ದಾರೆ. ಓದಿ ಕೆಳಗಿಟ್ಟರೆ ಹೃದಯ ಭಾರ ಭಾರ. ಸಾಕ್ಷಾತ್ ನಾವೇ ಅಲ್ಲಿ ಅಲೆದು ಬಂದಂತೆ ಭಾಸವಾಗುತ್ತದೆ. ಮನಸ್ಸು ಅಲ್ಲಿಗೆ ಓಡುತ್ತದೆ.
ಇಲ್ಲಿನ ಜೀವ ಸಂಕುಲಗಳ ಹೊಸ ಲೋಕ, ವಿಶಿಷ್ಟ ಅನನ್ಯ ಪ್ರಭೇದದ ಪ್ರಾಣಿ, ಪಕ್ಷಿ, ಕೀಟ ಪ್ರಭೇದಗಳ ಪರಿಚಯ, ಅಳಿವಿನಂಚಿನ ಸಸ್ಯ ಪ್ರಭೇದಗಳ ಸ್ತೂಲ ಪರಿಚಯ ಮಾಡಿಸಿದ್ದಾರೆ. ಮನುಜನಿಂದ ಹಾಳಾದ ಜೀವ ಸಂಕುಲಗಳು, ಅವನ ಅಭಿವೃದ್ಧಿ ದಾಹಕ್ಕೆ ಮರೆಗೆ ಸಂದಲಿರುವ ಕಾಡು, ಜೀವಿಗಳ ಸೂಕ್ಷ್ಮ ಪರಿಚಯ ಮಾಡಿಸಿದ್ದಾರೆ. ಇಲ್ಲಿ ನಡೆದ ಹೋರಾಟಗಳ ಚಿತ್ರಣ ಬದಲಾದ ಹೋರಾಟದ ಹಾದಿಯ ಸೊಲ್ಲನ್ನು ಕಟ್ಟಿಕೊಟ್ಟಿದ್ದಾರೆ.
ಜೊತೆಗೆ ನಮ್ಮ ಇಲಾಖೆಗಳ ಪೊಳ್ಳುತನವನ್ನೂ, ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲಾಗುವ ಅನಾಚಾರಗಳನ್ನು ಕೆನಾರಾ ಟ್ರೇಲ್ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಹೊಸ ಪ್ರವಾಸೋಧ್ಯಮಕ್ಕೊಂದು ಹೊಳಹನ್ನು ಕೊಟ್ಟಿದ್ದಾರೆ.
ಪಶ್ಚಿಮ ಘಟ್ಟಗಳ ಒಳ ಹೊರಗನ್ನು ಈ ಕೃತಿ ತರೆದಿಟ್ಟಿದೆ. ನಾವೆಷ್ಟು ಪ್ರಕೃತಿಗೆ ಋಣಿಯಾಗಿರಬೇಕು ಎಂಬ ಸಂದೇಶ ನೀಡುತ್ತಾ ಓದುತ್ತಾ ಹೋದಂತೆ ನಾವು ಕಳೆದುಕೊಂಡ ಆ ಅಪೂರ್ವ ಪಶ್ಚಿಮ ಘಟ್ಟ ನಮ್ಮ ಕಣ್ಣ ಮುಂದೆ ಸುಳಿದು ಹತಾಶೆಗೆ ನೂಕಿಬಿಡುತ್ತದೆ. ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾಗಿ ನಾವು ಇದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂಬುದು ಹಳಸಲು ಸರಕು. ಆದರೂ ಹೇಳಲೇ ಬೇಕಿದೆ ಉಳಿಸಿ, ಉಳಿಸಿ ಎಂದು.

ಕೊಂಡು ತಂದು ಓದಿಸಿದ ಮಿತ್ರ ನಾಗರಾಜ್ನಿಗೆ ಧನ್ಯವಾದಗಳು. ಇನ್ನೇಕೆ ತಡ ಕೊಂಡು ಓದಿ.


Wednesday, October 30, 2019

ಅಪ್ಸರೆಯರ ಅಮರ ಲೋಕದಿಂದ ....


ಅಬ್ಬಬ್ಬಾ ಹಾರ್ನಬಿಲ್ ಹಬ್ಬ!

ನನ್ನ ಮನ ಗೆದ್ದ ಚಿತ್ರಾಂಗದೆ!😆😆
 ತರವಾರಿ ಬಿದಿರಿನ ಡಬ್ಬಿಗಳು, ಬಿದಿರ ತಟ್ಟೆಗಳು, ಬಿದಿರ ಚಮಚಗಳು, ಬಿದಿರಿನ ಚಹದ ಕೆಟಲ್ಗಳು, ಚಿತ್ತಾಕರ್ಷಕ ಕೀ ಚೈನ್ಗಳು, ಬಿದಿರಿನ ನೀರಿನ ಬಾಟಲಿ!, ಗಿಡದ ಕಾಂಡದಿಂದ ತಯಾರಿಸಿದ ವಿಶಿಷ್ಟಚಾಪೆಗಳು, ವಿಶಿಷ್ಟ್ಯ ಶಾಲ್ಗಳು, ಕಾಪರ್ೆಟ್ಗಳು, ಭಿನ್ನ ರುಚಿಯ ದೇಸಿ ಜೇನುತುಪ್ಪ,  ವಿವಿಧ ಹರಳುಗಳಿಂದ ಅಲಂಕೃತ ವಿಚಿತ್ರ ವಿನ್ಯಾಸದ ಕ್ಲಿಪ್ಪುಗಳು, ಮನಸೂರೆಗೊಳಿಸುವ ವಿವಿಧ ಹರಳುಗಳ ಸರಗಳು, ಮರದ ಕಾಡುಕೋಣಗಳು, ರೈನೋಗಳು, ಮರದಿಂದ ಮಾಡಿದ ಹಾರ್ನಬಿಲ್ ಹಕ್ಕಿಗಳು, ಉಬ್ಬು ಶಿಲ್ಪಗಳು, ವಿಚಿತ್ರ ವಿನ್ಯಾಸದ ಹಿತ್ತಾಳೆ ಪದಕದ ಸರಗಳು ಕೊನೆಗೆ ಬಿದಿರಿನ ನಳ್ಳಿಗಳು! ಚಿತ್ರ ವಿಚಿತ್ರ ಪೋಷಾಕಿಂದ ಕಂಗೊಳಿಸುವ ನೃತ್ಯಗಾರರು. ವಿಶಿಷ್ಟ ದೇಸಿ ಆಟ, ಕುಣಿತ. ಕಣ್ಣಿಗೆ ಹಬ್ಬ. ಕಣ್ಣು ಹಾಸಿದಲ್ಲೆಲ್ಲಾ ಕಲೆ,ಕಲೆ ಮತ್ತು ಕಲೆ! ವಿವರಣೆಗೆ ನಿಲುಕದ ಕಲಾ ಗ್ರಾಮ! ಎಲ್ಲೆಲ್ಲೂ ವಯ್ಯಾರದ ಮದನಿಕೆಯರು! ಚಿತ್ರ ವಿಚಿತ್ರವಾದ ಅವರ ಪೋಷಾಕುಗಳು. ಚಹಾ ತಂದಿಡಲೂ ಅಪ್ಸರೆ 'ಚಿತ್ರಾಂಗದೆ'! ಇನ್ನೇನು ಬೇಕು ಸ್ವರ್ಗಕ್ಕೆ ಮೂರೇ ಗೇಣು.


ಇಂತಹ ಕ್ರಾಪ್ಟ್ ಮೇಳಗಳನ್ನು ಭಾರತವನ್ನು ಬಿಟ್ಟು ವಿಶ್ವದ ಯಾವ ಭಾಗದಲ್ಲೂ ನೀವು ಊಹಿಸಲಾರಿರಿ! ಇಂತಹ ವಿಶಿಷ್ಟ ಅಂತರಾಷ್ಟ್ರೀಯ ಹಬ್ಬ ನಡೆಯುವುದು ನಮ್ಮ ದೇಶದ ನಾಗಾಲ್ಯಾಂಡ್ನ ಕಿಸಾಮ ಎಂಬ ಹಳ್ಳಿಯಲ್ಲಿ. ಸಂಪ್ರದಾಯಸ್ಥ ನಾಗಾ ಕುಟಿರಗಳನ್ನು ಇಲ್ಲಿ ನಿಮರ್ಿಸಿ ಡಿಸೆಂಬರ್ 1 ರಿಂದ ಡಿಸೆಂಬರ್ 10 ರವರೆಗೆ ಹಾರ್ನಬಿಲ್ ಹಬ್ಬವೆಂದು ಆಚರಿಸಲಾಗುತ್ತದೆ. 
ಒಂದು ಸಾಂಪ್ರದಾಯಿಕ ಮನೆ 

ಸುಮಾರು ಹದಿನೇಳಕ್ಕೂ ಹೆಚ್ಚು ಬುಡಕಟ್ಟು ಜನಾಂಗವನ್ನು ಹೊಂದಿರುವ ಈ ರಾಜ್ಯ ಅದಕ್ಕಿಂತಲೂ ಹೆಚ್ಚು ಭಾಷೆಗಳನ್ನು ಬಳಸುತ್ತೆ! ಒಂದು ಇನ್ನೊಂದರಂತಿರದ ಭಾಷೆಗಳು. ಅವುಗಳ ನಡುವಿನ ಸಾಮ್ಯವು ಕಡಿಮೆ. ಅವರ ಒಂದೆರಡು ಶಬ್ದ ಕಲಿತೆನಾದರೂ ಒಂದೂ ಮನಸ್ಸಿನಲ್ಲಿ ಉಳಿಯಲಿಲ್ಲ.
ಕಲಾ ವಸ್ತುಗಳನ್ನು ಕೊಳ್ಳಲು ಆತುರ ...

Tribe of Nagaland.
ಹೆಚ್ಚಿನ ಗುಂಪುಗಳು ಮಾನವ ಹಂತಕರದು (ಜಚಿಜ ಣಟಿಣಜಡಿ) . ಹೆಡ್ ಹಂಟರ್ಸ್ ಎಂದು ಕರೆಯಲ್ಪಡುವ ಇವರ ಇತಿಯೋಪರಿಯ ಅಧ್ಯಯನ ಮಾನವ ಉಗಮ ಶಾಸ್ತ್ರಕ್ಕೊಂದು ಹೊಸ ದಿಶೆಯನ್ನು ನೀಡಬಲ್ಲದು. ಯಾರು ಚೆನ್ನಾಗಿ ಮತ್ತೊಬ್ಬನ ತಲೆ ಕಡಿಯುವವನೋ ಅವನೇ ಗುಂಪಿನ ನಾಯಕ. ಇಂತಹ ಅನೇಕ ಹೆಡ್ ಹಂಟರ್ಸ್ ಹಬ್ಬಕ್ಕೆ ಬಂದಿದ್ದರು. ಇವರು ಕೊಂದ ವ್ಯಕ್ತಿಯ ತಲೆ ಬುರುಡೆಯನ್ನು ಮೊದಲು ಧರಿಸುತ್ತಿದ್ದರು. ಇವರ ವೇಷಭೂಷಣ, ಧಿರಿಸು, ತಲೆ ಪೋಷಾಕು, ಕತ್ತಿ ಎಲ್ಲವೂ ಅನನ್ಯ. ಪ್ರತೀ ಬುಡಕಟ್ಟು ಸಹ ಮತ್ತೊಂದರಿಂದ ಭಿನ್ನ. ಕೆಲ ಗುಂಪು ಕತ್ತಿ ಹಿಡಿದರೆ ಕೆಲವು ಈಟಿಯನ್ನು ಆಯುಧವಾಗಿ ಬಳಸುವರು. 

The tribe dance.

A tribe man.

ಇವರ ಆಚರಣೆಗಳು, ಮನೆ, ಸಂಪ್ರದಾಯ, ಮದುವೆಯ ಕ್ರಮಗಳು ಎಲ್ಲವೂ ವಿಭಿನ್ನ. ಗ್ರಾಮದಲ್ಲಿ ರಚಿಸಿದ ಅವರ ಮನೆಗಳಲ್ಲಿ ಅವರ ಸಾಂಪ್ರದಾಯಿಕ ಉಡುಗೆ, ಆಭರಣ, ಬಟ್ಟೆ, ಆಯುಧಗಳನ್ನು ಪ್ರದಶರ್ಿಸುತ್ತಾರೆ. ನಿಮ್ಮನ್ನು ಸ್ವಾಗತಿಸುತ್ತಾರೆ. ಎಲ್ಲಾ ಪಂಗಡ, ಉಪ ಪಂಗಡ, ಸಂಪ್ರದಾಯಗಳ ಫಲಕಗಳಿವೆ. ಅರ್ಧ ದಿನ ವಿವಿಧ ಪಂಗಡಗಳ ನೃತ್ಯ, ಸಂಪ್ರದಾಯಗಳ ಪ್ರದರ್ಶನ 10 ರಿಂದ 12 ಗಂಟೆಯವರೆಗೆ ಏರ್ಪಡಿಸುವರು. 
Sumi Ki One of the major tribe.

ಇವರ ವಧು ವರಾನ್ವೇಷಣೆ ಬಹಳ ವಿಭಿನ್ನವಾಗಿ ನಡೆಯುತ್ತೆ. ಒಂದು ಬುಡಕಟ್ಟಿನ ವರ-ವಧುವನ್ನು ಒಂದು ಕಡೆ ಸೇರಿಸಲಾಗುತ್ತದೆ. ಅವರ ಆಯ್ಕೆಗೆ ಬಿಡಲಾಗುತ್ತದೆ. ಯಾರು ಯಾರನ್ನು ಬೇಕಾದರೂ ಆರಿಸಿಕೊಳ್ಳಬಹುದು. ನನಗೆ ಈ ಕ್ರಮ ಅತ್ಯಂತ ಸಮರ್ಪಕವೆನಿಸಿತು. ಅವರವರ ಕೆಮಿಸ್ಟ್ರಿಗೆ ಸರಿ ಹೊಂದುವ ಹುಡುಗ ಯಾ ಹುಡುಗಿಯನ್ನು ಆರಿಸಿಕೊಳ್ಳುವ ಅಧ್ಬುತ ಅವಕಾಶ. ಅವರಿಗೆ ಜನಿಸಿದ ಮಕ್ಕಳು ಅವರಿಗಲ್ಲದೆ ಇಡೀ ಸಮುದಾಯಕ್ಕೆ ಸೇರುತ್ತವೆ ಎನ್ನುವುದು ಮತ್ತೊಂದು ವಿಶೇಷ! ಎಲ್ಲರೂ ಎಲ್ಲದಕ್ಕೂ ಭಾದ್ಯಸ್ಥರು. ಇಂತಹ ಸಂಪ್ರದಾಯ ಈಗ ಅಳಿವಿನಂಚಿಗೆ ಸರಿದಿದೆ ಎಂಬುದೇ ಖೇದ. ಸ್ತ್ರೀ ಸ್ವಾತಂತ್ರ್ಯವೂ ಇಲ್ಲಿ ಬಹಳ ಹೆಚ್ಚು.
Opening dance.
ಇವರ ಆಹಾರ ಸಂಸ್ಕೃತಿಯೂ ಅನನ್ಯ. ಎಲ್ಲಾ ಜಾತಿಯ ಕಂಬಳಿ ಹುಳ, ಬಸವನ ಹುಳ, ಹಕ್ಕಿಗಳನ್ನು ಹೊಡೆದು ತಿನ್ನುತ್ತಾರೆ. ಹಾಗಾಗಿ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಂದಿಯೊಂದನ್ನು ಒಣಗಿಸಿ ತಿಂಗಳುಗಳ ಕಾಲ ಹಾಳಾಗದಂತೆ ಕಾಪಾಡುತ್ತಾರೆ. ಹಂದಿ ಮಾಂಸದಿಂದಲೂ ಅನೇಕ ಭಕ್ಷ್ಯಗಳನ್ನು ಮಾಡುತ್ತಾರೆ. ಹಾರ್ನಬಿಲ್ ಹಬ್ಬದಲ್ಲಿ ಎಲ್ಲೆಂದರಲ್ಲಿ ಹಂದಿ ಭಕ್ಷ್ಯ ಲಭ್ಯ. ಅಕ್ಕಿಯಿಂದ ತಯಾರಿಸಿದ ದೇಸಿ ಮಧ್ಯವನ್ನು ಬಿದಿರಿನ ಸುಂದರ ಲೋಟಗಳಲ್ಲಿ ಹೆಂಗಸರೂ ಕುಡಿಯುತ್ತಾರೆ.  ಸಸ್ಯಾಹಾರದಲ್ಲೂ ದೇಸಿ ಅಕ್ಕಿ ಮತ್ತು ಔಷಧೀಯ ಎಲೆಗಳಿಂದ  ತಯಾರಿಸಿದ ವಿಶಿಷ್ಟ ತಿನಿಸು ಗಾಲ್ಹೊ ನಿಮಗೆ ಉಣ್ಣಲು ಲಭ್ಯ. ಕನಿಷ್ಟ ಮೂರ್ನಾಲ್ಕು ಬಟ್ಟಲನ್ನು ನಾವು ಒಬ್ಬೊಬ್ಬರು ಹೊಟ್ಟೆಗಿಳಿಸಿದೆವು. ಅಷ್ಟು ರುಚಿಯಾಗಿತ್ತು! ಇಂತಹ ವಿಶಿಷ್ಟ ಕಲಾ ಪ್ರಕಾರಗಳಿಗೆ ಕಲಾ ಪ್ರಕಾರಗಳೇ ಸಾಕ್ಷಿ. ಐದು ದಿನವಿದ್ದರೂ ಬಿಟ್ಟು ಬರಲಾಗದೇ ಬಂದೆವು. ಇನ್ನೇಕೆ ತಡ ಮುಗಿಯುವ ಮುನ್ನ ಒಮ್ಮೆ ಕಣ್ತುಂಬಿಕೊಳ್ಳಿ.
.

ಶ್ರೀಧರ್. ಎಸ್. ಸಿದ್ದಾಪುರ.

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...