Saturday, December 29, 2012

ಕವಲೇದುರ್ಗ

ಮಲೆನಾಡಿನ ಮಗ್ಗುಲಿನಲ್ಲಿನಲ್ಲಿರುವ ಅದ್ಭುತ ಕೋಟೆ ಕವಲೇದುರ್ಗ. ತಿರ್ಥಹಳ್ಳಿಯಿಂದ ಕೇವಲ 16 ಕಿ.ಮಿ. ದೂರವಿರುವ ನೋಡುಗರ ಕಣ್ಮನ ಸೆಳೆಯುತ್ತದೆ. ನಮ್ಮ ಜನರ ಸಾಹಸ ಪ್ರವೃತ್ತಿ, ಧೈರ್ಯ, ದೂರದಶರ್ಿತ್ವ, ಸ್ವಾಭಿಮಾನದ ಪ್ರತೀಕವಾಗಿ ನಿಲ್ಲುತ್ತದೆ, ದೇಶಾಭಿಮಾನ ಮೂಡಿಸುತ್ತದೆ.

 ಈ ಕೋಟೆಯ ಇತಿಹಾಸವನ್ನು ಅನೇಕರು ಬೇರೆ ಬೇರೆ ರೀತಿಯಾಗಿ ವಿರಿಸಿದ್ದಾರೆ. 9ನೇ ಶತಮಾನದಲ್ಲಿ, ಬೆಳಗುತ್ತಿ ರಾಜರಿಂದ ಸುಂದರವಾಗಿ ಕಣ ಶಿಲೆಯಿಂದ ನಿಮರ್ಿಸಲ್ಪಟ್ಟಿತು. ವೆಂಕಟಪ್ಪ ನಾಯಕನಿಂದ ಪುರ್ನನಿಮರ್ಿಸಲಾಯಿತು. ತದನಂತರ ಇದನ್ನು ಭುವನಗಿರಿ ಎಂದು ಕರೆಯಲಾಯಿತು. ಪ್ರಾರಂಭದ ದಿನಗಳಲ್ಲಿ ವಿಜಯನಗರದವರ ಅಧೀನದಲ್ಲಿದ್ದ ಕೋಟೆ ಮುಂದೆ ಕೆಳದಿಯ ಅಧೀನಕೊಳಪಟ್ಟಿತು. 1763 ರಲ್ಲಿ ಹೈದರಾಲಿಯು ಈ ಕೋಟೆಯನ್ನು ವಶಪಡಿಸಿಕೊಂಡನು. ಮುಂದೆ ಇದು ಕವಲೇದುರ್ಗವೆಂದು ಹೆಸರಾಯಿತು. . ಮೂರು ಹಂತಗಳಲ್ಲಿ ಕಾವಲು ಗೋಪುರಗಳನ್ನು ನಿಮರ್ಿಸಿ  ಭದ್ರತೆಯನ್ನು ಹೆಚ್ಚಿಸಲಾಯಿತು. 1882ರವರೆಗೂ ಇದು ತಾಲೂಕು ಕೇಂದ್ರವಾಗಿತ್ತು.



    
ಇಲ್ಲಿ ಅರಮನೆ, ಸ್ನಾನಗೃಹ, ಕೆರೆ, ಅಸ್ತ್ರ ಒಲೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಮರ್ಿಸಿದ್ದಾರೆ. ವ್ಯವಸ್ಥಿತವಾಗಿ ಕಾವಲು ಗೋಪುರಗಳನ್ನು ನಿಮರ್ಿಸಿಲಾಗಿದೆ. ವಿಶ್ವನಾಥ ದೇವಸ್ಥಾನದ ಎದುರಿಗಿರುವ ಎರಡು ಗರುಡ ಗಂಬಗಳು ಅತಿ ವಿಶಿಷ್ಟವೂ ಅಪರೂಪದ ರಚನೆಗಳಾಗಿವೆ. ಈ ರೀತಿಯ ರಚನೆಗಳು ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವುದಿಲ್ಲ. ದೇವಸ್ಥಾನದ ಶಿಲ್ಪಕಲೆಯು ಗಮನಸೆಳೆಯುತ್ತದೆ. ಶಿಖರದ ತುದಿಯಲ್ಲಿ ದೇವಸ್ಥಾನಗಳಿವೆ. ಮೇಲಿನ ತುದಿಯಲ್ಲಿ ಸಣ್ಣ ಕೊಳಗಳಿವೆ. ಈ ಕೊಳಗಳಲ್ಲಿ ವರ್ಷದ ಎಲ್ಲಾಕಾಲಗಳಲ್ಲೂ ನೀರಿರುವುದು ವಿಶೇಷ. ಈ ಕೊಳವನ್ನು ಗದಾ ತೀರ್ಥವೆಂದು ಕರೆಯಲಾಗುತ್ತದೆ. ಈ ಕೊಳವನ್ನು ಭೀಮನು ತನ್ನ ಗದೆಯಿಂದ ನಿಮರ್ಿಸಿದನೆಂಬುದು ಪ್ರತೀತಿ. 


    ಒಟ್ಟಾರೆಯಾಗಿ ಈ ಎಲ್ಲಾ ರಚನೆಗಳು ಅಧ್ಯಯನ ಯೋಗ್ಯವಾಗಿದೆ. ನಮ್ಮ ಪೂವರ್ಿಕರ ಬಗೆಗೆ ಹೆಮ್ಮೆ ಮೂಡುವಂತಿದೆ 




ಅರಮನೆ

ಅರಮನೆ




ಅರಮನೆ, ಸ್ನಾನಗೃಹ

ವಿಶ್ವನಾಥ ದೇವಸ್ಥಾನ


Wednesday, October 10, 2012

ಸೈಂಟ್ ಮೇರಿಸ್ ದ್ವೀಪ

ಸೈಂಟ್ ಮೇರಿಸ್ ದ್ವೀಪ


ನಮ್ಮ ಊರಿನ(ಉಡುಪಿ) ಸುಂದರ ದ್ವೀಪ ಸೈಂಟ್ಮೇರಿಸ್. ಕಣ್ಮನ ಸೆಳೆಯುವ ಇದರ ಚಿತ್ರಗಳು,ವಿಚಿತ್ರವಾದ ಕಲ್ಲಿನ ರಚನೆಗಳು, ಚಿತ್ತಾಕರ್ಷಕ ಸಮುದ್ರ ಜೀವಿಗಳು. ಕಡಲಿಗೆ ಮುತ್ತಿಕ್ಕುವ ತೆಂಗಿನ ಮರಗಳು. ಕಂಡಷ್ಟೂ ಮತ್ತೆ ಮತ್ತೆ ಕಾಣ ಬೇಕೆನಿಸುವ ಅಲೆಗಳು. ದ್ವೀಪದ ಕಲ್ಲಿಗೆ ಬಡಿದಾಗ ಅಲೆಗಳು ತಾಕಿದಾಗ ಉಂಟಾಗುವ ನಿನಾದ ಸವಿ ಅನುಭವಿಸಿಯೇ ತೀರಬೇಕು. ಈ ಅತಿಸುಂದರ ಮೋಹಕ ತಾಣ ಥೈಲೆಂಡ್, ಬಮರ್ಾವನ್ನೆಲ್ಲಾ ಮೀರಿಸುವಂತಿದೆ.
















Friday, September 21, 2012

BLUE ROCKET ಮಿಂಚುಳ್ಳಿಯ ಬೆನ್ನತ್ತಿ



        ಹಲವು ವರ್ಷಗಳಿಂದ ಕಾಡಿದ BLUE ROCKET ಮಿಂಚುಳ್ಳಿ. ಸಾಮಾನ್ಯ ಮಿಂಚುಳ್ಳಿಗಿಂತ ತೀರ ಚಿಕ್ಕದಾದ ಈ ಹಕ್ಕಿ ಅದ್ಭುತ ವೇಗದಿಂದ  ಹಾರಬಲ್ಲದು. ಸಾಮಾನ್ಯವಾಗಿ ಗುರುತಿಸಲಾಗದಷ್ಟು ವೇಗವಾಗಿ ಹಾರುವುದು ಇದರ ವಿಶೇಷತೆ. ಮೈ ಮೇಲೆ ಮಖ್ಮಲ್  ಬಟ್ಟೆ ತೊಟ್ಟಂತೆ ಹೊಳಪಿನ ನೀಲಿ, ಬಿಳಿ ಮತ್ತು ಕಪ್ಪು ಬಣ್ಣಗಳು. ಅತಿ ಚುರುಕಾದ ಸೂಕ್ಷ್ಮಗ್ರಾಹಿ ಕಣ್ಣು, ಸಣ್ಣ ಅಲುಗಾಟವನ್ನೂ ಗ್ರಹಿಸುತ್ತದೆ.
ಕಳೆದೊಂದು ವರ್ಷದಿಂದ ಈ ಹಕ್ಕಿಯು ಮೀನು ಹಿಡಿದಿರುವುದನ್ನು ಸೆರೆಹಿಡಿಯಬೇಕೆಂದು ಕೆರೆ, ಹೊಳೆ ದಡದಲ್ಲಿ ಗಂಟೆ ಗಟ್ಟಲೆ ಹೊಂಚು ಹಾಕಿದ್ದೆ. ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿತ್ತು. ಒಮ್ಮೆಯಂತು ಮೀನು ಹಿಡಿದು ನನ್ನ ವಿರುದ್ಧ ದಿಕ್ಕಿಗೆ ಮುಖಮಾಡಿ ತಿಂದು ಹಾರಿಹೋಗಿತ್ತು.
         ಕಳೆದ ಬುಧವಾರ ನಮ್ಮ ತಂಡ ಮಿಂಚುಳ್ಳಿ ಸೆರೆಗೆಂದು ಬೆಳಿಗ್ಗೆ 9.00ಕ್ಕೆ ಹೊರಟಿತು. ಈ ಬಾರಿಯೂ ನಮ್ಮ ಸಣ್ಣ ಅಲುಗಾಟವೊ, ದೂರದಲ್ಲಿ ನಾವಾಗಮಿಸುವುದು ತಿಳಿದಂತೆ ಧ್ಯಾನಕ್ಕೆ ಭಂಗ ಬಂದ ಋಷಿಯಂತೆ ಪರಾರಿ. ಛಲಬಿಡದೆ ಅದು ಹೋದ ಕಡೆ ಹಿಂಬಾಲಿಸಿದೆವು. ಮೂರು ಬಾರಿ ಪರಾರಿಯಾಗಿ ನಿರಾಸೆ ಮೂಡಿಸಿತ್ತು. ಇದನ್ನು ಸೆರೆಹಿಡಿಯುವುದು ಅಸಾಧ್ಯವೆಂದು ತೀಮರ್ಾನಿಸಿದ್ದೆವು. ಹೊರಡುವ ತಯಾರಿ ನಡೆದಿತ್ತು. ಕೊನೆಯ ಒಂದೆರಡು ಸುತ್ತಲಿನ ಪೋಟೊ ತೆಗೆಯುವ ಸಲುವಾಗಿ ನಾಗರಾಜ ವೀಕ್ಷಿಸುತ್ತಿದ್ದರು. ಅದೇ ಸಮಯಕ್ಕೆ ಪರಾರಿಯಾದ ಹಕ್ಕಿ ಪ್ರತ್ಯಕ್ಷ ಅದೂ ಮೀನಿನೊಂದಿಗೆ. ಅದೇ ಜಾಗದಿಂದ ಅದು ಆಗಷ್ಟೆ ಪರಾರಿಯಾಗಿ ರೇಗಿಸಿಹೋಗಿತ್ತು. ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು. ನಿಮ್ಮೊಂದಿಗೆ ಹಂಚಿಕೊಂಡು ಮನಸ್ಸು ಹಗುರಾಗಿದೆ, ಬಹು ದಿನದ ಕನಸು ನನಸಾಗಿದೆ.
ಆದರೆ ಈ ಬಾರಿ ಮಾತ್ರ RED HAND ಆಗಿ ಕೆಮರಾ ಕಣ್ಣಿಗೆ ಸಿಕ್ಕಿಬಿದ್ದು ಕ್ಲಿಕ್ಕಾಗಿಸಿದೆ. ನಿಮಗೂ ಇಷ್ಟವಾಗಬಹುದು, ಪ್ರತಿಕ್ರಿಯಿಸಿ....
ಕ್ಯಾಮಾರ ನೀಡಿ ಸಹಕರಿಸಿದ ಗೆಳೆಯ ನಾಗರಾಜ್ ಮತ್ತು ನನ್ನ ಮನೆ ಮಂದಿಗೆ ಧನ್ಯವಾದಗಳು......


Small Kingfisher with the prey for its kid!



Friday, August 24, 2012

ಗೋಕರ್ಣದಲ್ಲಿ ಮಳೆ.




 ಮಳೆಯಲ್ಲೇ ಒಡಾಡುವ ಜನರು. 
ಓಂ ಬೀಚ್ 


ಕುಡ್ಲ ಬೀಚ್ 
ಅಲೆಗೆ ಮೈಯೊಡ್ಡಿರುವ ಯುವತಿ.


ಮಳೆಗಾಲದಲ್ಲಿ ಮೈತುಂಬಿಕೊಂಡಿರುವ ಗೋಕರ್ಣ. 





Monday, August 13, 2012

ಹನಿ ಮುತ್ತಿನ ಹಾರ

ವರ್ಷ ವೈಭವ


ಸಿದ್ಧಾಪುರ ಬಳಿಯ ಬಾಳೆಬರೆಯಲ್ಲಿನ ಸುಂದರ ಅನೂಹ್ಯ ಜಲಧಾರೆ. ವರ್ಷವಿಡಿ ಧುಮುಕುತ್ತಿರುತ್ತದೆ. ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಜಲ್ಲನೆ. 
ನೀರ ಹನಿಗಳೆಲ್ಲ ಮುತ್ತಿನ ಧಾರೆಗಳಂತೆ ಹಾರವಾಗಲು ಪೈಪೋಟಿಗಿಳಿದು ಜಿಗಿಜಿಗಿದು ಬರುತ್ತಿವೆ.  

Tuesday, August 7, 2012

ವಿಸ್ಮಯ ಕೀಟ ಜಗತ್ತು

ಹಾರಲು ನಾನು ತಯಾರಿದ್ದ್ದೇನೆ. ಹಿಂದೆ ಈ  ಕೀಟ  75 ಸೆಂಟಿ ಮೀಟರ್ ಬೆಳೆಯುತ್ತಿತ್ತು! ಎಂದರೆ  ನಮಗೆ ಆಶ್ಚರ್ಯವಾಗದಿರುತ್ತೆಯೇ?

Sunday, August 5, 2012

ವಿಚಿತ್ರ ಕೀಟ..

MAN INSECT


ಮನುಷ್ಯರ ಮುಖದ ರಚನೆ  ಹೊಂದಿರುವ ವಿಚಿತ್ರ ಕೀಟ..


ಹೀಗೂ ಉಂಟೆ?


ಅಲ್ಲಾ ಅಂದವರು ಯಾರು ಸ್ವಾಮಿ...? 

ನೀಲಗಿರಿ ಥಾರ್


ವಿಶ್ವ ದ ಮೂರುಕಡೆ ಮಾತ್ರ ಕಂಡುಬರುವ ನೀಲಗಿರಿ ಥಾರ್ ಮನಾರಿನ ಅಭಯಾರಣ್ಯಕ್ಕೆ ಹೋದಾಗ ಕ್ಯಾಮರ ಕಣ್ಣಲ್ಲಿ ಕಂಡದ್ದು..

Saturday, August 4, 2012

ಎಡಕುಮೇರಿ ಎಂಬ ನಿಲ್ದಾಣವಲ್ಲದ ನಿಲ್ದಾಣ...


ಎಂಥಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿಯ ಹೆಸರು ಕೇಳಿರದ ಚಾರಣಿಗ ಕರ್ನಾಟಕದಲ್ಲಿ ಇಲ್ಲವೇನೋ. ಅಂತಹ ಅದ್ಭುತ ಅಹ್ಲಾದಕರ ಚಾರಣ ಸ್ಥಾನ. ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟ್ಯವಾದ ಮತ್ತೊಂದು ನಿಲ್ದಾಣವಿರಲಿಕ್ಕಿಲ್ಲ


ತೇಜಸ್ವಿಯವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಭೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುವೇರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ್ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್ ಒಂದು ಇದೆ ಎಂಬುದೇ ಒಂಥರಾ ವಿಚಿತ್ರವಲ್ಲವೆ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ 8 ಕಿಲೋ ಮೀಟರ್ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಎಡಕುವೇರಿ.



ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂತರ್ಿ ಹಸಿರು ಚಾದರ ಹೊದ್ದಿರುತ್ತವೆ ಬೆಟ್ಟಗಳು. ಬೇಸಿಗೆಯಲ್ಲೂ ಹಂಗೇ ಇರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ. ಇಲ್ಲಿನ ರೈಲ್ವೆ ಮಾಸ್ತರನ್ನ ಮಾತಾಡಿಸಿದೆ, ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ. 

ಎಡುಕುವೇರಿಯ ಪಾಸಿಂಗ್ ರೈಲ್ವೆ ಟ್ರಾಕ್. ಸುಂದರ ಪರಿಸರ. ಒಂದು ದಿನದ ಪಿಕ್ನಿಕ್ ಗೆ ಹೇಳಿಮಾಡಿಸಿದ ತಾಣ. 

ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್ ಮಾಸ್ಟ್ರಗಳಿಗೆ ಬಹಳ ಕಷ್ಟ. ವಿದ್ಯುತ್ ಬೇರೆ ಇಲ್ಲಾ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾಟರ್ುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿಮರ್ಿಸಿದ ಒಂದೆರಡು ಸಣ್ಣ ಮನೆಗಳು. 


ಎಡುಕುವೇರಿಯ  ರೈಲ್ವೆ  ಟನ್ರಿಂಗ್  
     
      ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ. ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿಸಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಹಲವು ವರುಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಇದನ್ನು ಸಂಪೂರ್ಣ ನಿಶೇಧಿಸಲಾಗಿದೆ! ಈಗಿಲ್ಲಿ ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್ ಕೇಸ್ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಒಮ್ಮೆಯಾದರು ಯಡಕುಮರಿಯಲಿ ರಾತ್ರಿ ಕಳೆಯುವ ಇರಾದೆ ಇದೆ. ನೀವು ಬರುವಿರಾ?

ನೆರಳು ಬೆಳಕು


ನೀವೇನು ನೋಡುತ್ತಿದ್ದೀರಿ ಬಿಸಿಲಿನ ಜಾಗದಲ್ಲಿ ಹೇಳಬಲ್ಲಿರಾ?  

Saturday, June 30, 2012

ನನಗೆ ನಾನೇ ಹೀರೊ....



ಬದುಕೆಂಬ ಸಿನಿಮಾಕ್ಕೆ ನಾನೆ ಹೀರೊ ನಾನೆ ವಿಲನ್. ಏರಿದೆತ್ತರಕ್ಕೂ ಬಿದ್ದ ಪ್ರಪಾತಕ್ಕೂ ನಾನೆ ಕಾರಣ. 


ಈ ಸಂದರ್ಭದಲ್ಲೊಂದು ಝೆನ್ ಕತೆ ನೆನಪಾಗುತ್ತಿದೆ. 
ನಾಯೊಂದು ನದಿ ದಾಟುತ್ತಿತ್ತು. ನೀರಿನಲ್ಲಿ ತನ್ನ 
ಪ್ರತಿಬಿಂಬವನ್ನು ನೋಡಿ ಬೊಗಳುತ್ತಿತ್ತು ಹಾಗು ಮುಂದುವರಿಯಲು 

ಹೆದರುತ್ತಿತ್ತು. ನದಿ ದಾಟದೇ ಅಲ್ಲಿಯೇ ನಿಂತಿತ್ತು ನಂತರ ಹಿಂದಿರುಗಿತು.
ಪ್ರತಿ ಸಂದರ್ಭದಲ್ಲೂ ಮನುಷ್ಯ ತನಗೆ ತಾನೆ ನಿರ್ಭಂದ ವಿಧಿಸಿಕೊಂಡು ಪರಿತಪಿಸುತ್ತಾ ಮುಂದುವರಿಯದೆ ತನಗು 

ಪರಿಸರಕ್ಕೂ ಒಳಿತು ಮಾಡದೆ ಕ್ಷುದ್ರ ಜೀವಿಯಂತೆ ಬದುಕುತ್ತೇವೆ.
ಹುಲಿ ಜೇಡ



ಶಿಖರದೆತ್ತರದಲಿ 

"ತನ್ನನ್ನು ತಾನು ಮೀರುವುದೇ ಯಶಸ್ಸಿನ ಮೊದಲ ಹೆಜ್ಜೆ"

Monday, April 30, 2012

ಪಕ್ಷಿಗಳ ಮಾತು ಕತೆ ರಂಗನ ತಿಟ್ಟುವಿನಲ್ಲಿ

ಪಕ್ಷಿಗಳ ಮಾತು ಕತೆ ರಂಗನ  ತಿಟ್ಟುವಿನಲ್ಲಿ
ತುತ್ತಾ ಮುತ್ತಾ 
ಆಸ್ಟ್ರೇಲಿಯನ್ ಹಕ್ಕಿಗಳು

ಮರಿ ಹಕ್ಕಿಗಳ ಹಾರಾಟದ ತಯಾರಿ

ಅಮ್ಮನ ತರಬೇತಿ

ಎಂಥಾ ವಿಚಿತ್ರ ಲೋಕ .....ಮರಿಯ ಅಂಬೋಣ 



ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...