Saturday, January 30, 2021

ಬೈರಪ್ಪನ ದಾಟು ತಂದ ಪೇಚಾಟ!

ಬೈರಪ್ಪನ ದಾಟು ತಂದ ಪೇಚಾಟ! ಕೆಲಸಕ್ಕೆ ಸೇರಿದ್ದಷ್ಟೇ. ನಾಲ್ಕು ತಿಂಗಳಿನಿಂದ ಸಂಬಳವೇ ಆಗಿರಲಿಲ್ಲ. ಮನೆಯಿಂದ ಹೊರಟಾಗ ಕಿಸೆಯಲ್ಲಿ ಕೇವಲ ನೂರು ರೂ ಮಾತ್ರವಿತ್ತು. ಕೈಯಲ್ಲಿ ಭೈರಪ್ಪನವರ ದಾಟು ಕಾದಂಬರಿ ಹಿಡಿದು 7.30ಕ್ಕೆ ಬಂದ ಗಜಾನನ ಬಸ್ಸಿಗೆ ಹತ್ತಿ ಕಂಡಕ್ಟರ್ಗೆ ನೂರು ರೂಪಾಯಿ ಕೊಟ್ಟು, ಟಿಕೀಟು ಇಸಕೊಂಡು ದಾಟು ಕಾದಂಬರಿಯಲ್ಲಿ ಮುಳುಗಿದೆ. 








 ಕಥೆಯು ಆಸಕ್ತಿಕರ ಹಂತಕ್ಕೆ ಬಂದಿತ್ತು. ಅಂದು ಕಾದಂಬರಿಯಲ್ಲಿ ಎಷ್ಟು ತಲ್ಲೀನನಾದೆನೆಂದರೆ ಜಗತ್ತೆಲ್ಲಾ ಶೂನ್ಯವಾದಂತೆನಿಸಿತು. ನಾನಿಳಿಯುವ ಸ್ಥಳ ಹಾಲಾಡಿ ಬಂದರೂ ತಿಳಿಲೇ ಇಲ್ಲ. ಪಕ್ಕವೇ ಕುಳಿತಿದ್ದವರೊಬ್ಬರು ನೀವಿಳಿವ ಸ್ಥಳ ಬಂತು ಎಂದು ಎಬ್ಬಿಸಿದರು. ಇಲ್ಲವಾದರೆ ಉಡುಪಿಯವರೆಗೆ ಹೋಗಿ ಬರುತಲಿದ್ದೆ! ಕಾದಂಬರಿಯನ್ನು ಹೆಗಲ ಚೀಲಕ್ಕೆ ತುರುಕಿ ಲಘುಬಗೆಯಿಂದ ಇಳಿದೆ. ಮುಂದಿನ ಬಸ್ಸಿಗೆ ಕಾದು ಕುಳಿತೆ. ನಡುವೆ ಕಿಸೆಗೆ ಕೈ ಹಾಕಿ ನೋಡಿದರೆ ಒಂದು ರೂಪಾಯಿಯೂ ಇರಲಿಲ್ಲ! ಅಚ್ಚರಿ, ಭಯ, ಉದ್ವೇಗ ಮುಂತಾದ ಭಾವಗಳೆಲ್ಲಾ ಒಟ್ಟಿಗೆ ಉಂಟಾದವು. ಈ ಊರಿಗೆ ಹೊಸಬ. ಸಾಲ ಹುಟ್ಟುವುದಾದರೂ ಹೇಗೆ? ತಲೆ ತುಂಬಾ ಮುಜುಗರ. ಕೇಳುವುದಾದರು ಯಾರಲ್ಲಿ? ಆಗಲೇ ಗೊತ್ತಾಗಿದ್ದು ಕಂಡಕ್ಟರ್ ಬಳಿ ಚಿಲ್ಲರೆ ತೆಗೆದುಕೊಳ್ಳದೇ ಇಳಿದು ಬಿಟ್ಟಿದ್ದು. ಕಂಡಕ್ಟರ್ ಹೊಸಬ. ನಾಳೆ ಕೇಳುವಂತಿಲ್ಲ. ಏನು ಮಾಡುವುದೆಂದು ತೋಚದೆ ಕುಳಿತೆ. ಮುಂದಿನ ಬಸ್ಸು ಹತ್ತುವಂತಿಲ್ಲ, ಹಿಂದಿರುಗಲೂ ಸಾಧ್ಯವಿಲ್ಲ್ಲ. ಪೋನ್ಗಳಿಲ್ಲದ ಕಾಲ. ಪುಣ್ಯಕ್ಕೆ ಬಸ್ಸಿನ ಟಿಕೆಟ್ ಕಿಸೆಯೊಳಗೆ ಕುಳಿತಿತ್ತು. ಬಳಿಗೆ ಬಂದ ಬಸ್ ಎಜೆಂಟ್ನ ಬಳಿ ಈ ಬಸ್ಸು ಎಷ್ಟು ಹೊತ್ತಿಗೆ ಹಿಂದಿರುಗುತ್ತೆ ಮರಾಯ ಎಂದು ಕೇಳಿದೆ. "12 ಗಂಟೆ" ಎಂದ. ಅಲ್ಲಿಯ ತನಕ ಕಾಯುವುದೆಂದು ನಿಶ್ಚಯಿಸಿ ಮತ್ತೆ ದಾಟು ಕಾದಂಬರಿಯಲ್ಲಿ ಮುಳುಗಿದೆ. ಅಂತೂ 12ಕ್ಕೆ ಬಸ್ಸು ಬಂದಿತು. ಬಸ್ಸು ಹತ್ತಿ ಕಂಡಕ್ಟರ್ ಬಳಿ ಚಿಲ್ಲರೆಗಾಗಿ ಕೇಳಿದೆ. ಪುಣ್ಯಾತ್ಮ ತಕರಾರಿಲ್ಲದೇ ಉಳಿದ ಚಿಲ್ಲರೆ ನೀಡಿದ. ಚಿಲ್ಲರೆ ಕಿಸೆಗಿಳಿಸಿ ಹಾಲಾಡಿಯಲ್ಲೇ ಉಂಡು ಕೆಲಸಕ್ಕೆ ತೆರಳಿದೆ.

ಶ್ರೀಧರ್ ಎಸ್. ಸಿದ್ದಾಪುರ. 

ಕುಂದಾಪುರ ತಾಲೂಕು 

 ಉಡುಪಿ ಜಿಲ್ಲೆ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...