Saturday, December 30, 2017

ಪ್ರಧಾನಿಯ ನ್ನೆ ಕಟಕಟಯಲ್ಲಿ ತಂದು ನಿಲ್ಲಿಸಿದಾತ ಮತ್ತು ಹ ೂ ಕಣಿವೆ...

ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ.........

     ಬದುಕೆಂಬ ಅಯಸ್ಕಾಂತ ಸೆಳೆದ್ದದ್ದು ಸಿಕ್ಕಿಂನ ಹೂ ಕಣಿವೆಗೆ. ನಾವು ಲಾಚುಂಗ್ ಹಾದು ಯುಮ್ತುಂಗ್ ವ್ಯಾಲಿ ನೋಡುವ ತವಕದಲ್ಲಿದ್ದೆವು. ಮಧ್ಯೆ ಉಳಿದದ್ದು ಒಂದು ದಿನ ಮಾತ್ರ. ಸುಮ್ಮನೆ ಕಳೆಯುವುದೇಕೆಂದು ಪಶ್ಚಿಮ ಬಂಗಾಲದ ಪುಟಾಣಿ ಹಳ್ಳಿ ಕಾಲಿಪೊಂಗ್ ನೋಡೋಣ ಎಂದುಕೊಂಡೆವು. 
ಹೂಕಣಿವೆಯಲ್ಲಿ..

ಹಿಮ ಹೊದ್ದ ಬೆಟ್ಟಗಳು ...

    ಇಲ್ಲಿಗೆ ಬಂದಾಗ ಭಾನುವಾರ. ಪೇಟೆ, ಬೀದಿಗಳೆಲ್ಲಾ ಭಯವಾಗುಷ್ಟು ಖಾಲಿ ಖಾಲಿ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ದಿನಕ್ಕೆ ಎರಡು ಬಸ್ಸು ಗ್ಯಾಂಗ್ಟಾಕ್ ಕಾಲಿಪೊಂಗ್ ನಡುವೆ ಚಲಿಸುತ್ತೆ. ಬೆಂಗಳೂರಿನಿಂದ ಬಗ್ದೊದ್ರದಲ್ಲಿಳಿದು ಡಾಜರ್ಿಲಿಂಗ್ ನೋಡಿ ಅಲ್ಲಿಂದ ಕಾಲಿಪೋಂಗ್ ತಲುಪಿದೆವು. ಪ್ರತಿಯೊಬ್ಬರಿಗೆ 12,000ದಷ್ಟು ವಿಮಾನಯಾನ ಖಚರ್ು ಮತ್ತು 10 ಸಾವಿರದಷ್ಟು ತಿರುಗಾಟದ ವೆಚ್ಚ ನಮ್ಮ ಜೋಳಿಗೆಯಿಂದ ಖಾಲಿಯಾಗಿತ್ತು. 
ಇದ್ದ ಒಬ್ಬೇ ಒಬ್ಬ ಟ್ಯಾಕ್ಸಿ ಚಾಲಕ ರಜತ್ನಲ್ಲಿ ಊರು ತೋರಿಸಲು ಚೌಕಾಸಿಗಿಳಿದೆವು. 2200ಕ್ಕೆ ಸಣ್ಣ ವಾಹನವೊಂದು ಪಡೆದುಕೊಂಡೆವು. ಮಣ ಮಣ ಮಂತ್ರಿಯಂತೆ ಗುಣು ಗುಣಿಸುತ್ತಾ ಬೆಳಗ್ಗೆ 7.30ಕ್ಕೆ ತಡವಾಗಿ ಅವನ ಸ್ನೇಹಿತನೊಬ್ಬ ಹಾಜರಾದ.  ಈ ಊರಿನ ಯಾರಿಗೂ ಧಾವಂತವಿದ್ದಂತೆ ತೋರಲಿಲ್ಲ. ಸಮಯಕ್ಕೂ ಕೂಡ!
ಎಲ್ಲೆಲ್ಲೂ ಬಿದಿರ ಮೆಳೆಗಳ ಪುಟಾಣಿ ಹಳ್ಳಿ ಕಾಲಿಪೊಂಗ್. ಶಾಂತ ಸಜ್ಜನ ಊರು. ಬೀದಿಯಲ್ಲಿ ಬಹಳ ಜನವಿದ್ದರೂ ಗದ್ದಲವಿಲ್ಲದೆ ಶಾಂತವೋ ಶಾಂತ. 1700ರ ಸುಮಾರಿಗೆ ನಾಲ್ಕಾರು ಮನೆಗಳಿದ್ದ ಊರು. ಬ್ರಿಟಿಷ್ ಪಳೆಯುಳಿಕೆಯ ಹಲವಾರು ಕಟ್ಟಡಗಳು ಇನ್ನೂ ಉಳಿದಿವೆ. ಖಾಲಿಯಾಗಿದ್ದ ಊರು ಟಿಬೆಟ್ ಆಕ್ರಮಣವಾದ ತರುವಾಯ ನಿರಾಶ್ರಿತರಿಂದ ತುಂಬಿ ತುಳುಕಿತು ಎನ್ನಬಹುದು. ಭೂತಾನ್ನ ರಾಣಿ ವಾಸದ ಸುಂದರ ಕಟ್ಟಡ ನೋಡಿ ಬಂದೆವು. ಊರ ಸನಿಹದ ಬೆಟ್ಟದ ಮೇಲಿನ ಸುಂದರ ದುರಪಿನ್ ಮಾನೆಷ್ಟ್ರಿಯೊಂದು ದುರ್ಪಿನ್ ದಾರಾ ಬೆಟ್ಟದ ತುದಿಯಲ್ಲಿತ್ತು. ಅಲ್ಲಿಗೆ ಹೋಗಿ ಬಂದೆವು. ಮಾನೆಷ್ಟ್ರಿಗಳ ಮತ್ತು ಸ್ಥಳೀಯ ಊರಿನ ಹೆಸರುಗಳನ್ನು ನೆನಪಿನಲ್ಲಿಡುವುದು ನಮಗೊಂದು ಸವಾಲು. ಊರಿನ ಸುಂದರ ಚಿತ್ರ ಇಲ್ಲಿಂದ ಪಡೆದೆವು.
ನಾವು ಬೆಳಗ್ಗೆ 7 ಕ್ಕೆ ಹೊರಟು ಲಾವಾ, ರಿಷಿ ಸರ್ಕಲ್, ಸ್ಥಳೀಯ ಮಾನೆಷ್ಟ್ರಿ ಸುತ್ತಿ ಸಂಜೆ ನಾಲ್ಕರ ಹೊತ್ತಿಗೆ ವಾಪಾಸು ಬಂದೆವು. ಭೌದ್ದಾಲಯಗಳಲ್ಲಿನ ಹಿರಿಯರನ್ನು ಮಾತನಾಡಿಸುವ ತವಕವಾದರೂ ಅವರ ಧ್ಯಾನಕ್ಕೆ ಭಂಗ ತರುವ ಮನಸಾಗಲಿಲ್ಲ. ಮಣಿಸರ ಹಿಡಿದು ಜಪದಲಿ ನಿರತರವರು. ಸಂಜೆಗೆ ಊರು ಸುತ್ತುಲು ಹೊರಟಾಗ ಹಿರಿಯರೊಬ್ಬರು ಅಂಗಡಿ ಎದುರು ಕುಳಿತಿದ್ದರು. ಅವರನ್ನು ಮಾತಿಗೆ ಎಳೆದೆವು. ತುಂಬಾ ಸಂತೋಷಿ ಸ್ವಭಾವದವರಾದ ಅವರು ನಮ್ಮೆದುರು ಮನದ ಇಂಗಿತವನ್ನು ತೆರೆದುಕೊಂಡರು. ಅವರು ಹೇಳಿದ್ದಿಷ್ಟು.
ಹೆಸರು ತಾಶಿರಿಂಗ್ ಸಾಂಗ್ಪೋ. ಹೆಸರಿನ ಅರ್ಥ ಒಳ್ಳೇ ಮನುಷ್ಯ. ಅವರ ಹೆಸರನ್ನು ಹೇಗೆ ಉಚ್ಚಾರ ಮಾಡಬೇಕೆಂದು ಈಗಲೂ ನನಗೆ ತಿಳಿದಿಲ್ಲ. ತಮ್ಮ ಹೆಸರಿನ ಸ್ಪೆಲಿಂಗ್ನ್ನು ಅವರೇ ಹೇಳಿದರು. ಅವರ ಕತೆಯನ್ನು ನಮ್ಮೆದುರಿಗೆ ಹೀಗೆ ತರೆದಿಟ್ಟರು.
ನೆತ್ತರ ಚರಿತ್ರೆ:- 
ತಾಷಿರಿಂಗ್ ಸಾಂಗ್ ಪೊ

ನಾನು, ತಾಶಿರಿಂಗ್ ಸಾಂಗ್ಪೋ, ನನ್ನ ಕುಟುಂಬದೊಂದಿಗೆ ತಣ್ಣಗೆ ಟಿಬೆಟ್ನಲ್ಲಿದ್ದೆವು. ಉತ್ತಿ, ಬಿತ್ತಿ, ಉಂಡುಟ್ಟು ಸುಖವಾಗಿದ್ದೆವು. ನಿರಭ್ರ ನೀಲಾಕಾಶ ಸರಳ ಜೀವನ ನಮ್ಮದಾಗಿತ್ತು. ಸಾಕಷ್ಟು ಅನುಕೂಲಿಗರೇ ಆಗಿದ್ದೆವು. ರಾತ್ರೋ ರಾತ್ರಿ ನಮ್ಮ ಅರಿವಿಗೆ ಬರದಂತೆ ಚೀನಾ ದಾಳಿ ಮಾಡಿತು. ನಮ್ಮ ಸಂಸಾರವೆಲ್ಲಾ ಚಲ್ಲಾ ಪಿಲ್ಲಿ. ಇವರ ಪ್ರಭುತ್ವ ಒಪ್ಪದವರು ಕಾಲಡಿ ಸಿಲುಕಿದ ಇರುವೆಗಳಂತಾದರು. ರಾತ್ರೋ ರಾತ್ರಿ ಅವರೆಲ್ಲಾ ಊರು ಬಿಟ್ಟರು. ನಾವು ಕೂಡ ಊರು ಬಿಟ್ಟೆವು. ರಾತ್ರಿಗಳಲ್ಲಿ ಸಂಚರಿಸುತ್ತಾ, ಹಗಲು ಕಾಡುಗಳಲ್ಲಿ ಅಡಗಿ ಕುಳಿತು ಹಲವು ದಿನ ಪ್ರಯಾಣ ಮಾಡಿದೆವು. ಎಷ್ಟು ದಿನ ಹೀಗೆ ಕಳೆದೆವೋ ಗೊತ್ತಿಲ್ಲ. ಚೀನಿಯ ಕಣ್ಣಿಗೆ ಬಿದ್ದಿದ್ದರೆ ಕೈಲಾಸಕ್ಕೆ ರಹದಾರಿ. ದಾರಿ ಇಲ್ಲದ ಹಾದಿಗಳಲ್ಲಿ ರಾತ್ರಿ ಸಂಚಾರ. ಹಾವು, ಕಾಡು ಪ್ರಾಣಿಗಳ ಭಯ. ಇನ್ನೊಂದೆಡೆ ಮನುಷ್ಯರ ಭಯ! ಎರಡು ಪುಟಾಣಿ ಮಕ್ಕಳು ಬೇರೆ ಜೊತೆಯಲ್ಲಿದ್ದರು. ದಾರಿಯಿಲ್ಲದ ದಾರಿಯಲ್ಲಿ, ಗುರಿಯಿಲ್ಲದ ಸಂಚಾರ! ನಮಗಚ್ಚರಿ ಈಗ. ಕೆಲವು ತಿಂಗಳ ಪ್ರಯಾಣದ ಬಳಿಕ ಸುರಕ್ಷಿತ ಕಾಲಿಪೊಂಗ್ ತಲುಪಿದೆವು. ಇಲ್ಲಿಂದ ಪ್ರಾರಂಭವಾದುದು ಹೊಸ ಸಾಹಸ ಯಾತ್ರೆ. 'ಹಿಂದಿ ಚೀನಿ ಬಾಯಿ ಬಾಯಿ' , ಎಂಬ ಮಂತ್ರದಿಂದ ಸಾವಿರಾರು ಮಂದಿ ಹಾದಿಯಿಲ್ಲದ ಹಾದಿಯ ಪಾಲಾದರು. ಇನ್ನೊಂದಿಷ್ಟು ಮಂದಿ ಕಾಡು ಪಾಲಾದರು! ಉಳಿದವರೆಷ್ಟೋ ಗೊತ್ತಿಲ್ಲ? ,ಎಂದರು ತಾಶಿರಿಂಗ್ ಸಾಂಗ್ಪೋ. 
ನಮಗೆ ಇತಿಹಾಸ ಸೇರಿದ ಕ್ರೂರ ಆಕ್ರಮಣದೊಂದು ಭಾಗವನ್ನು ಸ್ಪಶರ್ಿಸಿ ಬಂದ ಅನುಭವವಾಗಿತ್ತು. ಟಿಬೆಟ್ನಿಂದ ಪಾರಾಗಿ ಬಂದ ನಿರಾಶ್ರಿತರು ಇಲ್ಲೀಗ ನೆಲೆಸಿದ್ದಾರೆ. ಇದನ್ನೀಗ ನಿರಾಶ್ರಿತರ ಬೀಡೆನ್ನಲು ಅಡ್ಡಿಯಿಲ್ಲ. ಓಡಿ ಬಂದ ಅವರ ಮನಸ್ಥಿತಿ ಹೇಗಿತ್ತು. ತಮ್ಮನ್ನು ದುದರ್ಿನಗಳಿಗೆ ತಳ್ಳಿದ ಪ್ರಭುತ್ವದ ಬಗೆಗೆ ಅವರು ತಾಳಿದ ನಿಲುವು ಏನು? ಜೀವನವನ್ನು ಅವರೆದುರಿಸಿದ ರೀತಿಯ ಊಹಿಸಿಕೊಂಡರೆ ಅಚ್ಚರಿ! ಸ್ಪೂತರ್ಿಯ ಚಿಲುಮೆ ಚಿಮ್ಮುವುದು! ಅವರು ತಮ್ಮ ಕೆಲಸಕ್ಕೆ ತೆರಳದೇ ಇದ್ದಿದ್ದರೆ. ಏನೆಲ್ಲಾ ಕೇಳುವುದಿತ್ತು ಆ ಅಜ್ಜನಲ್ಲಿ. ಯಾವುದಕ್ಕೂ ಸಮಯ ಸಾಲಲಿಲ್ಲ. ಅವರಿಗೆ ಕೃತಜ್ಞತೆ ಹೇಳಿ ಹೊರಟೆವು. ನಮ್ಮ ಅನುಭದ ಬುತ್ತಿಗೆ 74ರ ಆ ಅಜ್ಜನ ಪ್ರೀತಿ ಸೇರ್ಪಡೆಗೊಂಡಿತ್ತು. ಇಲ್ಲಿಂದ ನಮ್ಮ ಪ್ರಯಾಣ ಲಾಚುಂಗ್ ಎಂಬ ಹಳ್ಳಿಗೆ.
ಲಾಚುಂಗ್ ಎಂಬ ಪರ್ವತದ ಮರಿ:-
ಕಾಲಿಪೊಂಗ್ನಿಂದ ತೀಸ್ತಾ ನದಿ ಸವರಿಕೊಂಡು, ಗ್ಯಾಂಗ್ಟಾಕ್ ದಾಟಿ ಎರಡು ಹಿಮಬೆಟ್ಟಗಳ ಮಡಿಲಾದ ಸ್ವರ್ಗ ಸದೃಶ ಲಾಚುಂಗ್ನಲ್ಲಿದ್ದೆವು. ಇಲ್ಲಿಗೆ ತಲುಪಿದಾಗ ನಡು ಮಧ್ಯಾಹ್ನ. ಬಿಸಿಯೂಟ ಹೊಟ್ಟೆಗಿಳಿಸಿದೆವು. 
ತುಂಬಾ ಎಂಬ   ಬಿೀರು

ಲಾಚುಂಗ್ನಲ್ಲಿ ರಾಗಿಯಿಂದ ತಯಾರಾಗುವ ಸ್ಥಳೀಯ ಬಿಯರಾದ 'ತುಂಬಾ' ತುಂಬಾನೇ ಜನಪ್ರಿಯ. ಹೀರುವವರಿಗೆ ಚಂದದ ಮರದಿಂದ ಕೊರೆದ ಮಡಿಕೆಯಲ್ಲಿ ಇದನ್ನು ನೀಡುವರು. 'ಬಿದಿರ' ಹೀರು ಕೊಳವೆ ಹೀರಲು ಕೊಡುವರು. ಇಲ್ಲಿನವರು ಮತ್ತೆ ಮತ್ತೆ ಬಿಸಿ ನೀರನ್ನು ಅದಕೆ ಸೇರಿಸಿ ನಾಲ್ಕು ಸೇರು ಬಿಯರು ಹೀರುವುದ ನೋಡುವುದೇ ಚಂದ. ನಾವು ಬಂದಿಳಿದ ನಡು ಮಧ್ಯಾಹ್ನದ ಹೊತ್ತು  'ತುಂಬಾ' ಬೇಕೇ,  ಎಂದು ಕೇಳಿ ನಮ್ಮನ್ನು ಬೆಚ್ಚಿ ಬೀಳಿಸಿದರು.
ಹಳ್ಳಿಯ ಪೂರ್ವ ತುದಿಯಲ್ಲಿದ್ದೆವು. ಎದುರಿಗಿನ ಪರ್ವತವೊಂದು ಆಗಲೋ ಈಗಲೋ ಬೀಳುವಂತಿತ್ತು. ಸನಿಹದಲ್ಲೊಬ್ಬಳು ಜಲಕನ್ಯೆ ತನ್ನ ವಯ್ಯಾರ ತೋರುತ್ತಾ  ಕರಗಿ ಕಲ್ಲಿಗಪ್ಪಳಿಸುತ್ತಿದ್ದಳು. ಹಿಮಧಾರೆಯ ಬಿಳಲುಗಳ ಕ್ಯಾಮರದೊಳಗೆ ಮತ್ತೆ ಮತ್ತೆ ಹೋಗಿ ಕುಳಿತವು. ಕದ್ದು ಕದ್ದು ತನ್ನ ಪೋಟೋ ತೆಗೆಸಿಕೊಳ್ಳುತಲಿದ್ದಳು ಜಲಕನ್ಯೆ! 
ಊರ  ನಡುವಿನ  ಜಲ  ಕನ್ಯೆ...
   ಇದೇ ನೀರಿನಲ್ಲಿ ಸ್ಥಳೀಯ ಗೋಧಿ, ಹೂಕೋಸು, ಸಾಸಿವೆ ಬೆಳೆಯುತ್ತಿದ್ದರು. ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ದಾಟಿ ದೊಡ್ಡ ಬೆಟ್ಟದ ಬುಡದಲ್ಲಿತ್ತು ನಮ್ಮ ಹೋಂ ಸ್ಟೇ. ಉದ್ಯಾನವನದ ನಡುವಿನ ಮನೆಯಂತಿತ್ತು ನಮ್ಮ ಹೋಂ ಸ್ಟೇ. ಕೋಣೆಯಿಂದ ಕೈ ಹೊರ ಚಾಚಿದರೆ ಹೂ ಕೋಸಿನ ಸಣ್ಣ ವನ. ಮುದುಕಪ್ಪನೊಬ್ಬ ಮೇವು ಹೊತ್ತು ಹೊರಟಿದ್ದ. ಕ್ಯಾಮರ ಹಿಡಿದ ನನ್ನನ್ನು ವಿಚಿತ್ರ ವ್ಯಕ್ತಿಯೆಂಬಂತೆ ನೋಡಿ ಹೊರಟು ಹೋದ. 
ಊರು ಸುತ್ತಲು ಹೊರಟೆವು. ಶಾಲು, ಸ್ವೆಟರು ಮಾರುವ ಅಂಗಡಿಗಳ ಸಾಲು. ರವ ರವನೇ ಬೀಸುವ ಹಿಮ ಗಾಳಿ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಸ್ವಲ್ಪ ಬಿಟ್ಟಿತ್ತು. ಆದ್ಯಾತ್ಮ ಚಿಂತನೆಗೆ, ಧ್ಯಾನಕ್ಕೆ ಹೇಳಿ ಮಾಡಿಸಿದ ತಾಣ. ಜನರ ನಿಷ್ಕಲ್ಮಷ ಪ್ರೀತಿಗೆ ಮಾರು ಹೋದೆವು. ಬಜ್ಜಿ ಅಂಗಡಿಯಲ್ಲಿ ಬೋಂಡಾ ತಿನ್ನುತ್ತಾ ಎದುರಿಗಿನ ಜಲಪಾತ ನೋಡುತ್ತಾ ಕುಳಿತೆವು. ಕಾಲವೇ ಕುಕ್ಕುರುಗಾಲಿನಲ್ಲಿ ಕುಳಿತ ಅನುಭವ. ಜನ, ಜೀವನ ಬಹಳ ನಿಧಾನ. ಚಳಿ ಅಡರುವ ಮುನ್ನವೇ ಎರಡೆರಡು ಹೊದಿಕೆ ಹೊದ್ದು ಮಲಗಿದೆವು. 
ಹೂ ಕಣಿವೆಯತ್ತ


ಮನೆಯೆದುರಿಗೆ ಸ್ಥಳೀಯ ದನದಿಂದ ಹಾಲು ಕರೆಯುವವರಲ್ಲಿ ಬೇಡಿ ಒಂದೆರಡು ಲೋಟ ಹಾಲು ಕುಡಿದೆವು. ಲಾಚುಂಗ್ ಹಳ್ಳಿಯಿಂದ ಹೂ ಕಣಿವೆ ಕೇವಲ 23 ಕಿ. ಮೀ.. ಹೂ ಕಣಿವೆ ಕಣಿವೆಗಳ ಸ್ವರ್ಗವೆಂದೇ ಹೇಳಬೇಕು. ದೂರ ಕಡಿಮೆಯಾದರೂ ದಾರಿ ದುರ್ಗಮ. ಒಮ್ಮೆಯಂತೂ ದಾರಿಗಡ್ಡವಾಗಿ ಬಂಡೆಗಳ ರಾಶಿ ಬಂದು ಬಿದ್ದಿತ್ತು! 'ದಾರಿ ಕಾಣದಾಗಿದೆ' ಹಾಡಿ ಕೊಂಡೆವು. ಚಾಲಕನಿಳಿದು ಹೋಗಿ ಸರಿ ದಾರಿ ಪತ್ತೆ ಹಚ್ಚಿದ. ಭೂ ಕಂಪನಗಳಿಲ್ಲಿ ಸಾಮಾನ್ಯನೆಂದ ನಮ್ಮ ಚಾಲಕ. ಒಂದು ಕಲ್ಲು ಅಡ್ಡಲಾಗಿ ಬಿದ್ದಿದ್ದರೂ ನಾವು ಕನಿಷ್ಠ ಎರಡು ದಿನ ನಿರ್ಜನ ಏಕಾಂತದಲ್ಲಿ ಕಾಲ ಕಳೆಯಬೇಕಿತ್ತು. ಭೂಕಂಪನದ ಅನುಭವವೂ ನಮ್ಮ ತಂಡಕ್ಕಾಗಿತ್ತು. ಅಡಿಗಡಿಗೂ ಹೊಂಡಗಳ ಅಡಚಣೆಯನ್ನು ಹೇಗೋ ನಿಭಾಯಿಸಿ ಲಾಚುಂಗ್ನ 9,500 ಅಡಿಯಿಂದ ಬೆಟ್ಟಗಳ ಜೋಳಿಗೆಗೆ ತಲುಪಿಬಿಟ್ಟೆವು. ಶಿಂಗ್ಬಾ ರೇಡೋಡೆಂಡ್ರಾನ್ ಸ್ಯಾಂಚುರಿಯಲ್ಲಿದಲ್ಲಿದ್ದೆವು. ಹಕ್ಕಿಗಳ, ಪ್ರಾಣಿಗಳ ಸ್ಯಾಂಚುರಿಯಂತೆ ಇದೊಂದು ಪುಷ್ಪಗಳ ಸ್ಯಾಂಚುರಿ. ಮಾಚರ್್ನಿಂದ ಮೇವರೆಗೆ ಪುಷ್ಪಗಳ ಹಬ್ಬ! ನೋಡುವ ನಮ್ಮ ಭಾಗ್ಯವೇ ನಮ್ಮನ್ನು ಧನ್ಯರನ್ನಾಗಿಸುತ್ತೆ. ನೋಡ ನೋಡುತ್ತಾ ಪ್ರಕೃತಿ ನಮ್ಮನ್ನಿಲ್ಲಿ ನಿರ್ಗವಿಯನ್ನಾಗಿಸುತ್ತೆ, ಕೆಲವೊಮ್ಮೆ ಕವಿಯಾಗಿಸುತ್ತೆ. ಸುಮಾರು 14,000 ಅಡಿಗಳಷ್ಟು ಎತ್ತರಕ್ಕೆ ಬಂದಿದ್ದೆವು.
ಕಣಿವೆಗಳ ನಡುವೆ ಹಿಮ ಕರಗಿ ವಿಸ್ತಾರವಾಗಿ ಹರಿವ ನದಿ. ಬೆಟ್ಟಗಳ ಅಂಚುಗಳಲ್ಲಿ ಕುರಿಯ ತುಪ್ಪಳದಂತೆ ಹರಡಿದ ರೇಡೋಡೆಂಡ್ರಾನ್ ಕಾಡುಗಳು. ಕಣಿವೆಯುದ್ದಕ್ಕೂ ಕಣ್ಣು ಕುಕ್ಕುವ ಪುಷ್ಪದಂಗಳ. ಲಾಚುಂಗ್ನಲ್ಲಿ ಅವಸರವಾಗಿ ಹರಿವ ತೀಸ್ತಾ ನದಿ ಇಲ್ಲಿ ಮಂದಗಮನೆ. ವಿಸ್ತಾರದ ಹರವು, ಆಳ ಬಹಳ ಕಡಿಮೆ. ನೀಲಾಕಾಶದ ಬಣ್ಣಕ್ಕೆ ನೀಲಿಗಟ್ಟಿದ ನದಿ. 'ಹೂವು ಹಾಸಿಗೆ' ಎಂದು ಅಡಿಗರು ಹೇಳಿದ ರೂಪಕವು ನಿಜವಾಗಿದೆ. ಈ ಹೂ ಚಿತ್ತಾರವನ್ನು ಸವಿದು ಯುಮ್ತುಂಗ್ ಕಣಿವೆಯವರೆಗೆ ಪ್ರಯಾಣ ಬೆಳೆಸಿದೆವು. ಸುಮಾರು 15 ಕಿಲೋ ಮೀಟರ್ ಪುಷ್ಪಗಳ ಮೆರವಣಿಗೆ. ನೋಟ ಹರಿಸಿದ ಕಡೆ ಹಿಮ ಮತ್ತು ಹೂ. ಐದು ಜಾತಿಯ ರೇಡೋಡೆಂಡ್ರಾನ್ಗಳಿದ್ದವು. 

ಕೆಂಪು, ಬಿಳಿ, ಕೇಸರಿ, ತೆಳು ನೇರಳ, ಅರಶಿನ, ಒಂದಕ್ಕಿಂತೊಂದು ಚೆನ್ನ. ಇಲ್ಲಿ ನಿಂತರೆ ನೋಡುವವನ ಹೃದಯ ವಿಸ್ಮೃತಿಗೆ ಜಾರುತ್ತೆ. ಇವೆಲ್ಲಾ ದೊಡ್ಡ ಹೂಗಳ ಹೆಸರು ಬಲ್ಲವುಗಳ ಪ್ರವರವಾಯಿತು. ಇನ್ನು ಚಿಕ್ಕ ಚಿಕ್ಕ ಪುಷ್ಪಗಳ ಲೆಕ್ಕವಿಟ್ಟವರ್ಯಾರು. ಪುಷ್ಪ, ತರುಲತೆಗಳ ಅಧ್ಯಯನಕಾರರಿಗೆ , ನನ್ನಂತಹ ಭಾವುಕರಿಗೆ ಸುಗ್ರಾಸ. ಇಲ್ಲಿ ಕ್ಯಾಮರ ಬದಿಗಿಟ್ಟ ಗಳಿಗೆಗಳ ನೆನಪಿಲ್ಲ. 
ಸೂಚಿ    ಪರ್ಣ  ಕಾಡುಗಳು...


zero point ಬಳಿ...

ಕೈಚಾಚಿದ ಮನುಜರಂತೆ ಕಾಣುವ ಸೂಚಿಪರ್ಣದ ಕಾಡುಗಳ ನಡುವೆ ಹಿಮ ಕರಗಿದ ತೊರೆಗಳ ಹಾದು ಯುಮ್ತುಂಗ್ ಕಣಿವೆಯಲ್ಲಿದ್ದೆವು. ಇಲ್ಲಿಂದಲೇ ಜೀರೋ ಪಾಯಿಂಟ್ಗೂ ಹೋಗಿ ಹಿಮಗಡ್ಡೆಗಳನ್ನೆಲ್ಲಾ ಮಾತಾಡಿಸಿ ಬರಬಹುದು. ಹಿಮದಲ್ಲಿ ನಡೆದಾಡುವ ಓಡಾಡುವ ಸಲಕರಣೆಗಳು ಬಾಡಿಗೆಗೆ ಲಭ್ಯ. ಕೆಲವೇ ಗಂಟೆಗಳ ಜಕರ್ಿನ್ ಒಂದರ ಬಾಡಿಗೆ 100 ರಿಂದ 200. ಕೆಲವರು ಜೀರೋ ಪಾಯಿಂಟ್ ನೋಡಲು ಹೊರಟಿದ್ದರು. ನಮ್ಮದಿನ್ನು ಬೆಳಗ್ಗಿನ ಹೊಟ್ಟೆ ಪೂಜೆ ಮುಗಿದಿರಲಿಲ್ಲ. ಸಿಕ್ಕಿಂ ತಿಂಡಿ ಸಿಗುವುದೆಂಬ ಬೋಡರ್್ ನೋಡಿ ಗುಡಂಗಡಿ ಒಳ ಹೊಕ್ಕೆವು.
ಯಾಕ್ ಕತ್ತರಿಸುತ್ತಿರುವ    ಯುವಕ.....

     ಟಿಬೆಟಿನ  ತುಪ್ಕಾ ತಯಾರಿಯಲ್ಲಿ   ನಿರತ ಮಹಿಳೆ.
 ಅಂಗಡಿ ಸಂಖ್ಯೆ 46ರಲ್ಲಿ ಬೆಳ್ಳಂ ಬೆಳಿಗ್ಗೆ ಯಾಕ್ ಮಾಂಸವನ್ನು ಕತ್ತರಿಸುತ್ತಾ ಕೂತಿದ್ದನೊಬ್ಬ. ಟಿಬೆಟಿಯನ್ ತಿಂಡಿ ತುಪ್ಕಾ ಮತ್ತು ನಮಕೀನ್ ಚಹಗೆ ಆರ್ಡರಿಸಿದೆವು. ಒಂದತ್ತು ನಿಮಿಷಕ್ಕೆ ತಯಾರಾದ ತುಪ್ಕಾ ತಿಂದು ಹೊರಟೆವು. 4-5 ತಿಂಗಳು ವ್ಯಾಪಾರ ಮಾಡಿ ಹಿಂದಿರುಗುವ ವ್ಯಾಪಾರಿಗರೊಂದಿಗೆ ಚೌಕಾಸಿಗಿಳಿದು ಎರಡು ಟಿಬೆಟಿಯನ್ ಗಂಟೆಗಳನ್ನು ಖರೀದಿಸಿದೆವು. ನೆಪಾಲಿಯನ್ ಕುಪರ್ಿಯೊಂದು ಈಗಾಗಲೇ ನಮ್ಮ ಜೊತೆಯಾಗಿತ್ತು. 
ಮುಟ್ಟಿದರೆ ಸಿಗಬಹುದೆನ್ನುವಷ್ಟು ದೂರದಲ್ಲಿ ಕೆನೆ ಹಾಲ ಮೆತ್ತಿಕೊಂಡ ಹಿಮ ಹೊತ್ತ ಶಿಖರಗಳು.
ತಿಸ್ತಾ ನದಿ ಪಕ್ಕದಲ್ಲಿ..

      ಸುತ್ತಲೂ ಹೂ ಕಣಿವೆ. ಜೀರೊ ಪಾಯಿಂಟ್ ಹೋಗುವ ಮನಸ್ಸಿದ್ದರೂ ದಿನಗಳಿರಲಿಲ್ಲ. ಹಿಂದಿರುಗುವ ಹಾದಿಯಲ್ಲಿದ್ದ ಬಿಸಿ ನೀರ ಬುಗ್ಗೆಯೊಂದನ್ನು ನೋಡಿ ಅದರ ಉಗಮದಲ್ಲಿ ಕಾಲಿಟ್ಟು ಕೂರುವ ಉತ್ಸಾಹದಿಂದ ಹುಡುಕಿದೆವು, ಸಿಗಲಿಲ್ಲ. ಉಗಮವೆಲ್ಲೋ ಬೆಟ್ಟದ ತುದಿಯಲ್ಲಿತ್ತೆಂದು ಕಾಣುತ್ತದೆ. ಅಲ್ಲಿಂದಲೇ ಒಂದು ಪೈಪೊಂದನ್ನು ನೀಡಿ ಸಣ್ಣ ಈಜು ಹೊಂಡ ನಿಮರ್ಿಸಿದ್ದರು. ಆದರಿದು ಗಲೀಜಾಗಿತ್ತು. ನಿರಾಶರಾಗಿ ಹೊರಟೆವು. 
ಕೇವಲ ಒಂದೆರಡು ದಿನಗಳಿಗೆ ಬಂದರೆ ಈ ಸೌಂದರ್ಯ ಕಣ್ಣು ತುಂಬಿ ಜನ ಜೀವವ ಅರಿಯಲು ಏನೇನೂ ಸಾಲದು. ಚಳಿಯ ದಿನಗಳಿಗಳಲ್ಲಿ ಒಂದೈದು ದಿನ ಬರುವ ಇರಾದೆಯೊಂದಿಗೆ ಹೂ ಕಣಿವೆಗೆ ಬಾಯ್ ಬಾಯ್ ಎಂದೆವು.

ಬೇಟೆಗಾರನೇ ಬಲಿಯಾದಾಗ............

      ಜೇಡನ ಬಲೆಗೊಂದು ಕೀಟಬಿತ್ತೆಂದು ಖುಷಿಯಲ್ಲಿದ್ದೆ. ಸ್ವಲ್ಪ ಹೊತ್ತಿಗೆ ಜೇಡ ಅದನ್ನು ತಿನ್ನುತ್ತೆ ಎಂದು ಕಾದು ಕುಳಿತ್ತಿದ್ದೆ. ಆದರಿಲ್ಲಿ ಆದದ್ದೇ ಬೇರೆ. ಎಷ್ಟೇ ಹೊತ್ತಾದರೂ ಅಲುಗದ ಜೇಡ ನೋಡಿ ನೋಡಿ ಸುಸ್ತಾಯಿತು. ಸ್ವಲ್ಪ ಹೊತ್ತಿಗೆ ಗಾಳಿ ಬೀಸಿದಾಗ ತಿಳಿಯಿತು ಬಲಿಯಾದ್ದದ್ದು ಬೇಟೆಗಾರನೇ ಎಂದು. ನಿಧಾನಕ್ಕೆ ಜೇಡ ಹಿಡಿದಂತಿದ್ದ ಹುಳ ಅಲುಗಲು ಶುರುವಾಯಿತು.

      ಸಾಮಾನ್ಯವಾಗಿ ಜೇಡದ ಬಲೆಯಲ್ಲಿ ಬಿದ್ದ ಕೀಟವನ್ನು ಜೇಡ ಬೇಟೆಯಾಡುತ್ತೆ ಆದರಿಲ್ಲಿ ಬಲೆಗೆ ಬಿದ್ದ ಕೀಟವೇ ಜೇಡವನ್ನೇ ಬೇಟೆಯಾಡಿತು! ಮೊನ್ನೆ ಮುಂಜಾವಿಗೆ ತೆರೆದುಕೊಳ್ಳುತ್ತಿರುವಾಗ ಸಿಕ್ಕ ದೃಶ್ಯವನ್ನು ಕಂಡಾಗ ವಿಸ್ಮಯ ಹುಟ್ಟಿಸಿತು. ಮನೆಗೆ ಮರಳುವ ತವಕದಲ್ಲಿ ಯಾರು ಸತ್ತರು ಯಾರು ಉಳಿದರೆಂದು ಗೊತ್ತಾಗಲೇ ಇಲ್ಲ!
Who is hunting whom? with a rare spider

With a rare spider

Saturday, December 23, 2017

ಕೈ ಬೀಸಿ ಕರೆಯುತಿದೆ ಕಾರವಾರದ ಕಡಲು...

              ಕಡಲ ಒಳಗಿನ ವಿಚಿತ್ರ ವಿಸ್ಮಯಗಳ ಹೇಳಲಿ ಹೇಗೆ? ಏನುಂಟು ಏನಿಲ್ಲ ಇಲ್ಲಿ. ಮೊದಲಿಗೆ ಪ್ರಚಂಡ ಸೆಖೆಯ ಅನುಪಸ್ಥಿತಿ. ಕಂಡ ವಿಶಿಷ್ಟ ಪ್ರಾಣಿ ಮತ್ತು ಪಕ್ಷಿ ವರ್ಗ. ಸೀಲ್ಗಳು ಕಡಲ ಹಕ್ಕಿಗಳ ಸ್ವಚಂದದ ಹಾರಾಟ. ದಿವ್ಯ ಏಕಾಂತದ ಸೆಳೆತ. ಆಯಿಸ್ಟರ್ಗಳ ಪ್ರಪಂಚ.   ಒಂದೇ ಎರಡೇ. ಮರೆಯದ ಪ್ರವಾಸದ ಒಂದು ನೋಟ ನಿಮ್ಮ ನೋಟಕ್ಕೆ ನನ್ನ ಬಿಂಬಗಳು.. ಮತ್ತೊಮ್ಮ ಕಾರವಾರದ ದ್ವೀಪಗಳ ವಿಶಿಷ್ಟತೆಗಳ ಬಗ್ಗೆ  ಬರೆಯುವೆ..















Friday, December 15, 2017

ಬೆಳ್ಳಿಯೂರಿನ ಬೆಡಗಿ ಸಿಕ್ಕಿದ್ದಳು ಮೊನ್ನೆ!

 ಬೆಳ್ಳಿಯೂರಿನ ಬೆಡಗಿ
ಸಿಕ್ಕಿದ್ದಳು ಮೊನ್ನೆ
ಕದ್ದು ನೋಡುತ್ತಿದ್ದಳು ನನ್ನೇ
ನೋಡಿದೆನವಳ ನಾನೂ ಕದ್ದೇ
ಬಿಡದೇ ಕದ್ದೆ ಅವಳ ನಿದ್ದೆ

ವಾಸಿಯಾಗಿಲ್ಲ ಅವಳ ಹುಚ್ಚು
ಎಷ್ಟೇ ಕೊಟ್ಟರೂ ಮದ್ದು!
ದಿನವಿಡಿ ಇವಳದೇ ಸದ್ದು.
ಹೊಂಗನಸೊಂದನ್ನು
ಕಟ್ಟಿಕೊಂಡೇ ಇದ್ದೇ  ಸೊಂಟಕ್ಕೆ
ಜಾರಿಹೋಗದಂತೆ ಬಿದ್ದು.

ತಳುಕು ಬಳುಕಿನ ಬಳ್ಳಿ
ಅಡಗಿಕುಂತವಳೆ ಕಳ್ಳಿ
ಮನ ಕದ್ದ ಮಳ್ಳಿ
ಅಡವಿಯೊಳಗಿನ ಚೆಂದುಳ್ಳಿ!

ಶ್ರೀಧರ್ ಎಸ್. ಸಿದ್ದಾಪುರ.

ಒಂದು ಆರ್ಕಿಡ್ ಸಸ್ಯ

On Way to Jari Falls




Wednesday, November 29, 2017

ಭಾಗವಹಿಸಿದ ಎರಡನೆಯ ರಾಷ್ಟ್ರೀಯ ಸಲೋನ್ನಲ್ಲಿ (National Level Photo Competition Mudubidri) ಎರಡು ಪ್ರಶಸ್ತಿಯ ಗರಿ....

      ಮೂಡುಬಿದರೆಯಲ್ಲಿ ನಡೆದ  ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸಿರಿ ಸ್ಪಧರ್ೆಯಲ್ಲಿ ನನ್ನ ಎರಡು ಛಾಯಾ ಚಿತ್ರಗಳು ನುಡಿಸಿರಿ ಛಾಯಾ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿವೆ.  ಚಿತ್ರ ಆಯ್ಕೆ ಮಾಡಲು ಸಹಾಯ ಮಾಡಿದ ರಜತ ಮತ್ತು ಸಂತೋಷ ಕುಂದೇಶ್ವರ್ ಇವರಿಗೆ ಧನ್ಯವಾದಗಳು.
 
Getting award from O. P Sharma Delhi with Mohan Alva, Yajna, Purushotham Adve.



AWARDED IN NATURE SECTION. 9CM
EXHIBITTED IMAGE IN PEOPLE CATEGORY

Friday, November 3, 2017

ಎರಡೆರಡು ಮಹಾಪ್ರಾಣ ಬರುವುದಿಲ್ಲ ಒಟ್ಟಿಗೆ.........ಒಂದು ಪದ್ಯ

ಕನ್ನಡ ಮರೆಗೆ ಸರಿಯುತಿರುವ ಈ ದಿನ ಮಾನಸದಲ್ಲಿ ಕನ್ನಡ ಬರವಣಿಗೆಗೆ ಸಹಾಯಕವಾದ ಈ ಪದ್ಯವಿದ್ದರೆ ಸುಲಭ. ಕನರ್ಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನಿಮ್ಮ ಓದಿಗಾಗಿ ಈ ಪದ್ಯ. ಚೆನ್ನಾಗಿದ್ದರೆ ತಿಳಿಸಿ.
ಎಷ್ಟು ಸಲ ತಿಳಕೊಂಡರೂ ಮರೆಯುವುದು ನೋಡಿ
ಕಾಗುಣಿತದ ಗೊಂದಲಗಳ ಜೋಡಿ ಮಾಡಿ ಹಾಡಿ
ಕಲಿಕೆ ಶುರುವಿಗೊಳ್ಳೆ ದಿನ ಶನಿವಾರವೆ ಬಹುಶಃ
ಮೀನ ಮೇಷ ಎಣಿಸದಿರು ಮುಖ್ಯ ಪ್ರತಿ ನಿಮಿಷ
ಬುಧವಾರ ತೃಪ್ತಿ ಪಡು ಬರೀ ಅರ್ಧ ರೊಟ್ಟಿಗೆ
ಎರಡೆರಡು ಮಹಾಪ್ರಾಣ ಬರುವುದಿಲ್ಲ ಒಟ್ಟಿಗೆ
ನೆನಪಾದರೆ ಪ್ರೇಮ ಬಾಧೆ ಆವರಿಸಿದ ರಾಧೆ
ಎಲ್ಲಿ ಉಂಟು ಎಲ್ಲಿ ಇಲ್ಲ ಎಂಬ ಬಾಲ ಬೋಧೆ
ವಿಷ ಕುಡಿದರೆ ವಿಷಾದವೇ ಸರಳವಾದ ವಿಷ್ಯ
ಶಕಾರವೇ ಸದಾ ಮೊದಲು ವಿಶೇಷವಿದು ಶಿಷ್ಯ
ಬೋಧನೆಗೆ ಬೇಕೇ ಇಲ್ಲ ನಿಘಂಟಿನ ಶೋಧನೆ
ಎಲ್ಲವನ್ನೂ ಸೀಳಬೇಡಿ ಇರಲಿ ಭೇದ ಭಾವನೆ
ಮಹಾಪ್ರಾಣಕೆ ಯಾವ ಪ್ರಾಣವೂ ಆಗಲಾರದು ಒತ್ತು
ಅದೇನೇ ಇದ್ರೂ ಯ, ರ, ನ ಇತ್ಯಾದಿಗಳ ಸೊತ್ತು
ಸಿರಿಗನ್ನಡ ಮರೆಯುತಿರೋ ಆತಂಕದ ಹೊತ್ತು
ಸರಿಗನ್ನಡ ಗೆಲ್ಲಬೇಕು ನಿಮಗೆ ಕೂಡ ಗೊತ್ತು!          

                                                                       ಪದ್ಯ ರೂಪ- ಅಪಾರ.

Monday, October 16, 2017

ಮಾತಿಗೆ ಸಿಕ್ಕ ಆನೆಗಳು...

ಪ್ರಾರಂಭ
ಗಂಗಡಿ ಕಲ್ಲಿನ ನೆತ್ತಿಯಿಂದ....

                ವೈಶಾಖದ ಹೂ ಬಿಸಿಲು. ಮೋಡ ರವಿಯೊಡನೆ ಚಕ್ಕಂದಗಿಳಿದಿತ್ತು. ಆದರ್ೆ ಮಳೆ ಆಗಸ್ಟೇ ತನ್ನ ಆಗಮನದ ಸೂಚನೆ ನೀಡಿ ಹೋಗಿತ್ತು. ಮಳೆಗೆ ಎದ್ದ ಮಣ್ಣಿನ ವಾಸನೆ ಬೆರೆತು ಗಾಳಿ ಎಲ್ಲಾ ಕಡೆ ತನ್ನ ಪರಿಮಳ ಹರಡಿತ್ತು. ಆಗಲೇ ನಮ್ಮಿಬರ ಮೋಟಾರ್ ಬೈಕ್ ಕುದುರೆಮುಖದತ್ತ ತಿರುಗಿದ್ದು. ಅಲ್ಲಲ್ಲಿ ಮೊದಲ ಮಳೆಯ ಹೆಜ್ಜೆ ಗುರುತು ಹೂ ಪಕಳೆಗಳೆಂತೆ ಹರಡಿತ್ತು. ಭದ್ರೆಯ ಪ್ರೀತಿ ನಮ್ಮನ್ನು ಕಾದ ದೇಹಕ್ಕೆ ತಂಪನೆರೆಯುತ್ತಿತ್ತು. ಭದ್ರೆಯಲ್ಲಿ ಈಸು ಬಿದ್ದು, ಹೊಟ್ಟೆ ತುಂಬಾ ತಿಂದ ಮುದ್ದೆ ನಿದ್ರೆಗಾಹ್ವಾನ ನೀಡುತ್ತಿತ್ತು. ಭಗವತಿ ಪ್ರಕೃತಿ ಶಿಬಿರದ ಕತ್ತಲೆಯು ನಮ್ಮಿಬ್ಬರನ್ನು ಆಪೋಷನ ತೆಗೆದುಕೊಳ್ಳಲು ಹೆಚ್ಚು ಸಮಯ ಹಿಡಿಸಲೇ ಇಲ್ಲ.
ಬೆಳ್ಳಂಬೆಳಗ್ಗೆ ಶಿಖರದತ್ತ
ಮಳೆ ಮೋಡಗಳು......

ಇನ್ನೊಂದು ಬದಿಗೆ ತೀರಾ ಕಡಿದಾದ ಪರ್ವತಗಳು....


ಬೆಳಿಗ್ಗೆ ಎದ್ದಾಗ ಹಕ್ಕಿ ಚಿಲಿಪಿಲಿ. ಪಕೃತಿ ಶಿಬಿರದ ಮುಂಜಾವಿನ ಹನಿಗಳ ಮೇಲೆ ಹೆಜ್ಜೆ ಇಟ್ಟಾಗ ಬೆಳಗಿನ ಜಾವ ಐದು ಗಂಟೆ. ಕುದುರೆ ಮುಖದ ಎರಡನೇ ಎತ್ತರದ ಶಿಖರ ಗಂಗಡಿ ಕಲ್ಲೆಂಬ ಮಾಯಾಂಗನೆಯನ್ನು ಒಲಿಸಿಕೊಳ್ಳಲು ಸ್ವಲ್ಪ ದೂರ ಪ್ರಯಾಣ. ಸನಿಹದ ಭೂತ ರುದ್ರಾಕ್ಷಿ ಮರದಡಿ ಬೈಕ್ನ್ನಿಟ್ಟು  ಹೊರಟೆವು.
ಹಾವು ಹರಿದ ದಾರಿಯಲ್ಲಿ ಗೈಡ್ನೊಂದಿಗೆ ಪಯಣ. ಶೋಲಾ ಕಾಡಿಗೆ ಮೂಕವಿಸ್ಮಿತನಾಗಿ ಸಂಭ್ರಮಿಸುತ್ತಾ ಸಾಗಿದೆವು. ಇಬ್ಬನಿಗೆ ಹುಲ್ಲು ಹಾಸು ವಿಪರೀತ ಕೈಕೊಡುತ್ತಿತ್ತು. ಚಿಟ್ಟೆಗಳೊಂದಿಗೆ, ಜೇಡಗಳೊಂದಿಗೆ ಮಾತನಾಡುತ್ತಾ ಸಣ್ಣ ಸಣ್ಣ ಗುಡ್ಡಗಳನು ದಾಟಿ ವಿಪರೀತ ಕಡಿದಾದ ಬೆಟ್ಟದೆದುರಿಗಿದ್ದೆವು. ಶಿಖರಾಗ್ರಕ್ಕೆ ಕಾಲಿಡುತ್ತಿದ್ದಂತೆ ಸೂರ್ಯನೂ ಅಲ್ಲಿ ಹಾಜರಿ ಹಾಕಿದ್ದ.
ಶಿಖರದಲ್ಲಿ ಹೊಳೆವ ಸೂರ್ಯನ ಹಾಜರಿ

ಶಿಖರದ ಕಲ್ಲು ಎಳೆ ಬಿಸಿಲಿಗೆ ಹೊಳೆಯುತ್ತಿತ್ತು. ಪಶ್ಚಿಮದಲ್ಲಿ ಮೋಡಗಳು ಗುನುಗುತ್ತಿದ್ದವು. ಪೋಲಿಸರ ಸಿಗ್ನಲ್ ಟವರ್ ನಕ್ಸಲಾರ್ಭಟಕ್ಕೆ ಹೆಬ್ಬಾವಿನಂತೆ ಮಕಾಡೆ ಮಲಗಿತ್ತು. ಅದರೊಳಗಿನ ಬ್ಯಾಟರಿಯನ್ನವರು ಅಪಹರಿಸಿದ್ದರು. ಶಿಖರದ ನೆತ್ತಿಯ ಸಣ್ಣ ಅಡಗು ತಾಣದಲ್ಲಿ ನಮ್ಮ ಬುತ್ತಿಯಲ್ಲಿದ್ದ ಕೋಡುಬಳೆ, ಚಕ್ಕುಲಿ, ಹಣ್ಣು, ಹೆಸರು ಕಾಳನ್ನು ಹೊಟ್ಟೆಗೆ ವಗರ್ಾಯಿಸಿದೆವು. ಜಗತ್ತನ್ನು ಮರೆಸುವ ಸೌಂದರ್ಯಕ್ಕೆ ನಾವು ಮನಸೋತ್ತಿದ್ದೆವು. ಕ್ಯಾಮರಕ್ಕಂತೂ ಒಂದರೆಗಳಿಗೆಯೂ ಪುರುಸೊತ್ತಿಲ್ಲದೆ ಕ್ಲಿಕ್ಕಿಸುತ್ತಿತ್ತು. ದೂರದಲ್ಲಿ ಕಾಣಿಸಿದ ಕಾಡೆಮ್ಮೆ ನಮಗೆ ಪುಳಕವನ್ನುಂಟು ಮಾಡಿತ್ತು. ಹರಿವ ಹಳ್ಳವೊಂದು ಅಮ್ಮ ಒಣಗಲು ಹಾಕಿದ ಸೀರೆಯಂತೆ ತೋರುತ್ತಿತ್ತು. ಲಖ್ಯಾ ಡ್ಯಾಂ ದೂರದಲ್ಲೆಲ್ಲೊ ಕಾಣುತ್ತಿತ್ತು. ಗಂಗಡಿಕಲ್ಲಿನ ನೆರೆಹೊರೆಯ ಗೆಳೆಯರನ್ನು ಮಾತನಾಡಿಸಲು ಗೆಳೆಯ ನಾಗರಾಜ್ ಶಿಖರವನ್ನಿಳಿದು ಹೊರಟ. ಮುಳ್ಳುಹಂದಿ ತಮ್ಮ ಇರುವನ್ನು ತೋರಿಸಲು ಅಲ್ಲಲ್ಲಿ ಮುಳ್ಳುದುರಿಸಿದ್ದವು. ಅವೆಲ್ಲಾ ನನ್ನ ಬತ್ತಳಿಕೆಯನ್ನು ಸೇರಿಕೊಂಡವು. ಗಂಗಡಿಕಲ್ಲಿನ ಪೂರ್ವದ ಮುಖ ತೀರಾ ಕಡಿದಾಗಿತ್ತು.

ಇಳಿವ ಧಾವಂತ
ಇಳಿವಾಗ ಕಾಣುವ ವಿಹಂಗಮ ನೋಟ..ಬಿಳಿ ಗೀಟು ಬಿಟ್ಟು ಬಂದ ರಸ್ತೆ...

ಮೂಡಿ ಬರುತ್ತಿದ್ದ ಕೆಂಚಣ್ಣನಾದ ಸೂರ್ಯನಿಗೆ ಹಾಯ್ ಹೇಳಿ ಬೆಟ್ಟಕ್ಕೆ ಬಾಯ್ ಹೇಳಲು ತಯಾರಾದೆ. ಎರಡು ದಿನದ ಹಿಂದೆ ಹುಡುಗಿಯೊಬ್ಬಳು ಹುಡುಗಾಟಕ್ಕೆ ಬೆಟ್ಟದಲ್ಲಿ ಜಾರುಬಂಡಿಯಾಡಿ ಹಲ್ಲು ಮುರಿದುಕೊಂಡಿದ್ದಳು! ಎಂದ ನಮ್ಮ ಗೈಡ್. ನನಗಂತೂ ಜಾರುಬಂಡಿಯಾಡುವ ಇಷ್ಟವಿಲ್ಲವಾಗಿ ನಿಧಾನಕ್ಕೆ ಇಳಿಯತೊಡಗಿದೆ. ಏನೋ ಸಾಧಿಸಿದ ಪುಳಕದಿಂದ ಪುಳಕಿತನಾಗಿದ್ದೆ ಅವತ್ತು. ಅಂತಹ ಪುಳಕ ಹಿಮಾಲಯದ ಸನ್ನಿಧಿಯಲ್ಲೂ ನನಗಾಗಿಲ್ಲ! ಪೋಟೋ ತೆಗೆಯುವ ಹುಚ್ಚೊಂದು ಅಂಟಿಕೊಳ್ಳದಿದ್ದರೆ ಆ ಪುಳಕವೊಂದು ನನ್ನಲ್ಲಿ ಮೂಡುತ್ತಿತ್ತೊ ಏನೋ? ಕಡವೆ ಮೆಂದ ಸುಳಿವು, ಯಾವುದೋ ವಿಚಿತ್ರ ಸುವಾಸನೆಯ ಗಿಡ ಅಲ್ಲಲ್ಲಿ ಕಾಣಸಿಕ್ಕವು. ಬೆಟ್ಟವಿಳಿದು ಬೈಕ್ ಕಡೆಗೆ ಹೊರಟಾಗ, ಬಿಸಿಲತಾಪಕ್ಕೋ ರಾತ್ರಿಯ 'ನಶೆ ಸೇವೆಯ' ಪರಿಣಾವೋ ಎಂಬಂತೆ ಗೈಡ್ ತುಂಬಾ ಹಿಂದುಳಿದು ಬಿಟ್ಟ. ನಿಜವಾದ ಕತೆಯ ಥ್ರಿಲ್ ಪ್ರಾರಂಬವಾಗುವುದು ಇಲ್ಲಿಂದಲೇ.
ಆನೆಗಳೊಂದಿಗೆ ಮುಖಾಮುಖಿ
ನಿಧಾನಕ್ಕೆ ಹಿಂದೆ ಉಳಿದ ನಮ್ಮ ಮಾರ್ಗದರ್ಶಕ...

ಜಾಲಿ ಪ್ರಯಾಣದಲ್ಲಿ ನಾಗರಾಜ್


ನಾನು ನಾಗರಾಜ ರಸ್ತೆ ತಲುಪಿದ್ದೆವು. ಗೈಡ್ ನಮ್ಮ ಹಿಂದೆ ಬರುತ್ತಿದ್ದ. ಯಾವುದೋ ಮರದ ಬುಡದಲ್ಲಿಟ್ಟ ಬೈಕನ್ನು ತೆಗೆಯಲು ಹೋದ. ಆ ಜಾಗ ಸ್ವಲ್ಪ ಎತ್ತರದಲ್ಲಿತ್ತು. ಗೆಳೆಯ ನಾಗರಾಜ್ ನಮ್ಮ ಬೈಕ್ನ್ನು ಜಾಲಿ ರೈಡ್ಗೆಂದು ಎತ್ತರದ ದಿಬ್ಬದ ಕಡೆಗೆ ಬಿಟ್ಟುಕೊಂಡು ಹೋದ. ನಡುವಿನ ಇಳಿಜಾರಿನಲ್ಲಿ ನಾನೊಬ್ಬನೇ ನಿಂತಿದ್ದೆ. ಕೆಳಬಾಗದಲ್ಲಿ ದಾರಿ ಇಳಿಜಾರಿಗಿತ್ತು. ನಾಗರಾಜ ಎತ್ತರದ ಕಡೆ ಹೊರಟು ಹೋದ. ಅಗಲೇ ತಗ್ಗಿನಿಂದ ಬಂದ ಟಾಟಾ ಸುಮೊ ಒಂದು ನನ್ನನ್ನು ಬಳಸಿ ಮುಂದೆ ಸಾಗಿ ನಿಂತಿತು. ಈ ನೀರವ ಪ್ರದೇಶದಲ್ಲಿ ನಿಂತ ವಾಹನ ನೋಡಿ ಎದೆ ಧಸಕ್ಕೆಂದಿತು. ಯಾಕೆ ನಿಲ್ಲಿಸಿರಬಹುದು? ಪೋಲಿಸ್ ಯಾ ಫಾರೆಸ್ಟ್ ಡಿಪಾಟರ್್ಮೆಂಟಿನ ಜನರೇ ಎಂದೆಲ್ಲಾ ಮನಸ್ಸು ಯೋಚಿಸ ಹತ್ತಿತು. ವಾಹನದ ನಂಬರ್ ಪ್ಲೇಟ್ ನೋಡಿದೆ. ಹಾಗನಿಸಲಿಲ್ಲ. ಅಷ್ಟರಲ್ಲೇ ವಾಹನ ಹಿಮ್ಮಖ ಚಲನೆ ಪಡೆದುಕೊಂಡು ಎಡಬದಿಗೆ ನನ್ನೆದುರಿಗೆ ಬಂದು ನಿಂತಿತು. ಮತ್ತೂ ಗಾಬರಿಗೊಂಡೆ. ಅದರಿಂದ ವಿಚಿತ್ರ ಮುಖದ, ಗಂಟು ಮೋರೆಯ ಮಧ್ಯವಯಸ್ಕನೊಬ್ಬ ನನ್ನ ಕಡೆಗೆ ಬರ ಹತ್ತಿದ. ಹತ್ತಿರ ಬಂದವನೇ ಇಲ್ಯಾಕೆ ನಿಂತಿದ್ದೀರಾ, ಸಾರ್? ಎಂದ. ಕಾರ್ಕಳಕ್ಕೆ ಹೋಗುವವರೇ ಬನ್ನಿ ಡ್ರಾಪ್ ಕೊಡುವೆ ಎಂದು ಒಂದೇ ಉಸುರಿಗೆ ಉಸುರಿದ. ನಾನಿಲ್ಲಿ ನಿಂತಿರುವುದು ಅಪರಾದವೇ? ಇವರಿಗೇನು ತೋದರೆ ಎಂದೆಲ್ಲಾ ಯೋಚಿಸತೊಡಗಿದೆ. ಹೋಗುವಾಗಲೇ ಕುದುರೆ ಮುಖದ ಕಡೆ ಸ್ಮಗ್ಲರ್ಗಳ ದೊಡ್ಡ ದಂಡೇ ಇದೆ ಎಂದು ನನ್ನವಳೂ ಹೆದರಿಸಿ ಕಳುಹಿಸಿದ್ದಳು. ವಿಚಿತ್ರವಾಗಿದ್ದ ಆತ ಕಳಕಳಿಯಿಂದಲೇ ಮಾತನಾಡಿಸಿದ್ದ. ಏಕೆ? ಏನಾಯಿತು? ಎಂದು ಕೇಳಿ ನನ್ನ ಸಂಪೂರ್ಣ ವಿವರ ಹೇಳಿದೆ. ಆತನ ಮುಂದಿನ ಮಾತಿಗೆ ನನ್ನ ತಲೆ ಖಾಲಿಯಾಗಿ ಯೋಚನಾರಹಿತನಾದೆ. ಇಷ್ಟು ಹೊತ್ತು ಎರಡು ಸಲಗಗಳು ನಮ್ಮನ್ನು ಅಡ್ಡಗಟ್ಟಿದ್ದವು. ಈ ಇಳಿಜಾರಿನ ಕೊನೆಯಲ್ಲಿ ಅವುಗಳು ಮೇಲೆ ಬರುತ್ತಲಿದೆ. ಬೇಗ ಹೊರಡಿ. ಎಂದು ಅವಸರಿಸಿದ.


ಥ್ರಿಲಿಂಗ್ ಕ್ಲೈಮ್ಯಾಕ್ಸ್
 ಕಾಲುಗಳಲ್ಲಿ ಭೂಕಂಪನವಾಗಿ ತಲೆ ನಿಸ್ತೇಜಗೊಂಡು ಅವನಿಗೇನು ಹೇಳುವುದೆಂದು ತೋಚದಾಯಿತು. ಎತ್ತರದ ದಿಬ್ಬದ ಕಡೆ ಹೋದ ನಾಗರಾಜ್ ಪತ್ತೆಯಿರಲಿಲ್ಲ. ಇವರೊಂದಿಗೆ ಹೋದರೆ ಆತ ತಪ್ಪಿ ಹೋಗಬಹುದೆಂಬ ಭಯ. ಆದರೂ ಧೈರ್ಯ ಮಾಡಿ ವ್ಯಾನಿನವನಿಗೆ ನೀವು ಹೊರಡಿ ಎಂದೆ. ಆತ ಜಾಗೃತೆ ಹೇಳಿ ಅವಸರಿಸಿ ಹೊರಟ. ನಾನಿದ್ದ ಜಾಗದಿಂದ ಸ್ವಲ್ಪ ಕೆಳಗೆ ಅನಂತ ಜಿಗ್ಗುಗಳೆಡೆಯಿಂದ ಶಬ್ದ ಕೇಳಿಸ ತೊಡಗಿತು. ಆನೆಗಳಿಗೆ ಬಲಿಯಾಗುವುದು ಬೇಡವೆಂದು ಅಸಾಧ್ಯ ವೇಗದಿಂದ ಸಣ್ಣ ದಿಬ್ಬದ ಕಡೆಗೆ ಹೆಜ್ಜೆ ಹಾಕಿದೆ. ಹತ್ತಿ ನಿಂತೆ. ದೂರದ ವರೆಗಿನ ದೃಶ್ಯಾವಳಿಗಳೆಲ್ಲವೂ ಇಲ್ಲಿಗೆ ಸ್ಪಷ್ಟ ಗೋಚರಾವಾಗಿತ್ತು. ಸುರಂಗದಿಂದೆಂಬಂತೆ ಎರಡು ಸಲಗಗಳು ಫೀಳಿಡುತ್ತಾ ರಸ್ತೆ ಬದಿಯ ಚರಂಡಿಯಿಂದ ಹೊರ ಚಿಮ್ಮಿದವು. ರಸ್ತೆ ದಾಟಿ ನಾವು ಬಿಟ್ಟು ಬಂದ ಪರ್ವತದ ಬುಡದಿಂದ ನಡೆದು ಬಂದ ದಾರಿ ಅನುಸರಿಸಿ ವೇಗವಾಗಿ ಬರತೊಡಗಿದವು. ಅವೆರಡೂ ಸಮರಕ್ಕೆ ಹೊರಟ ಸೈನಿಕರಂತೆ ನಮ್ಮೆಡೆಗೆ ಬರುವುದನ್ನು ನೋಡಿ ಇಂದು ನನ್ನ ಕತೆ ಮುಗಿತೆಂದು ಎಣಿಸಿದೆ. ಕಾಲುಗಳೆರಡೂ ನಡುಗುತ್ತಿತ್ತು. ಜೀವ ಬಾಯಿಗೆ ಬಂದಿತ್ತು. ಇಂದು ನಮ್ಮ ಕತೆ ಮುಗಿತೆಂದು ಎಣಿಸಿದೆ. ಬೈಕ್ನ್ನು ತಿರುಗಿಸಿ ನಮ್ಮೆಡೆಗೆ ಹೊರಟಿದ್ದ ಗೈಡ್ ಅವುಗಳ ಕಣ್ಣಿಗೆ ಬಿದ್ದ. ಆನೆಗಳನ್ನು ನೋಡಿದ್ದೇ ಅವನ ನಶೆ ಜರ್ರನೆ ಇಳಿಯಿತು. ಅವು ಈಗ ಅವನ ಹಿಂದೆ ಬಿದ್ದವು. ಯಾರೋ ಹೇಳಿಕೊಟ್ಟಂತೆ ಆನೆಗಳು ಮತ್ತು ಗೈಡ್ ನಾನಿದ್ದ ಕಡೆ ಬರ ತೊಡಗಿದರು. ಗೊಂಬೆಗಳನ್ನು ಯಾರೋ ನಿದರ್ೇಸಿದಂತೆ ಅವು ಕೆಲಸ ಮಾಡುತ್ತಿದ್ದವು. ಅಷ್ಟೊಂದು ಅನುಭವಿಲ್ಲದ ಆತ ನನ್ನ ಕಡೆ ಓಡತೊಡಗಿದ. ಆತನೂ ಕಂಗಾಲಾಗಿದ್ದ. ನನ್ನ ಪರಿಸ್ಥಿತಿ ಮತ್ತೂ ಬಿಗಡಾಯಿಸಿತ್ತು. ಆತನೇನಾದರೂ ತಪ್ಪಿಸಿಕೊಂಡೊ ಸಿಕ್ಕಿ ಬಿದ್ದೊ ಸಲಗಗಳು ಅದೇ ದಾರಿ ಹಿಡಿದಿದ್ದರೆ ಈ ಕತೆ ಹೇಳಲು ನಾನಿರುತ್ತಿರಲಿಲ್ಲ.
ಒಲಿದ ಅದೃಷ್ಟ
ಹತ್ತಿರದಲ್ಲೇ ಇದ್ದ ಮುಖ್ಯ ರಸ್ತೆ ಹಿಡಿದು ಬಸ್ಸು ಹತ್ತೋಣವೆಂದರೆ ಕೈಯಲ್ಲಿ ಒಂದೂ ರೂಪಾಯಿಯೂ ಇರಲಿಲ್ಲ. ಜಾಲಿ ರೈಡ್ಗೆಂದು ಹೋದ ನಾಗರಾಜ್ನ ಸುಳಿವಿಲ್ಲ. ತಲೆ ಗೊಂದಲದ ಗೂಡಾಗಿತ್ತು. ಏನು ಮಾಡುವುದು. ಮುಂದೆನಾಗುವುದೋ ಎಂದು ಹೆದರಿ, ಚಳಿಯಲ್ಲೂ ಬೆವರುತ್ತಾ ನಿಂತಿದ್ದೆ. ಎದ್ದನೋ ಬಿದ್ದನೋ ಎಂದು ಬೈಕ್ ಓಡಿಸುತ್ತಿದ್ದ ಗೈಡ್. ಅದೃಷ್ಟವೊಂದೇ ನಮ್ಮ ಪಾಲಿಗಿದ್ದದ್ದು. ಏನೆನ್ನಿಸಿತೋ ಆನೆಗಳಿಗೆ ಹಠಾತ್ತನೆ ನಿಂತು ದಿಕ್ಕು ಬದಲಿಸಿ ಮತ್ತೊಂದು ಇಳಿಜಾರಿನ ದಾರಿ ಹಿಡಿದು ಹೊರಟವು. ಬಾಯಿಗೆ ಬಂದ ಹೃದಯ ತನ್ನ ಸ್ವಸ್ಥಾನಕ್ಕೆ ಮರಳಿತು! ಎಷ್ಟೋ ಹೊತ್ತು ಅವು ಹೋಗುವುದನ್ನೇ ನೋಡುತ್ತಾ ನಿಂತು ಬಿಟ್ಟೆ. ಗೆಳೆಯ ನಾಗರಾಜ ಬಂದು ಕರೆದಾಗಲೇ ಎಚ್ಚರವಾದುದು!

Monday, October 2, 2017

ದಾರಿಯಿಲ್ಲದ ದಾರಿಯಲ್ಲಿ......ಅಡಿಗರ ನೆನೆದು.........


ಕಾಡಿನೊಳ ಹೊಕ್ಕು
ಪೊದೆ ಪೊದರು ಗಿಡಗಂಟೆ
ಮುಳ್ಳುಗಳ ನಡುವೆ
ಹೊಚ್ಚ ಹೊಸ ಹಾದಿ ಕಡಿವವರು
ಪದ್ಧತಿಯ ಬಿಟ್ಟು
ಮುದ್ದಾಮು ದಾರಿ ಹುಡುಕುತ್ತಾ
ಅಲೆವವರು, ಬೆಟ್ಟದ ನೆತ್ತಿ ಹತ್ತಿ
ಹತ್ತೂ ಕಡೆ ಕಣ್ಣು ಕಣ್ಣು
ಬಿಡುವಂಥವರು, ಇಂಥವರು
ಅರ್ಥವಾಗುವುದಾದರೂ ಹೇಗೆ?....... ಎಂದು ಗೋಪಾಲಕೃಷ್ಣ ಅಡಿಗರು ತಮ್ಮ ಪದ್ಯದಲ್ಲಿ ಕಥಿಸಿದ್ದಾರೆ. ನಮ್ಮ ಸಾಹಸಕ್ಕೂ ಈ ಪದ್ಯವನ್ನು ಸಾಮ್ಯ ಉಂಟೆದಿಲ್ಲಿ ಟಂಕಿಸಿದೆ.




ನನಗಿನ್ನೂ ಅರ್ಥವಾಗಿಲ್ಲ. ಕಿಸೆಯ ಭಾರ ದೇಹ ಭಾರ ಕಳಕೊಂಡು ಹೊರಡುವ ಈ ಚಾರಣಗಳ ಅರ್ಥ. ಸುಮ್ಮನೆ ಭಾನುವಾರದ ಸಂಜೆ ಉಂಡು ಮಲಗಬಹುದಿತ್ತು. ಕಾಫಿ ಹೀರುತ್ತಾ, ಮಳೆ ನೋಡುತ್ತಾ, ಒಂದೆರಡು ವಾತರ್ಾ ಪತ್ರಿಕೆ ಮಗುಚಿ ಹಾಕಬಹುದಿತ್ತು. ಆದರೆ, ದಾರಿಯಲ್ಲದ ದಾರಿಯಲಿ, ಹನಿ ನೀರಿಗೆ ಪರಿತಪಿಸಿ, ಜಪಿಸಿ, ಮುಳ್ಳು ಕಂಟಿಯ ಗೀರಿಸಿಕೊಳ್ಳುವ ಜರೂರೇನಿತ್ತು? ರಕ್ತ ಹೀರುವ ಇಂಬಳಗಳ ಕಾಟ. ಕಲ್ಲಿಂದ ಕಲ್ಲಿಗೆ ಹಾರುತ್ತಾ ಬೆಟ್ಟವೇರಬೇಕು. ಬೆಟ್ಟವಿಳಿಯಬೇಕು. ಎರಡು ದಿನ ನೋಯುವ ಕಾಲು. ಮುಷ್ಕರ ಹೂಡುವ ಗಂಟುಗಳು. ದಕ್ಕದ್ದು ದಕ್ಕಿಸಿಕೊಳ್ಳುವ ಛಲವೇ? ಗೊತ್ತಿಲ್ಲ. ಅಡಿಗರ ಮತ್ತೊಂದು ಪದ್ಯ ನೆನಪಾಗುತ್ತಿದೆ.
 ಸ್ವಿಚ್ ಎಲ್ಲೋ ಇದೆ ಸಿಕ್ಕುತ್ತಿಲ್ಲ?!








ಜಲಪಾತದೊಂದಿಗೆ ಸೆಲ್ಪಿ...
ಒಂದಲ್ಲ ಎರಡೆರಡು ಸಲ ನೋಡಿ ನಿರಾಶರಾಗಿ ಹಿಂದಿರುಗಿದ ಮೇಲೆ ಛಲ ಬಂದು ಹತ್ತಿ ನೋಡಿದೆವು ಬೆಟ್ಟದಾ ನೆತ್ತಿ. ನಡುವೆ ಸಿಗುವ ಫನರ್್ಗಳು, ಆಕರ್ಿಡ್ಗಳ ಲೆಕ್ಕವಿಟ್ಟವರ್ಯಾರು? ನೆತ್ತಿ ಸುಡದ ಮರಗಳ ನೆರಳು. ಕಲ್ಲುಗಳ ಸಂಧಿನಲ್ಲಿ ಕೋತಿಯಾಟವಾಡಿ ತಲುಪಿದೆವು ಅರೆ ನೆತ್ತಿ. ಅಲ್ಲೇ ಎರಡು ಬೆಟ್ಟಗಳ ನಡುವಲ್ಲಿ ಧುಮುಕುವ ತಿಳಿ ನೀರ ಜಲಧಾರೆ. ಜಟಾಧರನ ಜಟೆಯಿಂದೆಂಬಂತೆ ಉಕ್ಕಿ ಉಕ್ಕಿ ಬರುತಲಿತ್ತು ಮತ್ತೆ ಮತ್ತೆ. ಆಗಾಗ ಮೋಡದ ಪರದೆ. ಕ್ಯಾಮರಕ್ಕೆ ಬರಪೂರ ಊಟ. ಚಕ್ಕಳ ಬಕ್ಕಳ ಹಾಕಿ ಕೂತು ಜಲಧಾರೆ ಎದುರಿಗೆ ಒಂದಿಷ್ಟು ಧ್ಯಾನಿಸಿ, ಉಂಡು, ಮಿಂದು ಹೊರಟೆವು. ರುಚಿ ರುಚಿ ಪತ್ರೊಡೆ ಎಲೆಯನ್ನು ಗೆಳೆಯರು ಆರಿಸಿಕೊಟ್ಟರು. ಮರು ದಿನವೂ ಅದರದೇ ಧ್ಯಾನ.
ಭಾಗವಹಿಸಿದ ಗೆಳೆಯರಿಗೆಲ್ಲಾ ಧನ್ಯವಾದ.


ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...