Thursday, April 30, 2020

ಬಕುಳದ ಬಾಗಿಲಲಿ ಸಿಕ್ಕವಳು...

ಬಕುಳ ಒಂದು ಸುಂದರ ಹೂ ಬಿಡುವ ಮರ. ಮಲೆನಾಡಿನ ಜನರ ಮದುವೆಗಳಲಿ ಇದರ ಹಾರವು ಅತಿ ಅಗತ್ಯವಾದುದು. ಪರಿಮಳವೂ ಅತಿ ಮಧುರ. ಇದರ ಹಣ್ಣನ್ನು ನಾವು ಚಿಕ್ಕವರಿದ್ದಾಗ ಆರಿಸಿ ಆರಿಸಿ ತಿನ್ನುತ್ತಿದ್ದೆವು. ತುಂಬಾ ರುಚಿಯಲ್ಲದಿದ್ದರೂ ಒಂಥರಾ ಒಗರು ಸಿಹಿಯ ಹಣ್ಣು. ಈಗಿನ ಮಕ್ಕಳಿಗೆ ಲೇಸ್, ಬಿಂಗೊ, ಕುರ್ ಕುರೆ ಬಿಟ್ಟರೆ ಬೇರೆ ಗೊತ್ತಿಲ್ಲ ಬುಡಿ. ಹೊಟ್ಟೆಯ ತುಂಬುವುದರ ಜೊತೆಗೆ ಪುಷ್ಟಿಯೂ ಸಹ. 
                               ಮಂಗನಂತೆ ಕಾಡು ಹಣ್ಣುಗಳನ್ನು ತಿಂದ ನನಗೆ ಯಾವ ವಿಟಾಮಿನ್ ಕೊರತೆ ಕಾಡಿದ್ದಿಲ್ಲ. ಪೂಜೆ ಪುನಸ್ಕಾರಗಳಲ್ಲಿಯೂ ಬಕುಳದ ಉಪಯೋಗ ಉಂಟು. ಬಕುಳದ ಹೂವಿನ ಹಾರ ವಿಲ್ಲದೇ ಮದುವೆನೂ ಆಗಲ್ಲ!


ಹಣ್ಣು 




ವ್ಯಾಟ್ಸಪ್ ನಲ್ಲಿ ಅವಳ ಪೋಟೋಗಳನ್ನು ಕೆಲವರು ಹಾಕಿದ್ದೆ ಹಾಕಿದ್ದು, ನನ್ನ ಮುಖಾರವಿಂದವು ಅರಳಿತ್ತು, ಅವಳ ಹುಡುಕುತ್ತಾ ಬಕುಳದ ಬಾಗಿಲಿಗೆ ಬಂದಿದ್ದೆ. ಬಹಳಾ ದಿನಗಳಿಂದ ಅವಳ ನಿರೀಕ್ಷೆಯಲ್ಲಿದ್ದೆ. ಹುಡುಕುತ್ತಾ ಇದ್ದೆ. ಸಿಕ್ಕಿರಲಿಲ್ಲ. ಅಚಾನಕ್ಕಾಗಿ ಬಾಲ್ಯದ ದಾರಿ ಸವೆಸುತ್ತಿದ್ದವನಿಗೆ ಬಕುಳದ ಮರದ ಬಳಿಯೇ ಅವಳು ಸಿಕ್ಕಳು! ಎಷ್ಟು ಖುಷಿಯಾಯಿತೆಂದರೆ  ಹೇಳ ತೀರದು. ನಿಂತಲ್ಲೇ ಕುಣಿದು ಕುಪ್ಪಳಿಸಿದೆ. ನನಗೆ ಸಿಕ್ಕವಳನ್ನು ನಿಮಗೆ ತೋರಿಸಬೇಡವೇ? ತಪ್ಪು ತಿಳಿಯ ಬೇಡಿ. ಅವಳೊಂದು ಜೇಡ!!! ಕಸದಲ್ಲೇ ಕಸದಂತಿರುವ ಜೇಡ! ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಸೂಕ್ತಿಯೂ ಕಡಿಮೆಯಾದೀತು ಇವುಗಳ ವೇಷ ಮರೆಸುವ ತಂತ್ರಕ್ಕೆ.




ಯಾವುದೋ ಒಣಗಿದ ಎಲೆಯೊಂದು ನೇತಾಡುತ್ತಿದೆಯಲ್ಲಾ ಎಂದು ಚಿಕ್ಕ ಕಡ್ಡಿಯ ಸಹಾಯದಿಂದ ಅದನ್ನು ಮುಟ್ಟಿದೆನಷ್ಟೆ. ಏನಾಶ್ಚರ್ಯ ಒಣಗಿದ ಎಲೆ ಓಡಾಡ ತೊಡಗಿತು! ನೋಡಿದರೆ ಕಾಲುಗಳೂ ಉಂಟು. ಯಾರೀಕೆ? ಹುಡುಕಾಡಿದೆ ಇವಳೇ ಚೇಳು ಬಾಲದ ಊರ್ಣ ನಾಭ( ಜೇಡ). 


             ಅರಶಿನ ಮತ್ತು ಕಡು ಕಪ್ಪು ಬಣ್ಣದ ಅಂಗಿಗಳಲ್ಲಿ ಇವಳನ್ನು ನೋಡಿದ್ದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಇವು ನೋಡಲು ಕಾಣುವುದು ಅಪರೂಪ. ಈಗಿನ ಕಾಲದಲ್ಲಿ ಕಸವಾಗಲು ಯಾರು ಬಯಸುತ್ತಾರೆ ಹೇಳಿ? ಅದೂ ಕಾಲ ಕಸವಾಗಿ ಅಜ್ಞಾತವಾಗಿ. ಎಲ್ಲಾ ಕಡೆ ಬೇಡದ ಕಸವನ್ನು ಎಸೆಯುತ್ತಾ ಇರೋ ಮಾನವನೆಂಬ ಜೀವಿಯ ಮುಂದೆ, ಜೀವಿ ಸಮತೋಲದಲ್ಲಿ ಅಭೂತಪೂರ್ವ ಸಹಕಾರ ನೀಡುವ ಇವು ನಿಜಕ್ಕೂ ಶ್ರೇಷ್ಠವಲ್ಲವೆ? ಏನಂತೀರಿ?
ಶ್ರೀಧರ್. ಎಸ್. ಸಿದ್ದಾಪುರ.

ಚಿತ್ರ ಅಂತಜರ್ಾಲ.


Friday, April 10, 2020

ಬಿಳಲು




       ಏಕೋ ಮೂರು ನಾಲ್ಕು ದಿನಗಳಿಂದ ಅವನದೇ ನೆನಪು! ಏನು ಮಾಡುತ್ತಿದ್ದಾನೊ ಏನೋ. ಅಪ್ಪನ ತಿಥಿಗೂ ಬಂದಿರಲಿಲ್ಲ ಪುಣ್ಯಾತ್ಮ. ಪೋನ್ನಲ್ಲಿ 'ಹಾಂ', 'ಹೂಂ' ಎಂಬಲ್ಲಿಗೆ ಮಾತಿಗೆ ಕಡಿವಾಣ.
 ನಿಮ್ಮ ಆಸ್ತಿನೂ ಬೇಡ ಮನೆನೂ ಬೇಡವೆಂದು ಒಂದಿಷ್ಟು ಹಣ ಹೊತ್ತು ಹೋದ ನನ್ನ ತಮ್ಮ ಇಂದು ಹೆಬ್ಬಾಗಿಲಲಿ ನಿಂತು ಹಣಕಿ ಹಾಕಿದಂತೆ ಭಾಸ. 

      ಯಾರೋ ಅದು ಎಂದು ಕರೆದೆ. ತೆರೆದ ಹೆಬ್ಬಾಗಿಲಿನಲಿ ಆರಡಿ ಎತ್ತರದ ವ್ಯಕ್ತಿ. ಕನ್ನಡಕವಿಲ್ಲದೇ ದೂರದ್ದು ಕಾಣಲ್ಲ. 'ತಥ್ ಈ ಚಾಲೀಸು' ಎಂದು ಶಪಿಸಿದೆ. ಆತನ ಹಿಂದೆ ಮಿಳ್ಳೆಗಣ್ಣಿನ ಪೋರನೊಬ್ಬ ಹಣಕಿ ಹಾಕಿ ನನ್ನೇ ನೋಡುತ್ತಲಿದ್ದ. ಬಿಸಿಲಕೋಲೊಂದು ಇಡಿ ಮನೆಯನು ಬೆಳಗಿತ್ತು. 
    ನನ್ನ ಗಮನವೆಲ್ಲಾ ಆತನೆಡೆಗೆ ಹೋಯಿತು. ತಕ್ಷಣಕ್ಕೆ ತಿಳೀಲಿಲ್ಲ. 'ನಿಜ ಅವನು ನನ್ನ ತಮ್ಮನೇ', 'ಒಳಗೆ ಬಾರೋ' ಎಂದೆ. ದೊಡ್ಡಪ್ಪ ಎಂದು ದೊಡ್ಡ ದನಿ ಮಾಡಿ ನನ್ನ ಕಾಲ ಬಳಸಿ ನಿಂತ ಮಗುವನ್ನು ಒಮ್ಮೆಲೆ ಎತ್ತಿ ಹಿಡಿದೆ. 'ಅಂತೂ ನಿನಗೆ ಮನೆ ನೆನಪಾಯಿತಲ್ಲ, ನಡೆ ನೀರು ದೋಸೆ ಮಾವಿನ ರಸ ಹಾಕ್ಕೊಂಡು ತಿನ್ನೋಣ' ಎನ್ನುತ್ತಾ ಮಗುವನ್ನು ಒಮ್ಮೆಲೆ ಆಕಾಶಕ್ಕೆ ಹಾರಿಸಿದೆ. 
#_ಶ್ರೀಧರ್_ಎಸ್_ಸಿದ್ದಾಪುರ.
#_ಸಣ್ಣ_ಕತೆಗಳು.

'ಮಸಾಲೆ ದೋಸೆಗೆ ಕೆಂಪು ಚೆಟ್ನಿ'


 ಪುಸ್ತಕಗಳ ಬಗ್ಗೆ ಬರೆಯುವುದೆಂದರೆ ಚಳಿಗಾಲದ ರಾತ್ರಿ ಹಳೆ ಪ್ರೇಯಸಿಯನ್ನು ನೆನಪಿಸಿಕೊಂಡಂತೆ ಮೈ ಮನಗಳಲ್ಲಿ ಪುಳಕ! ಜೋಗಿಯವರ 'ಮಸಾಲೆ ದೋಸೆಗೆ ಕೆಂಪು ಚೆಟ್ನಿ' .
 
 ಸೊಗಸು ಎಲ್ಲಿದೆ? ನೋಡುಗನ ಕಣ್ಣಿನಲ್ಲಿ? ಉಹುಂ. ನೋಡುಗನ ಹೃದಯದಲ್ಲಿ? ಉಹುಂ. ನೋಡುಗನ ಮನಸ್ಸಿನಲ್ಲಿ. ಗೊತ್ತಿಲ್ಲ! 
 ಯಾರದೋ ಯಾವುದೋ ಅಭಿಪ್ರಾಯಗಳ ಕೇಳಿ ಮಾರು ಹೋಗುತ್ತೇವೆ. ಆ ಒಂದು ಪುಸ್ತಕ ಕೊಳ್ಳುತ್ತೇವೆ. ಮುಖಪುಟ ಚೆನ್ನಾಗಿರೋದ್ರಲ್ಲಿ ವಿಷಯವೇ ಇರೋಲ್ಲ. ವಿಷಯವಿರುವ ಪುಸ್ತಕಗಳಲ್ಲಿ ಮುಖಪುಟ, ತಲೆಬರೆಹ ಆಕರ್ಷಕ ಅನಿಸೊಲ್ಲ. ಹೀಗೆ ಕೊನೆಗೆ ನನಗನಿಸುವು    ಈ     ಪುಸ್ತಕ  ನನಗೆ ಬೇಕಿತ್ತಾ. ನೂರರಲ್ಲಿ 25-30 ಪುಸ್ತಕಗಳು ಈ ಸಾಲಿಗೆ ಸೇರುತ್ತವೆ. ತಿಳುವಳಿಕೆ ಮೂಡಿದಾಗ ತಡವಾಗಿರುತ್ತದೆ, ಕೊನೆಗೆ ಕಪಾಟಿನ ಮೂಲೆ ಸೇರುತ್ತವೆ. ಆದರೆ ಈ ಪುಸ್ತಕ ಹಾಗಿಲ್ಲ.
ಅದರಲ್ಲಿನ ಒಂದು ಸುಂದರ ಕತೆ ಹೀಗಿದೆ. 
 "ಜೀವನದಲ್ಲಿ ಅತ್ಯಂತ ನಿರುತ್ಸಾಹಗೊಂಡ ವ್ಯಕ್ತಿಯೊಬ್ಬ ಸಾಯಲೆಂದು ಹೊರಡುತ್ತಾನೆ. ಆ ರಾಜ್ಯದಲ್ಲಿ ಆತ್ಮಹತ್ಯೆ ಅಪರಾಧವಲ್ಲ. ಹಾಗಂತ ಎಲ್ಲೆಲ್ಲೋ ಬಿದ್ದು ಸಾಯುವಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮಹಾರಾಜನೇ ವ್ಯವಸ್ಥೆ ಮಾಡಿದ್ದಾನೆ. ಅದಕ್ಕೊಂದು ಜಾಗವಿದೆ. ರಾಜ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರೆ ನೀವು ಆತ್ಮಹತ್ಯೆ ಮಾಡಿಕೊಳ್ಳುವ ದಿನಾಂಕವನ್ನು ಕಾರ್ಯಾಲಯ ಸೂಚಿಸುತ್ತದೆ. ಕೆಲವೊಮ್ಮೆ ಆರೇಳು ತಿಂಗಳು ಕಾಯಬೇಕಾಗಿ ಬರುವುದೂ ಉಂಟು. ಕೆಲವೊಮ್ಮೆ ಐದಾರು ದಿನಗಳಲ್ಲಿ ಸಾಯುವ ಅವಕಾಶ ಬಂದರೂ ಬರಬಹುದು. 
 ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವ ವ್ಯಕ್ತಿ ಕಾರ್ಯಾಲಯಕ್ಕೆ ಹೋಗಿ ಅಜರ್ಿ ಸಲ್ಲಿಸುತ್ತಾನೆ. ಹದಿನೈದು ದಿನಗಳಲ್ಲಿ ಆತ್ಮಹತ್ಯಾ ದಿನಾಂಕವನ್ನು ಹೇಳುವುದಾಗಿ ಕಾರ್ಯಾಲಯ ಹೇಳಿ ಕಳಿಸುತ್ತದೆ. ಅವನು ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಅಲ್ಲೊಬ್ಬಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇವನು ಅವಳನ್ನು ಮಾತನಾಡಿಸುತ್ತಾನೆ. ಅವಳಿಗೆ ಐದು ತಿಂಗಳ ನಂತರ ಸಾಯೋ ದಿನ ನಿಗದಿಯಾಗಿರುತ್ತದೆ. ಅವಳಿಗೆ ಐದು ತಿಂಗಳು ಕಾಯಲು ಮನಸ್ಸಿಲ್ಲ. ಉಳಿಯಲು ಮನೆ ಇಲ್ಲ. ನೋಡಿಕೊಳ್ಳಲು ಯಾರೂ ಇಲ್ಲ.
 ಈತ ಆಕೆಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವನಿಗೂ ಐದು ತಿಂಗಳು ಕಾಯುವ ಮನಸ್ಸಿರುವುದಿಲ್ಲ. ಅದರ ಬಗ್ಗೆ ಮಾತನಾಡುತ್ತಾ ವಾರ ಉರುಳುತ್ತದೆ. ತಿಂಗಳೂ ಉರುಳುತ್ತದೆ. ಕ್ರಮೇಣ ಅವರಿಬ್ಬರೂ ಪ್ರೀತಿಸತೊಡಗುತ್ತಾರೆ. ಮದುವೆಯಾಗುತ್ತಾರೆ. ಪ್ರೀತಿ ಗಾಢವಾಗುತ್ತಿದ್ದ ಹಾಗೆ ಬದುಕ ಬೇಕು ಅನ್ನಿಸುತ್ತದೆ. ಸಾಯುವ ದಿನ ಸಮೀಪವಾಗುತ್ತಾ ಹೋಗುತ್ತಿದ್ದ ಹಾಗೆ ಅವರಿಬ್ಬರೂ ಬದುಕಲು ನಿರ್ಧರಿಸಿ ತಮ್ಮ ಆತ್ಮಹತ್ಯೆಯ ಅಜರ್ಿಯನ್ನು ವಾಪಾಸು ಪಡೆಯಲು ನಿರ್ಧರಿಸಿರುತ್ತಾರೆ. 
 ಆದರೆ ಅಧಿಕಾರಿಗಳೂ ಅದಕ್ಕೆ ಅನುಮತಿ ಕೊಡುವುದಿಲ್ಲ...ಸಾಯುತ್ತೀರಿ ಎಂದು ಹೇಳಿದ್ದಾಗಿದೆ. ನಿಮ್ಮ ಕಡತಗಳು ವಿಲೇವಾರಿಯಾಗಿವೆ. ಈಗ ಅದನ್ನು ಹಿಂತೆಗೆಯುವಂತಿಲ್ಲ. ಆ ದಿನಾಂಕದಂದು ಬಂದು ಸಾಯಿರಿ ! ಎಂದು ರಾಜಾಜ್ಞೆಯಾಗುತ್ತದೆ. ಈ ಮಧ್ಯೆ  ಅವರ ರಕ್ತ ಸಂಬಂಧಿಗಳು ಯಾರಾದರೂ ಸಾಯುವ ನಿಧರ್ಾರ ಮಾಡಿದರೆ, ಆತ್ಮಹತ್ಯಾ ದಿನವನ್ನು ಅವರಿಗೆ ವಗರ್ಾಯಿಸಬಹುದು ಎಂದು ಸಲಹೆ ಕೊಡುತ್ತಾರೆ. 
 ಅವರು ತಮ್ಮ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಹುಡುಕಾಟದಲ್ಲಿ ತೊಡಗುತ್ತಾರೆ. ಯಾರೂ ಸಿಗುವುದಿಲ್ಲ. ಹತಾಷೆ ಆವರಿಸುತ್ತದೆ. ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಬದುಕು ರೇಜಿಗೆ ಅನಿಸುತ್ತದೆ. ಅವಳು ಮೊದಲಿನಂತಿಲ್ಲ ಎಂದು ಅವನು ಭಾವಿಸುತ್ತಾನೆ. ಅವನು ಹೀಗಿರಲಿಲ್ಲ ಎಂದು ಅವಳು ಕೊರಗುತ್ತಾಳೆ. ಇದಕ್ಕಿಂತ ಸಾಯೋದೇ ವಾಸಿ ಅಂತ ಅವಳು ಒಳಗೊಳಗೇ ತೀಮರ್ಾನ ಮಾಡಿ ಬದುಕುವ ಯೋಚನೆ ಕೈ ಬಿಡುತ್ತಾಳೆ. 
 ಅಷ್ಟು ಹೊತ್ತಿಗೆ ಮದುವೆಯಾದವರಿಗೆ ಸಾಯುವ ಅವಕಾಶವಿಲ್ಲ. ಅವರ ಅಜರ್ಿಗಳನ್ನು ನಿರಾಕರಿಸಲಾಗಿದೆ ಕೇವಲ ಪ್ರೇಮಿಗಳಿಗೆ ಮಾತ್ರ ಸಾಯುವ ಅವಕಾಶವೆಂದು ಕಾನೂನು ತಿದ್ದುಪಡಿಯಾಗಿರುತ್ತದೆ.
 ಅವರಿಗೆ ಮದುವೆಯಾಗಿದೆ. ಅವರು ಪ್ರೇಮಿಗಳೂ ಅಲ್ಲ. ಹೀಗಾಗಿ ಬದುಕುವಂತಿಲ್ಲ, ಸಾಯುವಂತಿಲ್ಲ"
----
ಹೇಗಿದೆ ಕತೆ? ಯಾಕೆ ಓದಬೇಕು? ಚೆಂದದ ಕತೆಗಳಿಗಾಗಿಯಾ? ಯಾಕೆ ಬರೆಯಬೇಕು ಇಷ್ಟೆಲ್ಲಾ? ಅದಕ್ಕೂ ಮತ್ತೆರಡು ಚೆಂದದ ಕತೆಯಿದೆ. ಇಂತಹ ಅನೇಕ ಜಿಜ್ಞಾಸೆಗಳ ಒಳ ಸುಳಿ, ತಿರುಳಗಳ ಹೂರಣಗಳ ಹೊತ್ತು ತಂದ ಹೊತ್ತಗೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಅಲ್ಲವೇ ಅಲ್ಲ.( ನನ್ನ ಸ್ವಂತ ಅಭಿಪ್ರಾಯ) ಹಾಗಾಗಿ ಮತ್ತೊಮ್ಮೆ ಓದಿದೆ. 
 ಜೋಗಿಗೆ ನಾ ಕೇಳಬೇಕು, ಇಂತಹ ಕಾಡುವ  ಸಾಲುಗಳನ್ನು ಎಲ್ಲಿಂದ ಎತ್ತಿಟ್ಟುಕೊಂಡೆ. ತಣ್ಣನೆಯ ಆಹ್ಲಾದಂತಹ ಕತೆಗಳನ್ನು ಎಲ್ಲಿಂದ ಹೆಕ್ಕಿ ತಂದೆ. ಮಾತಿನ ಸುಂದರ ಸೀರೆ ಉಡಿಸೋದು ನೀನು ಎಲ್ಲಿಂದ ಕಲಿತೆ? 
ಶ್ರೀಧರ್ ಎಸ್. ಸಿದ್ದಾಪುರ.

Wednesday, April 1, 2020

ಕರೋನಾ ಕೆರೆತ!


ಕರೋನದಿಂದ ಅತ್ಯಂತ ಅನ್ಯಾಯಕ್ಕೊಳಗಾದ, ನಿರ್ಲಕ್ಷಕೊಳಗಾದ ನಮ್ಮ ದೇಹದ ಭಾಗವೆಂದರೆ ಅದು ಮೂಗು! ಅಯ್ಯೋ ಶಿವನೆ, ಏನು ಹೇಳುತ್ತಾನೆಂದು ಆಶ್ಚರ್ಯವಾಯಿತೇ? ಸ್ವಲ್ಪ ತಾಳ್ಮೆ ಇರಲಿ. ತಲೆ ಬುಡವಿಲ್ಲದ ಸಂಗತಿಗಳನ್ನು ಹೇಳುತ್ತಾನೆಂದು ಅನ್ಕೊಬೇಡಿ.
 ಹೌದು. ಕೋವಿಡ್-19 ಬಂದಾಗಲೇ ವ್ಯಾಟ್ಸಪ್ ಮತ್ತು ಎಫ್ ಬಿ  ಗಳಲ್ಲಿ ಅನುಸರಿಸಬೇಕಾದ ಆವಶ್ಯಕ ಕ್ರಮಗಳ ಕುರಿತು ಟನ್ ಗಟ್ಟಲೆ ಮಾಹಿತಿ ಹರಿದು ಬಂದಿತು. ಅದರ ಮೊದಲ ಅಂಶವೆಂದರೆ ನಮ್ಮ ದೇಹದ ಒಂದು ಭಾಗವಾದ ಮುಖವನ್ನು ಮುಟ್ಟುವಂತಿಲ್ಲ. ಜೊತೆಗೆ ಮೂಗು ಕಣ್ಣು, ಬಾಯಿ ಮುಟ್ಟುವಂತಿಲ್ಲ. ಯಾರೋ ನಮ್ಮ ದೇಹದ ಭಾಗವನ್ನು ಮುಟ್ಟಬೇಡಿ ಎಂಬ ವಿಚಿತ್ರ ನಿಬಂಧನೆ ಬೇರೆ. 
 ಈ ಸುದ್ದಿ ತಿಳಿಯುತ್ತಲೆ ರಚ್ಚೆ ಬಿದ್ದ ಮಗುವಿನಂತಾಗಿದೆ ಮೂಗು! ನಾ ಹೇಳುವುದನ್ನು ಕೇಳದೆ ಪ್ರತಿಭಟನೆಗೆ ಬಿದ್ದಿದೆ. ಮುದ್ದಿಸು ಮುದ್ದಿಸು ಎನುತಿದೆ! ಪ್ರತೀ ಕ್ಷಣವೂ ಮುಟ್ಟು ಮುಟ್ಟು ಎಂದು ತೋರಿಕೆ ತುರಿಕೆ ಉಂಟು ಮಾಡಿ ಯಾವುದೋ ಪ್ರಲೋಭನೆ ಒಡ್ಡುತಿದೆ. ಹೇಗಾದರೂ ಮುಟ್ಟು ಮರಾಯ ಎನ್ನುತಿದೆ. ಏನು ಮಾಡುವುದೆಂದು ತೋಚಲೇ ಇಲ್ಲ. ಮೊದಲ ದಿನವಂತೂ ತಡೆದುಕೊಂಡೆ. ಆದರೆ ಮುಟ್ಟ ಬೇಕೆನ್ನುವ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. 

ಎರಡನೇ ದಿನಕ್ಕೆ ಹೊಸ ಐಡಿಯಾದೊಂದಿಗೆ ಬಂದೆ ತಲೆ ಬಾಚುವ ಹಣಿಗೆಯೊಂದನ್ನು ಸಾನಿಟೈಸ್ ಮಾಡಿ ಇಟ್ಟುಕೊಂಡೆ. ಅದಕ್ಕೂ ದಿನಕ್ಕೆರಡು ಬಾರಿ ಸ್ನಾನ. ತುರಿಸು ತುರಿಸು ಎಂದೊಡನೆ ಅದನ್ನೇ ಹಾಕಿ ತಿಕ್ಕಲು ಸುರುಮಾಡಿದೆ. ಕೋವಿಡ್ ಹರಡುತ್ತಲೆ ನನ್ನ ಪರಿಸ್ಥಿತಿ ಈಗ ವಿಕೋಪಕ್ಕೆ ಹೋಗಿದೆ.  ನನ್ನ ಮುಖವನ್ನೇ ನಾನು ನೋಡಲು ಅಸಹ್ಯ ಪಡುವಂತಾಗಿದೆ. ಅಡ್ಡ ಗೀರು ಉದ್ದಗೀರುಗಳು ಮುಖದ ತುಂಬಾ ಮೂಡಿವೆ. ಬಾಚಣಿಗೆಯಲ್ಲಿ ಕೆರೆದು ಕೆರೆದು ಮೂಗು ಗಡ್ಡಗಳೆಲ್ಲಾ ಕೆಂಪು ಕೆಂಪಾಗಿ ವಿಚಿತ್ರ ಕೆಂಪು ಮೂತಿಯ ಮಂಗನಂತಾಗಿರುವೆ. ಆದರೆ ಕೆರೆತ ಕಡಿಮೆಯಾಗಿಲ್ಲ.

  ಜೊತೆಗೆ ಅಮ್ಮ ಹೇಳಿದ ಎಲ್ಲಾ ಆಯರ್ುವೇದದ ಗಿಡ ಮೂಲಿಕೆಯನ್ನೆಲ್ಲಾ ಅರೆದು ಹಚ್ಚಿದೆ. ಹೆಚ್ಚಿತೆ ಹೊರತು ಕಡಿಮೆಯಾಗಿಲ್ಲ. ಪಾಪದ ಯಾವುದ್ಯಾವುದೋ ಜೇಡಗಳ ಮೇಲೆ ಆಪಾದನೆ ಮಾಡಿದ್ದಾಳೆ ಹೆಂಡತಿ .  ಕೇಳಿಸಿ ಕೊಂಡರೆ ಕಷ್ಟ , ಅವು ಮಾನ ನಷ್ಟ ಮೊಕದ್ದಮೆ ಹೂಡಿಯಾವು ಎಂಬ ಭಯ! 


ಯಾವುದನ್ನು ಮಾಡಬೇಡ ಎನ್ನುವರೊ ಅದನ್ನೇ ಮಾಡಬೇಕು ಎಂಬ ವಿಚಿತ್ರ ಬಯಕೆ ನಮ್ಮ ಮನಸ್ಸಿಗುಂಟಾಗುವುವದೆಂದು ಹೆಂಡತಿ ಹೊಸ ಥಿಯರಿಯೊಂದನ್ನು ಘೋಷಿಸಿ ನನ್ನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾಳೆ. ಜೊತೆ ಹೊಸದೊಂದು ಮಾನಸಿಕ ಖಾಯಿಲೆಯನ್ನು ಅಂಟಿಸಲು ಹೊರಟಿದ್ದಾಳೆ!  ಏನು ಮಾಡಲಿ. ಕೈ ತೊಳೆದು ತೊಳೆದು ಚರ್ಮ ಸವೆಯುತ್ತಾ ಬಂದಿದೆ. ಉಳಿದ 14 ದಿನ ಉಳಿವುದು ಕಷ್ಟ. ಹಾಗಾಗಿ ಹೊಸ ಉಪಾಯ ಹೂಡಬೇಕು. ನಿಮಗೆ ಹೊಳೆದರೆ ನನಗೂ ಸ್ವಲ್ಪ ಹೇಳಿ. ಇಲ್ಲದಿದ್ದರೆ ನಷ್ಟ ಪರಿಹಾರ ಕೋರಿ ನಾನೆ ಒಂದು ಮೊಕದ್ದಮೆ ಹೂಡಬೇಕೆಂದಿರುವೆ. ಯಾರ ಮೇಲೆ ಎಂದು ಇನ್ನೂ ಯೋಚಿಸಿಲ್ಲ. ಇನ್ನೂ 14 ದಿನವಿದೆಯೆಲ್ಲಾ ಯೋಚಿಸಿದರಾಯ್ತು!
 ಯಾರು ನನ್ನ ಸ್ವಯಂ ಅಧಿಕಾರ ಕಿತ್ತುಕೊಂಡರೋ ಅವರೇ ನನ್ನ ಮೂಗು ಮುಟ್ಟಿಕೊಳ್ಳುವ ಅಧಿಕಾರ ನೀಡಬೇಕು ತನ್ಮೂಲಕ ನನ್ನ ಮೂಗಿನ ಕೆರೆತ ನಿಲ್ಲಿಸ ಬೇಕಾಗಿ ಕಳಕಳಿಯ ವಿನಂತಿ.
#_ಮನೆಯಲ್ಲೇ_ಇರೋಣ_ಮತ್ತಷ್ಟು_ಕೆರೆಯೋಣ!
#_lockdown .
�

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...