Saturday, January 14, 2023

ಹಸಿರ ಜಾಡಿನಲಿ ನಮ್ಮದೇ ತುತ್ತೂರಿ...


"ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು" ಎಂಬ ಕವಿ ವಿನಂತಿಯಂತೆ  ಮುಂಜಾವಿನಿಂದಲೇ ಮಳೆ ಸಿಂಚನಗೈಯುತ್ತಿತ್ತು. ಸ್ವಲ್ಪವೂ ಅತಿ ಎನಿಸದ ಹನಿ ಮಳೆ. ಕವಿ ಮನಸಿನಲಿ ಕಾಮನ ಬಿಲ್ಲು. 
       ತಿರುವು ಮುರುವು ರಸ್ತೆಯಲಿ ಹಾರ್ನ್ ಕೇಳದಷ್ಟು ಜೀರುಂಡೆಗಾನ. ಮಳೆಗೆ ತೊಳೆದಿಟ್ಟ ಫಳ ಫಳ ರಸ್ತೆ. ಕೊಪ್ಪೆ ಹೊದ್ದು ಹೊರಟ ಗೋಪಾಲರ ಅರಳಿದ ಕಣ್ಣು. ಜಾರಿದ ಮಳೆ ಬಿಂದುಗಳು ಕ್ಯಾಮರದಲಿ ಸೆರೆ. ಚಾರಣಿಗನನು ಕವಿಯಾಗಿಸಲು ಹೊರಟ ಕಾಡು, ಚಿಟ್ಟೆ, ಪತಂಗಗಳ ಸ್ವಾಗತ. ಮಂಜಿನೊಂದಿಗೆ ಬೆರೆತ ಧೂಮದ ವಿಚಿತ್ರ ಪರಿಮಳ. ದೂರದಿಂದಲೇ ಕೇಳಿ ಬರುವ ಹೂಡುವವನ ಹೂಂಕಾರದ ದನಿ. ವಿಭೂತಿಯ ಜಲಪಾತ್ರೆಯ ಸನ್ನಿಧಿಯಲಿ ಕಂಡ ಚಿತ್ರಗಳ ನಿಲುಗನ್ನಡಿ.

ವಿಭೂತಿ ಜಲಧಾರೆ.. 



ಈ ವಿಶಿಷ್ಟ್ಯ ಜಲಧಾರೆ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡದಿರೆ ಕೇಳಿ. ಯಾಣ ಹಾದಿಯಲೇ ಸಾಗಿ ಅಡ್ಡ ಕವಲು ಹಿಡಿಯಬೇಕು. ಬರೋಬ್ಬರಿ ಅಡ್ಡದಾರಿಯಿಂದ 12 ಕಿ. ಮೀ ಎಂಬ ನೆನಪು. ಕತ್ತಲ ಕಾನಿಗೆ ಲಗ್ಗೆ ಇಟ್ಟ ಅನುಭವ. 'ಕತ್ತಲ ಕಾನಿನ' ಕತೆ ಮತ್ತೊಮ್ಮೆ ಹೇಳುವೆ.




ದಾರಿ ಹರಿವಿನಗಲಕ್ಕೂ ಪುಟಾಣಿ ಜಲಕನ್ನಿಕೆಯರ ಜಾತ್ರೆ. ಒಂದಕಿಂತ ಒಂದು ಚೆಂದ. ನಡೆವ ಹಾದಿಯಲಿ ಜಿಗಣೆಗಳ ಸಂತೆ. ಕಾಲ ತುಂಬ ರಕ್ತ ಪರೀಕ್ಷಕ ಜಿಗಣೆಗಳ ಹಾವಳಿ. ತಂಬಾಕು ಹುಡಿಯ ಧಾರಾಳ ಸನ್ಮಾನದಿಂದ ಕಾಲಿನಿಂದ ಕಾಲ್ಕಿತ್ತವು. ಇಪ್ಪತ್ತು ನಿಮಿಷದ ನಡಿಗೆಯಲಿ ವಿಭೂತಿ ಎಂಬ ವಿಶಿಷ್ಟ  ಲಲನೆಯ ದಿವ್ಯ ದರ್ಶನ. ಮುತ್ತುದುರಿದಂತೆ ಧುಮುಕುವ ನೀರ ರಾಶಿಗೆ ವಿಭೂತಿ ಎಂಬ ವಿಶಿಷ್ಟ್ಯ ನಾಮ. ಮೂರು ಹೆಜ್ಜೆಗಳ ಪುಟಾಣಿ ಧುಮುಕು. ನೋಡಿದಾಗ ಎಲ್ಲೆ ಮೀರಿದ ಸಂತಸ. ಸಣ್ಣ ಗುಂಡಿಗಳ ಅಳೆಯುವಷ್ಟರಲ್ಲೇ ತಿಂದ ಎರಡು ಇಡ್ಲಿಯೂ ಜೀರ್ಣ. ನೀರಿಗಿಳಿಯುತ್ತಲೇ ಎಮ್ಮೆಯಂತಾಡುವ ಗೆಳೆಯನೆಬ್ಬಿಸಲು ಸತತ ವಿಫಲ ಯತ್ನ. ಕೊನೆಗೂ ಮಂಜುಗಣಿ ದೇವಾಲಯದ ತಂಬುಳಿ ಊಟ ತಪ್ಪಿ ಹೋಗುವುದೆಂದಾಗ ಮನಸಿಲ್ಲದ ಮನಸ್ಸಿನಿಂದ ಎದ್ದ. ಪಾಪ. ಡ್ರೈವರ್ ಅಂಕಲ್ ಮಂಜುವಾಣಿಗೆ ತಡವಾಯ್ತು ಎಂದು ಎಚ್ಚರಿಸಲು ಬಾರದಿದ್ದರೆ ಮತ್ತೆರಡು ಗಂಟೆ ಧ್ಯಾನ ಮಾಡುತ್ತಿದ್ದನೋ ಏನೋ.
ಬೆಣ್ಣೆ ಹೋಳೆ ಜಲಧಾರೆಯಲ್ಲಿ . 


ಸರಪಳಿಗೆ ಜೋತು ಬಿದ್ದಂತೆ ಗಾಳಿಗೆ ಹೊಯ್ದಾಡುವ ನೀರ ರೇಖೆಗಳು. ಕೈ ಮೈ ಒದ್ದೆ ಮಾಡಿ ಕ್ಷಣಾರ್ಧದಲಿ ಮತ್ತೊಂದು ಕಡೆ ಮಾಯಾ! ವಿಚಿತ್ರ ಕಪ್ಪೆ, ಬಣ್ಣದ ಹಾರ್ ಹಾತೆಗಳು ಜಲಪಾತವನೇ ದಿಟ್ಟಿಸುತ್ತಾ ಕೂತಿದ್ದನ್ನು ಕ್ಯಾಮರಾದಲಿ ಸೆರೆ ಹಿಡಿದೆ. ತನ್ನರಮನೆಗೆ ಬಂದ ಅಪರಿಚಿತರಿಗೂ ಜಾಗ ಮಾಡಿ  ಕೊಟ್ಟಿದ್ದವು. ಅಘನಾಶಿನಿಯ ಕವಲಿಗೆ ಸೇರುವ ಇದರೊಡಲಲ್ ಅಡಗಿದ ಅಚ್ಚರಿಯ ಬಿಚ್ಚಲು ದಿನಗಟ್ಟಲೇ ಇಲ್ಲೆ ಮನೆ ಮಾಡಿ ಕಳೆಯಬೇಕು. ಜೀವ ವಿಸ್ಮಯಗಳ ತಾಣ ಈ ಜಲಧಾರೆ. ಪದಗಳೇ ಸೋಲುವಂತ ಚೆಲುವು.



ಕಾಡ ನಡುವಿನಲಿ ಸುಂದರ ಜಲಧಾರೆ. 


ಹೊರಟು ನಿಂತಾಗ ಮೈ ಮನಸ್ಸು ಭಾರ. ಕ್ಯಾಮರವೂ ಚಳಿ ಬಿಟ್ಟು ನೀರಿನಲಿ ಮುಳುಗಿ ಎರಡು ಗುಟುಕು ನೀರ ಕುಡಿದೇ ಬಿಟ್ಟಿತು! ಯಾಕೆ ನೀವು ಕಪ್ಪೆ ಕರಕರ ಕೇಳಲು ನೀರ ಜೋಗುಳದಲಿ ಮಗುವಾಗಿ ಮಲಗಲು ಈ ಮಳೆಗಾಲದಲ್ಲೊಮ್ಮೆ ಇತ್ತ ಬರಬಾರದು. ವಿಭೂತಿ ಜೊತೆಗಿರುವ ಯಾಣ, ಮಂಜುಗಣಿಯನು ಮರೆಯದಿರಿ. ಮತ್ತೊಮ್ಮೆ ಭೇಟಿಯಾಗೋಣ.

                                                                                                                  ಶ್ರೀಧರ್. ಎಸ್. ಸಿದ್ದಾಪುರ.

Saturday, January 7, 2023

ಆರ್ಕಿಡ್‌ ಅಂಗಳದಲ್ಲಿ ಆ ಏಳು ದಿನಗಳು..


    ಹಿಮಾಲಯದ ಮಡಿಲಲ್ಲಿ ಮಗುವಾಗುವ ಆಸೆಗಳು ಗರಿಗೆದರಿದ್ದವು. ಭಾರತದಅತಿ ವಿಶಿಷ್ಟ ಕಾಶ್ಮೀರದ ಏಳು ಸರೋವರಗಳ ಚಾರಣಕ್ಕೆ ಹೊರಟು ನಿಂತಾಗ ಪುಳಕ !ಕೋವಿಡ್ಎರಡನೆಯ ಅಲೆ ಉತ್ತುಂಗದಲ್ಲಿತ್ತು! ಮನಸ್ಸಿನ ತಳಮಳವೂ. ಅಂಜಿ ಹೆದರಿ ವಿಮಾನವೇರಿದರೆ ಮನವೆಲ್ಲಾಆತಂಕದಗೂಡು. ಶ್ರೀನಗರದಲ್ಲಿ ಇಳಿಯುತ್ತಲೇ ಮೂಗಿನ ಹೊಳ್ಳೆಗಳೆಲ್ಲಾ ಕೆರೆದುಕುಪ್ಪೆ ಹಾಕಿ ಪೋನ್ ನಂಬ್ರತೆಗೆದುಕೊಂಡು ಕೈಗೆ ಸೀಲು ಒತ್ತಿ ಕಳುಹಿಸಿದರು. ಎದೆಯಲ್ಲಿಢವಢವ ! ಪಾಸಿಟಿವ್ ಬಂದರೆ ಎಂಬ ಭಯ !

ಪುಣ್ಯಕ್ಕೆ ನಮ್ಮತಂಡದಲ್ಲಿಯಾರದ್ದೂ ಪಾಸಿಟಿವ್ ಬರಲ್ಲಿಲ್ಲ. ತಿಳಿ ನೀಲಿ ದಾಲ್ ಸರೋವರದಅಂಚಿನ ನೆಹರು ಹೋಟೆಲ್ನಲ್ಲಿರೂಂ ಕಾದಿರಿಸಿದ್ದೆವು. ಕೆಹವಾದ ಕೇಸರಿಯುಕ್ತ     ಉಗಿ ಸೇವಿಸುತ್ತಾ ದಾಲ್ ಸರೋವರಕ್ಕೆ ಸುತ್ತು ಬರಲು ಹೊರಟು ನಿಂತಾಗ ಎಳೆ ಬಿಸಿಲು ನೀರಿಗೆ ಚಿಮ್ಮಿ ಅಹಲಾದಕರ ವಾತಾವರಣಏರ್ಪಟ್ಟಿತ್ತು. ನೀರ ಮೇಲೆ ತೇಲುತ್ತಾ ಚಹಾ ಕಾಯಿಸುವವರು, ಕೇಸರಿಮಾರುವವರು, ಓಲೆ ಮಾರುವವರುದೋಣಿ ಹಿಡಿದೇ ಬರುತ್ತಿದ್ದರು. ಕೊನೆಗೆಲ್ಲವೂ ನೀಲಿಯಾಗಿ ಸಂಪೂರ್ಣಕರುಗುತ್ತಿತ್ತು. ಬರೋಬ್ಬರಿ 5 ಲಕ್ಷಜನ ವಾಸಿಸುವ ಇಲ್ಲಿನ ವಿಶೇಷತೆ ಅನ್ಯಾದರ್ಶ. ಇಲ್ಲಿನ ಬದುಕಿನಕತೆಯೂರೋಚಕ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ನೀರುಇಲ್ಲಿನ ಮನಸ್ಸುಗಳನ್ನೂ ಹೆಪ್ಪುಗಟ್ಟಿಸುತ್ತಾಎಂದು ತಿಳಿಸುವ ತವಕ. ಸರಕಾರಿಕಛೇರಿ, ಪೋಲಿಸ್ ಕಾವಲಿನ ಮುಂದೆ ಸುರುಳಿ ಸುತ್ತಿದ ಸರಿಗೆ ಮನದತುಂಬಾ ವಿಶಾದದ ನೆರಿಗೆ.

ಮೊದಲ ನಂಬ್ರದಗೇಟಿನೆದುರು ನಮ್ಮ 40 ಚಾರಣಿಗರ ಸಂತೆ ನೆರೆದಿತ್ತು. ನನಗಂತೂ ತವಕ ತಲ್ಲಣ.ಎಲ್ಲರೂ ಸಪ್ತ ಸರೋವರದ ಕನಸಿನಲ್ಲಿದ್ದರು. ನಮ್ಮಟೆಂಪೊಟ್ರಾವೆಲ್ಲರ್ನಲ್ಲಿ ನಾವೆಲ್ಲಾ ಸೋನ್ ಮಾರ್ಗದ ದಾರಿ ಹಿಡಿದೆವು.

ಸೋನ್ ಮಾರ್ಗ ಎಂಬ ಭೂ ಸ್ವರ್ಗ:-

    ಕರ್ಕಶ ಶಬ್ದ ಮಾಲಿನ್ಯದಿಂದ ನಿಶಬ್ಬದ ಸ್ಚಪ್ನ ಲೋಕವೊಂದಕ್ಕೆಕಾಲಿಟ್ಟೆವು.  ಎತ್ತರೆತ್ತರದ ಪರ್ವತಗಳು ಸೈನಿಕರಂತೆ ನಮ್ಮ ಸುತ್ತುವರಿದ್ದವು ನದಿಯೊಂದು ನಿಶಬ್ಬವಾಗಿ  ಹರಿಯುತ್ತಾ ಸ್ವರ್ಗ ಲೋಕವೊಂದನ್ನುಉಂಟುಮಾಡಿತ್ತು. ಸೋನ್ ಮಾರ್ಗಕ್ಕೆ ಕೆಲವೇ  ಕಿಲೋಮೀಟರ್ ಹಿಂದೆ ನಮ್ಮಕ್ಯಾಂಪ್ ಸಪ್ನಲೋಕ ಸೃಷ್ಟಿಸಿದ ನದಿ ರಾತ್ರಿದುಸ್ವಪ್ನದಂತೆಕಾಡಿತ್ತು. ಇಷ್ಟು ದಿನ ಹಂಸ ತೂಲಿಕದ ಮೇಲೆ ಮಲಗಿದ ನನಗೆ ಒಂಟೆ ಮೇಲೆ ಮಲಗಿದಅನುಭವ, ನದಿ ಭೋಗರ್ೆರೆತಕ್ಕೆ ನಿದ್ದೆ ಹಾರಿ ಹೋಗಿತ್ತು ಸ್ವಪ್ನ ಸೌಂದರ್ಯದ ಕನಸು ಕಾಣುತ್ತಾರಾತ್ರಿ ಕಳೆದೆವು

KISHAN SAR LAKE AND VISHNU SAR LAKE
KISHAN SAR LAKE AND VISHNU SAR LAKE


DAL LAKE


LIDER RIVER SONA MARG.

ದಿನ 2


ಸೋನ್ ಮಾರ್ಗದಿಂದ ನಿಚ್ ನಾಯ್ ಪಾಸ್ ವರೆಗೆ....


         ಕನಸು ಹೆಕ್ಕುತ್ತಾ ಕಪ್ಪಿರುವೆ ಸಾಲಿನನಂದದಿ ಹೊರಟಿತ್ತು ಚಾರಣಿಗರ ಮೆರವಣಿಗೆ. ದೂರದ ಸೋನ್ ಮಾರ್ಗಎದ್ದಿತ್ತಷ್ಟೆ.ಏರುದಾರಿಯ ಏರು ದಾರಿಯುದ್ದಕ್ಕೂ ಕುರುಬರ ಹಿಂಡು. ಜೊತೆಗೆ ಮೆವ ಕುರಿಗಳ ದಂಡು. ನೋಡಿ ನಮ್ಮ ಕಣ್ಣುಗಳು ದಂಗು.  ನಮ್ಮ ಕುಶಲೋಪರಿಯ ಪರಿ ಪರಿಯಾಗಿ ವಿಚಾರಿಸಿಕೊಂಡರು. ಮನೆಯಲ್ಲದ ಮನೆಗೆ ನಮ್ಮ ಆಹ್ವಾನಿಸಿದರು. ಮನಸೋ ಇಚ್ಛೆ ಲಸ್ಸಿ ಕುಡಿಸಿದರು. 
KEHVA KETAL

            ಬೆಳಗಿನ ಅವಲಕ್ಕಿ 12 ರ ಸುಮಾರಿಗೆ ಮನೆಯ ಹಾದಿ ತುಳಿದಿತ್ತು. ಮಧ್ಯಾಹ್ನಕ್ಕೆ  ತಂದ ಬುತ್ತಿ ಬಿಚ್ಚಿ ಹರಿವ ಜಲದ ಸನಿಹವೆ ತಿಂದು ಹಿಮಾಲಯದ ನೀರು ಕುಡಿದು ಖುಷಿ ಪಟ್ಟೆವು. ಓಕ್ ಟ್ರೀಗಳ ನೆರಳಿನಲ್ಲಿ ತಂದ ಕೆಲವು ತಿಂಡಿಗಳನ್ನು ಹಂಚಿತಿಂದು ಹೆಜ್ಜೆಎಣಿಸುತ್ತಾ ಸಾಗಿದೆವು.
ಎತ್ತರೆತ್ತರಕ್ಕೆ ಏರಿದಂತೆ ಚಳಿ ತನ್ನ ಪ್ರಭಾವ ತೋರ ಹತ್ತಿತು. ಅತ್ಯಂತ ಎತ್ತರ ಜಾಗದಲ್ಲಿ ಅಧ್ಭುತ ರುಚಿಯ ಬಿಸಿ ಬಿಸಿ ಕೆಹವಾ ಒಂದು  ನಮಗಾಗಿ ಕಾಯುತಲಿತ್ತು. ಕೆಹವಾ ಗಂಟಲಿಗೆ ಇಳಿಯುತ್ತಲೇ ಸ್ವರ್ಗೋಲ್ಲಾಸ! ಇಷ್ಟು ಎತ್ತರದ ಜಾಗದಲ್ಲಿ ಚಹ ಅಂಗಡಿ ಹಾಕಿದವನಿಗೆ ಸಾವಿರ ನಮನ ಸಲ್ಲಿಸಿದೆ. ಮನೆಯಲ್ಲಿ ಮ್ಯಾಗಿ ತಿಂದಿದ್ದು ಸಾಲದೆಂಬಂತೆ ಇಲ್ಲೂ ಕೆಲವರು ಮ್ಯಾಗಿಗೆ ಆರ್ಡರಿಸಿದರು. ಅವರಿಗೆ ನನ್ನ ಅನುಕಂಪ.  

LIDDER RIVER
   

     
 ಹರ್ಕಿದುನ್ ಚಾರಣದಲ್ಲಿ ಭೇಟಿಯಾದ ಇಬ್ಬರು ಗೆಳೆಯರು ಆಕಸ್ಮಿಕವಾಗಿ ಸಿಕ್ಕರು! ಈ ಭೂಮಿ ದುಂಡಗಿದೆ ಅನಿಸಿತು. ಜೊತೆಗೊಂದಿಷ್ಟು ಪೋಟೋ ಸಮಾರಾಧನೆ. 
ಇಲ್ಲಿಂದ ಮುಂದೆ ಇಳಿಜಾರಿನ ಹಾದಿಯಲಿ ಲಿಡ್ಡರ್ ನದಿಗುಂಟ ಸಾಗಿ ಸಣ್ಣತೊರೆಯ ಬಳಿ ನಮ್ಮಕ್ಯಾಂಪ್ ನಮಗಾಗಿ ಕಾದಿತ್ತು. ನಾನು ಮತ್ತು ಗೆಳೆಯ ನಾಗರಾಜ ಹಿಮಾಲಯದ ಹೂಗಳನ್ನು ನೋಡುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಾಗುರಿ ಸೇರಿದೆವು. ಬೃಹತ್ ಬೆಟ್ಟದ ಬುಡದಲ್ಲಿ ನಮ್ಮ ಕ್ಯಾಂಪ್ ಕಾಣಿಸುತ್ತಲೇ 11.6 ಕಿ. ಮಿ. ನಡೆದ ದಣಿವೆಲ್ಲಾ ಕಣಿವೆಯಲಿ ಕರಗಿತು. ಸುತ್ತಲೂ ಹಳದಿ ಆರ್ಕಿಡ್ ಹೂಗಳು ಸಂಭ್ರಮವನು ಇಮ್ಮಡಿಗೊಳಿಸಿದವು. ಬಿಸಿಲಿಗೂ ಹಳದಿ ಛಾಯೆ. ಸೂರ್ಯನಿಲ್ಲಿ ರಜೆಯ ಮೇಲಿದ್ದ. ಕೆಲವರು ಧ್ಯಾನಕ್ಕಿಳಿದರು. ನಾ ಝರಿಯ ಮಾತನಾಡಿಸ ಹೊರಟೆ.  

ಹೂವ ಪಕಳೆ ಹರಡಿದಾಗ


ಕಶ್ಮೀರಿ ಹುಕ್ಕಾ ಸೇದುತ್ತಾ ಕುಳಿತ ಅಜ್ಜನೊಬ್ಬ ನನ್ನ ಕ್ಯಾಮರಾದೊಳಗೆ ಬಂದಿಯಾದ. ಸಣ್ಣಝರಿಯ ಜೋಗುಳದಲಿ ನಕ್ಷತ್ರಗಳ ಹೊದಿಕೆ ಅಡಿಯಲಿ ನಿದ್ರಾದೇವಿಯ ವಶವಾಗಿದ್ದು ತಿಳಿಯಲೇ ಇಲ್ಲ!

Snow stream crossing.



ದಿನ 3

ನಿಚನಾಯಿಯಿಂದ ವಿಷ್ಣು ಸರ್ ಲೇಕ್.....

ನಿಚ್‌ ನಾಯ್‌ ಪಾಸ್‌ ಕಡೆಗೆ ಪ್ರಯಾಣ.
        
        ಶೀತಲಮಯವಾದ ನಿಚನಾಯಿಯ ಮೋಡ ಕವಿದ ವಾತಾವರಣದಲ್ಲಿ ಶಾಸ್ತ್ರಕ್ಕೆಂಬಂತೆ ಬೆಳಗಿನ ಉಪಹಾರ ಸೇವಿಸಿ ಸೋನ್ ಮಾರ್ಗನ್ನು ಹಸಿರುಕ್ಕಿಸುವಂತೆ ಮಾಡುವ ನದಿ ಗುಂಟ ಬೃಹತ್ ಕಲ್ಲುಗಳ ಮೇಲೆ ಮಂಗನಂತೆ ಜಿಗಿಯುತ್ತಾ ಚುಮುಗುಡುವ ನದಿ ನೀರಿನಲಿ ಕಾಲು ತೋಯಿಸಿ ಜಾರದಂತೆ ದಾಟಿಕೊಂಡು ಕಲ್ಲು ಬಂಡೆ ಮೇಲೆ ಕೂತು ಶೂಧರಿಸುವಾಗಲೇ ಬಂದ ಕುದುರೆಗಳು ನೀರಿಗಿಳಿಯಲು ಹಠಮಾಡತೊಡಗಿದವು. ಅಂತೂ ಕುದುರೆಗಳನ್ನು ಅವುಗಳ ಮಾಲಿಕರು ಪುಸಲಾಯಿಸಿ ಝರಿ ದಾಟಿಸಿದರು. 

ನಾನು ಜಾರಿ ಬಿದ್ದ ಜಾಗ....


ನಿಚ್‌ ನಾಯ್‌ ಪಾಸ್‌ ಎಂಬ ಸ್ವರ್ಗ. 

            ಮುಂದಿನದು ಸಣ್ಣ ಕಲ್ಲುಗಳ ಏರುದಾರಿ. ಎರಡು ಬೃಹತ್ ಪರ್ವತಗಳ ನಡುವಿನ ಕವಲ ನಡುವೆ ಪ್ರಯಾಣ. ಅಲ್ಲಲ್ಲಿ ಹಿಮ ದರ್ಶನ. ಹಿಮವನ್ನುಎಂದೂ ನೋಡದವರಂತೆ ಮುಟ್ಟಿ, ತಿಂದು ಅಲ್ಲಿ ಜಿಗಿದು ಖುಷಿಪಟ್ಟೆವು. ಇಲ್ಲಿನತುದಿಯಎತ್ತರ ಸುಮಾರು13,615 ಅಡಿ 10.30 ರೊಳಗೆ ನಮ್ಮತಂಡದಐವರು ಬೆಟ್ಟದತುದಿಯಲ್ಲಿದ್ದೆವು. ಇಲ್ಲಿಒಂದು ಮ್ಯಾಗಿ ಮತ್ತು ಅವರು ಕೊಟ್ಟ ಜ್ಯೂಸ್ ಸವಿದು ನಿಚ್ನಾಯ್ ಪಾಸ್ಕ್ರಾಸ್ ಮಾಡಲು ತಯಾರಾದೆವು. 

Nich Nayi Pass

    

    ನಿಚ್ ನಾಯ್ ಪಾಸ್ ಸಂಪೂರ್ಣ ಹಿಮಭರಿತವಾಗಿತ್ತು. ಈ ಹಿಂದೆ ಹಿಮದಲ್ಲಿ ನಾನುಬಿದ್ದುದರಿಂದ ಪಾಸ್ದಾಟಲು ನಮ್ಮತಂಡದ ಸತೀಶ್ಅದರ ಸಹಕಾರ ಪಡೆದು ನಿಧಾನಕ್ಕೆ ಪಾಸ್ದಾಟಿ ಪಾರಾದೆ. ಪಾಸ್ದಾಟುವಲ್ಲಿ ಅನೇಕ ಮ್ಯೂಲ್ ಮತ್ತು ಕುದುರೆಗಳು ಎಡವುತ್ತಿದ್ದವು. ಬೆಟ್ಟಗಳ ರಕ್ಷಣಿಯಲ್ಲಿ ಸುತ್ತಲು ಹಳದಿ, ಬಿಳಿ, ಮತ್ತು ನೀಲಿ ಹೂಗಳು ಅರಳಿನಿಂತಿದ್ದವು. ನಡುವೆ ಹಾವು ಹರಿದಂತಹದಾರಿ. ಪಾಸ್ನಿಂದ ಇಳಿದು ಕಣಿವೆಯ ಬಯಲಿಗೆ ಇಳಿದಾಗ ಮನಸ್ಸು ಇಲ್ಲಿನ ಸೌಂದರ್ಯಕ್ಕೆ ಮುದಗೊಂಡಿತ್ತು. ಅಲ್ಲಲ್ಲಿ ಕುರಿಗಾಹಿಗಳ ಹಿಂಡು, ನಿತ್ರಾಣಗೊಂಡ ಮನಸ್ಸಿಗೂ, ದೇಹಕ್ಕೂ ಅಹ್ಲಾದ. ನಿಚ್ನಾಯ್ ಪಾಸ್ನಲ್ಲಿ ಹುಟ್ಟುವ ಝರಿಯೊಂದು ಪೂವರ್ಾಭಿಮುಖವಾಗಿ ಹರಿಯುತ್ತಿತ್ತು. ಅದರದಂಡೆಯಲ್ಲೆ ಕೂತು ತಂದ ತಣ್ಣಗಿನ ಬುತ್ತಿ ಬಿಚ್ಚಿತಿಂದೆವು. ವಾಹ್ಅಹ್ಲಾದ. ಝರಿಯನ್ನೆ ನೋಡುತ್ತಾ ಹಲವು ಸಮಯ ಮೈಮರೆತೆ. ಕಣ್ಣು ಹಾದಲೊರೆಗೂಕಣಿವೆ. ಒಂದೆರಡುಅತ್ಯುತ್ತಮ ಚಿತ್ರಗಳು ದೂರಕಿದ್ದು ಇಲ್ಲೇ. ಝರಿಯ ನೀರುಆಕಾಶವನ್ನು ಪ್ರತಿಫಲಿಸಿ ಸೌಂದರ್ಯವನ್ನು ಹೆಚ್ಚಿಸಿತ್ತು. ನನ್ನಅಬ್ಬೆಪಾರಿ ಮನಸ್ಸುಕಣಿವೆ ತುಂಬಾ ಅಡ್ಡಾಡಿ ಬಂತು. ನನ್ನೊಳಗೆ ಕಣಿವೆ ಸೌಂದರ್ಯವನ್ನು ಇಳಿಸುತ್ತಾ ನಿಧಾನಕ್ಕೆಎಲ್ಲರಿಗಿಂತಕೊನೆಯವನಾಗಿತಲುಪಿದೆ.   ಕಣ್ಣಿನಲ್ಲೆಕಣಿವೆ ಹೀರಿದ ಸುಖ ಕಣ್ಣಿನಲ್ಲಿ ನಳನಳಿಸುತ್ತಿತ್ತು.ಸ್ವಲ್ಪ ಹೊತ್ತುಕ್ಯಾಂಪನಲ್ಲಿ ವಿರಮಿಸಿ ಸಂಜೆ ಹೊತ್ತಿಗೆ ಸ್ನಾನಮಾಡಿ ವಿಷ್ಣು ಸರ್ ಸರೋವರಕ್ಕೆ ಹೋಗಿ ಬಂದೆವು. ವಿಷ್ಣು ಸರ್ದ ಸೌಂದರ್ಯ ಮತ್ತುಅಗಾಧತೆಗೆ ಮನಸ್ಸು ಭಯಗೊಂಡಿತ್ತು. ಕಾಲು ತೋಯಿಸಿಕುಳಿ? ಲೋಕ ಮರೆತಅನುಭವ. ಸಮತಟ್ಟಿನಲ್ಲಿಝರಿಯೊಂದು ವಿಷ್ಣು ಸರ್ನಿಂದಹೊರಟು ಬಂದಿತ್ತು ಹಿಮನದಿಯಲ್ಲಿ ಮಿಂದ ಪುಳಕ. ಸಂಜೆಗೆಕೆಂಪಾದ ಸೂರ್ಯತನ್ನೆಲ್ಲಾ ಬಣ್ಣಗಳ ತೋರುತ್ತಾ ನನ್ನ ಕೆಮರಾದಲ್ಲಿ ಸೆರೆಯಾದ. ಉಳಿದವರು ಆಟಗಳಲ್ಲಿ ತಲ್ಲಿನರಾದರೆ ನಾನು ಪೋಟೋಗ್ರಾಪಿಯಲಿ.

Vishnu Sar in the evening. 


ವಿಷ್ಣು ಸರ್‌ ಸರೋವರದಲಿ ಹುಟ್ಟುವ ಹಿಮ ನದಿ ದಾಟುವ ಚಾರಣಿಗ..


    ಮೇ ತಿಂಗಳಿನಲ್ಲಿ ಇಂತಿಷ್ಟು ಕುರಿಗಳ ಹಿಂಡುಕಟ್ಟಿಕೊಂಡು ಅಲೆದ ಕುರಿಗಾಹಿಗಳ ಒಂದೆರಡುಕುಟುಂಬ ನಮ್ಮಜೊತೆ ಬಿಡಾರ ಹೂಡಿದ್ದವು. ಅವರನ್ನೆಲ್ಲಾ ಮಾತಾಡಿಸಿ ಬಂದೆವು. ಹಿಮ ಬೀಳುವ ಮೊದಲುತಮ್ಮೂರಿಗೆ ಹಿಂದಿರುಗುವ ಭಾಗಶಃ ಅಲೆಮಾರಿಗಳು. ಹೆಚ್ಚಿನವರು ಲಕ್ಷಾಧೀಶರು. ಬೇಕಷ್ಟೆ ಕುರಿ ಮಾರಾಟ ಮಾಡಿ ಸುಖವಾಗಿರುವರು. ಕುರಿಗೊಬ್ಬರದಿಂದಲೂ ಸಂಪಾದನೆ!

ಹಿಮ ನದಿಗಳಲ್ಲಿ ಕಂಡು ಬರುವ ವಿಶಿಷ್ಟ ಟ್ರೋಟ್ ಮೀನಿನ ಸಮಾರಾಧನೆ ನಡೆದಿತ್ತು. ಇವರ ಬಾಯಿ ಚಪಲಕ್ಕೆ ಬಲಿಯಾದ ಮೀನುಗಳಿಗೆ ನನ್ನ ಅನುಕಂಪಗಳು.

ಅಬ್ಬಾ ಹಿಮವೇ!

ಬೋಗುಣಿ ಕಣಿವೆಯ ಅಂಚಿನಲಿ ಅಲೆಯುತ್ತಾ...


ದಿನ 4
ವಿಷ್ಣು ಸರ್ ಲೇಕ್ನಿಂದ ಗಡಸರ್ ಲೇಕ್-


Towards Gad Sar.
ಇಂದು  ಅತಿ ಹೆಚ್ಚು ದೂ ನಡೆಯ ಬೇಕಾದುದರಿಂದ ದಿನವಾದುದರಿಂದ ಬೆಳಿಗ್ಗೆ 7.15 ಕ್ಕೆಲ್ಲಾ ತಿಂಡಿ ತಿಂದು ಪ್ಯಾಕ್ಡ್ ಲಂಚ್ ಹಿಡಿದು ಶಾಲಾ ಮಕ್ಕಳಂತೆ ಪುಳಕದಿಂದ ಹೊರಟು ನಿಂತೆವು. ಇದೊಂದು ಸುದೀಘ ದಿನವಾಗುತ್ತದೆಂದು ಎಲ್ಲರೂ ಮಾನಸಿಕವಾಗಿ ತಯಾರಾದೆವು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಕೃಷ್ಣ ಸರ್ ಮತ್ತು ಅದ್ಭುತವಾದ ಗಡ ಸರ್ ಲೇಕ್ ಮತ್ತು 14,000 ಅಡಿ ಎತ್ತರದ  ಗಡಸರ್ ಪಾಸ್ ದಾಟುತ್ತೇವೆಂಬ ಪುಳಕ!!
ವಿಷ್ಣು ಸರ್ ಲೇಕ್ ನೋಡಿಕೊಂಡುಕಿಷನ್ ಸರ್ ಲೇಕ್ನ ಬಳಿ ಬರುತ್ತಲೆಎದೆ ಬಡಿತ ವಿಪರೀತ ! ಲೇಕನ ಸನಿಹವೇ ಇದ್ದ ದುರಂಧರನಂತಹ ಶಿಖರಾಗ್ರ ಕಾಣುತ್ತಲೇ ಮನವೇಕೋ ಕಸಿವಿಸಿ.  ದೈತ್ಯ ಕಿಶನ್ ಸರ್ ಸರೋವರದ ಸೌಂದರ್ಯ ಸವಿಯದಂತೆ ಮಗ್ಗುಲ ಮುಳ್ಳಾಗಿ ನಿಂತಿತು ಉಚಿಜಚಿಡಿ ಠಿಚಿ. ಎದೆಝಲ್ ಎನಿಸುವ ಎತ್ತರ. ಸ್ಪಲ್ಪ ಯಾಮಾರಿದರೂಕಿಶನ್ ಸರ್ ಪಾಲು. ಮ್ಯೂಲ್ಗಳು ಚಲಿಸುವ ಓಣಿಯಂತಹ ದಾರಿ. ಮೂಲ್ಗಳ ಕಾಲ್ ತುಳಿತಕ್ಕೆ ಸಿಕ್ಕದೇ ಏರುವುದು ಬಲು ಕಠಿಣ.
ತೀವ್ರಕಡಿದುಕೊನೆಯ ಹಂತವಂತೂ ಬಲು ಕಠಿಣ. ಸಣ್ಣ ಕಲ್ಲುಗಳು ಬೂಟುಗಾಲಿಗೆ ಸಿಕ್ಕಿ ಕಾಲು ಜಾರುತಲಿತ್ತು. ಯಾವನೋ ಪುಣ್ಯಾತ್ಮ ನನ್ನತುದಿ ತಲುಪಿಸಿದ. 10ರ ಸುಮಾರಿಗೆ ನಮ್ಮತಂಡದಅರ್ಧಕ್ಕರ್ಧ ಮಂದಿ 14,000 ಅಡಿ ಎತ್ತರದ ನೆತ್ತಿಯಲ್ಲಿದ್ದೆವು. ನೆತ್ತಿಯಿಂದ ಕಾಣುವಾಗ ಎಡಕ್ಕೆ ಕಿಶನ್ಸರ್ ಬಲಕ್ಕೆ ಗಡ್ಸರ್ನ ವಿಹಂಗಮತೆ ಅದ್ಭುತ! ಆರೇಳು ಸಣ್ಣ ಸಣ್ಣ ಸರೋವರ ಸಂಗಮತೆಯ ಗಡ್ ಸರ್. ಹಿಮದ ನೆತ್ತಿ ಮೇಲೆ ಗೆಳೆಯರ ದಂಡು12ರ ಸುಮಾರಿಗೆಎಲ್ಲಾ ಮ್ಯೂಲ್, ಕುದುರೆಗಡಸರ್ ಪಾಸ್ಗೆ ಬಂದು ಅಲ್ಲೊಂದು ಉತ್ಸವ ನೆರೆದಿತ್ತು. ಸಕತ್ ಪೋಟೋ ಸಮಾರಾಧನೆ. ಮ್ಯೂಲ್ಗಳ ಮೆರವಣಿಗೆ ಮುಗಿದ ಮೇಲೆ ನಮ್ಮತಂಡದವರ ಮೆರವಣಿಗೆ ಹೊರಟು ನಿಂತಿತ್ತು. ನಮ್ಮತಂಡದ ಆಮೆ ವೇಗದ ಚೆಲ್ಲಾಟದ ನವತರುಣಿಯರಿಬ್ಬರು ಬಂದು ತಲುಪ ಬೇಕಿತ್ತು. ಆದರೂ ಅವರಿಗಾಗಿ ಕಾಯದೆ ನಾವು ಹೊರಟು ನಿಂತೆವು.

ಹೂವ ಗಂಧ ತೇಲಿ ಬಂತು....



FLOWERS VALLEY!


    ಗಡಸರ್ ಪಾಸ್ನ ನೆತ್ತಿಯಲ್ಲಿ ಪೋಟೋ ಸಮಾರಾದನೆ ನಡೆಯುತಲಿತ್ತು. ಸಿಕ್ಕ ಸಿಕ್ಕಂತೆ ಕ್ಲಿಕ್ಕಿಸಿ ಖುಷಿಪಟ್ಟೆವು. ಶೀತಲ ವಾತಾವರಣದಲ್ಲೂ ಬಿಸಿಲತಾಪಕ್ಕೆ ತೊಯ್ದುತೊಪ್ಪೆಯಾಗಿದ್ದೆವು. ಸ್ನೋ ಬಳಿದುಕೊಂಡು ಚಂದ ಇದ್ದೇನಾ ಎಂದು ನೋಡಿಕೊ ಎಂದ ಪರ್ವತಗಳನ್ನೆಲ್ಲಾ ಕ್ಲಿಕಿಸಿ ಸುಮ್ಮನಾದೆ. ಯಾವುದೂ ಹಲ್ಕಿರಿಯಲ್ಲಿಲ್ಲ. 

GADSAR LAKE WITH A WALKING PATH.


    ಹಸಿರು ಪಾಚಿ ಕಟ್ಟಿದಂತಹಒಂದೊಂದು ಸರೋವರದ ತುಣುಕುಗಳು ಆಕಾಶದಿಂದಉದುರಿದ ವಿಶಿಷ್ಟ ತುಣುಕುಗಳಂತೆ ಗೋಚರಿಸುತ್ತಿದ್ದವು. ಪಾಸ್ನ ಬಲ ಮಗ್ಗುಲಿಗೆ ಇದ್ದಎಲ್ಲಾ ಹಿಮಕರಗಿತ್ತು. ಜೊತೆಗೆ ಬಿಸಿಲು ಬಂದು ನಮ್ಮಅದೃಷ್ಟಕ್ಕೆ ನಿರಾಯಾಸವಾಗಿ ಪರ್ವತಏರಿ??್ದವು. ತೀವ್ರ ಇಳಿಜಾರಿನ ಕಣಿವೆ ಇಳಿಯುತ್ತಲೇ ಕಾಶ್ಮೀರದ ಹೂ ಕಣಿವೆ ಎದುರಾಗಿತ್ತು. ನೆತ್ತಿಯ ಮೇಲೆ ಕಂಡದಂತಹ ಕಡು ಕೆಂಪು ಕುಸುಮಗಳು ಇಲ್ಲೆಲ್ಲೂ ಕಾಣಲಿಲ್ಲ. ಪ್ರತೀ ಸ್ತರಕ್ಕೂ ತನ್ನದೇ ಲೆಕ್ಕಚಾರದ ಹೂಗಳ ಬೆಳೆಸಿತ್ತು ಪ್ರಕೃತಿ! ಶ್ವಾಸಕೋಶದೊಳಗೆ ನುಗ್ಗುವ ಪ್ರತಿ ಉಸಿರಿನಲ್ಲೂ ಹೂವಗಂಧ. ಯಾವುದೋ ಪುಷ್ಪೋಧ್ಯಾನದಲ್ಲಿದ್ದಂತೆ. ಸ್ನೋ ಬಳಿದುಕೊಂಡು ನಿಂತ ಪ್ರತೀ ಶಿಖರದಿಂದ ಸಣ್ಣಗೆ ಝರಿಗಳು ಉದಿಸಿದ್ದವು. ಸ್ವಲ್ಪ ದೂರದಲ್ಲೇ ಮಿಲಿಟರಿ ತಪಾಸಣಿ.  ಪುಷ್ಪಕಣಿವೆಯಲಿ ಅಂಗಾತ ಮಲಗಿ ಹೂ ಪರಿಮಳ ಹೀರಿದೆವು. ಶ್ವಾಸಕೋಶದ ತುಂಬಾ  ಹೂ ಗಂಧ. ಕ್ಯಾಮರ ಜೋಳಿಗೆಗೆ ಒಂದಿಷ್ಟು ಚಿತ್ರ ಸೇರಿದವು. ಅಲ್ಲೇ ಬುತ್ತಿಯನ್ನು ಹೊಟ್ಟೆ ದೇವರಿಗೆ ಅಪರ್ಿಸಿದೆ ! ಜಠರಾಗ್ನಿಆರಲಿಲ್ಲ!
ಮಧ್ಯಾಹ್ನದ ನಡುವಿಗೆ ತಲುಪಿದ ಗಡಸರ್ ಸುಂದರಿ ನಮ್ಮೆದುರು ನಗ್ನಳಾಗಿದ್ದಳು! ಮುಡಿಯತುಂಬಾ  ಸ್ನೋ ಬಳಿದು ಸೊಂಟಕ್ಕೆ ಹೂವ ಹೊದ್ದು ಗಿರಿಗಳ ನಡುವೆ ವೈಯಾರ          ತೋರಿದಳು. ನಾಚುತ್ತಲೇ ನೋಡಿಕೊ ಎಂದಳು! ಅವಳನ್ನೇ ಧ್ಯಾನಿಸುತ್ತಾ ತುಂಬಾ ಹೊತ್ತು ಕಳೆದೆ. ಮನಸೊ ಇಚ್ಚೆ ಕ್ಯಾಮಾರದಲ್ಲಿ ಗಡಸರ ಸರೋವರದ ಸೌಂದರ್ಯ ತುಂಬಿಕೊಂಡೆ. 14,000 ಅಡಿಗಳೇರಿದ ಸಾಹಸಕ್ಕೆ ಕೊಂಬು ಮೂಡಿಸಿತ್ತು ನಮಗೆ. ಮುಂದಿನ ಮೂರು ಗಂಟೆಗಳ ನಡಿಗೆ ಎಲ್ಲಾ ಕೊಂಬು ಕಹಳೆಯನ್ನು ಕತ್ತರಿಸಿ ಹಾಕಿ ಬಿಟ್ಟಿತ್ತು. ಹೂ ಪ್ರಾರ್ಥನೆಗೂ ಕರಗದ ಕಣಿವೆಯ ಕಾಲು ಹಾದಿ. ಹೂವ ಹಾಸಿಗೆಯಲಿ ಸೀಳು ಮಾಡಿದಂತಹ ಎಂದೂ ಮುಗಿಯದ ತಿರುವು ಮುರುವು ದಾರಿ. ಸೂರ್ಯನಾಗಲೇ ನೆತ್ತಿ ಸುಡುತಲಿದ್ದ. ಅತಿ ವಿಶಿಷ್ಟ ಕ್ಯಾಂಪ್ ಸೈಟ್ಗೆ ತಲುಪಿದಾಗ ಐದುಗಂಟೆ. ಬಂದವರೆಲ್ಲಾ ಸುಸ್ತಾಗಿ ಬಿಡಾರದಲ್ಲಿ ಕನಸ ಹೆಕ್ಕ ತೊಡಗಿದ್ದರು. ನಾನು ಝರಿಯೊ ಂದರಲಿ ಸ್ನಾನಕ್ಕಿಳಿದೆ. ಐಸ್ ಬಗರ್್ಒಂದನ್ನು ಮಾತಾಡಿಸಿ ಬಂದೆ. ಅದರ ರಸ ಹೀರಿದೆ. ನಮ್ಮೆಲ್ಲಾ ಶಕ್ತಿಯನ್ನು ಬೆತ್ತಲೆಮಾಡಿಕೊಂಬು ಮುರಿದ ಶ್ರೇಯಾ ಇಂದಿನ ದಿನಕ್ಕೆ ಸಲ್ಲುತ್ತದೆ. ಬರೋಬ್ಬರಿ 16.ಕಿ.ಮೀ ನಡಿಗೆ ಎಲ್ಲರನ್ನೂ ಹೈರಾಣವಾಗಿಸಿತ್ತು. ನಾನಂತೂ ಪ್ರೆಶ್ ಇದ್ದೆ. ಏನೋ ಸಾಧಿಸಿದ ಪುಳಕ ನನ್ನ ಆವರಿಸಿತ್ತು. 
ಮೇ ತಿಂಗಳನಲಿ ಕುರಿ ಮೇಯಿಸಲು ಬಂದಕುಟುಂಬ ಒಂದು ಹೊಟ್ಟೆ??ರಿ?? ಲಸ್ಸಿ ಕೊಟ್ಟು ಹೊಟ್ಟೆತಂಪು ಮಾಡಿದರು. 200ಕ್ಕೂ ಹೆಚ್ಚು ಕುರಿಗಳ ಮಾಲಿಕನಾತ. ಒಂದುಕುರಿ 20 ರಿಂದ 100 ಸಾವಿರದವರೆಗೆ??ಕರಿಆಗುತ್ತೆಎಂದ. ಅಕ್ಕಿ ದಾಲ್ಎಲ್ಲವನ್ನೂಗಂಗ್ ಬಲ್ನಿಂದತರಬೇಕುಎಂದು ನಮ್ಮನ್ನುಅಚ್ಚರಿಗೆ??ಡಹಿದ. ನಮ್ಮ ನಾಲ್ಕು ಪಟ್ಟುಇವರ ನಡಿಗೆ.ದೈಹಿಕ ಪರಿಶ್ರಮಅಚ್ಚರಿಪಡುವಂತಹದು. ಅರ್ಧಲೀಟರ್ ಹಾಲು ಕೊಡುವಕುರಿಇಲ್ಲಿನತಂಪು ಹವೆಗೆ ಒಂದುವರೆ ಲೀಟರ್ ಹಾಲು ಕೊಡುತ್ತದೆ. ಎಂದು ಸಂತಸದಿಂದ ಮತ್ತಷ್ಟು ಲಸ್ಸಿ ಸುರಿದ. ಗುಡ್ಡಗಳಲ್ಲಿ ಬೆಳೆದ ಸೊಪ್ಪನ್ನುತನ್ನ ವಿಶಿಷ್ಟ ಕತ್ತಿಯಿಂದ ಕತ್ತರಿಸಿ ದಾಲ್ನೊಂದಿಗೆ ಸೇರಿಸಿ ವಿಶಿಷ್ಟ್ಯ ಅಡುಗೆ ಮಾಡುವರು. ನಮ್ಮನ್ನು ಉಣ್ಣಲು ಆಹ್ವಾನಿಸಿದ್ದರು. ಇವರು ಪ್ರಕೃತಿಯೊಂದಿಗೆ ಬೆರೆತು ಬದುಕುವ ಪರಿ ಅಚ್ಚರಿ !
ಅನಾಮಿಕ ಕುರಿಗಾಹಿ 


ನಮ್ಮ ಗುಡಾರಗಳ ಸನಿಹವೇ ಒಂದು ಕುಟುಂಬ ವಾಸವಾಗಿತ್ತು. ಅವರನ್ನೂ ಮಾತನಾಡಿಸಿ ಬಂದೆವು. ಒಂದಿಷ್ಟು ಪೋಟೋ ನೈವೇದ್ಯವಾಯಿತು. ಸಂಜೆ ಹೊತ್ತಿಗೆ ನಾವು ತೆರಳುವ ಗಂಗ್ಬಲ್ ಸರೋವರದಲಿ ಮಳೆರಾಯನ ಆರ್ಭಟವಿದೆ ಎಂದು ಆಕಾಶವಾಣಿ ಆಯಿತು. 
ಏಳು ಮವತ್ತರ ಸುಮಾರಿಗೆ ಉಂಡು ಗುಡಾಣವಾದ ಹೊಟ್ಟೆಯೊಂದಿಗೆ ಗುಡಾರ ಸೇರಿ ನಿದ್ರಾ ನದಿಯಲಿ  ಈಸತೊಡಗಿದೆವು!   
ದಿನ :5-

ಗಡ ಸರ್ ನಿಂದ ಗಂಗ್ ಬಲ್ ವರೆಗೆ 

ಗಡ್‌ ಸರ್‌ ಪಾಸ್



ಗಡ ಸರ್ನಿಂದ ಸಾತ್ಸರ್ ಸರೋವರದವರೆಗೆ ಮುಂದಿನ ಕತೆಯನ್ನು ಸ್ಪಲ್ಪ ಫಾಸ್ಟ್ ಪಾರ್ವಡ್ ಮಾಡುವೆ. 

ಚುಮು ಚುಮು ಚಳಿಗೆ ಕಾಫಿ ಹೀರಿ ತಿಂಡಿ ಸವಿದು ಜಾರುವ ಹಿಮಗಡ್ಡೆಯಲಿ ಸತೀಶ ಅಣ್ಣನ ಕೈ ಹಿಡಿದು ಬೆಟ್ಟದಲಿ ್ಲ  ಕಾಣುವ ಗೆರೆಗಳಂತಹ ದಾರಿಗೆ ದಾಟಿಕೊಂಡೆವು. ಏರು ಪ್ರಯಾಣ. ನಮ್ಮ ಏಕಾಂತಕ್ಕೆ ಸಾವಿರ ಸಾವಿರ ಹೂಗಳ, ಸ್ಟ್ರಾಬೆರಿ ಹಣ್ಣುಗಳ ಸಾತ್. ಹನಿ ಮಳೆಗೆ ಮನಸ್ಸು ನವಿಲಾಗಿತ್ತು. ಹನಿ ಮಳೆಗೆ ಚಿತ್ರ ತೆಗೆಯದಂತೆ ತಡೆದ ಹನಿ ಮಳೆಗೆ ಹನಿ ಶಾಪ! ಸುತ್ತಲಿನ ಆಹ್ಲಾದಕರ ವಾತಾವರಣಕ್ಕೆ ಮನಸೊತಿತ್ತು. 



ಏರಿಳಿತದ ದಾರಿಯಲಿ ಗೆಳೆಯರನ್ನು ಗೋಳು ಹೊಯ್ದುಕೊಳ್ಳುತ್ತಾ ಅತಿ ಸುಂದರ ಸಾತ್ ಸರ್ ಸರೋವರವನ್ನು ತಲುಪಿಸಿದೆವು. ಜಾರುವ ಕಲ್ಲುದಾರಿ, ಹಿಮಝರಿಗಳು ನಮ್ಮ ತಂಡದವರನ್ನು ಸಾಕಷ್ಟು ಗೋಳು ಹೊಯ್ದುಕೊಂಡಿತು. ಎರಡು ಝರಿಗಳನ್ನು ದಾಟಿದ್ದು ಎಲ್ಲರಿಗಿಂತ ಮೊದಲಿಗನಾಗಿ ಬಂದಿದ್ದು ನನ್ನ ಸಾಧನೆ.


ಸಾತ್‌ ಸರ ಸರೋವರದ ಸನಿಹದ ಗುಡಾರಗಳು..


ಚಳಿಯಲ್ಲಿ ಕುಳಿತು ದಾಲ್ ಚಾವಲ್ ಸವಿದಿದ್ದು ಒಂದು ಅನನ್ಯ ಅನುಭೂತಿ. ಸಹ ಚಾರಣಿಗರು ಶತಮಾತದಿಂದ ನಿದ್ದೆಯೇ ಮಾಡದವರಂತೆ ತಮ್ಮ ನಿದ್ರಾ ಚೀಲದೊಳಗೆ ಅವಿತರು. ಹೊರಗಡೆಯ ಮಳೆಗೆ ಹೊಟ್ಟೆಯೊಳಗಿನ ದಾಲ್ ಚಾವಲ್ನ ಜುಗಲ್ ಬಂದಿ. ಸಂಜೆ ಹೊತ್ತಿಗೆ ಯಾರಿಗೂ ಸತ್ ಸರ್ ಸರೋವರ ನೋಡುವ ಮನಸ್ಸು ಯಾರಿಗೂ ಇರಲಿಲ್ಲ. ಗುಡಾರದಲ್ಲೇ ಅವಿತೆವು.

ಕುತ್ತಿಗೆ, ಕೈಯಚರ್ಮ ಬಿಸಿಲಿಗೆ ಸುಟ್ಟು ಗರಿಗರಿ ಹಪ್ಪಳದಂತಹ ತುಣುಕುಗಳು ಎದ್ದು ಬರುತ್ತಿದ್ದವು. ಆಕಾಸವು ಬಿಕ್ಕುತ್ತಿತು. ಗೆಳೆಯ ನಾಗರಾಜ ವೈದ್ಯರ ಸಲಹೆ ಧಿಕ್ಕರಿಸಿ ಸ್ಟ್ರಾಬೆರಿ ಮುಕ್ಕಿ ಪಾಯಿಖಾನೆಗೆ ಮಾರ್ಚ್ ಫಾಸ್ಟ್ ಮಾಡಿದ. ನನಗೂ ಹೊಟ್ಟೆಯಲ್ಲಿ ಸಣ್ಣ ಗುಡು ಗುಡು. ಪುಣ್ಯಕ್ಕೆ ಏನೂ ಆಗದೆ ಬಚಾವ್ ಆದೆ.  

ಅಂದು ಬಹು ಬೇಗ ನಿದ್ದೆ ಮಾಡಿ ದಿನಕ್ಕೆ ಚಾದರ ಹೊದಿಸಿದೆವು.

ಗಡ್‌ ಸರ್‌ ಸರೋವರ ಗಡ್‌ ಸರ್‌ ಪಾಸ್‌ ನಿಂದ

ದಿನ -6 

ಸಾತ್ ಸರ್ ನಿಂದಗಂಗ್ ಬಲ್ ಸರೋವರಕ್ಕೆ.


ಸಾತ್ ಸರ್ಗುಡಾರದಿಂದ ಗಂಗ್ಬಲ್ ಕಡೆಗೆ ಬೆಳಿಗ್ಗೆ 8ಕ್ಕೆ ಹೊರಟೆವು. ಮೊದಲೆರಡುಗಂಟೆ ಕಲ್ಲುಗಳೊಂದಿಗೆ ಸರಸಕ್ಕೆ ಬಿದ್ದೆವು. ದಾರಿಯುದ್ದಕ್ಕೂ ಬಂಡೆಗಳೇ ಬಂಡೆಗಳು ಅವುಗಳಿಂದ ದಾರಿತಪ್ಪಿದ್ದೂ ತಿಳಿಯಲಿಲ್ಲ.
ಸುಮಾರು ಮೂರುಗಂಟೆ ಮಂಜು ಕವಿದದಾರಿಯಲಿ ನಡೆದು ಮೂರನೆಯ ಜಾಜ್ ಪಾಸ್  ತಲುಪುವಷ್ಟರಲ್ಲಿ ಎಲ್ಲರೂ ಸುಸ್ತೋ ಸುಸ್ತು. ತುದಿಯಲಿ ಸ್ವಲ್ಪವೇ ಹಿಮ ಕವಿದಿತ್ತುತುದಿ ತುಲುಪಿ ಹಿಮದಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಜಾಜ್ ಪಾಸ್ ತುದಿಯಲ್ಲಿ  ಕುಳಿತು ಸುಮದುರ ಹಿಂದಿ ಕವಿತೆ ಹಾಡಿಕೊಂಡೆವು. ಮೊದಲುತಲುಪಿದ ನಮಗೆ ಗಂಗ್ ಬಲ್ ಸರೋವರ ತನ್ನ ಅಪೂರ್ವ ದೃಶ್ಯಾವಳಿಯನ್ನು ತೋರಿಸಿ ತಣಿಸಿತ್ತು. ನಾವು ಏರಿದ ಸ್ವಲ್ಪ ಸಮಯಕ್ಕೆ ಮೋಡ ಮುಸುಕಿ ಕಾಣದಾಗಿತ್ತು. ಎರಡು ದಿನಗಳಿಂದ ಮಳೆ ಮೋಡದ ಕಣ್ಣಾಮುಚ್ಚಾಲೆ ನಡದೇ ಇತ್ತು. ಮನಮೋಹಕ ಗಂಗ್ಬಲ್ ತಲುಪುವುದು ಯಾವಾಗ ಎಂದು ತವಕಿಸುತ್ತಲೇ ಕಣಿವೆಗೆ ಇಳಿಯ ತೊಡಗಿದೆವು. ಸುಮಾರುಎರಡುಗಂಟೆಯ ಹೊತ್ತಿಗೆ ಗಂಗ್ ಬಲ್ ಸರೋವರದಲ್ಲಿದ್ದೆವು. ಗಂಗ್ ಬಲ್ನ ಸೌಂದರ್ಯವನ್ನು ಮನಸಾರೆ ಸವಿದು ಹರಮುಖ್ ಶಿಖರವನ್ನು ಕಣ್ಣಲೇ ಧ್ಯಾನಿಸಿ ಅಲ್ಲೇ ಬಿಡಾರ ಹೂಡಿದ್ದ ಮೀನುಗಾರರನ್ನು ಮಾತಾಡಿಸಿದೆವು.
ಸರೋವರದ ನೋಟ

ಬೆಳಕಿನಾಟ ಗಂಗ್‌ ಬಲ್‌ ಸರೋವರದಲಿ.


ಗಂಗ್ ಬಲ್ ಸರೋವರ ನಾವು ನೋಡಿದ ಸರೋವರಗಳಲ್ಲಿ ಅತ್ಯಂತದೊಡ್ಡದ್ದು. ಇದರ ನೀರು ಹರ್ಮುಖ ಶಿಖರದ ಎಂದೂ ಮುಗಿಯದ ಹಿಮದಿಂದ ಉತ್ಪತ್ತಿಯಾಗುತ್ತದೆ. 
ಯಾರು ಚಾರಣ ಮಾಡದ ಹರಮುಖ ಶಿಖರದ ಹಿಮದಿಂದಲೇ ತನ್ನೊಡಲನ್ನು ತುಂಬಿಸಿಕೊಳ್ಳುತ್ತಿರುವ ಗಂಗ್ ಬಲ್ ಸರೋವರ ನೋಡುತ್ತಲೇ ದಂಗಾದೆವು. ವಿಶಾಲ ಆಕಾಶ ಚಪ್ಪರದಡಿ ಒಂದೆಂಡೆ ಗಂಗ್ ಬಲ್ ಸ್ಥಿರವಾಗಿನಿಂತಿದೆ. ಶಿಖರದ ನೆತ್ತಿಯಲಿ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿಗೆ ಮೊದಲ ಚಾರಣ 1856ರಲ್ಲಿ ನಡೆದಿತ್ತು. ಆಗ ಏ-2  ನ ಇರುವಿಕೆಯನ್ನು ಗುರುತಿಸಲಾಯಿತು. ಅಲ್ಲಿನ ಮಿಲಿಟರಿಯವರು ವಿವರಿಸುವಂತೆ ಈ ಶಿಖರವನ್ನು ಹೆಲಿಕಾಫ್ಟರ್ ಸಹ ದಾಟಿ ಹೋಗಲ್ಲ. ಗಂಗ್ ಬಲ್ ಸರೋವರದ ಸನಿಹವೇ ನಂದಕೋಲ್ ಸರೋವರ ಹರಡಿ ಹಬ್ಬಿದೆ. ಸಪ್ತ ಸರೋವರದ ಕೊನೆಯ ಸರೋವರ ನಂದ್ಕೋಲ್ ಸರೋವರ. ಅದನ್ನು ಕಣ್ತುಂಬಿ ಕೊಂಡು ಗುಡಾರದ ಕಡೆ ನಡೆದೆವು.
ನಂದ್ ಕೋಲ್ ಸರೋವರದಿಂದ ಹೊರಟ ಝರಿಯೊಂದು ಕಣಿವೆಗೆ ಇಳಿಯುತ್ತಿತ್ತು. ಜೊತೆಗ ಅದನ್ನು ದಾಟಲು ನಮ್ಮನ್ನು ಸುಸ್ತು ಬೀಳಿಸಿತ್ತು. ಪ್ರವಾಹೋಪಾದಿಯಲಿ ಹರಿವ ನೀರಿಗೆ ಕಿರಿದಾದ ಮರದ ದಿಮ್ಮಿಯೊಂದನ್ನು ಅಡ್ಡಲಾಗಿ ಇರಿಸಲಾಗಿತ್ತು. ದಾಟುವಾಗ ಹೃದಯವೇ ಬಾಯಿಗೆ ಬಂದಿತು. ಸ್ನೇಹಿತರ ಹಾಗೂ ಗೈಡ್ ನ ಸಹಾಯ ಪಡೆದು ಅಂತೂ ದಾಟಿದೆ. ಪಾಪಿ ಚಿರಾಯು!

ಗುಡಾರಗಳ ಎದುರಿಗೆ.

ಸತೀಶ್‌ ನಾಗರಾಜ್‌ ಮತ್ತು ಲಕ್ಷೀ ನಾರಾಯಣ. 

ಆರ್ಕಿಡ್ಗಳ ಗುಚ್ಚ

ಗಂಗ್‌ ಬಲ್‌ ಸರೋವರ


ನಮ್ಮ ಗುಡಾರಕ್ಕೆ ಬರುತ್ತಲೇ ಬಿಸಿ ಚಹ, ಬೋಂಡಾ ಮತ್ತು ವಿಪರೀತ ಮಳೆ ಸ್ವಾಗತ ಕೋರಿತು.  ಮಳೆ ಹನಿಗೆ ಪುನಃ  ಮಗುವಾಗಿ ಚಹ ಹೀರತೊಡಗಿದೆ.
ನಮ್ಮ ತಂಡದ ಅನೇಕರು ಗಂಗ್ಬಲ್ ನೋಡದೆ ಗುಡಾರಕ್ಕೆ ಬಂದು ಬಿದ್ದು ಮರುದಿನವೂ ನೋಡಲಾಗದೆ ಕೈ ಕೈ ಹಿಸುಕಿ ಕೊಂಡರು.

ದಿನ -7

ಗಂಗ್ಬಲ್ ಸರೋವರದಿಂದ ನಾರಾನಾಗಕ್ಕೆ

ಎಷ್ಟೊಂದು ರೋಚಕ ಸಾಹಸಗಳಿಗೆ ಮುನ್ನುಡಿ ಬರೆದ ಚಾರಣದ ಬೆನ್ನುಡಿ ಇನ್ನೂ ರೋಚಕ!
ಏಳು ಸರೋವರನೋಡಿದ ಖುಷಿ, ಮಳೆ ಹಿಡಿಸಿದ ಕಸಿವಿಸಿಯಿಂದ ಪ್ರಾರಂಭವಾದ ದಿನ ಕೊನೆಗೆ ಸುಖವಾದ ಸುಪತ್ತಿಗೆಯ ಜೊತೆಗೆ ಹಂಸತೂಲಿಕದ ಯೋಚನೆಯಿಂದ ಕೊನೆಯ ದಿನದ ತೂಕವೇ ಬೇರೆ. ವಿಪರೀತ ಕಲ್ಲಿನ ರಾಶಿಯನ್ನು ದಾಟಿಕೊಂಡು, ಓಕ್ ಮರಗಳ ದಾರಿಯಲ್ಲಿ ಹನಿಮಳೆಯಲ್ಲಿ ನಡೆಯುತ್ತಾ ಸುಮಾರು 16 .ಕಿಮೀ ಚಾರಣವನ್ನು ಜಾರುವ ಹಾದಿಯಲ್ಲಿ ಸುಮನೋಹರ ಚಿತ್ರಗಳನ್ನು ತೆಗೆಯುತ್ತಾ ಸಂಜೆ 4ರ ವೇಳೆಗೆ ನಾರಾನಾಗ್ ಪಟ್ಟಣತಲುಪಿ ಅಲ್ಲಿಂದ ಶ್ರೀನಗರಕ್ಕೆ ಬಂದೆವು. ಅತ್ಯಂತ  ಕಠಿಣವೂ ಅಹ್ಲಾದಕರವೂ ಚಾರಣಕ್ಕೆ ತೆರೆಬಿದ್ದಿತು. 
ಸಪ್ತ ಸರೋವರದ ಚಾರಣ ಚಿತ್ರ ಹರವಿ ಕೂತಾಗ ಉಂಟಾಗುವ ಪ್ರಸನ್ನತೆ ಹೇಳ ತೀರದು. ಈ ವಿಶಿಷ್ಟ ಚಾರಣ ಸದಾ ನನ್ನ ನೆನಪಿನ ಕನ್ನಡಿಯೊಳಗೆ ಜೀವಂತ!  ಮಿಲಿಟರಿಯವರ ಜೀವನ ಹಾಗೂ ಕುರುಬರ ಜೀವನ ತಿಳಿಯಲು ಹೂ ಘಮವನ್ನು ಆಘ್ರಾಣಿಸಲು ನೀವೊಮ್ಮೆ ಕಾಲಿನಲ್ಲಿ ಕುಸುವಿರುವಾಗಲೇ ಬರಬಾರದೇಕೆ?


ನಾರಾನಾಗನ ವಿಹಂಗಮ ನೋಟ.



ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...