Friday, May 17, 2019

'ಉದರ ನಿಮಿತ್ತಂ ಬಹುಕೃತ ವೇಷಂ'.

 ನಾನಾ ತರೇವಾರಿ ವೇಷ ತೊಟ್ಟು ಯಾರನ್ನೊ ಮಂಗ ಮಾಡಿ ತಮ್ಮ ಹೊಟ್ಟೆ ಹೊರೆದುಕೊಳ್ಳೋ ಎಷ್ಟು ಜನರಿಲ್ಲ ಹೇಳಿ. ಕೊಳಕು ತಿಂಡಿ ಮಾರುವವರು, ದುಡ್ಡಿಗಾಗಿ ದೇಶದ ಜನರ ಆರೋಗ್ಯವನ್ನೇ ಒತ್ತೆ ಇಡಬಲ್ಲವರು. ದೇಶದ ಸಂಪತ್ತು ಮಾರಟಕ್ಕಿಟ್ಟವರು. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. 'ಉದರ ನಿಮಿತ್ತಂ ಬಹುಕೃತ ವೇಷಂ'. ಈ ಮಾತು ಮನುಷ್ಯರಿಗೆ ಮಾತ್ರ ಸೀಮಿತ ಎಂದು ನೀವು ಅಂದುಕೊಂಡಿದ್ದರೆ ಅದು ನಿಜವಲ್ಲ!
 
ಸಣ್ಣ ಆಮೆಯಂತಿದೆ....   ಆದರೆ    ಆಮೆಯಲ್ಲ.


ಕಾಡಿನಲ್ಲಿ ಕೀಟಗಳ ಛಾಯಾಚಿತ್ರ ತೆಗೆಯಲು ನಿಂತದ್ದೆ. ಯಾವುದೊ ಕಡ್ಡಿಯ ತುದಿಯಲ್ಲಿ ಕಸದಂತಹದೊಂದು ನೇತಾಡುತಲಿತ್ತು. ಅರೆ ಅಲ್ಲೇ ಆಮೆಯಂತಹ ಕೀಟವೊಂದು ಕಣ್ಣಿಗೆ ಬಿತ್ತು. ಮೈ ಮೇಲೆಲ್ಲಾ ಸಣ್ಣ ಸಣ್ಣ ಮುಳ್ಳುಗಳ (Spikes) ಮಡಿಕೆ. ತನ್ನ ಕಾಲುಗಳನ್ನು ಮಡಚಿ ಮಣೆಯಂತೆ ದೇಹದ ಕೆಳಗಿಟ್ಟಿತ್ತು! ಸಾಕ್ಷಾತ್ ಹನುಮಂತನಂತೆ. ದೇಹದ ಮೇಲೆ ಹಸಿರು ಬಣ್ಣದ ನಡುವೆ ಎರಡು ಕಣ್ಣುಗಳಂತಹ ರಚನೆ! ಇದು ಬೇರೆ ಕೀಟಗಳನ್ನು ಯಾಮಾರಿಸಲು ಮಾಡಿಕೊಂಡ ಏಪರ್ಾಟು. ಜೊತೆಗೆ ತಲೆಯ ಭಾಗದಲ್ಲೂ ಇಂತಹುದೇ ಎರಡು ಕಣ್ಣುಗಳು. ನಮ್ಮನ್ನೇ ನೋಡುತ್ತಿರುವವೋ ಎಂಬಂತಿವೆ! 



ಪಕ್ಕನೆ ಯಾವ ಕೀಟವೆಂದು ಹೇಳಲು ಸಾಧ್ಯವಿಲ್ಲ. ಸರಿಯಾಗಿ ನಾಲ್ಕೈದು ಪೋಟೋ ಕ್ಲಿಕ್ಕಿಸಿ ನೋಡಿದೆ, ಅರೆ ಇದು ಕೀಟವಲ್ಲ. ಜೇಡ! ಸಖತ್ ಆಶ್ಚರ್ಯ ಜೊತೆಗೆ ಖುಷಿ. ಇದನ್ನು ಮೋದಲು ನೋಡಿದ್ದಿಲ್ಲ. ಜುಮ್ಮನ ಗಿಡದ ಮುಳ್ಳಿನಂತಹ ಮುಳ್ಳು ಹೊತ್ತ ಜೇಡ. ನಿಜವಾಗಿ ಅದರ ಕಣ್ಣುಗಳು ಕಾಲುಗಳ ಎಡೆಯಲ್ಲಿವೆ. ತೀರಾ ಸಣ್ಣದು. ಮಾರನೆಯ ದಿನವೂ ಅಲ್ಲೇ ಪ್ರತ್ಯಕ್ಷ! ಯಾವ ಪ್ರಭೇದವೆಂದು ಗೊತ್ತಿಲ್ಲ. ಇಷ್ಟೇ ಹೇಳಬಲ್ಲೆ 'ಉದರ ನಿಮಿತ್ತಂ ಬಹುಕೃತ ವೇಷಂ'.
 
Front view of the Spider.


2 comments:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...