Wednesday, February 22, 2012

ಮೋಡಿಯ ಮಲ್ಯಾಡಿ



ಒಂದೆಡೆ ಸುಂದರ ಕಡಲು. ಇನ್ನೊಂದೆಡೆ ತಂಪಾದ ಕೊಳಗಳು. ಸುತ್ತಲು ಹಸಿರು. ಸೂರ್ಯ ಶಶಿಮುಖಿ. ಬೀಸುವ ತಂಗಾಳಿ ನಡುವೆ ಕಲರವಿಸುವ ಖಗಗಳ ಸಮೂಹ. ನೀರಲಿ ನೀಲಾಕಾಶದ ಬಣ್ಣ. ಅಲ್ಲಲ್ಲಿ ವೈಯಾರಗೈಯುವ ನೈದಿಲೆ, ತರು-ಲತೆಗಳು.

ಮೀನಿಗಾಗಿ ಕಾಯುವ ಋಷಿ ಬಿಳಿ ಮಿಂಚುಳ್ಳಿ, ತರೆವಾರಿ ಮುನಿಯ, ಕೊಳದ ಬಕ, ಕೊಕ್ಕರೆ, ಕೇಸರಿ ಗೀಜಗ ಇನ್ನಿತರ ಹಕ್ಕಿಗಳು. ನಡುವೆ ಬೈತಲೆ ತೆಗೆದಂತಿರುವ ರಾಷ್ಟ್ರೀಯ ಹೆದ್ದಾರಿ 66.

ಇದು ಕುಂದಾಪುರ ತಾಲೂಕಿನಮಲ್ಯಾಡಿ ಪಕ್ಷಿಧಾಮದ ನೋಟ. ಕುಂದಾಪುರದಿಂದ ತೆಕ್ಕಟ್ಟೆ ತಲುಪಿ ಪೂರ್ವದ ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿದರೆ ಸಿಗುವುದೇ ವಿಶಾಲ ನೀರಿನ ಕೊಳಗಳು. ಪ್ರಾಣಿ ಪಕ್ಷಿ ಕೀಟಗಳ ಆಶ್ರಯತಾಣ ಮಲ್ಯಾಡಿ. ವರ್ಷವಿಡಿ ಇರುವ ನೀರು ಸುತ್ತಲಿನ ಹಸಿರು ಪರಿಸರ ಪಕ್ಷಿಗಳನ್ನು ಆಕಷ್ರಿಸಿವೆ. ಕೊಳಗಳ ಸುತ್ತಲೂ ಭತ್ತದ ಗದ್ದೆಗಳಿವೆ. ಇದರಿಂದ ಪಕ್ಷಿಗಳಿಗೆ ಸಾಕಷ್ಟು ಆಹಾರ ದೊರೆಯುತ್ತದೆ. ಕೊಳಗಳ ಸುತ್ತಲೂ ಉದ್ದು, ನೆಲಗಡಲೆ, ಅಲಸಂಡೆ ಮುಂತಾದ ಬೆಳೆಗಳನ್ನು ಬೆಲೆಯಲಾಗಿದೆ. ಇಲ್ಲಿರುವ ಪಕ್ಷಿ ವೈವಿಧೈ ಅನನ್ಯ , ಬಿಳಿ ಮಿಂಚುಳ್ಳಿ ಭಾರತದಾದ್ಯಂತ ಕಂಡು ಬರುತ್ತಿತ್ತು. ಈಗ ಅಪರೂಪವಾಗಿದೆ. ಆದರೆ ಈ ಪಕ್ಷಿ ಇಲ್ಲಿ ಹಲವಿದೆ. ಕೋಳಗಳ ಸುತ್ತಲೂ ಸಂತಾನೋತ್ಪತ್ತಿ ನಡೆಸಿವೆ. ಕೊಳದ ಬಕ, ಹಾವಕ್ಕಿ, ಉದ್ದ ಕರಿ ಕತ್ತಿನ ಕೊಕ್ಕರೆ. ಕೇಸರಿ ಗೀಜಗ, ಯುರೋಪಿನ ಅತಿಥಿ ಕುಂಡೆ ಕುಸ್ಕ, ನೆಲ ಗುಬ್ಬಿ, ಟಿಟ್ಟಿಭ, ಮುನಿಯಗಳು, ನೀಲಿ ಮಿಂಚುಳ್ಳಿ, ಗೊರವ, ನವಿಲು ಗೊರವ, ಕಾಜಾಣ ಇವುಗಳ ವೈಯಾರ ನೋಡುವುದೇ ಸಂಭ್ರಮ. ಭಾನುವಾರದಂದು ಭೇಟಿ ಇತ್ತಾಗ ನವಿಲು ಗೊರವ (jakana), ತಪಸ್ವಿ ನೀಲಿ ಮಿಂಚುಳ್ಳಿ ಸ್ವಾಗತ ಕೋರಿದವು. ಬೆಳ್ಳಕ್ಕಿಗಳು, ಹಸಿರು ಗಿಣೆಗಾರಲು, ಬಿಳಿ ಕತ್ತಿನ ಕಪ್ಪು ಬೆಳ್ಳಕ್ಕಿಗಳು ಬೇಟೆಯಾಡುತ್ತಿದ್ದವು. ಅಲ್ಲಲ್ಲಿ ಇಣುಕುವ ಹಾವಕ್ಕಿಗಳು. ಕಾಳು ಹೆಕ್ಕುವಲ್ಲಿ ನಿರತವಾಗಿರುವ ಮುನಿಯಗಳು ಭತ್ತದ ಗದ್ದಯಲ್ಲಿ ಸರ್ಕಸ್ ಮಾಡುತ್ತಿದ್ದವು. ಮಡಿವಾಳ ಹಕ್ಕಿ ತನ್ನ ಇಂಪಾದ ದನಿಯಿಂದ ಹೆಣ್ಣು ಹಕ್ಕಿಯನ್ನು ಕರೆಯುತ್ತಿತ್ತು. ಅಲ್ಲಲ್ಲಿ ತೇಲುವ ತಾವರೆಗಳು ಸೂರ್ಯನೊಂದಿಗೆ ಸ್ಪರ್ದೆ ಗಿಲಿದ್ದಿದವು. ನೀಲಾಕಾಶದ ಕೊಳಗಳಲ್ಲಿನ ಪ್ರತಿಫಲನವು ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಟಿಟ್ಟಿಭವೊಂದು ಕೊಳದ ನಡುವಿನ ಜಾಗದಲ್ಲಿ ಬಿಸಿಲು ಕಾಯಿಸುತ್ತಿತ್ತು. ತಣ್ಣನೆಯ ಗಾಳಿ ನಮ್ಮನ್ನು ಹಿಂತಿರುಗಲಾರದಂತೆ ಮಂತ್ರ ಮುಗ್ದಗೊಳಿಸಿತ್ತು. ಹೊರಡುವು ಮನಸ್ಸಿಲ್ಲದ ಮನಸ್ಸಿನಿಂದ ಹೊರಟಾಗ ಬಿಳಿ ಮಿಂಚುಳ್ಳಿಗಳು ವಿದಾಯ ಹೇಳಿದವು.
ಕೊನೆ ಗರಿ:- ಪಕ್ಷಿಧಾಮಕ್ಕೆ ಸೂಕ್ತ ರಕ್ಷಣೆಯಿಲ್ಲ. ಮನುಷ್ಯ ಆಹಾರದ ಕೊರತೆಯಾದರೆ ಬೇರೆ ಕಡೆಗಳಿಂದ ತಂದು ಹಸಿವು ನೀಗಿಸಿಕೊಳ್ಳ ಬಲ್ಲ. ಸೀವಿತವಾದ ಸ್ವಚ್ಚವಾಗಿರುವ ಕೊಳಗಳನ್ನು ಆಶ್ರಯಿಸಿಕೊಂಡಿರುವ ಈ ಪಕ್ಷಗಳ ಆಹಾರ ಲಭ್ಯತೆ ಅತ್ಯಲ್ಪ. ಈ ಅತ್ಯಲ್ಪವನ್ನೂ ಮಾನವ ಕಸಿಯ ಹೊರಟಿದ್ದಾನೆ! ಮೀನುಗಾರರ ಹಲವು ತಂಡ ಇಲ್ಲಿ ಮೀನು ಆಮೆ ಹಿಡಿಯಲು ನಿರತವಾಗಿವೆ. ಅಲ್ಲದೆ ಪಕ್ಷಿಧಾಮದ ಸ್ಥಳಾಕ್ರಮಣವು ನಡೆಯುತ್ತಿದೆ. ಕೊಳದ ನೀರನ್ನು ಮನಸೋ ಇಚ್ಚೆ ಯಥೇಚ್ಚ ಬಳಸಿಕೊಳ್ಳುತ್ತಿದ್ದಾನೆ. ಸಿಮೆಂಟ ಕಾಡು ತಲೆಯೆತ್ತುತ್ತಿವೆ. ಇಲ್ಲಿನ ಪರಿಸರ ಜೀವಿ ಸಮೂಹವನ್ನು ಸರಕಾರ, ಪರಿಸರವಾದಿಗಳು ರಕ್ಷಿಸಬೇಕೆಂಬುದು ನನ್ನ ಮನವಿ.

ಶ್ರೀಧರ್ . ಎಸ. ಸಿದ್ದಾಪುರ.

Thursday, February 16, 2012

ಮಿರ್ಜಾನ ಕೋಟೆ


ಮಿರ್ಜಾನ ಕೋಟೆ
ನೀವು ಎನ್ ಎಚ್. 66 ರ ಗುಂಟ ಕುಂದಾಪುರದಿಂದ ಸಾಗಿ ಹೊನ್ನಾವರ ದಾಟಿ ಮುಂದೆ ಸಿಗುವುದೇ ಸುಂದರ ಮಿರ್ಜಾನ ಕೋಟೆ. ಕೋಟೆ, ಮಿರ್ಜಾನ ಎಂಬ ಊರಿನಿಂದ ಕೆಲವೇ ಕಿ.ಮಿ. ಹಿಂದಿದೆ. ಕಡಲ ಕಿನಾರೆಗೆ ಅತಿ ಸಮೀಪವಿರುವುದರಿಂದ, ಕಾವಲು ಕೋಟೆ, ವಸ್ತು ಸಾಗಾಣಿಕಾ ಕೋಟೆಯಾಗಿ ಬಳಕೆಯಲ್ಲಿತ್ತು. ವಿದೇಶಿ ವ್ಯವಹಾರೆಕ್ಕೆ ಬಳಸುತ್ತಿದ್ದರೆನ್ನಲಾಗುತ್ತಿದೆ. ಅತ್ಯಂತ ಕುತುಹಲಕಾರಿ ಇತಿಹಾಸ ಹೊಂದಿರುವ ಈ ಕೋಟೆಗೀಗ ಒಂದು ಸುತ್ತು ಬರೋಣ.
ಇತಿಹಾಸದ ಪುಟ ಸೇರಲು ಕಾಯುತಿರುವಂತೆ ತೋರುವ ಈ ಕೋಟೆ ಇಲಾಖಾ ನಿರ್ಲಕ್ಷಕ್ಕೆ, ಬುದ್ದಿಜೀವಿಗಳ ಲಜ್ಜೆಗೇಡಿತನಕ್ಕೆ ಸಾಕ್ಷಿ ದೊರೆಯುತ್ತದೆ. ಕೆಲವು ಸುಂದರ ರಚನೆಗಳ ಮೂಲಕ ಗಮನ ಸೆಳೆಯುತ್ತದೆ. ಮುರಾ ಕಲ್ಲಿನಿಂದ ನಿಮರ್ಿಸಿದ ನಾಜೂಕಾದ ಬುರುಜು, ವಿಶಿಷ್ಟವಾದ ಬಾವಿಗಳು, ಸಂಮೋಹಕ ಪ್ರವೇಶ ದ್ವಾರಗಳಿಂದ ಕಣ್ಮನ ಸೆಳೆಯುತ್ತದೆ. ಎಲ್ಲಾ ದಿಕ್ಕುಗಳ ಪರಿವೀಕ್ಷಣೆಗೆ ತಕ್ಕುದಾದ ಬುರುಜು. ಕೋಟೆಗೆ ಮೂರು ಪ್ರವೇಶ ದ್ವಾರಗಳಿವೆ. ಅದರ ಸುರಂಗಗಳ ಮೂಲಕ ಕಾಲುವೆಗಳಿಗೆ ಸಂಪರ್ಕ ಸಾಧಿಸಿಬಹುದೆನ್ನುವ ಬಗ್ಗೆ ಇಲಾಖೆ ಹೇಳಿದೆೆ. ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾದ ಕೋಟೆ ಎನ್ನಬಹುದು. ಕೋಟೆಯ ಸಭಾಂಗಣ ಇತರೆ ಭಾಗಗಳು ಶಿಥಿಲಾವಸ್ಥೆ ತಲುಪಿದ್ದು ಕೆಲವು ಗೋಡೆ ಕುಸಿದಿದ್ದು ಪುರ್ನನಿಮರ್ಾಣಕ್ಕೆ ಕಾಯುತ್ತಿವೆ. ಕೋಟೆಯ ಪ್ರವೇಶಕ್ಕೆ ಕಂದಕ ನಿಮರ್ಿಸಲಾಗಿದ್ದು ಕೋಟೆ ಸೇರಲು ತೊಡಕನ್ನು ಉಂಟುಮಾಡಿದೆ.
ಇತಿಹಾಸ:-
ಈ ಕೋಟೆಯ ಇತಿಹಾಸ ಅಸ್ಪಷ್ಟವಾಗಿದೆ.
ಈ ಬಾನ ಬತೂತ ಹೇಳುವಂತೆ ಇದು 1200 ರಲ್ಲಿ ನಿಮರ್ಿಸಲಾಗಿದೆ. ನವಾಯತ್ ಸುಲ್ತಾನ ಇದನ್ನು ನಿಮರ್ಿಸಿದನೆಂದು ನಂಬಲಾಗಿದೆ. ಮುಂದೆ ಇದು ವಿಜಯನಗರದವರ ಆಳ್ವಿಕೆಗೆ ಒಳಪಟ್ಟಿತೆನ್ನಲಾಗಿದೆ.
ಕೆಲವು ಇತಿಹಾಸಕಾರರ ಪ್ರಕಾರ ಈ ಕೋಟೆ 1552ರಲ್ಲಿ ಚನ್ನಬೈರದೇವಿ ನಿಮರ್ಿಸಿದಳು. ವಿಜಯನಗರ ರಾಜರ ಸಾಮಂತೆಯಾಗಿ ಸುಮಾರು 54 ವರ್ಷ ಆಳ್ವಿಕೆ ನೆಡೆಸಿದಳೆಂದು ಹೇಳಲಾಗುತ್ತದೆ. ಈ ಕೋಟೆಯ ಮೂಲಕ ಕಾಳುಮೆಣಸನ್ನು ಯುರೋಪ್ಗೆ ರಪ್ತು ಮಾಡಲಾಗುತಿತ್ತು. ಆದ್ದರಿಂದ ಇದೊಂದು ಪ್ರಮುಖವಾದ ವ್ಯಾಪಾರ ಕೇಂದ್ರವಾಗಿತ್ತು.
ಇನ್ನು ಕೆಲವು ಸಂಶೋಧಕರು ಹೇಳುವಂತೆ ಬಿಜಾಪುರ ಸುಲ್ತಾನರು ಇದನ್ನು ನಿಮರ್ಿಸಿದರೆಂದು ಹೇಳಲಾಗುತ್ತಿದೆ. ಇತಿಹಾಸ ಏನೇ ಹೇಳಲಿ ಈ ಕೋಟೆ ಒಂದು ಅತಿ ಮುಖ್ಯವಾದ ಕೋಟೆಗಳಲ್ಲೊಂದಾಗಿತ್ತು ಎನ್ನುದರಲ್ಲಿ ಎರಡು ಮಾತಿಲ್ಲ.
2000-2001 ರಲ್ಲಿ ಸವರ್ೆ ಮಾಡಿ ಹಲವು ಹೊಸ ಮಾಹಿತಿಯನ್ನು ಹೊರಗೆಡವಲಾಯಿತು. ಚಿನ್ನದ ನಾಣ್ಯಗಳು, ಗುಂಡುಗಳು, ಮೆಟಲ್ ಬಾಲ್ ಮತ್ತಿತರೆ ವಸ್ತುಗಳು ಪತ್ತೆಯಾದವು. ಅದಲ್ಲದೇ ಕೋಟೆಗೆ ನೀರಿನ ತೊಟ್ಟಿಯೊಂದಿಗೆ ಸುರಂಗ ಸಂಪರ್ಕವಿರುವುದು ಪತ್ತೆಯಾಯಿತು.
ಕೊನೆ ಸಿಡಿ:-

ಇಷ್ಟೆಲ್ಲಾ ಐತಿಹಾಸಿಕ ಮಹತ್ವವಿರುವ ಕೋಟೆಗೆ ಸರಕಾರ ಹಾಗು ಜನರು ಕೊಡುತ್ತಿರುವ ಮಹತ್ವ ಮಾತ್ರ ಶೋಚನೀಯವಾಗಿದೆ.
ಕೇವಲ ಒಬ್ಬನೇ ಕೆಲಸದಾಳು ಈ ಕೋಟೆ ನೋಡಿಕೊಳ್ಳುತ್ತಿದ್ದಾನೆ! ಕೋಟೆಯ ಪ್ರವೇಶ, ಉಸ್ತುವಾರಿ, ಪ್ರವಾಸಿಗರಿಂದ ಹಾನಿಯಾಗದಂತೆ ನೋಡಿಕೊಳ್ಳುವುದಲ್ಲದೇ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಈತನೊಬ್ಬನಿಂದ ಮಾತ್ರ ಅಸಾಧ್ಯ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...