Friday, July 5, 2019

ಇತಿಹಾಸದ ರಕ್ತ ಸಿಕ್ತ ಪುಟ...



ಜನರ ಖುಷಿ ಕಸಿದ ಸುಲ್ತಾನ.....
       ಪ್ರಭುತ್ವ ಯಾವುದೇ ಇರಲಿ ಜನರ ನಡುವೆ ಬೆಸುಗೆಯಂತಿರಬೇಕು. ದ್ವಾರ ಸಮುದ್ರದಿಂದ ಆಳಿದ ಹೊಯ್ಸಳರು ಬರೋಬ್ಬರಿ 108 ದೇವಾಲಯ ನಿರ್ಮಿಸಿದ್ದಾರೆಂದು ಮೊನ್ನೆ ಮೊಸಳೆ ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ತಿಳಿಯಿತು. 12 ನೆಯ ಶತಮಾನ ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಆ ಹಿರಿಯರು ಅರುಹಿದರು. ಅದರಲ್ಲೂ ಶೈವ ಮತ್ತು ವೈಷ್ಣವರ ನಡುವೆ ತೀವ್ರ ತರಹದ ಪೈಪೋಟಿ ಇದ್ದ ಕಾಲ. ಅಂತಹ ಕಾಲದಲ್ಲಿ ಪ್ರಭುತ್ವವು ಶೈವ ಮತ್ತು ವೈಷ್ಣವ ದೇವಾಲಯ ಒಟ್ಟೊಟ್ಟಿಗೆ ನಿರ್ಮಿಸಿ ಅವರ ನಡುವೆ ಬಂಧವೇರ್ಪಡುವಂತೆ ಮಾಡಿದ ಸಾಕ್ಷಿಯಾಗಿ ನಿಲ್ಲುತ್ತೆ. ನಾಗೇಶ್ವರ ದೇವಾಲಯ, ಚೆನ್ನಕೇಶ್ವರ ದೇವಾಲಯ ಹೊಯ್ಸಳ ಚಕ್ರವತರ್ಿ ವಿಷ್ಣುವರ್ಧನನವರ ಪರ ಮತ ಸಹಿಷ್ಣುತೆಗೆ ಸಾಕ್ಷಿ. ವೈಷ್ಣವನಾಗಿದ್ದರೂ(ಮೂಲ ಮತ ಜೈನ)  ವಿಷ್ಣು ದೇವಾಲಯದ ಸನಿಹದಲ್ಲೇ ಶೈವ ದೇವಾಲಯಗಳನ್ನು ನಿಮರ್ಿಸಿದ್ದಾನೆ.  (ಮೊಸಳೆ ಹೊಸಳ್ಳಿ, ಹಾಸನ ಜಿಲ್ಲೆ) ಊರಿನ ಹೆಸರಿನ ಹಿಂದೆ ಒಂದು ಸುಂದರ ಕತೆ ಇದೆ! ಅದನ್ನು ಮುಂದೆಂದಾದರು ಹೇಳುವೆ. ಆದರೂ  ನಮಗೆ ವಿಷ್ಣುವರ್ಧನನಂತವರು ಆದರ್ಶ ವ್ಯಕ್ತಿಯಾಗಲಾರ! ವಿರ್ಪಯಾಸ. ಈ ರೀತಿಯ ಅನೇಕ ಉದಾಹರಣೆಗಳು ನಮಗೆ ಚರಿತ್ರೆಯಲ್ಲಿ ಕಾಣ ಸಿಗುತ್ತದೆ. ಇಂತಹ ಸೌಹಾರ್ದ ಪೂರ್ಣ ಸಂಗತಿಯೊಂದಿಗೆ ಇತಿಹಾಸದ ಕರಾಳ ಕರಿ ಮಗ್ಗುಲ್ಲೊಂದು ತಿಳಿದುದು ಕಾಲನ ಚೋದ್ಯವೇ.
ಇಷ್ಟೆಲ್ಲಾ ನೆನಪಾಗಲು ಕಾರಣ ಇತ್ತಿಚೆಗಷ್ಟೆ ಮೇಲುಕೋಟೆಗೆ ಹೋಗಿದ್ದೆ. ಅಲ್ಲಿನ ಬೀದಿಗಳಲ್ಲಿ ತಿರುಗುತ್ತಾ ಇದ್ದಾಗ ಹೊಸ ಅಚ್ಚರಿಯ ವಿಷಯವೊಂದು ತಿಳಿಯಿತು. ಇಲ್ಲಿನವರು ದೀಪಾವಳಿಯನ್ನು ಆಚರಿಸುದಿಲ್ಲವೆಂಬುವುದು! ಬೆಳಕಿನ ಹಬ್ಬವನ್ನೇ ಬೇಡವೆನಲು ಕಾರಣವೇಕೆಂದು ಕೆಲವರಲ್ಲಿ ವಿಚಾರಿಸಿದೆ. ಕೆದುಕಿದಾಗ ಕರಳು ಹಿಂಡುವ ಕರುಣಾಜನಕ ಕತೆಯೊಂದು ಹೊರ ಬಂತು. ನಾವೆಲ್ಲಾ ಶಾಲೆಯಲ್ಲಿ ಕಲಿಯುತ್ತಿರುವಾಗ 'ಹುಲಿ', ಬಭಯಂಕರ ಶೂರ ಎಂದು ಕರೆಸಿಕೊಂಡಿದ್ದ ಟಿಪ್ಪು ಸುಲ್ತಾನ್ 1790ರಂದು ಇಲ್ಲಿನ 800 ಜನರನ್ನು ದೀಪಾವಳಿಯ ದಿನವೇ ಮಾರಣ ಹೋಮ ಮಾಡಿದ್ದ! ಅಲ್ಲಿಂದೀಚೆಗೆ ಮೂಲ ಮೇಲುಕೋಟೆಯ ಮಂದಿ ದೀಪಾವಳಿ ಆಚರಿಸಿದ್ದಿಲ್ಲ. ಎಂದರು ಮೇಲುಕೋಟೆಯ ಹಿರಿಯರೊಬ್ಬರು. ಅವರ ಮಾಹಿತಿ ನಿಜವೇ ಎಂದು ವಿಕೀಪೀಡಿಯದಲ್ಲಿ ಹುಡುಕಿದೆ. ವಿಕೀಪೀಡಿಯಾವು ಅದನ್ನು ಪುಷ್ಟೀಕರಿಸಿತು!
ಇವನನ್ನೇ ಮಾಸ್ ಹೀರೋನಂತೆ ಚಿತ್ರಿಸುತ್ತಾ, ಜ್ಞಾನ ದೇಗುಲಗಳಿಗೂ ಈ ಅಸಹಿಷ್ಣು ರಾಜನ ಹೆಸರಿಡಲು ಹೊರಟು, ಮುಗ್ದ ಜನರ ಮಾರಣ ಹೋಮ ಮಾಡಿದವರ ಮೆದುಳೇ ಕಣ್ಮುಂದೆ ಸುಳಿಯುತ್ತೆ. ಇವನದು ಒಂದೆರಡು ಬಾನಗಡಿಗಳಾಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಕೆದಕಲು ಹೋದರೆ ಸಿಗುವ ವೃತ್ತಾಂತ ನೂರಾರು! ಇದೊಂದು ಸ್ಯಾಂಪಲ್ ಅಷ್ಟೇ. 
ವಿಕೀಪಿಡಿಯಾದಲ್ಲೂ ಈ ಮಾಹಿತಿ ಇದೆ. ಆಸಕ್ತರು ಓದಲು ಕೆಳಗಿನ ಲಿಂಕ್ ಬಳಸಿ.
      ಶ್ರೀಧರ್. ಎಸ್. ಸಿದ್ದಾಪುರ.


https://en.wikipedia.org/wiki/Melukote

History[edit]

People of Melkote do not celebrate Deepawali (the festival of lights) till date since November 10th 1790 (Naraka Chaturdashi). It was the date when Tipu Sultan slaughtered in many cruel ways more than 800 Mandyam Iyengars of this town. People of Melukote thus do not celebrate Deepawali but mourn on the festival of lights every year.[2]

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...