Saturday, December 20, 2014

ಹೊಸ ಮನ್ವಂತರದತ್ತ....


ಚಿತ್ರ ಇಂಟರ್ ನೆಟ್.
ಪರಮ ಅದ್ಭುತ ಈ ದ್ರಾವಣ
ಕುಡಿದವರು ರಾವಣ!
ಹನಿ ಹನಿಯೂ ವಿಷದ ತೊಟ್ಟು
ಜನ್ಯವು ಸೋಜಿಗದ ಬಿಕ್ಕಟ್ಟು.

        ಹೊಸ ಮನ್ವಂತರದ ರಾವಣ
        ಹುಟ್ಟಿಕೊಂಡಿದ್ದಾನೆ.
        ಎಲ್ಲಿ? ಎಲ್ಲಿ? ಅಲ್ಲಿ ಅಲ್ಲಿ
        ಗಲ್ಲಿ ಗಲ್ಲಿ ನೋಡಲ್ಲಿ!

ರಾವಣ, ಕಂಸ, ಜರಾಸಂದ
ಕುಡಿದಿರ್ಪರು ಈ ಪೇಯ
ಕೃತಿಯೆಲ್ಲವೂ ಹೇಯ.

        ಅಪ್ಪ ಅಮ್ಮ ಅಕ್ಕ ತಂಗಿಯರಿಲ್ಲ
        ನ್ಯಾಯ ಅನ್ಯಾಯ ಇವರಲ್ಲೇ ಇಕ್ಯ
        ತತ್ವ ಆದರ್ಶಗಳಿಲ್ಲ.
ಹಾದಿ ಹಾದಿಯಲೂ ಜನಿಪರು
ಕೊಂದರೂ ಹುಟ್ಟಿ ಬರುವರು
ರಕ್ತ ಬೀಜಾಸುರರಂತೆ
ಮತ್ತೊಬ್ಬರು,
ನುಂಗಿ ನೀರ್ ಕುಡಿವರು.
        ವಾಸ್ತವದ ಬೇರನು
        ಕೆದಕಿದರೆ ಬರಿಕಣ್ಣೀರು.
        ಇದಕೆಲ್ಲಿಯ ಕೊನೆ
        ದಿನ ದಿನವೂ ಹಿಗ್ಗುತಿದೆ
        ಪೂತನಿಯ ವಿಷದ ಮೊಲೆ!

Friday, November 28, 2014

ನಿನ್ನ ಸಂಗ ನನಗೆ ಮೃತ್ಯು!

ಕ್ಯಾಮರ ಕೊಂಡ ನಂತರದ ಉತ್ತಮ ಚಿತ್ರ ಇದಲ್ಲ! ಆದರೂ  ನಿಮಗಾಗಿ ಈ ಕೀಟದ ಚಿತ್ರ.       Mate ಆದ ನಂತರ ಹೆಣ್ಣು ಗಂಡನ್ನು ಕೊಲ್ಲುವ ದೃಶ್ಯ!




FINAL TOUCH

Monday, October 27, 2014

ಕ್ಯಾಮರ ಕಾವ್ಯ

ºÉƸÀ aUÀÄj£À vÀAqÀPÉÌ ºÉƸÀ ¸ÉÃ¥ÀðqÉ ¤PÁ£ï r 7000 r.J¸ï.J¯ï.Dgï. EzÀgÀ°è QèQ̹zÀÀ £À£Àß ªÀÄvÀÄÛ PÉ®ªÀÅ QÃlUÀ¼À gÀhÄ®Pï. ಇಷ್ಟವಾದರೆ...ತಿಳಿಸಿ.








Friday, October 10, 2014

ಮರೆತು ಹೋದ ಗೆಳಯನಿಗೆ.

ಮರೆತು ಹೋದ ಗೆಳಯನಿಗೆ...
ಹಲವು ದಿನಗಳಿಂದ ಕಾಡಿದ ವಿಷಯ ಒಂದರ ಕುರಿತು ನನಗನಿಸಿದ್ದು. ನಿಮಗೂ ಹಿಗನಿಸಿದ್ದರೆ ತಿಳಿಸಿ...

ಕೈಯಲ್ಲೊಂದು ಕರಟ ಹಿಡಿದು
ನೆಲದೊಡಲ ಬಗೆದು
ಮತ್ತೆ ಮತ್ತೆ ಜಿಗಿದು
ಸಿಪ್ಪೆ ದೋಣಿ ಮಾಡಿಕೊಂಡು
ತೇಲಿ ಬಿಟ್ಟ ದೋಣಿ ನೆನಪ ಮರೆತು
ಗಣಕದೊಂದಿಗಾಡುತಿರುವೆ
ಉಸಿರು ಅದುವೆ ಎಲ್ಲಾ ನಿನಗೆ...
ನೆನಪನೆಲ್ಲಾ ದೋಣಿಯಲ್ಲಿ..
ಒಂದು ಬಿಡದೇ ತೇಲಿ ಬಿಟ್ಟೆ.
ಗೆಳೆಯನೆಂದು ಬರುವೆ
ನಿನ್ನ ನೆನದು ಕಾಯುತಿರುವೆ


ತೆೇಲಿ ಬಿಟ್ಟ ದೋಣಿ
ಎಂದೊ ಮಗುಚಿದೆ.
ಎಷ್ಟು ದಿನವೊ ನಿನ್ನ ಆಟ
ಎಂದು ಮುಗಿಯುವುದೊ?
ಎಲ್ಲೆಲ್ಲೊ ತೇಲಿ ಹೋದೆ
ಮತ್ತೆ ಬಾರ ದೂರಿಗೆ.
ಬಿಟ್ಟ ದೋಣಿ ಕಾಯುತಿಹುದು
ಒಮ್ಮೆ ಬಾರೊ ತೇರಿಗೆ

ಶ್ರೀಧರ. ಎಸ್.

Tuesday, July 1, 2014

ಕಡಬು


    ಕಡುಬೆಂದರೆ ನನಗೆ ನೆನಪಾಗುವುದು ನನ್ನ ದೊಡ್ಡಮ್ಮ ಮತ್ತು ಅಮ್ಮಮ್ಮ. ಅವರ ಕೈರುಚಿಯ ಕಡುಬು ತಿಂದವರು ಮರೆಯಲಾರರು. ಇದಕ್ಕೆ ಅವರು ತಯಾರಿಸುತ್ತಿದ್ದ ಬೆಳ್ಳುಳ್ಳಿ ಹಾಕಿದ ಚಟ್ನಿ ಎಂತಹ ಅರಸಿಕರ ಬಾಯಿಯಲ್ಲಿ ನೀರೂರುವಂತೆ ಮಾಡುತ್ತಿತ್ತು. ಅವರು ತಯಾರಿಸುತ್ತಿದ್ದ ಕಡುಬಿನ ರುಚಿ ಇನ್ನೂ ನನ್ನ ನಾಲಗೆಯ ಮೇಲಿದೆ! ಮಳೆಗಾಲದಲ್ಲಿ ಈ ತಿಂಡಿ ತಯಾರಿಸಿ ಬಾಯಿ ಚಪ್ಪರಿಸಿ.



    ನಮ್ಮೂರ ತಿಂಡಿಗಳಲ್ಲಿ ಇದು ಅತ್ಯಂತ ಪ್ರಮುಖವಾದುದು. ಜಂಕ್ ಆಹಾರಕ್ಕಿಂತ ಎಷ್ಟೋ ಉತ್ತಮವಾದುದು. ಪೋಷಕಾಂಶ ಒದಗಿಸುವ ಜೊತೆ-ಜೊತೆಗೆ ಅನೇಕ ಕಾಯಿಲೆ ಬರದಂತೆ ಇವು ತಡೆಯುತ್ತವೆ(ಗೇರು ಎಲೆಯಿಂದ ತಯಾರಿಸಿದ್ದು). ಈ ಕಡಬು ಗೇರು ಎಲೆಯಿಂದ ತಯಾರಿಸಲಾಗಿದೆ. ಇದರಿಂದ ತಯಾರಿಸಿದರೆ ಕಡಬು ಅತ್ಯಂತ ಪರಿಮಳಯುಕ್ತವಾಗಿರುತ್ತದೆ. ಒಮ್ಮೆ ತಿಂದವರು ಮತ್ತೊಮ್ಮೆ ತಿನ್ನದೇ ಬಿಡರು!.

Friday, June 6, 2014

ಹೊಸ ಸಾಧ್ಯತೆಗೆ ಬದುಕು ಮಗ್ಗಲು ಬದಲಿಸಿದೆ



ಹೊಸ ಮನ್ವಂತರಕೆ, ಹೊಸ ಹೊಳಹಿಗೆ, ಹೊಸ ಜಾಗಕ್ಕೆ ಮಗ್ಗಲು ಬದಲಿಸಿದೆ ಬದುಕು. ನಿನ್ನೆಯ ಮೈಲಿಗಲ್ಲಿಗೂ ಇಂದಿನದಕೂ ಸ್ಪಷ್ಟವಾಗಿದೆ ಅಂತರ. ಮುಂದಿನದೂ ಕಾಣಿಸಿದೆ ಮೆಲ್ಲಗೆ. ಅನಂತ ಸಾಧ್ಯತೆಯ ಕಡೆಗೆ ಅನಂತಶಕ್ತಿ ಒಗ್ಗೂಡಿಸಿ ಹೊರಟಿದೆ. ಈ ನಡುವೆ ಸ್ವಲ್ಪ ಮುನಿಸು, ಇನಿತು ಬೇಸರ, ಕೊಂಚ ದುಃಖವೂ ಬೆರತಿದೆ.
ಬದುಕ ಪಯಣದ ಒಂದಿನದಲಿ ಬೆಸ್ತರೀರ್ವರು ದಿನವ ಮುಗಿಸಿ ಮನೆಕಡೆ ಹೊರಟಿಹರು. ಈ ದೃಶ್ಯಾವಳಿಗೆ ಕಣ್ಣಾಗಿದ್ದು ನಿಕಾನ್ ಡಿ 7000. ನಮ್ಮೂರಿನ ಪಂಚಗಂಗಾವಳಿಯ, ಐದು ನದಿಗಳು ಸೇರುವ ತಾಣದಲಿ ಕಂಡ ಸಮ್ಮೋಹಕ ದೃಶ್ಯಾವಳಿ. ಕತೆ ಹೇಳುವ ಚಿತ್ರಗಳು ನಿಮಗಾಗಿ ನೋಡಿ ಪ್ರತಿಕ್ರಿಯಿಸಿ.

ನೇರಳೆ ಬಣ್ಣದಲ್ಲಿ ಸಂಜೆ. 


ಪಯಣ, ಈ ನಡುವೆ ಗೂಟದ ಮೇಲಿರುವ ಹಕ್ಕಿಯನ್ನು ಗಮನಿಸಿ. 


Returning home.


Wednesday, March 12, 2014

ವಿಸ್ಮಯಗಳ ತಾಣ ಮನೋಹರ ಮಣಿಕರಣ


ಹಿಮಾಲಯ ಪರ್ವತ ಹಲವು ಅಚ್ಚರಿಗಳ ತವರೂರು ಅಂತಹ ಅಚ್ಚರಿಯನ್ನು ತವಕದಿಂದ ಎದುರುಗೊಳ್ಳಲು ನಾವು ತಯಾರಾದೆವು. ಕುಲ್ಲು ಜಿಲ್ಲೆಯ ಮಲಾನ ಎಂಬ ಮಾಯಾನಗರಿಯ ಐದು ಗಂಟೆಯ ಟ್ರಕ್ಕಿಂಗ್ ಮುಗಿಸಿ ಮತ್ತೆ ಸಂಜೆ ಆರು ಗಂಟೆಗೆ ನಾವು ಕಾರಿನ ಬಳಿಗೆ ಬಂದಿದ್ದೆವು .ಕೈ ಕಾಲುಗಳೆಲ್ಲ ಬಳಲಿದ್ದರೂ ಉತ್ಸಾಹ ಪುಟಿಯುತಿತ್ತು. ಕಾರಿನ ಡ್ರೈವರ್ ಮತ್ತು ಗೆಳೆಯ ನಾಗರಾಜ್ ಮುಂದಿನ ತಾಣಗಳ ರೋಚಕ ಕತೆಯನ್ನು ಹೇಳಲಾರಂಬಿಸಿದರು. ಆ ವರ್ಣನೆಗೆ ಮನತೂಗಿ ಕನಸು ಕಾಣಲಾರಂಭಿಸಿದೆ. ಸುಮಾರು ಸಂಜೆ ಗತ್ತಲಿನಲ್ಲಿ ಬಿಳಿನೊರೆಯಿಂದ ಬಳಕುವ ಬಿಯಾಸ್ ನದಿ ತಟದ ಪ್ರಶಾಂತ ಮಣಿಕರಣಕ್ಕೆ 6.45 ಕ್ಕೆ ತಲುಪಿದೆವು. 
ಊರಿಗೂರು ಸೂಚಿಪರ್ಣ ಮರಗಳಿಂದ ಹಿಮಚ್ಛಾದಿತ ಬೆಟ್ಟಗಳಿಂದ ಸುತ್ತುವರಿದು ನಯನ ಮನೋಹರವಾಗಿತ್ತು. ಸೂರ್ಯ ರಜೆ ಮೇಲಿದ್ದ ಮತ್ತೆ ಮುಂದುವರಿಯಲಾರದಂತೆ ಬೆಟ್ಟಗಳು ಸುತ್ತುವರಿದಿದ್ದವು. 
ಬಿಯಾಸ್ ನದಿ ತಟದ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದೆವು. ಪಾರ್ವತಿ ಕಣಿವೆಯ ಮಗುಲಿನ ಸ್ವಲ್ಪವೇ ಸ್ವಲ್ಪ ಸಮತಟ್ಟಾದ ಪ್ರಕೃತಿ ವಿಸ್ಮಯದ ವಿಶಿಷ್ಟ ತಾಣ ಮಣಿಕರಣ. 
ವಿಸ್ಮಯದ ಬುಗ್ಗೆಗಳು : ಮಣಿಕರಣದ ವಿಸ್ಮಯ 2 ಬಿಸಿ ನೀರಿನ ಬುಗ್ಗೆಗಳು, ಯಾರೋ ಅಗಾದ ಪ್ರಮಾಣದ ಕಟ್ಟಿಗೆಯಿಂದ ನೀರನ್ನು ಕಾಯಿಸುತ್ತಿರುವಂತೆ ನೀರಿನ ಹೊಂಡಗಳಲ್ಲಿ ಹೊಗೆಯೇಳುತ್ತಿತ್ತು. ಸುಮಾರು 0  ಹೊರಗಿನ ಉಷ್ಣಾಂಶವಿರುವಗಲೂ ನೀರು ಕುದಿಯುತ್ತಿರುತ್ತದೆ! ಇಂತಹ ಎರಡು ಕೆರೆಗಳಲ್ಲಿ ಅಲ್ಲಿನ ಜನರು ಬಟ್ಟೆಯಲ್ಲಿ ಕಡಲೆ, ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ಇಳಿ ಬಿಟ್ಟು ಕಾಯುತಿದ್ದರು. ಇವೆಲ್ಲಾ ವಸ್ತುಗಳು ಎರಡು ನಿಮಿಷದಲ್ಲಿ ಹದವಾಗಿ ಬೆಂದಿತ್ತು! ಆಶ್ಚರ್ಯವೋ ಆಶ್ಚರ್ಯ.
ರೋಗ ನಿವಾರಿಸುವ ವಿಶೇಷವಾದ ಶಕ್ತಿ ಈ ನೀರಿಗಿದೆ ಎಂದು ನಂಬುತ್ತಾರೆ ಅಲ್ಲದೆ ಇಲ್ಲಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ವಿಶಿಷ್ಟ ಗುಹೆಗಳಿವೆ!
ಅಡುಗೆ ಮಾಡಲ್ಲ!: ಈ ಊರಿನ ಜನರ್ಯಾರು ಮನೆಯಲ್ಲಿ ಬೆಂಕಿ ಹೊತ್ತಿಸಲ್ಲ! ಕಾರಣವೇನೆಂದರೆ ಈ ಬಿಸಿ ನೀರಿನ ಬುಗ್ಗೆ ಬಳಸಿ ತಮ್ಮ ಅಡುಗೆ ತಯಾರಿಸಿಕೊಳ್ಳುತ್ತಾರೆ!.ಇಲ್ಲಿನ ಗುರುದ್ವಾರದಲ್ಲೂ ಊಟದ ವ್ಯವಸ್ಥೆಗೆ ಈ ಬಿಸಿ ನೀರಿನ ಬುಗ್ಗೆಯನ್ನೇ ಬಳಸುತ್ತಾರೆ!. 
ಇಲ್ಲಿನ ಗುರುದ್ವಾರ ಮತ್ತು ದೇವಿ ಮಂದಿರಗಳಲ್ಲಿ ಪ್ರಸಾದ ಬೇಯಿಸಲು ಇಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನೇ ಬಳಸುತ್ತಾರೆ! ಭಕ್ತರಿಗೆ ಉಣಬಡಿಸುವ 'ದಾಲ್', ಅನ್ನವನ್ನು ಈ ನೀರಿನಲ್ಲೆ ಬೇಯಿಸಿ ತಯಾರಿಸಲಾಗುತ್ತದೆ.
ಬಿಸಿ ನೀರಿನ ಸ್ಪಾ:- 
ಈ ಎರಡು ಬಿಸಿ ಬೀರಿನ ಬುಗ್ಗೆಯ ನೀರನ್ನು 80 ಅಡಿ ಉದ್ದ 20 ಅಡಿ ಅಗಲದ ಕೆರೆಗೆ ತಣ್ಣೀರಿನೊಂದಿಗೆ ಮಿಶ್ರಮಾಡಿ ಹಾಯಿಸಲಾಗುತ್ತದೆ. 1600 ಚದರ ಅಡಿ ವಿಸ್ತೀರ್ಣದ ಸುಮಾರು 7 ಅಡಿ ಆಳವಿರುವ ಕೊಳಕ್ಕೆ ಸ್ವಲ್ಪವೇ ಬಿಸಿ ನೀರನ್ನು ಹಾಯಿಸಿ ಭಕ್ತಾದಿಗಳು ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಷ್ಟು ದೊಡ್ಡ ಕೊಳದ ನೀರು ಕೈ ಕಾಲು ಹಾಕಲಾರದಷ್ಟು ಬಿಸಿ ಇರುತ್ತದೆ!. ವಾತಾವರಣದ ಉಷ್ಣತೆ 10 ಗಿಂತ ಕಡಿಮೆ ಬಂದರೂ ಈ ನೀರಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಷ್ಟು ಬಿಸಿ, ಇಂತಹ ನೀರಲ್ಲಿ ಸಂಜೆ ಒಂದು ಗಂಟೆ ಮನನಸೋ ಇಚ್ಛೆ ಸ್ನಾನ ಮಾಡಿ ಟ್ರಕ್ಕಿಂಗ್ ಮಾಡಿದ ಆಯಾಸವನ್ನು ಪರಿಹರಿಸಿಕೊಂಡೆವು. ಮಾಂಸಖಂಡಗಳಿಗೆ ಅದ್ಭುತವಾದ ಮಸಾಜ್ ಹೊಂದಿ ರಿಲ್ಯಾಕ್ಸ್ ಆದೆವು. 
ಇಲ್ಲಿಂದ ನಾವು 'ಆವಿ ಸ್ನಾನ' ಮಾಡಿಕೊಳ್ಳಲು ಇಲ್ಲಿನ ಗುಹೆಗಳಿಗೆ ತೆರಳಿದೆವು. ಇವೆಲ್ಲವು ಭೂಮಿ ಆಳದಿಂದ ಬರುವ ಬಿಸಿ ನೀರು ಇವುಗಳ ಸುತ್ತ ಹರಿದು ಬಿಸಿಯಾಗುವ ಗುಹೆಗಳು, ಸ್ವಾಭಾವಿಕವಾಗಿ ಬಿಸಿಯಾಗುವ ಇಲ್ಲಿ ಉತ್ತಮವಾದ ಮಸಾಜ್ ಮಾಡಿಕೊಂಡು 'ಆವಿ ಸ್ನಾನ' ಮಾಡಿದೆವು. ಮೈ ಮನಸ್ಸು ತಣಿದ ನಂತರ ನಮ್ಮ ಹೋಟೆಲ್ಗೆ ತೆರಳಿದೆವು. 
ಇತಿಹಾಸ:- ಮಣಿಕರಣ ಇತಿಹಾಸ ಬಹಳ ರೋಚಕವಾಗಿದೆ, ಹಿಂದುಗಳ ನಂಬಿಕೆಯಂತೆ ಒಮ್ಮೆ ಶಿವ ಪಾರ್ವತಿ ಈ ಪ್ರದೇಶದಲ್ಲಿ ಸುತ್ತಾಡುತ್ತಾ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ 1100 ವರ್ಷ ನೆಲೆಸಿದರು. ಒಮ್ಮೆ ಪಾರ್ವತಿ ಒಂದು ಕೊಳದ ಬಳಿ ಬರುವಾಗ ಅವಳ ಕಿವಿಯ ಮಣಿ ನೀರಿನಲ್ಲಿ ಬಿದ್ದು ಕಾಣೆಯಾಯಿತು. ಅದಕ್ಕಾಗಿ ಆಕೆ ಪರಿಪರಿಯಾಗಿ ಹುಡುಕಿದಳು. ಅವಳ ಕಿವಿ ಮಣಿಯನ್ನು ಹಿಂದೆ ಪಡೆಯಲು ಶಿವ ತಾಂಡವ ನೃತ್ಯ ಮಾಡಿದಾಗ ಮಣಿ ನುಂಗಿದ ಶೇಷನಾಗ ಅದನ್ನು ಮರಳಿಸಿದ. ಇಲ್ಲಿನ ಬುಗ್ಗೆಗಳಲ್ಲಿ 1905ರ ವರೆಗೂ 'ಚಿನ್ನ' ಸಿಗುತ್ತಿತ್ತು! ಎನ್ನುವುದು ಒಂದು ಸ್ಫೋಟಕ ಮಾಹಿತಿ. ಈ ವಿಷಯವನ್ನು ವಿಜ್ಞಾನಿಗಳೇ ವಿವರಿಸಬೇಕು. ಈ ಎಲ್ಲಾ ವಿಷಯಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕಾಗಿದೆ. 
ಸಿಖ್ ನಂಬಿಕೆಗಳ ಪ್ರಕಾರ ಸಿಖ್ಗುರು ಗುರುನಾನಕ್ 1574 ರಲ್ಲಿ ಇಲ್ಲಿಗೆ ಆಗಮಿಸಿದ ಸಂದರ್ಭ ಒಬ್ಬ ಶಿಷ್ಯನಿಗೆ ಬಹಳ ಹಸಿವೆಯುಂಟಾಗಿ, ಚಪಾತಿಯ ಹಿಟ್ಟಿಗಾಗಿ ಇಲ್ಲಿ ಹಲವರನ್ನು ಬೇಡಿ ತಂದ ಹಿಟ್ಟಿನಲ್ಲಿ ಚಪಾತಿ ಮಾಡಿದ. ಆದರೆ ಬೇಯಿಸಲು ಯಾವುದೇ ಪಾತ್ರೆಯಿಲ್ಲದೇ, ಇಲ್ಲಿನ ಕೆರೆಗಳಲ್ಲಿ ಮುಳಿಗಿಸಿದ ನಂತರ ದೇವರ ಪ್ರಾರ್ಥನೆ ಮಾಡಿದಾಗ ಆ ಕೆರೆಗಳಲ್ಲಿ ಬಿಸಿ ನೀರು ಬಂದು ಚಪಾತಿ ಬೆಂದು ಹೋಯಿತು ಎಂಬುದು ಸ್ಥಳ ಪುರಾಣವಿದೆ. 
ಇಲ್ಲಿ ಸುಂದರವಾದ ರಾಮ ಮಂದಿರ, ಶಿವ ಮಂದಿರ, ದೇವಿ ಮಂದಿರ ಮತ್ತು ಗುರುದ್ವಾರವಿದೆ. ದೇವಿ ಮಂದಿರದ ಸೂಕ್ಷ್ಮ ಕೆತ್ತನೆ ಬಹಳ ಸುಂದರವಾಗಿದೆ. ಇಲ್ಲಿನ ದೇವಾಲಯಗಳನ್ನು ಬೆರಗುಗಣ್ಣಿನಿಂದ ನೋಡಿದೆವು. 
ಹತ್ತಿರದ ಸ್ಥಳಗಳು:- ಇಲ್ಲಿ ಸುತ್ತಮುತ್ತ ಹಲವಾರು ಸುಂದರ ಸ್ಥಳಗಳಿವೆ ಬಿಜಲಿ, ಮಹಾದೇವ, ಮಲಾನ, ಜಾನಾಪಾಲ್ಸ, ಮನಾಲಿ, ಅಜರ್ುನ್ ಗುಫಾ, ಹಿಂಡಿಬಾ ದೇವಸ್ಥಾನ ಮುಂತಾದ ಸುಂದರ ಸ್ಥಳಗಳಿವೆ. ಬಿಯಾಸ್ ನದಿಯಲ್ಲಿ ರಾಫ್ಟಿಂಗ್ ಮಾಡಲು ಮರೆಯದಿರಿ. ಅದು ನಿಮಗೆ ವಿಶಿಷ್ಟಾನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. 
ವಿಶಿಷ್ಟ ಹಣ್ಣುಗಳು:- ಹಿಮಾಲಯದಲ್ಲಿ ಹಲವು ವಿಶಿಷ್ಟ ಜಾತಿಯ ಹಣ್ಣುಗಳಿವೆ, ಎಲ್ಲಾ  ಜಾತಿಯ ಹಣ್ಣುಗಳ ರುಚಿ ನೋಡಿದೆವು. ಅತಿ ಮುಖ್ಯವಾದವು ಚೆರಿ, ಎಗ್ರೋಟ್, ಮೆದುಳಿನಾಕಾರದ ವಾಲ್ನಟ್ ಧಾರಾಳವಾಗಿ ಸಿಗುತ್ತದೆ. ಇನ್ನೂ ಹೆಸರು ಕೇಳದ ಕಂಡರಿಯದ ಹಲವು ಹಣ್ಣುಗಳ ರುಚಿ ನೋಡಿದೆವು, ವಾಲ್ನಟ್ ಹಣ್ಣು ಮೆದುಳಿಗೆ ಬಹಳ ಒಳ್ಳೆಯದೆಂದು ಯಾರೋ ಹೇಳಿದರು. ನನ್ನ ಸ್ನೇಹಿತ ಸುಮಾರು 2 ಕೆ.ಜಿಯಷ್ಟು ಹಣ್ಣು ಕೊಂಡು ಬೆಳಿಗ್ಗೆ ಸಂಜೆ ಅದನ್ನೇ ತಿಂದ.
ಎಲ್ಲಿಂದ ಎಸ್ಟೆಷ್ಟು :- ಇಲ್ಲಿಗೆ ಬರಬೇಕಾದರೆ ಬುಂತರ್ ವಿಮಾನ ನಿಲ್ದಾಣದಿಂದ ಯಾ ದೆಹಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿ ಅಲ್ಲಿಂದ ಬುಂತರ್ ಅಲ್ಲಿಂದ ಮಣಿಕರಣ್ ತಲುಪಬಹುದು. ವಿಮಾನದಲ್ಲಿ ಹೋಗಿಬರುವ ಖಚರ್ು ಸುಮಾರು 14000 ಸಾವಿರ. ರೈಲಿನಲ್ಲಾದರೆ 9000 ಸಾವಿರದಲ್ಲಿ ನೋಡಿ ಬರಬಹುದು. 











ಶಾಪಿಂಗ್:- ಇಲ್ಲಿ ಶಾಪಿಂಗ್ ಮಾಡಲು ಧಾರಾಳ ಅವಕಾಶವಿದೆ ಕುಲ್ಲು ಶಾಲುಗಳು ಬಹಳ ಪ್ರಸಿದ್ಧಿ ಪಡೆದವುಗಳು ಇಲ್ಲಿ ಸಾಕಷ್ಟು ಶಾಲು, ಸೀರೆ, ಚೂಡಿದಾರ್  ಖರೀದಿಸಿದೆವು. ಹುಡುಗರು ತೊಡುವ ಯಾವುದೇ ವಸ್ತ್ರವಿಲ್ಲದೆ ಇದ್ದುದ್ದು ನನಗೆ ಮತ್ತು ಗೆಳೆಯ ನಾಗರಾಜ್ಗೆ ಬಹಳ ಬೇಸರವನ್ಮ್ನಂಟುಮಾಡಿತು. ನಮ್ಮ ಮುಂದಿನ ತಾಣವಾದ ಮನಾಲಿಗೆ ತೆರಳಲನುವಾದೆವು. 
ನಿರ್ಮಲವಾದ ಪಾರ್ವತಿ ತಾಯಿಯ ನಿಶ್ಚಿಂತ ಮಡಿಲಲ್ಲಿ ಮಣಿಕರಣವೆಂಬ ಕಂದ ಮಲಗಿದ್ದ,

ವಿಜ್ಞಾನ ಮೇಳ


   ಹೊಸತೇನ್ನೋ ಸಾಧಿಸಲು ಹಳೆಯ ಪ್ರತಿಮೆಯನ್ನು ದಾಟಿ ನಡೆಯಬೇಕು. ಅದರ ಅರಿವಿರಬೇಕೇ ಹೊರತು ಅದರಲ್ಲೇ ತೊಳಲಾಡಬಾರದು. ಹೇಗೆ ಚಿಟ್ಟೆಯೊಂದು ಸಣ್ಣ ಕಂಬಳಿ ಹುಳವೊಂದು ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು ಹೊಸ ಬಣ್ಣದ ಚಿಟ್ಟೆಯಾಗಿ ರೂಪುಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕ. ಅದು ತನ್ನತನವ ಕಳೆದುಕೊಳ್ಳದೆ ಹೊಸತಾಗುವುದು ಸಾಧ್ಯವಿಲ್ಲ. ಅಲ್ಲವೇ?  ನನ್ನದೊಂದು ಕವನ ಈ ವಿಷಯವಾಗಿ.

ಅಲಂಕಾರಗೊಂಡ ಶಾಲೆ. 




ಕನಸೆಂಬ ಚಿಟ್ಟೆ
ಕನಸೆಂಬ ಚಿಟ್ಟೆ
ಹಾರುವುದದು ಎಂದು
ಕಳಚಿಕೊಂಡರೆ ಅದು
ತನ್ನ ಹಳೆಯ ಬಂದು
ಹಾರುವುದದು ಅಂದು.


Add caption
ತನ್ನ ಗೂಡೊಳಗೆ ಉಳಿಯದೆ ನಿರಂತರ ಪ್ರಯತ್ನದಿಂದ ಚಿಟ್ಟೆಯಾಗಿ ಹೊರ ಹೊಮ್ಮವುದು.  ವಿಧ್ಯಾಥರ್ಿಗಳು ತಮ್ಮ ಜೀವನದಲ್ಲಿ ಎದುರಾದ ತೊಡರುಗಳನ್ನು ಲೆಕ್ಕಿಸದೇ, ಧ್ಯಾನಸ್ಥರಂತೆ ಕೂತು ನಿಷ್ಠೆಯಿಂದ ಕಲಿತರೆ ಯಶಸ್ಸು ನಿಮ್ಮದೇ.
ಸೌರವ್ಯೂಹದ ಮಾದರಿ. 

ಉದ್ಘಾಟನೆ ಮಾಡುತ್ತಿರುವ ಗಣೇಶ್ ಶೆಟ್ಟಿಗಾರ್
ನಿಮ್ಮ ಪರಿಸರದ ಯಾವುದೇ ತೊಂದರೆಗಳನ್ನು ಉಪಾಯವಾಗಿ ನಿಶ್ಚಿಂತೆಯಿಂದ ನಿಭಾಯಿಸಬೇಕು. ಕೆಲವನ್ನು ನಮ್ಮಿಂದ ಈ ಸನ್ನಿವೇಶದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಅದರ ಕುರಿತು ಯೋಚಿಸದೇ ಪುಸ್ತಕದೆಡೆಗೆ ಗಮನ ಕೊಡಿ,  ಗೆಲುವಿಗೆ ನೀವು ಅರ್ಹರು.
ಈ ದಿಶೆಯಲ್ಲಿ ನಮ್ಮ ಪ್ರಯತ್ನ ವಿಜ್ಞಾನ ಮೇಳ.... ಅದರ ಕೆಲವು ಝಲಕ್ ನಿಮಗಾಗಿ...

ಸಬ್ ಮೆರಿನ್

ಗಾಳಿಯಿಂದ ವಿದ್ಯುತ್

ಮ್ಯಾಜಿಕ್ ಕಾರಂಜಿ


ಬಸರ್ ಅಲಾರಾಮ್

ಜ್ವಾಲಾಮುಖಿ. 

ಗ್ರಹಣದ ಮಾದರಿ

ಆಯತದಿಂದ ತ್ರಿಭುಜ ಟಿ ಜೋಡಣೆ

ಸಮುದ್ರ ಜೀವಿಗಳು

ಸಮುದ್ರ ಜೀವಿಗಳು

ತಿರಿ

ಸ್ವಾಗತ ಕಮಾನು

ವಿಜ್ಞಾನ ಮೇಳ ವೀಕ್ಷಿಸುತ್ತಿರುವ ಪತ್ರಕರ್ತ ಜಯಶೇಖರ. 

Thursday, February 13, 2014

ಹೀಗೊಂದು ಪ್ರೇಮ ಪತ್ರ..

ಇಂದು ಪ್ರೇಮಗಳ ದಿನ ಅದರ ಸಲುವಾಗೊಂದು ಪ್ರೇಮ ಪತ್ರ. ಇದು ಪ್ರೇಮ ನಿವೇದನೆಯಲ್ಲ, ವಿರಹದ ನಿವೇದನೆ... ನಿಮಗಾಗಿ. ನಿಮ್ಮ ನೆನಪು ಮರಳಿದರೆ ನಾನು ಜವಾಬ್ದಾರನಲ್ಲ...

ನೆನಕೆಗಳ ಸುಳಿಯಲ್ಲಿ..
ಪ್ರಿಯ ಮಿತ್ರಾ, 








ಹೊಳೆಯ ತಟದಿಂದ ನಿನಗೊಂದು ಪಾರಿಜಾತದ ಗಂಧದ ನೆನಕೆ ಸಲ್ಲಿಸುತ್ತಿರುವೆ ನದಿಯ ಕಲರವ ಪಕ್ಷಿಗಾನವೆಲ್ಲವೂ ನಿನ್ನನ್ನೇ ಜಪಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ !. ನನ್ನ ಹುಚ್ಚುತನವು ಆಗಿರಲಿಕ್ಕು ಏನೋ ತಿಳಿಯೇ?. ಈ ಬೋರ್ಗರೆತ ನಿನ್ನ ನೆನಪನ್ನು ಅನುರಣಿಸುತ್ತಿದೆ. ಹೊಳೆಯ ತಟದಲ್ಲಿದೆ ನನ್ನೂರು. ಪ್ರಕೃತಿಯೆ ಹೊದ್ದು ಮಲಗುವ ಮಲನಾಡಿಗರು ನಾವು. ಸಾಮಾನ್ಯವಾಗಿ ಭಾವುಕರು. ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆ ನಿನ್ನನೂ ಪ್ರೀತಿಸಿದೆ. ನನ್ನ ಜೀವನದ ಭಾವುಕ ಮತ್ತು ಸ್ಮರಣೀಯ ಕ್ಷಣಗಳವು. ಎಷ್ಟು ಬೇಗ ಜಾರಿದವು. ಅನಂತ ಕಾಲವನ್ನು ಹಿಡಿದಿಡುವಂತಿದ್ದರೆ. ಅಂದು ನೀ ನದಿ ತಟಕ್ಕೆ ನಿನ್ನ ಮೋಟಾರ್ ಬೈಕ್ನಲ್ಲಿ ಕರೆದೊಯ್ದ ದಿನಕ್ಕೆ ಕಾಲವನ್ನು ನಿಲ್ಲಿಸುತ್ತಿದ್ದೆ!
ನನ್ನ ನಿನ್ನ ನಡುವಿದ್ದದ್ದೂ ಕೇವಲ ದೈಹಿಕ ಆಕರ್ಷಣೆ ಮಾತ್ರವಲ್ಲ. ನಿನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಬುದ್ದಿವಂತಿಕೆಯೂ. ನಾನು ಮಾತ್ರವಲ್ಲ ಆಮೇಲೆ ತಿಳಿಯಿತು ನನ್ನಂಥವರು ಕಾಲೇಜಿನಲ್ಲಿ ಸಾಕಷ್ಟಿದ್ದರೆಂದು. ಆದರೂ ಆ ನಿನ್ನ ಚೂಪು ಗಲ್ಲ ನನ್ನನು ಇನ್ನಿಲ್ಲದಂತೆ ಆಕಷರ್ಿಸಿತು. ನಿನ್ನ ವಿಶೇಷ ಕ್ರಾಪ್ ಕೂದಲು ಸೆಳೆದ್ದದುಂಟು. ನಿನ್ನ ಗುಲಾಬ್ ಜಾಮನಂತಹ ಮಾತು. ನಿನ್ನ ಮಾತು ಕೇಳುತ್ತಿದ್ದರೆ ಗುಲಾಂ ಅಲಿ ಗಜಲ್ ಕೇಳಿದಂತೆ ನಿಧಾನ ಅತಿ ಮಧುರ. ನಡು ನಡುವೆ ತೇಲಿ ಬರುವ ಕನ್ನಡ ಪದ್ಯಗಳು, ಹಿಂದಿ ಗಜಲ್ಗಳು ನಿನ್ನ ಮಾತಿನಲ್ಲಿ ಮೀಯುತ್ತಿದ್ದವು. ಎಷ್ಟು ಜನರ ಕೊಲೆಮಾಡಿದೆಯೊ ಮಾತಿನಲ್ಲೆ ನಾ ಕಾಣೆ. ಅಂತಹ ಮಧುರ ದಿಗಳವು. ಕೆಲವೊಮ್ಮೆ ಸ್ಪೂತರ್ಿ ಕೆಲವೊಮ್ಮೆ ಅಯ್ಯೋ ಎನಿಸಿಬಿಡುವವು. ಇರಲಿ.
***

 ನನ್ನಲ್ಲಿ ನೀ ಹೇಳಿದ ಪ್ರತಿ ಮಾತು ಇಲ್ಲಿನ ನದಿಗಳಿಗೆ ತಿಳಿದಿರುವಂತಿದೆ. ನೀ ಇಚ್ಚಿಸಿದ್ದು ಧ್ಯಾನಿಸಿದ್ದು ನದಿಯನ್ನಲ್ಲವೇ ನೀ ಹೇಳಿದ ಮಾತಿನ್ನು ನೆನಪಿದೆ ಮನುಷ್ಯ ನದಿಯಂತಾಗಬೇಕು. ಸದಾ ಚಿಲಮೆಯಂತೆ ಹರಿಯಬೇಕು. ಗೆಳೆಯಾ ನೆನಪಿರಲಿ ನದಿಗಳೂ ಬತ್ತುತ್ತದೆ! ಈ ಮಲನಾಡಲ್ಲೂ ಅಲ್ಲಲ್ಲಿ ನೀರಿರುತ್ತವಷ್ಟೇ, ನಾ ನಿನಗೆ ಆ ವಿಷಯದಲ್ಲಿ ಎದುರಾಡಿದ್ದೆ. ನದಿಗಳೇನೋ ಜೀವನಾಡಿಗಳು ಎಲ್ಲೊ ಮಳೆ ಬಂದರೆ ಇನ್ನೆಲ್ಲೋ ಪ್ರವಾಹ ಉಕ್ಕುಸುವವು ಹಾಗಾಗಿ ಮನುಷ್ಯ ನದಿಯಂತಾದರೆ ಒಳಿತಲ್ಲವೆಂದಿದ್ದೆ. ನನಗಾಗ ದ್ವಂದ್ವವೂ ಕಾಡಿತ್ತು. ಇಂದಿನಂತೆ ಸ್ಪಷ್ಟತೆ ಇರಲಿಲ್ಲ. ನೀನಚಿತೂ ನದಿಯಂತಾದೆ ನನ್ನ ಪಾಲಿಗೆ, ಎಲ್ಲೋ ಮಳೆಯಾಗಿ ನನ್ನಲಿ ಪ್ರವಾಹ ಉಕ್ಕಿಸುತ್ತಿದೆ! ಇರಲಿ ಬಿಡು ಏನೋ ಆಗಿದ.ೆ ಕನಸ ಕಟ್ಟಡಗಳೆಲ್ಲವೂ ಮೇಲೇಳರವಲ್ಲಾ ಹೇಳಿದ ಪ್ರತಿಮಾತು ಪಿಸುಮಾತು ಪಿಸುಮಾತಾಗಿ ಏಕಾಂತದಲ್ಲಿ ಸಶಬ್ಧವಾಗುತ್ತಿದೆ.
***
ಅಂದು ನೀ ಹುತ್ತರಿ ಹಬ್ಬಕ್ಕೆ ನಮ್ಮ ಮನೆಗೆ ಬಂದಾಗ ಎಷ್ಟು ಮುದಗೊಂಡಿದ್ದೆ. ಪುಷ್ಪಕ ವಿಮಾನ ನೋಡಿದಷ್ಟು. ನಿನ್ನನ್ನು ಮಾತ್ರ ಕರೆಯುವ ಉದ್ದೇಶವಿದ್ದರೂ ಮನೆಯಲ್ಲಿ ಹೇಗೋ ಏನೋ ಎಂದು ಕೆಲವು ಗೆಳತಿಯರನ್ನು ಕರೆದಿದ್ದೆ ಅಮ್ಮನಿಗೆ ಹೇಳಿ ನಿನಗಿಷ್ಟದ ಕ್ಯಾರೆಟ್ ಹಲ್ವ ಮಾಡಿಸಿದ್ದೆ, ಗಡದ್ದಾಗಿ ಎರಡು ಸವಟು ತಿಂದು ಕಾಲೇಜಿನಲ್ಲಿ ಕೊಂಕು ಆಡಿದ್ದೆ. ಎಷ್ಟು ಬೇಸರವಾಗಿತ್ತು ನನಗೆ.  ಊಟದ ನಂತರ ಸೊಕ್ಕಿದ ಅಡಿಕೆ, ತನಿಗುಂಡಿ ಹೊಗೆ ಸೊಪ್ಪಿನೊಂದಿಗೆ ಬೇಡವೆಂದರೂ ತಿಂದು ತಲೆತಿರುಗಿ ನನ್ನ ಮಡಿಲಲಿ ಮಲಗಿ ನೀರು ಚಿಮುಕಿಸಿಕೊಂಡಿದ್ದು. ಎಲ್ಲರೂ ಕಾಲೇಜಿನಲ್ಲಿ ಗೊಳ್ಳೆಂದು ನಕ್ಕಿದ್ದೆವು. ಅಮ್ಮನಿಗೆ ಆಗಲೇ ನಮ್ಮ ಪ್ರೀತಿಯ ವಾಸನೆ ಬಡಿದಿತ್ತು. ನೀನು ಹೋಗುವಾಗ ಕೈಗಿತ್ತ ಗ್ರೀಟಿಂಗ್ನ ನುಡಿ ನೋಡಿ ಅಮ್ಮ ಗ್ರಹಿಸಿದ್ದಳು.  ಬದುಕೆಂದರೆ ಪ್ರೀತಿಸುವುದು, ಪ್ರೀತಿಸುವುದೆಂದರೆ ನಿನ್ನ ಜೊತೆಗಿರುವುದು ಎಂತಹ ಅಮರ ಸಾಲುಗಳಿವು ಮೋಡಿ ಮಾಡಲು. ಇವನೆಲ್ಲಾ ಎಲ್ಲಿಂದ ಹುಡುಕಿ ತರುತ್ತಿದ್ದೆಯೋ ಕಳ್ಳ ! ಗೊತ್ತಿಲ್ಲ. ಸಚಿನ್ ಹೊಡೆದ ನೇರ ಸಿಕ್ಸರ್ನಂತೆ ನಾನಂತು ಈ ಸಾಲುಗಳಿಗೆ ಮರುಳಾದೆ ! ನಿನ್ನ ಪ್ರೀತಿಯಲ್ಲಿ ಸಿಕ್ಕಿಕೊಂಡೆ. ನಮ್ಮ ಪರಿಚಯವಿರದ ಮರ, ರಸ್ತೆಗಳು ಎಲ್ಲಿಯಾದರು ಇದ್ದರೆ ಹೇಳು ಒಮ್ಮೆ ನೋಡಿ ಬರಬೇಕೆಂದಿದ್ದೆ.
ನೆನಪಿದೆಯಾ ನಿನಗೆ? 
***
ನಾನೊಮ್ಮೆ ನಿನ್ನೊಡನೆ ದ್ವೈತ ಅದ್ವೈತಗಳ ಬಗ್ಗೆ ಜಗಳಾಡಿದ್ದೆ ನೆನಪಿದೆಯಾ. ನಾನು ಅದ್ವೈತವೆನ್ನುವುದು ನೀನು ದ್ವೈತವೇ ಸರಿ ಎನ್ನುವುದು ಹೀಗೆ ಸಾಗಿತ್ತು ನಮ್ಮವಾದ ಸರಣಿ. ನೀ ಎನೋ ಸಮಜಾಯಿಸಿ ಸಹ ಕೊಟ್ಟಿದ್ದೆ. ಅವೆಲ್ಲಾ ನೆನಪಿಲ್ಲಾ. ಅನಾಸ್ತಿಕನಾದ ನಿನ್ನಲ್ಲಿ ನಾ ಬೆರೆತು ಹೋಗುವುದಾದರು ಹೇಗೆ ಅಲ್ಲವೆ?
ಇಲ್ಲೆಲ್ಲಾ ಈಗ ಮಂಜು ಕವಿದಿದೆ. ಮಂಜೆಂದರೆ ಕೊಡಗು, ಕೊಡಗೆಂದರೆ ನೀ ನೆನಪಾಗುತ್ತಿ, ಆ ಮಂಜು, ಮುಂಜಾವು, ಹೋಟೆಲ್ ಮ್ಯಾನೆಜರ್ ಮೇಡ ಫಾರ್ ಇದ್ ಅದರ್ ಎಂದಿದ್ದೂ, ನೆನಪಿದೆ. ಎಣಿಸಿಕೊಂಡರೆ ಈಗ ನಗು ಬರುತ್ತದೆ. ಕೊಡಗಿನ ಮಂಜಿನಲ್ಲಿ ಕೈಹಿಡಿದು ನಡೆದಿದ್ದು. ಕಾಣದ ಕಡಲಿಗೆ ಓಗೊಡುವ ಅಬ್ಬಿ ಜಲಪಾತವನ್ನು ನಿನ್ನ ತೋಳ ತೆಕ್ಕೆಯಲ್ಲಿ ನೋಡಿ ಧನ್ಯನಾದುದು. ಒಂದೆ ಎರಡೇ ನನ್ನ ನಿನ್ನ ನೆನಪ ಮೆರವಣಿಗೆಯ ಚಿತ್ರಗಳು. ನಿನ್ನ ಮುಂಗುರುಳಿನಲ್ಲಿ ಬೆರಳಾಡುತ್ತಾ ಮೇಣದ ಬತ್ತಿಯ ಬೆಳೆಕಿನಲಿ ಪ್ರಜ್ವಲಿಸುವ ನಿನ್ನ ನೋಟ ಆಸ್ವಾದಿಸುತ್ತಾ, ಇಡೀ ರಾತ್ರಿ ನಿನ್ನ ನಿರುಕಿಸುತ್ತಾ ಕಳೆದಿದ್ದು, ಅಬ್ಬಾ. ಅಂದು ನಿಜವಾಗಿ ನೀನು ನದಿಯಂತಿದ್ದೆ.
ಆ ನಿನ್ನ ಮೋಟಾರ್ ಬೈಕ್ನ ಸದ್ದು ನನ್ನ ಕಿವಿಯಲ್ಲಿನ್ನೂ ಗುಂಯ್ ಗುಡುತಿದೆ. ಶಿರಾಡಿಯ ಮಧ್ಯೆ ನೀನೊಮ್ಮೆ ನನ್ನ ಮುದ್ದಿಸಲು ಪ್ರಯತ್ನಿಸಿದ್ದು ನಾ ಮುನಿಸಿಕೊಂಡಿದ್ದು, ನೀ ಮಾತು ಬಿಟ್ಟಿದ್ದು. ಛೇ ಎಂತಹ ಬಾಲತನ ನಿನ್ನದು ಅನ್ನಿಸಿತ್ತಾಗ. 
***

ಅದಿರಲಿ ಗೆಳಯಾ, ಮೊನ್ನೆ ಸಂತೆ ಬೀದಿಯಲಿ ನಿನ್ನ ಕಂಡೆ ಗಡ್ಡ ಬಿಟ್ಟು ಸನ್ಯಾಸಿಯಂತಾಗಿರುವೆ. ನಿನ್ನ ಮನುಷ್ಯ ನದಿಯಂತಾಗಬೇಕೆಂಬ ಆದರ್ಶ ಏನಾಯಿತು?! ತುಂಬಾ ಸೊರಗಿದ್ದಿ ಯಾಕೆ? ನಿನ್ನ ಜೊತೆಗಿದ್ದಳಲ್ಲಾ ಯಾರಾಕೆ? ಭಾವಿ ಪತ್ನಿಯೇ? ಪ್ರಿಯತಮೆ ಯಾ ಇಂಗ್ಲೀಷ್ ಮದುವೆಯಾ, ಸಾರಿ, ಐಮೀನ್ ರಿಜಿಸ್ಟರ್ ಮದುವೆಯಾದವಳೆ? ಏನು ಲಲ್ಲಗರೆಯುತಿದ್ದಳು! ನಾನು ನಿನ್ನೊಡನೆ ಹಾಗೆ ನಡೆದುಕೊಂಡಿದ್ದರೆ ಈ ಪತ್ರ ಬರೆಯುವ ಪ್ರಸಂಗ ಬರುತ್ತಿರಲಿಲ್ಲವೇನೋ? ಈ ನದಿಯ ನಡುಗುಡ್ಡೆಯಲ್ಲಿ ಕೂತು ನಿನ್ನ ನೆನಪು ಮಾಡಿಕೊಳ್ಳಬೇಕಾಗಿ ಬರುತ್ತಿರಲಿಲ್ಲ ಇರಲಿ ಅದಕ್ಕೆ ಹಿರಿಯರಂದ್ದಿದಿರಬೇಕು, ಬ್ರಹ್ಮಚಾರಿ ಶತಮರ್ಕಟ!
***
ಕನಿಷ್ಠ ನಿನ್ನ ನೆನಪನ್ನಾದರೂ ಸಾಯಿಸಲು ನಾ ನೊಬ್ಬನ್ನು ಪ್ರೀತಿಸಬೇಕು, ಮದುವೆಯಾಗಬೇಕು. ಇಲ್ಲ ಇಲ್ಲ ಅಪ್ಪ, ಅಮ್ಮ ನೋಡಿದವರೊಡನೆ ಮದುವೆಯಾಗಬೇಕು. ಕನಿಷ್ಠ ನಿನ್ನ ಮೇಲೆ ಹೀಗಾದರೂ ನಾನು ಸೇಡು ತೀರಿಸಿಕೊಳ್ಳಬೇಕೆಂದಿರುವೆ. ಇಲ್ಲ ಹೀಗೆ ಮಾಡಲು ಈಗ ಮನಸ್ಸು ಒಪ್ಪಲ್ಲ ಇವೆಲ್ಲ ನನ್ನ ನೊಂದ ಮನದ ನುಡಿಗಳು. ಅಷ್ಟೇ. ಸುಮ್ಮನೆ ಬದುಕಲು ಇಷ್ಟೊಂದು ರಗಳೆಗಳೇಕೆ. ಕೆಸುವಿನೆಲೆಯಂತಹ ನಿನ್ನ ಮನಸ್ಸನ್ನು ಸ್ವಲ್ಪವಾದರೂ ತಾಗಲು ಪ್ರಯತ್ನಿಸಿದ ಮಳೆ ಹನಿ ನಾನು! ನಾನೆ ಮೂರ್ಖಳಿರಬೇಕು. ನಮ್ಮ ಕಲ್ಪನೆಗಳೇ ಬೇರೆ ವಾಸ್ತವದ ಬದುಕೇ ಬೇರೆ. ನಿನ್ನ ಅಪ್ಪ ಅಮ್ಮ ಜಾತಿ ಎಲ್ಲವೂ ವಾಸ್ತವ ನಾನು ನೀನು ಭೇಟಿಯಾಗಿದ್ದು ಕೇವಲ ಕಲ್ಪನೆಯಂತೆ ನನಗೆ ತೋರುತ್ತಿದೆ. ತೀರ ವಾಸ್ತವದಲ್ಲಿ ನಿನ್ನಂತೆ ಬದುಕಲು ನನಗಾಗದು. ಕಲ್ಪನೆಗಳಿಲ್ಲದ ಭಾವವಿಲ್ಲದ ಬದುಕು ಶೂನ್ಯದಂತಾಗುತ್ತದೆ. ನಿನಗೂ ಹಾಗನ್ನಿಸಿದರೆ ಉತ್ತರ ಬರೆ. ಇಲ್ಲವಾದರೆ ಉಂಟಲ್ಲ ಒಲೆ! ಕಾಯಿಸಿಕೊಂಡು ನೀನಾದರೂ ಬೆಚ್ಚಗಿರು.

***
ಇಷ್ಟೆಲ್ಲಾ ಇಂದು ನೆನಪಾಗುತ್ತಿದೆ ಏಕೆಂದು ಗೊತ್ತಿದೆಯೇ ಇಂದು ಹುತ್ತರಿ ಹಬ್ಬ. ಅಮ್ಮ ಮಾಡಿದ ಕ್ಯಾರೆಟ್ ಹಲ್ವ ತಿನ್ನದೆ ಇಲ್ಲಿ ನದಿ ಬಳಿ ಬಂದು ಕುಳಿತ್ತಿದ್ದೇನೆ.
ಯಾರೋ ಹೇಳಿದಂತೆ ಪಾರಿಜಾತ ಗಿಡಗಳು ತೋಟದ ನಡುವೆ ನೆಟ್ಟರೆ ಬದುಕಲಾರವೆಂದು. ಅವುಗಳು ಬದಿಯಲ್ಲಿ ನೆಟ್ಟರೆ ಮಾತ್ರ ಚಿಗುರಿ ಹೂ ಬಿಡುವವು. ಅಂತೆಯೇ ಆದಂತಿದೆ ನನ್ನ ಬದುಕು. ಇರಲಿ. ನಿನಗೆ ಹೇಳಿದರೆ ನೀ ನಗುತ್ತಿ. ಹೊಸ ವಿಶ್ವಾಸದೊಂದಿಗೆ ಪುಟಿಯಬೇಕು ಬದುಕು ಹೂವಾಗ ಬೇಕೆಂದು ಆಶಿಸುವವಳು ನಾನು. 

ಸಂಜೆಯಾಗುತ್ತಿದೆ ಕತ್ತಲಾವರಿಸುವ ಮುನ್ನ ಮನೆ ಸೇರಬೇಕು ಅಪ್ಪ ಕೇಳುತ್ತಾರೆ, ಅಮ್ಮ ಮೂದಲಿಸುತ್ತಾಳೆ, ಪತ್ರ ಮುಗಿಸುತ್ತೇನೆ. ನಿನ್ನ ಮೋಟಾರ್ ಬೈಕ್ ಸದ್ದಿನ ನಿರೀಕ್ಷೆಯಲ್ಲಿ !  ಈ ಪತ್ರವು ನಿನ್ನ ಬಚ್ಚಲಿನ ನೀರು ಬಿಸಿ ಮಾಡಲು ಉಪಯೋಗವಾಗದಿರಲಿ. ಇತಿ ನಿನ್ನವಳು, ಓ ಮತ್ತೆ ಸಾರಿ. ಕೇವಲ ಹಾರೈಕೆಗಳು. 
ಇತಿ ನಿನ್ನ ನೆನಪ ಕನ್ನಿಕೆ.
ಪಾರಿಜಾತ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...