Wednesday, December 14, 2011

ವಿಸ್ಮಯ ಜಗತ್ತು













ಜಗತ್ತಿನ ವಿಸ್ಮಯ ವಿಶಿಷ್ಟತೆ ಹೇಳುವುದು ಅತಿ ಕಠಿಣ ಸಂಗತಿ. ಜೀವ ಜಗತ್ತಿನ ಸರಪಣಿಯೂ ಅದ್ಭುತವೂ ಅನನ್ಯವಾದುದು. ಅದರಲ್ಲೂ ಮಲೆನಾಡು ಇತಂಹ ಹಲವು ಅನನ್ಯತೆಗಳ ತವರೂರು.ಬೆಳಕು ಸೂಸುವ ಅಣಬೆ, ಬಣ್ಣ ಬಣ್ಣದ ಕಪ್ಪೆಗಳು, ಹಸಿರು ಜೇಡಗಳು ಕಾಣಸಿಗುತ್ತದೆ. ಎಲ್ಲೊ ಹಾರಾಡುವ ಚಿಟ್ಟೆಗಳ ವಿಷಯ ತಿಳಿದು ಅಲ್ಲಿಗಾಗಮಿಸುವ ಸಾವಿರಾರು ಹಕ್ಕಿಗಳು.





ಯೂರೋಪಿನಿಂದ ವಲಸೆ ಬರುವ ಹಕ್ಕಿ ಎಂದರೆ ನೀವು ನಂಬುವಿರಾ
ಯುರೋಪಿನಿಂದ ಭಾರತಕ್ಕೆ ಬರುವ ಗುಬ್ಬಚ್ಚಿ ಗಾತ್ರದ, ಕುಂಡೆ ಕುಸ್ಕದಂತಹ ಹಕ್ಕಿಗಳು! ಕೇವಲ ಹಣ್ಣು ತಿನ್ನುವ ಹಕ್ಕಿಗಳು. ಜೋಡಿಯ
ಲ್ಲೇ ಇರುವ, ಬೇರಾದರೆ ಒಂಟಿಯಾಗಿ ಬದುಕುವ ಹಕ್ಕಿಗಳು, ಒಂದೆ ಎರಡೆ. ಇವಿಸ್ಟೆ ಅಲ್ಲ, ನಮ್ಮ ಅನುಭವಕ್ಕೆ ಬಾರದ ಎಷ್ಟೋ ಜೀವಿಗಳು ನಮ್ಮ ಸುತ್ತಮುತ್ತಲಿವೆ. ಇತಂಹ ಎಷ್ಟನ್ನು ನಾವು ನೋಡದೇ ಬಿಟ್ಟಿದ್ದೇವೋ ಏನೋ!


ಸಂದರ್ಭದಲ್ಲಿ ತೇಜಸ್ವಿಯವರ ಒಂದು ಮಾತು ನೆನಪಿಗೆ ಬರುತ್ತದೆ. ನೋಡುವವರಿಗಾಗೆ ಯಾವುದು ಕಾದು ಕುಳಿತಿರುವುದಿಲ್ಲ. ಅದನ್ನೆಲ್ಲಾ ನೋಡಲು ಎಲ್ಲಿಗಾಗಲೀ ಹೋಗುವ ಅಗತ್ಯವಿಲ್ಲ ನಾವು ಎಲ್ಲಿದ್ದೆವೋ ಅಲ್ಲೇ ಅತ್ತಿತ್ತ ಕಣ್ಣು ಬಿಟ್ಟು ನೋಡಿದರೆ ಸಾಕು.
ಪಶ್ಚಿಮ ಘಟ್ಟದ ತಪ್ಪಲಿನ ಒಂದು ಗ್ರಾಮಕ್ಕೆ ಹೋ
ಗಬೇಕಾಗಿ ಬಂದ ಸಂದರ್ಭದಲ್ಲಿ ಕಂಡು ಬಂದ ಹಕ್ಕಿ ಪ್ರಸಂಗವನ್ನು ನಿಮ್ಮಲ್ಲಿ ನಿವೇದಿಸಿಕೊಳ್ಳುತ್ತೇನೆ.

ಎರೋಪ್ಲೇನ್ ಚಿಟ್ಟೆಗಳು ದೊಡ್ಡ ಗಾತ್ರದವು, ಸುಲಭವಾಗಿ ಯಾವ ಹಕ್ಕಿಗೂ ಆಹಾರವಾಗಲಾರದ ಕೀಟ. ಆದರೂ ಅತಂಹ ಕೀಟವನ್ನೂ ಹಿಡಿಯುವ ಪಕ್ಷಿಗಳಿವೆ! ತಮ್ಮ ಸಾಮಥ್ರ್ಯದ ಹಲವು ಪಟ್ಟು ದೊಡ್ಡದಾದ ಇವನ್ನು ಹಿಡಿಯಲು ಮಲೆನಾಡಿನಲ್ಲಿ ಗಿಣಿಗಾರಲು ಎಂಬ ವಿಶಿಷ್ಟ ಹಕ್ಕಿಗಳು ಕಾದು ಕುಳಿತಿರುತ್ತದೆ. ಬೇಲಿಗಳ ಮೇಲೆ, ವಿದ್ಯುತ್
ತಂತಿಗಳ ಮೇಲೆ , ಕುರುಚಲು ಕಾಡುಗಳಲ್ಲಿ, ಮಳೆಗಾಲ ಮುಗಿದ ಕೂಡಲೆ ಹುಟ್ಟುವ ಎರೋಪ್ಲೇನ್ ಚಿಟ್ಟೆಗಳುನ್ನು ಭಕ್ಷಣೆ ಮಾಡುತ್ತಿರುತ್ತದೆ. ಎರೋಪ್ಲೇನ್ ಚಿಟ್ಟೆಗಳು ಹುಟ್ಟುವ ಮೊದಲು ಅಜ್ಞಾತವಾಗಿರುವ ಹುಟ್ಟಿದ ಕೂಡಲೆ ದಿಗ್ಗನೆ ಮಲೆನಾಡಿನಾದ್ಯಂತ ಕಾಣಿಸಿಕೊಳ್ಳುತ್ತವೆ.
ಅತ್ಯಂತ ವಿಶಿಷ್ಟ ಬಣ್ಣಗಳಲ್ಲಿ ಕಂಡುಬರುವ ಅತಿ ಸುಂದರ ಹಕ್ಕಿ. ಕೆಂಪು ಕುತ್ತಿಗೆಯ ನೀಲಿ ಬಾಲದ, ನೀಲಿ ಕುತ್ತಿಗೆಯ ಹಸಿರು ಬಾಲದ ಚಿಕ್ಕ ಗಾತ್ರದ, ನೀಲಿ ಗಡ್ಡದಂತಿರುವ ಕುತ್ತಿಗೆಯ ದೊಡ್ಡ ಗಾತ್ರದ ಮೊತ್ತೊಂದು ಹಕ್ಕಿ
ಸಹ ಕಂಡುಬರುತ್ತದೆ.
ಗುಳಕಾಯಿಸಲೆಂದು ಎರೋಪ್ಲೇನ್ ಚಿಟ್ಟೆಯೊಂದನ್ನು ಗಿಣಿಗಾರಲು ಹೆಕ್ಕಿಕೊಂಡು ಬಂತು. ಸರಿ ನಿಧಾನಕ್ಕೆ ತಿನ್ನೊಣವೆಂದು ಕೊಂಬೆಯ ಮೇಲೆ ಕೂತಿತು. ಕೊಂಬೆಗೆ ಎರೋಪ್ಲೇನ್ ಚಿಟ್ಟೆಯನ್ನು ತಬಲ ಬಡಿಯುವಂತೆ ಬಡಿಯಲಾರಂಬಿಸಿತು. ಅಷ್ಟರಲ್ಲಿಯೇ ಎರೋಪ್ಲೇನ್ ಚಿಟ್ಟೆ ತಪ್ಪಿಸಿಕೊಂಡಿತು. ಆದರೂ ಚಲ ಬಿಡದೆ ಮತ್ತೊಮ್ಮೆ ಹಿಡಿಯಿತು. ಬಾರಿ ಮಾತ್ರ ಚನ್ನಾಗಿಯೇ
ತಪ್ಪಿ ಹೋಯಿತಲ್ಲೆ....

ಬಡಿದು ಸಾಯಿಸಿ ತಿಂದಿತು. ಗುಳಕಾಯಿಸುವಾಗ ಅದರ ಗಂಟಲನ್ನು ಗಮನಿಸಿ. ಅದರಷ್ಟೇ ದೊಡ್ಡದಾಗಿದೆ.

Bee eater.



ಅಂತು ತಿಂದೇ ಬಿಟ್ಟೆ.










ಶ್ರೀಧರ್. ಎಸ್. ಸಿದ್ಧಾಪುರ.

Saturday, November 26, 2011

ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!














ನವ ವಧುವಿನಂತೆ ಶೃಂಗಾರ ಗೊಂಡಿರುವ ಈಗಿನ ಸೋಮನಾಥಪುರ ದೇವಾಲಯದ ಅಂದಕ್ಕೆ ಅಂದೇ ಕುವೆಂಪು ಮಾರು ಹೋಗಿದ್ದರು. ಆಗ ತುಂಬಾ ಶಿಥಿಲಾವಸ್ಥೆಯಲ್ಲ್ಲಿದ್ದರೂ ಅವರಿಗೆ ಸೌಂದರ್ಯದ ಮೇರು ಪರ್ವತವಾಗಿ ತೋರಿತ್ತು. ಸೃಷ್ಟಿಶೀಲರಿಗೆ ಕಲ್ಲು ಸಹ ಸೌಂದರ್ಯದ ಜೊತಕವಾಗಿ ಕಾಣಿಸುತ್ತದೆ.ಎಂಬುವುದಕ್ಕೆ ಈ ಕವನವೇ ಸಾಕ್ಷಿ.





ವರ್ಷದ ಹಿಂದೆ ಕುಪ್ಪಳಿಗೆ ಹೋದಾಗ ಉದಯ ಶೆಟ್ಟಿ ಕಥಕ್ ಶೈಲಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದು ಅದ್ಭುತವಾಗಿತ್ತು, ಜೊತೆಗೆ ವಿಶೇಷ ಆಥಿತ್ಯವು. ನಿಜಕ್ಕೂ ಈ ದೇವಾಲಯ ಅದ್ಭುತವಾಗಿದೆ. 


















ಬೇಲೂರು ಹಳೆಬೀಡನ್ನೂ ಮೀರಿಸುವಷ್ಟು! ಈ ದೇವಾಲಯದ ಸೌಂದರ್ಯಕ್ಕೆ ಮಾರು ಹೋದ ಕುವೆಂಪು ಅಲ್ಲಿನ ಶಿಲ್ಪಕಲೆಯ ಬಗ್ಗೆ ಒಂದು ಕವನ ರಚಿಸಿದ್ದಾರೆ. ಇದೋ ಈ ಕವನ ನಿಮಗಾಗಿ, ಜೊತೆಗೆ ನನ್ನ ಛಾಯಾಚಿತ್ರವೂ ಇದೆ. ಓದುವ ಖುಷಿ ನಿಮ್ಮದಾಗಲಿ.

ಸೋಮನಾಥಪುರ ದೇವಾಲಯ


ಬಾಗಿಲೊಳು ಕೈಮುಗಿದು ಒಳಗೆ ಬಾ, ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುವಗಳನಪರ್ಿಸಿಲ್ಲಿ.
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ;
ಕಪೂರದಾರತಿಯ ಜ್ಯೋತಿಯಿಲ್ಲ.
ಭಗವಂತನಾನಂದ ರೂಪುಗೊಂಡಿಹುದಿಲ್ಲಿ;
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ!
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ!
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ!
ಮೂಛರ್ೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ!

ಕುವೆಂಪು; 10-7-28

Friday, November 18, 2011

ನಮ್ಮೂರಿಗೆ ಬಂದ ಅಪರೂಪದ ಅತಿಥಿ


ನಮ್ಮೂರಿಗೆ ಬಂದ ಅಪರೂಪದ ಅತಿಥಿ







ನಮ್ಮೂರಿಗೆ ಬಂದ ವಿಶೇಷವಾದ ಹಕ್ಕಿಯ ಬಗ್ಗೆ ಹೇಳಬೇಕಿದೆ. ಅದ್ಭುತವಾದ ಸೌಂದರ್ಯದಿಂದ ನನ್ನ ಮನಸ್ಸು ಸೂರೆ ಗೊಂಡಿತ್ತು. , ಇವು ನೋಡಲು ಗಿಣಿಗಾರಲು ಹಕ್ಕಿಗಳಂತೆ ಇದ್ದವು. ಸಾಮಾನ್ಯವಾಗಿ ಗಿಣಿಗಾರಲು ಚಿಕ್ಕ ಗಾತ್ರದವುಗಳು, ಆದರೆ ಇವು ಬಣ್ಣ ಮತ್ತು ಗಾತ್ರದಲ್ಲಿ ಅವಕ್ಕಿಂತಲೂ ಒಂದು ಕೈ ಹೆಚ್ಚು. ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ಒಳನಾಡುಗಳಲ್ಲಿ ಕಂಡು ಬರುವ ಈ ಹಕ್ಕಿ, ಕುತ್ತಿಗೆ ಬಳಿ ಸುಂದರವಾದೊಂದು ನೀಲಿ ಬಣ್ಣದ ಗಡ್ಡವಿದೆ. ತಲೆ ಸಂಪೂರ್ಣವಾಗಿ ಹಸಿರು ಬಣ್ಣದಿಂದ ಕೂಡಿದೆ.
ಹಾಗೆ ಕುತೂಹಲಗೊಂಡು ಪೂರ್ಣಚಂದ್ರರ ಹಕ್ಕಿಪುಕ್ಕ ತಡವಿದೆ ಕೂಡಲೆ ಅದರ ವಿವರಗಳು ಲಭಿಸಿದವು. ಇದು ಜೇನುಗುಟುರವೆನ್ನುವ ಅಪರೂಪದ ಮಲೆನಾಡಿನ ಹಕ್ಕಿ. ಊಹೆಯಂತೆ, ಗಿಣಿಗಾರಲು ಕುಟುಂಬಕ್ಕೆ ಸೇರಿದ ಹಕ್ಕಿ. ಕನರ್ಾಟಕ, ಕೇರಳದ ಕಾಡುಗಳಲ್ಲಿ ಕಂಡುಬರುತ್ತದೆ. ಅತ್ಯಂತ ಚುರುಕಾದ ಹಕ್ಕಿ. ಜೇನು ಹುಳ ಇದರ ಪ್ರಧಾನವಾದ ಆಹಾರ. ಜೇನು ಗೂಡಿನ ಮೇಲೆಯೇ ನೇರವಾಗಿ ದಾಳಿಮಾಡುತ್ತದೆ. ಇದನ್ನು ಬ್ಲೂ ಬಿಯರ್ಡೆಡ್ ಬೀ ಈಟರ್ ಎನ್ನುವರು. ಮಾರ್ಚನಿಂದ ಜೂನ್ ವರೆಗೆ ಮರಿಮಾಡುವ ಕಾಲ. ಭಾರತವಲ್ಲದೆ ಬಾಂಗ್ಲಾ, ಸಿಲೋನ್, ಬಮರ್ಾ ಮತ್ತು ಹಿಮಾಲಯಗಳಲ್ಲಿ ಕಂಡುಬರುತ್ತದೆ.

ಪ್ರಕೃತಿಯ ಒಂದಕ್ಕೊಂದು ಬೆಸದುಕೊಳ್ಳುವಿಕೆಯ ರೋಚಕತೆ ಅದ್ಭುತವಾದುದು. ಜೇನು ಹುಳುಗಳ ವಿಪರೀತ ಓಡಾಟವಿದ್ದಲ್ಲಿ ಈ ಹಕ್ಕಿಗಳಿರುತ್ತವೆ, ಆದರೆ ಈ ಬಂದ ಮೊಬೈಲ್ ಪೋನ್ ನಿಂದ ಜೇನುಗಳ ಜೊತೆಗೆ ಈ ಹಕ್ಕಿಗಳು ಕಣ್ಮರೆಯಾಗುತ್ತಿವೆ. ಅತಿ ಸವರ್ೆಸಾಧಾರಣವಾದ ಹಕ್ಕಿಗಳು ಅಪರೂಪವಾಗುತ್ತಿವೆ. ಇತಂಹ ನೂರಾರು ಹಕ್ಕಿಗಳನ್ನು ಮುಂದಿನ ಜನಾಂಗಕ್ಕೆ ಉಳಿಸೊಣ ಎನ್ನುವುದು ನಮ್ಮೆಲ್ಲರ ಆಶಯ!
ಶ್ರೀಧರ. ಎಸ್

Monday, November 14, 2011

ಪದ್ಯ ಪತ್ರ


ಹೀಗೆ ಒಮ್ಮೆ ಗೆಳೆಯನಿಗೆ ಬರೆದ 'ಪದ್ಯ ಪತ್ರದ' ತುಣುಕುಗಳು

ಕಾರಣ 'ಸರಳ'

ಗೆಳೆಯ
ಫೋನಿಸಿದೆ ನಾನು ಬಹಳ
ಮನೆಯಲ್ಲಿರುವುದು ನೀನು
ತುಂಬಾ ವಿರಳ
ತಿಳಿಯಿತು ಕಾರಣ 'ಸರಳ'!




ನಿನ್ ಕಾಗ್ದ


ನಿನ್ ಕಾಗ್ದ
ಓದ್ದೋನು
ನಿಜವಾಗಲೂ ಸೂರ
ನಮಗ್ ಬೇಕ್ರಿ
ದೊಡ್ಡ ಮಸೂರ!

ಕಾಗದ

ಚೊಕ್ ಮಾಡ್ ಬರೀರಿ
ಕಾ ಗುಣಿತ
ಇರಲಿ ಕಾಗ್ದೊಳಗೆ
ಒಂಚೂರ್ ಗಣಿತ.










ಯೋ(ರೋ)ಗ ತರಬೇತಿ

ಇದ್ದೈತಿ ನಮಗ
ಹತ್ತು ದಿನ ಯೋಗ
ಹಿಡ್ಕೊಂಡೈತಿ ಈಗ
ಶೀತ ನೆಗಡಿ ರೋಗ
*****







ಬರಿಯಾಕ್ ಆಗ್ಲಿಲ್ಲ
ಅಂತ ಹೇಳಬ್ಯಾಡ್ರಿ
ನೂರಾರು ನೆವನ
ಮಾಡಾಕ್ ಹತ್ತಿರಿ
ಯಾರದ್ದೋ ಧ್ಯಾನ!
*****
ಬೆಳಸ್ಕೊಳ್ರಿ ಒಂಚೂರ್
ಬರಿಯೊ ಹವ್ಯಾಸ
ಎನಾಗತೈತಿ
ನಿಮಗ ತ್ರಾಸ
*****
ದಯಮಾಡಿ
ಬರಿಬ್ಯಾಡ್ರಿ
ಕವ್ನ
ಉಳಿಸಿ
ನಮ್
ಕಣ್ಣಿನ್
ಜೀವ್ನ
*****






ಯಾರ್ರೀ ಕಲ್ ಸ್ದೊರ್
ನಿಮಗ ಅಕ್ಷರ
ಸರಿ ಬರ್ಯಾಕ್
ಬರಾಕಿಲ್ಲ ಬರ( hand writing)
*****








ಎಲ್ಲಾನು ಓದಿ
ಮಾಡ್ಕೊಳ್ ಬ್ಯಾಡ್ರಿ
ಬ್ಯಾಸ್ರ
ಕುಡಿಯಾಕ್ ಬೇಕೇನ್ರಿ
ಆಸ್ರ.
*****







ಕವನ ಓದಿ
ಸಿಟ್ಟೇನಾರ ಬಂತೆ
ಬಂದ್ರೆ ಜಗದ್ ಬಿಡು
ಕುತ್ತುಂಬರಿ ಜೀರಿಗೆ ಮೆಂತೆ!

Tuesday, October 18, 2011

ಶಿವಗಂಗೆಯ ಸ್ವಗತ

    ಕಾನನದ ನಡುವೆ ಏಕಾಂಗಿಯಾಗಿ ಗಿರಿ, ಕಂದರ ಮೂಲಿಕೆಗಳನ್ನು ಬಳಸಿ ಸುತ್ತಿ ಸುಳಿದು ಬಳುಕುತ್ತಾ ಜಡಿಗದ್ದೆ ಎಂಬಲ್ಲಿ ಸುಮಾರು 220 ಅಡಿ ಎತ್ತರದಿಂದ ಧುಮುಕುವ ನಾನು ಸೋಂದಾ ನದಿಯ ಸೃಷ್ಠಿ. ಹೆಸರು ಶಿವಗಂಗೆ. ಹೆಸರಿಗೆ ತಕ್ಕಂತೆ ನನ್ನ ಮಡಿಲಲ್ಲಿ ಶಿವಲಿಂಗವಿದೆ.
ನನ್ನ ನೋಡ ಬಯಸುವವರು ಶಿರಸಿಯಿಂದ ವಾನಳ್ಳಿ ರಸ್ತೆಯಲ್ಲಿ 32 ಕಿ.ಮೀ, ಪಯಣಿಸಿ ಜಡ್ಡಿಗದ್ದೆ ಎಂಬಲ್ಲಿಗೆ ಬರಬೇಕು ಅಲ್ಲಿಂದ ಮುಂದೆ ಸುಮಾರು 3 ಕಿ,ಮೀ. ಮಣ್ಣು ರಸ್ತೆಯಲ್ಲಿ ಪಯಣಿಸಿ ಎಡಕ್ಕೆ ತಿರುಗಿ ಪ್ರಪಾತಕ್ಕೆ ಇಳಿಯಬೇಕು. ಸುಮಾರು 220 ಅಡಿ ಆಳಕ್ಕೆ ಇಳಿಯದೆ ನನ್ನ ಸಂಪೂರ್ಣ ಚಲುವನ್ನು ಕಾಣಲಾರಿರಿ. ವೀಕ್ಷಣಾ ಪಕ್ಕ ಸ್ವಲ್ಪ ಮೆಟ್ಟಿಲಿದೆ. ಮುಂದಿನದು ದುರ್ಗಮವಾದ ಕಣಿವೆ ಇಳಿಯುವ ಸಾಹಸ. ಹಾದಿಯ ಪ್ರತೀ ಕಲ್ಲೂ ಜಾರುತ್ತಿರುತ್ತದೆ. ಹಾಗಾಗಿ ಯಾರೂ ನನ್ನ ನೋಡವ ಸಾಹಸ ಮಾಡುವುದಿಲ್ಲ. ನೀವೆನಾದರು ಸಾಹಸಿಗರಾಗಿದ್ದರೆ ಒಮ್ಮೆ ಈ ದಾರಿಯಾಗಿ ಬಂದು ಇಳಿಯುವ ಸಾಹಸ ಕೈಗೊಳ್ಳಿ.

ಸಮುದ್ರೊಪಾದಿಯಲ್ಲಿ ನನ್ನ ಭೋಗರ್ೆರೆತ ನೋಡಿ ನೀವು ಮಗುವಾಗುವುದು ಖಂಡಿತ. ಈ ರುದ್ರತೆಯಲ್ಲಿ ಒಂದಾಗಿ ಆನಂದಿಸಿ. ನೀರಿಗಿಳಿಯವ ಮುನ್ನ ಬಹಳ ಜಾಗರೂಕರಾಗಿರಿ, ನನ್ನ ಮಡಿಲಲ್ಲಿ ಅಲಲ್ಲಿ ಮೊಸಳೆಗಳಿವೆ. ಹಲವಾರು ವರ್ಷಗಳ ನನ್ನ ಪ್ರವಾಹದಿಂದ ಆಳವಾಗಿ ರಭಸವಾಗಿ ಹರಿಯುತ್ತಿರುವೆ. ಜಲಪಾತದ ಸುತ್ತಮುತ್ತ ಅನೇಕ ಸಣ್ಣ ಝರಿಗಳಿವೆ. ಅವನ್ನು ಕ್ಲಿಕ್ಕಿಸಲು ಮರೆಯದಿರಿ. ಮಳೆಗಾಲಕ್ಕಿಂತ ಚಳಿಗಾಲದಲ್ಲಿ ನನ್ನ ನೋಡುವುದು ಉತ್ತಮ.




























ಕೊನೆಯ ಮುತ್ತು:-

ಸುತ್ತಲೂ ಕಾನನದಿಂದ ಕೂಡಿರುವ ನಾನು ಪ್ರಕೃತಿ ಪ್ರಿಯರಿಗೆ ಸ್ವರ್ಗ ಸದೃಶನಾಗಿರುವೆ. ಅನೇಕ ಪ್ರಾಣಿ-ಪಕ್ಷಿ ಸಂಕುಲಗಳು ನನ್ನ ಮಡಿಲಿನಲ್ಲಿದೆ.



















ಒಮ್ಮೆಯಾದರೂ ಬನ್ನಿ, ಹಾಗೂ ನನ್ನ ಮಾನವನ್ನು ಪ್ಲಾಸ್ಟಿಕ್ಗಳಿಂದ ಹರಾಜು ಹಾಕಬೇಡಿ, ಮುಕ್ತವಾಗಿಡಿ.

ಶ್ರೀಧರ. ಎಸ್.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...