Monday, November 14, 2011

ಪದ್ಯ ಪತ್ರ


ಹೀಗೆ ಒಮ್ಮೆ ಗೆಳೆಯನಿಗೆ ಬರೆದ 'ಪದ್ಯ ಪತ್ರದ' ತುಣುಕುಗಳು

ಕಾರಣ 'ಸರಳ'

ಗೆಳೆಯ
ಫೋನಿಸಿದೆ ನಾನು ಬಹಳ
ಮನೆಯಲ್ಲಿರುವುದು ನೀನು
ತುಂಬಾ ವಿರಳ
ತಿಳಿಯಿತು ಕಾರಣ 'ಸರಳ'!




ನಿನ್ ಕಾಗ್ದ


ನಿನ್ ಕಾಗ್ದ
ಓದ್ದೋನು
ನಿಜವಾಗಲೂ ಸೂರ
ನಮಗ್ ಬೇಕ್ರಿ
ದೊಡ್ಡ ಮಸೂರ!

ಕಾಗದ

ಚೊಕ್ ಮಾಡ್ ಬರೀರಿ
ಕಾ ಗುಣಿತ
ಇರಲಿ ಕಾಗ್ದೊಳಗೆ
ಒಂಚೂರ್ ಗಣಿತ.










ಯೋ(ರೋ)ಗ ತರಬೇತಿ

ಇದ್ದೈತಿ ನಮಗ
ಹತ್ತು ದಿನ ಯೋಗ
ಹಿಡ್ಕೊಂಡೈತಿ ಈಗ
ಶೀತ ನೆಗಡಿ ರೋಗ
*****







ಬರಿಯಾಕ್ ಆಗ್ಲಿಲ್ಲ
ಅಂತ ಹೇಳಬ್ಯಾಡ್ರಿ
ನೂರಾರು ನೆವನ
ಮಾಡಾಕ್ ಹತ್ತಿರಿ
ಯಾರದ್ದೋ ಧ್ಯಾನ!
*****
ಬೆಳಸ್ಕೊಳ್ರಿ ಒಂಚೂರ್
ಬರಿಯೊ ಹವ್ಯಾಸ
ಎನಾಗತೈತಿ
ನಿಮಗ ತ್ರಾಸ
*****
ದಯಮಾಡಿ
ಬರಿಬ್ಯಾಡ್ರಿ
ಕವ್ನ
ಉಳಿಸಿ
ನಮ್
ಕಣ್ಣಿನ್
ಜೀವ್ನ
*****






ಯಾರ್ರೀ ಕಲ್ ಸ್ದೊರ್
ನಿಮಗ ಅಕ್ಷರ
ಸರಿ ಬರ್ಯಾಕ್
ಬರಾಕಿಲ್ಲ ಬರ( hand writing)
*****








ಎಲ್ಲಾನು ಓದಿ
ಮಾಡ್ಕೊಳ್ ಬ್ಯಾಡ್ರಿ
ಬ್ಯಾಸ್ರ
ಕುಡಿಯಾಕ್ ಬೇಕೇನ್ರಿ
ಆಸ್ರ.
*****







ಕವನ ಓದಿ
ಸಿಟ್ಟೇನಾರ ಬಂತೆ
ಬಂದ್ರೆ ಜಗದ್ ಬಿಡು
ಕುತ್ತುಂಬರಿ ಜೀರಿಗೆ ಮೆಂತೆ!

1 comment:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...