Thursday, February 16, 2012

ಮಿರ್ಜಾನ ಕೋಟೆ


ಮಿರ್ಜಾನ ಕೋಟೆ
ನೀವು ಎನ್ ಎಚ್. 66 ರ ಗುಂಟ ಕುಂದಾಪುರದಿಂದ ಸಾಗಿ ಹೊನ್ನಾವರ ದಾಟಿ ಮುಂದೆ ಸಿಗುವುದೇ ಸುಂದರ ಮಿರ್ಜಾನ ಕೋಟೆ. ಕೋಟೆ, ಮಿರ್ಜಾನ ಎಂಬ ಊರಿನಿಂದ ಕೆಲವೇ ಕಿ.ಮಿ. ಹಿಂದಿದೆ. ಕಡಲ ಕಿನಾರೆಗೆ ಅತಿ ಸಮೀಪವಿರುವುದರಿಂದ, ಕಾವಲು ಕೋಟೆ, ವಸ್ತು ಸಾಗಾಣಿಕಾ ಕೋಟೆಯಾಗಿ ಬಳಕೆಯಲ್ಲಿತ್ತು. ವಿದೇಶಿ ವ್ಯವಹಾರೆಕ್ಕೆ ಬಳಸುತ್ತಿದ್ದರೆನ್ನಲಾಗುತ್ತಿದೆ. ಅತ್ಯಂತ ಕುತುಹಲಕಾರಿ ಇತಿಹಾಸ ಹೊಂದಿರುವ ಈ ಕೋಟೆಗೀಗ ಒಂದು ಸುತ್ತು ಬರೋಣ.
ಇತಿಹಾಸದ ಪುಟ ಸೇರಲು ಕಾಯುತಿರುವಂತೆ ತೋರುವ ಈ ಕೋಟೆ ಇಲಾಖಾ ನಿರ್ಲಕ್ಷಕ್ಕೆ, ಬುದ್ದಿಜೀವಿಗಳ ಲಜ್ಜೆಗೇಡಿತನಕ್ಕೆ ಸಾಕ್ಷಿ ದೊರೆಯುತ್ತದೆ. ಕೆಲವು ಸುಂದರ ರಚನೆಗಳ ಮೂಲಕ ಗಮನ ಸೆಳೆಯುತ್ತದೆ. ಮುರಾ ಕಲ್ಲಿನಿಂದ ನಿಮರ್ಿಸಿದ ನಾಜೂಕಾದ ಬುರುಜು, ವಿಶಿಷ್ಟವಾದ ಬಾವಿಗಳು, ಸಂಮೋಹಕ ಪ್ರವೇಶ ದ್ವಾರಗಳಿಂದ ಕಣ್ಮನ ಸೆಳೆಯುತ್ತದೆ. ಎಲ್ಲಾ ದಿಕ್ಕುಗಳ ಪರಿವೀಕ್ಷಣೆಗೆ ತಕ್ಕುದಾದ ಬುರುಜು. ಕೋಟೆಗೆ ಮೂರು ಪ್ರವೇಶ ದ್ವಾರಗಳಿವೆ. ಅದರ ಸುರಂಗಗಳ ಮೂಲಕ ಕಾಲುವೆಗಳಿಗೆ ಸಂಪರ್ಕ ಸಾಧಿಸಿಬಹುದೆನ್ನುವ ಬಗ್ಗೆ ಇಲಾಖೆ ಹೇಳಿದೆೆ. ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾದ ಕೋಟೆ ಎನ್ನಬಹುದು. ಕೋಟೆಯ ಸಭಾಂಗಣ ಇತರೆ ಭಾಗಗಳು ಶಿಥಿಲಾವಸ್ಥೆ ತಲುಪಿದ್ದು ಕೆಲವು ಗೋಡೆ ಕುಸಿದಿದ್ದು ಪುರ್ನನಿಮರ್ಾಣಕ್ಕೆ ಕಾಯುತ್ತಿವೆ. ಕೋಟೆಯ ಪ್ರವೇಶಕ್ಕೆ ಕಂದಕ ನಿಮರ್ಿಸಲಾಗಿದ್ದು ಕೋಟೆ ಸೇರಲು ತೊಡಕನ್ನು ಉಂಟುಮಾಡಿದೆ.
ಇತಿಹಾಸ:-
ಈ ಕೋಟೆಯ ಇತಿಹಾಸ ಅಸ್ಪಷ್ಟವಾಗಿದೆ.
ಈ ಬಾನ ಬತೂತ ಹೇಳುವಂತೆ ಇದು 1200 ರಲ್ಲಿ ನಿಮರ್ಿಸಲಾಗಿದೆ. ನವಾಯತ್ ಸುಲ್ತಾನ ಇದನ್ನು ನಿಮರ್ಿಸಿದನೆಂದು ನಂಬಲಾಗಿದೆ. ಮುಂದೆ ಇದು ವಿಜಯನಗರದವರ ಆಳ್ವಿಕೆಗೆ ಒಳಪಟ್ಟಿತೆನ್ನಲಾಗಿದೆ.
ಕೆಲವು ಇತಿಹಾಸಕಾರರ ಪ್ರಕಾರ ಈ ಕೋಟೆ 1552ರಲ್ಲಿ ಚನ್ನಬೈರದೇವಿ ನಿಮರ್ಿಸಿದಳು. ವಿಜಯನಗರ ರಾಜರ ಸಾಮಂತೆಯಾಗಿ ಸುಮಾರು 54 ವರ್ಷ ಆಳ್ವಿಕೆ ನೆಡೆಸಿದಳೆಂದು ಹೇಳಲಾಗುತ್ತದೆ. ಈ ಕೋಟೆಯ ಮೂಲಕ ಕಾಳುಮೆಣಸನ್ನು ಯುರೋಪ್ಗೆ ರಪ್ತು ಮಾಡಲಾಗುತಿತ್ತು. ಆದ್ದರಿಂದ ಇದೊಂದು ಪ್ರಮುಖವಾದ ವ್ಯಾಪಾರ ಕೇಂದ್ರವಾಗಿತ್ತು.
ಇನ್ನು ಕೆಲವು ಸಂಶೋಧಕರು ಹೇಳುವಂತೆ ಬಿಜಾಪುರ ಸುಲ್ತಾನರು ಇದನ್ನು ನಿಮರ್ಿಸಿದರೆಂದು ಹೇಳಲಾಗುತ್ತಿದೆ. ಇತಿಹಾಸ ಏನೇ ಹೇಳಲಿ ಈ ಕೋಟೆ ಒಂದು ಅತಿ ಮುಖ್ಯವಾದ ಕೋಟೆಗಳಲ್ಲೊಂದಾಗಿತ್ತು ಎನ್ನುದರಲ್ಲಿ ಎರಡು ಮಾತಿಲ್ಲ.
2000-2001 ರಲ್ಲಿ ಸವರ್ೆ ಮಾಡಿ ಹಲವು ಹೊಸ ಮಾಹಿತಿಯನ್ನು ಹೊರಗೆಡವಲಾಯಿತು. ಚಿನ್ನದ ನಾಣ್ಯಗಳು, ಗುಂಡುಗಳು, ಮೆಟಲ್ ಬಾಲ್ ಮತ್ತಿತರೆ ವಸ್ತುಗಳು ಪತ್ತೆಯಾದವು. ಅದಲ್ಲದೇ ಕೋಟೆಗೆ ನೀರಿನ ತೊಟ್ಟಿಯೊಂದಿಗೆ ಸುರಂಗ ಸಂಪರ್ಕವಿರುವುದು ಪತ್ತೆಯಾಯಿತು.
ಕೊನೆ ಸಿಡಿ:-

ಇಷ್ಟೆಲ್ಲಾ ಐತಿಹಾಸಿಕ ಮಹತ್ವವಿರುವ ಕೋಟೆಗೆ ಸರಕಾರ ಹಾಗು ಜನರು ಕೊಡುತ್ತಿರುವ ಮಹತ್ವ ಮಾತ್ರ ಶೋಚನೀಯವಾಗಿದೆ.
ಕೇವಲ ಒಬ್ಬನೇ ಕೆಲಸದಾಳು ಈ ಕೋಟೆ ನೋಡಿಕೊಳ್ಳುತ್ತಿದ್ದಾನೆ! ಕೋಟೆಯ ಪ್ರವೇಶ, ಉಸ್ತುವಾರಿ, ಪ್ರವಾಸಿಗರಿಂದ ಹಾನಿಯಾಗದಂತೆ ನೋಡಿಕೊಳ್ಳುವುದಲ್ಲದೇ ಸ್ವಚ್ಚತಾ ಕಾರ್ಯ ಕೈಗೊಳ್ಳುವುದು ಈತನೊಬ್ಬನಿಂದ ಮಾತ್ರ ಅಸಾಧ್ಯ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...