Saturday, December 20, 2014

ಹೊಸ ಮನ್ವಂತರದತ್ತ....


ಚಿತ್ರ ಇಂಟರ್ ನೆಟ್.
ಪರಮ ಅದ್ಭುತ ಈ ದ್ರಾವಣ
ಕುಡಿದವರು ರಾವಣ!
ಹನಿ ಹನಿಯೂ ವಿಷದ ತೊಟ್ಟು
ಜನ್ಯವು ಸೋಜಿಗದ ಬಿಕ್ಕಟ್ಟು.

        ಹೊಸ ಮನ್ವಂತರದ ರಾವಣ
        ಹುಟ್ಟಿಕೊಂಡಿದ್ದಾನೆ.
        ಎಲ್ಲಿ? ಎಲ್ಲಿ? ಅಲ್ಲಿ ಅಲ್ಲಿ
        ಗಲ್ಲಿ ಗಲ್ಲಿ ನೋಡಲ್ಲಿ!

ರಾವಣ, ಕಂಸ, ಜರಾಸಂದ
ಕುಡಿದಿರ್ಪರು ಈ ಪೇಯ
ಕೃತಿಯೆಲ್ಲವೂ ಹೇಯ.

        ಅಪ್ಪ ಅಮ್ಮ ಅಕ್ಕ ತಂಗಿಯರಿಲ್ಲ
        ನ್ಯಾಯ ಅನ್ಯಾಯ ಇವರಲ್ಲೇ ಇಕ್ಯ
        ತತ್ವ ಆದರ್ಶಗಳಿಲ್ಲ.
ಹಾದಿ ಹಾದಿಯಲೂ ಜನಿಪರು
ಕೊಂದರೂ ಹುಟ್ಟಿ ಬರುವರು
ರಕ್ತ ಬೀಜಾಸುರರಂತೆ
ಮತ್ತೊಬ್ಬರು,
ನುಂಗಿ ನೀರ್ ಕುಡಿವರು.
        ವಾಸ್ತವದ ಬೇರನು
        ಕೆದಕಿದರೆ ಬರಿಕಣ್ಣೀರು.
        ಇದಕೆಲ್ಲಿಯ ಕೊನೆ
        ದಿನ ದಿನವೂ ಹಿಗ್ಗುತಿದೆ
        ಪೂತನಿಯ ವಿಷದ ಮೊಲೆ!

1 comment:

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...