Tuesday, May 9, 2017

ಹೆಂಡತಿ ಕೈ ಕೊಟ್ಟರೆ ಹೆದರದಿರಿ.......



    ಬದುಕಿನ ಅರ್ಥದ ಹುಡುಕಾಟದಲ್ಲೇ ಬದುಕು ಕಳೆದು ಹೋಗುತ್ತೆ. ಮಕ್ಕಳು ಮರಿಗಳು, ಹೆಂಡತಿ, ಸೈಟು, ಚೆಂದದ ಕಾರು, ಪ್ರಮೋಷನ್ ಟೆನ್ಶನ್. ಓರಗೆಯವನಿಗೆ ಸಿಕ್ಕ ಬಡ್ತಿ ನನಗಿಲ್ಲವೆಂಬ ಪಡಿಪಾಟಲು. ಒಂದೇ ಎರಡೇ ನಮ್ಮ ಹಳವಂಡಗಳು. ಮುಗಿಯದ ರೈಲು ಬೋಗಿ, ಕಾಶ್ಮೀರದಿಂದ ಕನ್ಯಾ ಕುಮಾರಿ. ಕೆಲವರಂತೂ ಏನೋ ಕಳೆದುಕೊಂಡವರಂತೆ ಬದುಕುತ್ತಿರುತ್ತಾರೆ. ಏನು ಹುಡುಕುತ್ತಿರುತ್ತಾರೆಂದು ಯಾರಿಗೂ ತಿಳಿಯದು. ಸ್ವತಹ ಅವರಿಗೂ!
    ಬದುಕು ನಮ್ಮ ಮುಂದೊಂದು ಗಿಪ್ಟು ತಂದಿಡುತ್ತೆ. ಅದನ್ನು ತೆರೆಯಲೂ ನಮಗೆ ಪುರುಸೊತ್ತಿರುವುದಿಲ್ಲ. ಯಾರೋ ದಾರಿಹೋಕ ತೆರೆದಾಗ ನಾವು ಅಚ್ಚರಿಗೊಳ್ಳುತ್ತೇವೆ. ಅಯ್ಯೋ ನಾವು ತೆರಯಬಹುದಿತ್ತೆಂದು ಕೈ ಹಿಸುಕಿಕೊಳ್ಳುತೇವೆ. ತೆರೆದ ಮನಸ್ಸಿನಿಂದ ನೋಡುವ ಗುಣವಿದ್ದರೆ ಮಾತ್ರ ಅದನ್ನು ಆಯ್ದುಕೊಳ್ಳಬಹುದು.
    ಸಣ್ಣದೇನೋ ತಪ್ಪಿಹೋದರೆ, ಕೆಲಸವಾಗದಿದ್ದರೆ ಅವರ ಪಡಿ ಪಾಟಲು ನೋಡಬೇಕು. ಕೆಲವೊಮ್ಮೆ ನಗು, ಕೆಲವೊಮ್ಮೆ ಅನುಕಂಪ ತರಿಸುತ್ತೆ. ಆದರೆ ಇಲ್ಲೊಂದು ನೈಜ ಘಟನೆ ಇದೆ ಕೇಳಿಸಿಕೊಳ್ಳಿ..
    ತಾನು ಪ್ರೀತಿಸಿದ ಹೆಂಡತಿಯೇ ಕೈಕೊಟ್ಟರೆ ಹೇಗಾಗಬೇಡ ಆತನ ಸ್ಥಿತಿ. ಈತ ನಮ್ಮ ನಿಮ್ಮೆಲ್ಲರಿಗಿಂತ ಭಿನ್ನ. ಅವನ ನೈಜ ಕತೆಯಿದೆ. ಇಷ್ಟವಾದರೆ ಲೈಕಿಸಿ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...