Monday, October 2, 2017

ದಾರಿಯಿಲ್ಲದ ದಾರಿಯಲ್ಲಿ......ಅಡಿಗರ ನೆನೆದು.........


ಕಾಡಿನೊಳ ಹೊಕ್ಕು
ಪೊದೆ ಪೊದರು ಗಿಡಗಂಟೆ
ಮುಳ್ಳುಗಳ ನಡುವೆ
ಹೊಚ್ಚ ಹೊಸ ಹಾದಿ ಕಡಿವವರು
ಪದ್ಧತಿಯ ಬಿಟ್ಟು
ಮುದ್ದಾಮು ದಾರಿ ಹುಡುಕುತ್ತಾ
ಅಲೆವವರು, ಬೆಟ್ಟದ ನೆತ್ತಿ ಹತ್ತಿ
ಹತ್ತೂ ಕಡೆ ಕಣ್ಣು ಕಣ್ಣು
ಬಿಡುವಂಥವರು, ಇಂಥವರು
ಅರ್ಥವಾಗುವುದಾದರೂ ಹೇಗೆ?....... ಎಂದು ಗೋಪಾಲಕೃಷ್ಣ ಅಡಿಗರು ತಮ್ಮ ಪದ್ಯದಲ್ಲಿ ಕಥಿಸಿದ್ದಾರೆ. ನಮ್ಮ ಸಾಹಸಕ್ಕೂ ಈ ಪದ್ಯವನ್ನು ಸಾಮ್ಯ ಉಂಟೆದಿಲ್ಲಿ ಟಂಕಿಸಿದೆ.




ನನಗಿನ್ನೂ ಅರ್ಥವಾಗಿಲ್ಲ. ಕಿಸೆಯ ಭಾರ ದೇಹ ಭಾರ ಕಳಕೊಂಡು ಹೊರಡುವ ಈ ಚಾರಣಗಳ ಅರ್ಥ. ಸುಮ್ಮನೆ ಭಾನುವಾರದ ಸಂಜೆ ಉಂಡು ಮಲಗಬಹುದಿತ್ತು. ಕಾಫಿ ಹೀರುತ್ತಾ, ಮಳೆ ನೋಡುತ್ತಾ, ಒಂದೆರಡು ವಾತರ್ಾ ಪತ್ರಿಕೆ ಮಗುಚಿ ಹಾಕಬಹುದಿತ್ತು. ಆದರೆ, ದಾರಿಯಲ್ಲದ ದಾರಿಯಲಿ, ಹನಿ ನೀರಿಗೆ ಪರಿತಪಿಸಿ, ಜಪಿಸಿ, ಮುಳ್ಳು ಕಂಟಿಯ ಗೀರಿಸಿಕೊಳ್ಳುವ ಜರೂರೇನಿತ್ತು? ರಕ್ತ ಹೀರುವ ಇಂಬಳಗಳ ಕಾಟ. ಕಲ್ಲಿಂದ ಕಲ್ಲಿಗೆ ಹಾರುತ್ತಾ ಬೆಟ್ಟವೇರಬೇಕು. ಬೆಟ್ಟವಿಳಿಯಬೇಕು. ಎರಡು ದಿನ ನೋಯುವ ಕಾಲು. ಮುಷ್ಕರ ಹೂಡುವ ಗಂಟುಗಳು. ದಕ್ಕದ್ದು ದಕ್ಕಿಸಿಕೊಳ್ಳುವ ಛಲವೇ? ಗೊತ್ತಿಲ್ಲ. ಅಡಿಗರ ಮತ್ತೊಂದು ಪದ್ಯ ನೆನಪಾಗುತ್ತಿದೆ.
 ಸ್ವಿಚ್ ಎಲ್ಲೋ ಇದೆ ಸಿಕ್ಕುತ್ತಿಲ್ಲ?!








ಜಲಪಾತದೊಂದಿಗೆ ಸೆಲ್ಪಿ...
ಒಂದಲ್ಲ ಎರಡೆರಡು ಸಲ ನೋಡಿ ನಿರಾಶರಾಗಿ ಹಿಂದಿರುಗಿದ ಮೇಲೆ ಛಲ ಬಂದು ಹತ್ತಿ ನೋಡಿದೆವು ಬೆಟ್ಟದಾ ನೆತ್ತಿ. ನಡುವೆ ಸಿಗುವ ಫನರ್್ಗಳು, ಆಕರ್ಿಡ್ಗಳ ಲೆಕ್ಕವಿಟ್ಟವರ್ಯಾರು? ನೆತ್ತಿ ಸುಡದ ಮರಗಳ ನೆರಳು. ಕಲ್ಲುಗಳ ಸಂಧಿನಲ್ಲಿ ಕೋತಿಯಾಟವಾಡಿ ತಲುಪಿದೆವು ಅರೆ ನೆತ್ತಿ. ಅಲ್ಲೇ ಎರಡು ಬೆಟ್ಟಗಳ ನಡುವಲ್ಲಿ ಧುಮುಕುವ ತಿಳಿ ನೀರ ಜಲಧಾರೆ. ಜಟಾಧರನ ಜಟೆಯಿಂದೆಂಬಂತೆ ಉಕ್ಕಿ ಉಕ್ಕಿ ಬರುತಲಿತ್ತು ಮತ್ತೆ ಮತ್ತೆ. ಆಗಾಗ ಮೋಡದ ಪರದೆ. ಕ್ಯಾಮರಕ್ಕೆ ಬರಪೂರ ಊಟ. ಚಕ್ಕಳ ಬಕ್ಕಳ ಹಾಕಿ ಕೂತು ಜಲಧಾರೆ ಎದುರಿಗೆ ಒಂದಿಷ್ಟು ಧ್ಯಾನಿಸಿ, ಉಂಡು, ಮಿಂದು ಹೊರಟೆವು. ರುಚಿ ರುಚಿ ಪತ್ರೊಡೆ ಎಲೆಯನ್ನು ಗೆಳೆಯರು ಆರಿಸಿಕೊಟ್ಟರು. ಮರು ದಿನವೂ ಅದರದೇ ಧ್ಯಾನ.
ಭಾಗವಹಿಸಿದ ಗೆಳೆಯರಿಗೆಲ್ಲಾ ಧನ್ಯವಾದ.


2 comments:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...