Sunday, February 4, 2018

ಮಚ್ಚಟ್ಟು ಶಾಲೆಗೆ 'ಹಸಿರು ಶಾಲೆ' ಪ್ರಶಸ್ತಿಯ ಹ್ಯಾಟ್ರಿಕ್ ಗರಿ..

 
 ಮರವೇ ವರ ಎಂಬ ಮಕ್ಕಳ ಮತ್ತು ಶಿಕ್ಷಕರ ತಂಡ. 'ಒಂದು ಮರ ಸಾವಿರ ವರ' ಎಂಬ ಫೋಷ ವಾಕ್ಯವನ್ನು ಓದಿಕೊಂಡು ಶಾಲೆ ಒಳ ಹೊಕ್ಕರೆ ಅಂಜೂರ ಮತ್ತು ಮಂದಾರ ಗಿಡಗಳು ಸ್ವಾಗತಿಸುತ್ತವೆ. ಅಂಜೂರದ ಎಡ ಬಲಕ್ಕಿರುವ ಚಿಕ್ಕು, ತೆಂಗು, ನೆಲ್ಲಿ, ಅಜರ್ುನ, ಧೂಪ, ಕದಂಬ, ಸೀತಾಫಲಗಳು, ಬಾದಾಮಿ, ವಾಟೆ, ನೇರಳೆ, ಅಡಿಕೆ, ಹಾಲೆ, ಮಾವು, ನಿಂಬೆ ಸಾಗುವಾನಿ ಮುಂತಾದ ಗಿಡಗಳು ಶಾಲೆಯ ಸುತ್ತಲೂ ತಮ್ಮ ನಗು ಚೆಲ್ಲಿವೆ. ಉರಗ, ತುಂಬೆ, ಅಮೃತ ಬಳ್ಳಿ, ಅರಶಿನ, ಸ್ಥಳೀಯ ಅಗಳು ಶುಂಠಿ, ಕಿರಾತ ಕಡ್ಡಿ ಮುಂತಾದ ಔಷಧೀಯ ಗಿಡಗಳು ಶಾಲೆಯ ಸುತ್ತುವರಿದಿದೆ.
 ಶಾಲೆಯಲ್ಲಿನ ಇಂಗು ಗುಂಡಿಗಳು, ತಿಪ್ಪೆ ಗುಂಡಿ, ಪೈಪ್ ಕಾಂಪೋಸ್ಟ್, ಶಾಲೆಯ ನೀರು ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿನ ಅನನ್ಯತೆ, ವಿವಿಧ ಔಷಧಿ ಗಿಡಗಳ ಕುರಿತು ಮಕ್ಕಳು ಸಂಗ್ರಹಿಸಿದ ಮಾಹಿತಿಗಳು, ಭೂಮಿ ಎಂಬ ವಿಜ್ಞಾನ ಪತ್ರಿಕೆ, ವಿಜ್ಞಾನದ ವಿವಿಧ ಮಾದರಿಗಳು, ಪ್ಲಾಸ್ಟಿಕ್ ನಿರ್ವಹಣೆ, ಸ್ವಚ್ಚತೆಯ ನಿರ್ವಹಣೆ, ಅಡುಗೆ ಕೋಣೆಯ ನಿರ್ವಹಣೆ, ಶಾಲಾ ಕೈತೋಟ, ಗೋಡೆಯ ಮೇಲಿನ ವಿವಿಧ ಫೋಷಣೆಗಳು, ಹೀಗೆ ಶಾಲೆ ಕೈಗೊಂಡ ವಿವಿಧ ವಿನೂತನ ಕಾರ್ಯಕ್ರಮಗಳನ್ನು  ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಶಾಲೆಗೆ ಹಸಿರು ಶಾಲೆ ಎಂಬ ಜಿಲ್ಲಾ ಪ್ರಶಸ್ತಿಯನ್ನು ಮೂರನೇ ಬಾರಿಗೆ ಶ್ರೀ ಶೇಷ ಶಯನ ಕಾರಿಂಜ ಅವರು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ, ಪರಿಸರ ಅಧಿಕಾರಿ ಶ್ರೀ ಲಕ್ಷೀಕಾಂತ, ಶ್ರೀ ದಿನೇಶ್ ಶೆಟ್ಟಿಗಾರ್ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದಶರ್ಿ ಉಪಸ್ಥಿತರಿದ್ದರು. ಸಸ್ಯ ಶ್ಯಾಮಲದ ದಿನೇಶ ನಾಯಕ್ ವಿಟ್ಲ ಇವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

2 comments:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...