Monday, June 10, 2019

ಹೂಲಿಯ ವಿಶಿಷ್ಟ ಪಂಚಲಿಂಗೇಶ್ವರ ದೇವಾಲಯ.


ಹೂಲಿಯ ದಾರಿಯಲ್ಲಿ.. 

ಕರ್ನಾಟಕದ ಸಾಮಾನ್ಯ ಹೆಸರುಗಳಾದ ಕಮಲಾಪುರ, ರಾಮಾಪುರ ಇತ್ಯಾದಿಗಳ ನಡುವೆ 'ಹೂಲಿ' ಎಂದೊಡೆ ಏನೋ ವಿಚಿತ್ರ ಹೆಸರು ಕೇಳಿದ ಭಾವ ನಮ್ಮಲ್ಲಿ ಮೂಡುತ್ತದೆ. 'ಹೂಲಿ' ಎಂದರೆ ಕಿವಿಯ ಆಭರಣ ಎಂದು. ಹಿಂದೆ ಮಹಿಷ್ಪತಿ ಎಂದು ಕರೆಯಲ್ಪಡುತ್ತಿದ್ದ ಊರಿಗೆ ಒಂದು ಸುತ್ತು ಹಾಕಿ ಬರೋಣ ಬನ್ನಿ.
ಪಂಚಲಿಂಗೇಶ್ವರ ದೇವಾಲಯ ಹಿಂದೆ ಬಸದಿಯಾಗಿತ್ತು.. 
ಕನರ್ಾಟಕದ ಅತಿ ಪುರಾತನ ನಗರವಾದ ಹೂಲಿ, ಪಂಚಲಿಂಗೇಶ್ವರ ಎಂಬ ವಿಶಿಷ್ಟ ದೇವಾಲಯದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ರಟ್ಟರ ಆಡಳಿತದಲ್ಲಿ ನಿಮರ್ಿಸಿ, ಚಾಲುಕ್ಯರಿಂದ ಪುರ್ನನಿಮರ್ಾಣಗೊಂಡ ವಿಶಿಷ್ಟ ದೇವಾಲಯ ಪಂಚಲಿಂಗೇಶ್ವರ. ಹುಬ್ಬಳ್ಳಿಯಿಂದ ಕೇವಲ 65 ಕಿ. ಮೀ, ಬೆಂಗಳೂರಿನಿಂದ 368 ಕಿ.ಮೀ ದೂರದಲ್ಲಿದೆ.

ಅನೇಕ ವಿಶಿಷ್ಟತೆಯಿಂದ ಈ ದೇವಾಲಯ ಪ್ರಸಿದ್ಧವಾಗಿದೆ. ಇದರ ಸುತ್ತ ಮುತ್ತ 9 ಬೀಳುವ ಮತ್ತು ಬೀಳುವ ಹಂತದಲ್ಲಿರುವ ದೇವಾಲಯಗಳಿವೆ. ಒಂದು ಒಂದಕ್ಕಿಂತ ಭಿನ್ನ. ಎಲ್ಲವೂ ಆಕರ್ಷಕವಾಗಿವೆ. ಆದರೆ ಅವುಗಳ ಅರಣ್ಯರೊಧನ ಕೇಳುವವರಿಲ್ಲ. 
ಒಂದು ಕಾಲದಲ್ಲಿ ಪಂಚ ತೀರ್ಥಂಕರ ಬಸದಿಯಾಗಿದ್ದ ಇದು ಈಗ ಪಂಚಲಿಂಗೇಶ್ವರವೆಂದು ಪ್ರಸಿದ್ಧಿ ಪಡೆದಿದೆ. ಪಂಚ ಗೋಪುರಗಳಲ್ಲಿ ಕೇವಲ ಮೂರು ಮಾತ್ರ ಉಳಿದಿದೆ. ವಿಶಾಲವಾದ ನವರಂಗ ಮೂರು ದಿಕ್ಕುಗಳಿಗೆ ತೆರೆದುಕೊಂಡಿದೆ. ನವರಂಗವು ಬಳ್ಳಿಗಾವಿಯನ್ನು ನೆನಪಿಸುತ್ತದೆ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಬಸದಿ ಇದ್ದದ್ದು ಶೈವ ದೇವಾಲಯವಾಗಿ ಪಲ್ಲಟಗೊಂಡಿದೆ. ದೇವಾಲಯದ ಬಾಗಿಲ ಚೌಕಟ್ಟಿನ ಮೇಲೆ ಇದು ಬಸದಿಯಾಗಿತ್ತು ಎಂಬುದಕ್ಕೆ ಲಿಖಿತ ಮತ್ತು ಚಿತ್ರ ಮಾಹಿತಿ ಸಿಗುತ್ತದೆ! 
ಬೆಟ್ಟದಲ್ಲಿ ಕೋಟೆಯ ಅವಶೇಷಗಳು ... 
ದೇವಾಲಯದ ಆವರಣದಲ್ಲಿನ ಶಾಸನಗಳನ್ನು ಚೌಕಟ್ಟು ನಿಮರ್ಿಸಿ ಕಾಪಿಟ್ಟಿದ್ದಾರೆ. ಆ ಕಾಲದ ಒತ್ತಡಗಳ, ಸಾಮಾಜಿಕ ಬದಲಾವಣೆಗಳ ಚಿತ್ರಣಗಳ ಜೊತೆಗೆ ಜನ ಜೀವನದ ವಿವರಗಳು ಇಲ್ಲಿನ ಶಾಸನಗಳಿಂದ ನಮಗೆ ತಿಳಿದು ಬರುವುದು. ಊರ ಸುತ್ತಮುತ್ತ ಅನೇಕ ಭಗ್ನಾವಶೇಷಗಳು ಎಲ್ಲೆಲ್ಲೂ ಕಾಣಸಿಗುತ್ತದೆ. ಊರು ಈ ದೇವಾಲಯದೊಳಗೂ ನುಗ್ಗುವಂತಿದೆ. ದೇವಾಲಯದ ಆವರಣದಲ್ಲಿ ಸಣ್ಣ ವಸ್ತು ಸಂಗ್ರಹಾಲಯವೂ ಇದೆ. ಪುರಾತತ್ವ ಇಲಾಖೆ ಈ ದೇವಾಲಯದ ದೇಖರೇಖಿ ವಹಿಸಿಕೊಂಡಿದೆ.
ಸೂರ್ಯ ನಾರಾಯಣ ದೇವಾಲಯ, ಬಸವ ದೇವಾಲಯದ ಜೊತೆ ಜೊತೆಗೆ ಕಾಲ ಗರ್ಭಕ್ಕೆ ಸೇರಲು ಒಟ್ಟು 9 ದೇವಾಲಯಗಳು ತುದಿಗಾಲ ಮೇಲೆ ನಿಂತಿವೆ! ಪುರಾತತ್ವ ಇಲಾಖೆ ಹಾಗೂ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲಿನ ಜನರ ಧನ ದಾಹಕ್ಕೆ ದೇವಾಲಯಗಳು ಸಂಪೂರ್ಣವಾಗಿ ನಲುಗಿವೆ.  
ದೇವಾಲಯದ ಸನಿಹದಲ್ಲಿನ ಬೆಟ್ಟದ ಮೇಲೆ ಉಳಿದುಕೊಂಡ ಒಂದೆರಡು ಬುರುಜುಗಳು ಇಲ್ಲಿ ಕೋಟೆ ಇತ್ತು ಎಂಬುದಕ್ಕೆ ಸಾಕ್ಷ್ಯ ನುಡಿಯುತ್ತೆ. ದೇವಾಲಯದ ಸನಿಹ ದೊಡ್ಡ ಕೆರೆಯಿದೆ. ಹತ್ತು ವರುಷದಿಂದ ಮಳೆಯಾಗದೆ ಊರು ಬಿಸಿಲಿಗೆ ನಲುಗಿದೆ. ಮಲಪ್ರಭಾ ನದಿಯ ನೀರನ್ನು ಬಳಸಿ ಕೃಷಿ ಮತ್ತು ಕುಡಿಯಲು ಬಳಸುತ್ತಾರೆ.
ನಮ್ಮ ಪೂರ್ವಜರ ಇತಿಹಾಸದ ಸಾಕ್ಷ್ಯ ಹೇಳುವ ನಮ್ಮ ಹೆಮ್ಮೆಯ ಕುರುಹನ್ನು ನಾವು ಉಳಿಸಿಕೊಳ್ಳದೇ ಹಾಳುಗೆಡಹುತ್ತಿರುವುದು ನಮ್ಮ ಇತಿಹಾಸದ ಪ್ರಜ್ಞೆಯನ್ನು ಕೆಣಕುತ್ತಿವೆ. ಪ್ರವಾಸೋಧ್ಯಮ ಇಲಾಖೆ ಮನಸು ಮಾಡಿದರೆ ಒಂದೊಳ್ಳೆಯ ಪ್ರವಾಸಿ ಕೇಂದ್ರ ಮಾಡಬಹುದಿತ್ತು.

ಶ್ರೀಧರ್. ಎಸ್. ಸಿದ್ದಾಪುರ.

2 comments:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...