ಏಕೋ ಮೂರು ನಾಲ್ಕು ದಿನಗಳಿಂದ ಅವನದೇ ನೆನಪು! ಏನು ಮಾಡುತ್ತಿದ್ದಾನೊ ಏನೋ. ಅಪ್ಪನ ತಿಥಿಗೂ ಬಂದಿರಲಿಲ್ಲ ಪುಣ್ಯಾತ್ಮ. ಪೋನ್ನಲ್ಲಿ 'ಹಾಂ', 'ಹೂಂ' ಎಂಬಲ್ಲಿಗೆ ಮಾತಿಗೆ ಕಡಿವಾಣ. ನಿಮ್ಮ ಆಸ್ತಿನೂ ಬೇಡ ಮನೆನೂ ಬೇಡವೆಂದು ಒಂದಿಷ್ಟು ಹಣ ಹೊತ್ತು ಹೋದ ನನ್ನ ತಮ್ಮ ಇಂದು ಹೆಬ್ಬಾಗಿಲಲಿ ನಿಂತು ಹಣಕಿ ಹಾಕಿದಂತೆ ಭಾಸ. ಯಾರೋ ಅದು ಎಂದು ಕರೆದೆ. ತೆರೆದ ಹೆಬ್ಬಾಗಿಲಿನಲಿ ಆರಡಿ ಎತ್ತರದ ವ್ಯಕ್ತಿ. ಕನ್ನಡಕವಿಲ್ಲದೇ ದೂರದ್ದು ಕಾಣಲ್ಲ. 'ತಥ್ ಈ ಚಾಲೀಸು' ಎಂದು ಶಪಿಸಿದೆ. ಆತನ ಹಿಂದೆ ಮಿಳ್ಳೆಗಣ್ಣಿನ ಪೋರನೊಬ್ಬ ಹಣಕಿ ಹಾಕಿ ನನ್ನೇ ನೋಡುತ್ತಲಿದ್ದ. ಬಿಸಿಲಕೋಲೊಂದು ಇಡಿ ಮನೆಯನು ಬೆಳಗಿತ್ತು. ನನ್ನ ಗಮನವೆಲ್ಲಾ ಆತನೆಡೆಗೆ ಹೋಯಿತು. ತಕ್ಷಣಕ್ಕೆ ತಿಳೀಲಿಲ್ಲ. 'ನಿಜ ಅವನು ನನ್ನ ತಮ್ಮನೇ', 'ಒಳಗೆ ಬಾರೋ' ಎಂದೆ. ದೊಡ್ಡಪ್ಪ ಎಂದು ದೊಡ್ಡ ದನಿ ಮಾಡಿ ನನ್ನ ಕಾಲ ಬಳಸಿ ನಿಂತ ಮಗುವನ್ನು ಒಮ್ಮೆಲೆ ಎತ್ತಿ ಹಿಡಿದೆ. 'ಅಂತೂ ನಿನಗೆ ಮನೆ ನೆನಪಾಯಿತಲ್ಲ, ನಡೆ ನೀರು ದೋಸೆ ಮಾವಿನ ರಸ ಹಾಕ್ಕೊಂಡು ತಿನ್ನೋಣ' ಎನ್ನುತ್ತಾ ಮಗುವನ್ನು ಒಮ್ಮೆಲೆ ಆಕಾಶಕ್ಕೆ ಹಾರಿಸಿದೆ. #_ಶ್ರೀಧರ್_ಎಸ್_ಸಿದ್ದಾಪುರ. #_ಸಣ್ಣ_ಕತೆಗಳು.
Friday, April 10, 2020
ಬಿಳಲು
Subscribe to:
Post Comments (Atom)
ವಾರೆ ನೋಟ
ಲೋಚನ ದ ತುಂಬಾ ಚಂದ್ರ ತಾಲದ ಬಿಂಬ
( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...
No comments:
Post a Comment