Friday, April 10, 2020

'ಮಸಾಲೆ ದೋಸೆಗೆ ಕೆಂಪು ಚೆಟ್ನಿ'


 ಪುಸ್ತಕಗಳ ಬಗ್ಗೆ ಬರೆಯುವುದೆಂದರೆ ಚಳಿಗಾಲದ ರಾತ್ರಿ ಹಳೆ ಪ್ರೇಯಸಿಯನ್ನು ನೆನಪಿಸಿಕೊಂಡಂತೆ ಮೈ ಮನಗಳಲ್ಲಿ ಪುಳಕ! ಜೋಗಿಯವರ 'ಮಸಾಲೆ ದೋಸೆಗೆ ಕೆಂಪು ಚೆಟ್ನಿ' .
 
 ಸೊಗಸು ಎಲ್ಲಿದೆ? ನೋಡುಗನ ಕಣ್ಣಿನಲ್ಲಿ? ಉಹುಂ. ನೋಡುಗನ ಹೃದಯದಲ್ಲಿ? ಉಹುಂ. ನೋಡುಗನ ಮನಸ್ಸಿನಲ್ಲಿ. ಗೊತ್ತಿಲ್ಲ! 
 ಯಾರದೋ ಯಾವುದೋ ಅಭಿಪ್ರಾಯಗಳ ಕೇಳಿ ಮಾರು ಹೋಗುತ್ತೇವೆ. ಆ ಒಂದು ಪುಸ್ತಕ ಕೊಳ್ಳುತ್ತೇವೆ. ಮುಖಪುಟ ಚೆನ್ನಾಗಿರೋದ್ರಲ್ಲಿ ವಿಷಯವೇ ಇರೋಲ್ಲ. ವಿಷಯವಿರುವ ಪುಸ್ತಕಗಳಲ್ಲಿ ಮುಖಪುಟ, ತಲೆಬರೆಹ ಆಕರ್ಷಕ ಅನಿಸೊಲ್ಲ. ಹೀಗೆ ಕೊನೆಗೆ ನನಗನಿಸುವು    ಈ     ಪುಸ್ತಕ  ನನಗೆ ಬೇಕಿತ್ತಾ. ನೂರರಲ್ಲಿ 25-30 ಪುಸ್ತಕಗಳು ಈ ಸಾಲಿಗೆ ಸೇರುತ್ತವೆ. ತಿಳುವಳಿಕೆ ಮೂಡಿದಾಗ ತಡವಾಗಿರುತ್ತದೆ, ಕೊನೆಗೆ ಕಪಾಟಿನ ಮೂಲೆ ಸೇರುತ್ತವೆ. ಆದರೆ ಈ ಪುಸ್ತಕ ಹಾಗಿಲ್ಲ.
ಅದರಲ್ಲಿನ ಒಂದು ಸುಂದರ ಕತೆ ಹೀಗಿದೆ. 
 "ಜೀವನದಲ್ಲಿ ಅತ್ಯಂತ ನಿರುತ್ಸಾಹಗೊಂಡ ವ್ಯಕ್ತಿಯೊಬ್ಬ ಸಾಯಲೆಂದು ಹೊರಡುತ್ತಾನೆ. ಆ ರಾಜ್ಯದಲ್ಲಿ ಆತ್ಮಹತ್ಯೆ ಅಪರಾಧವಲ್ಲ. ಹಾಗಂತ ಎಲ್ಲೆಲ್ಲೋ ಬಿದ್ದು ಸಾಯುವಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮಹಾರಾಜನೇ ವ್ಯವಸ್ಥೆ ಮಾಡಿದ್ದಾನೆ. ಅದಕ್ಕೊಂದು ಜಾಗವಿದೆ. ರಾಜ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರೆ ನೀವು ಆತ್ಮಹತ್ಯೆ ಮಾಡಿಕೊಳ್ಳುವ ದಿನಾಂಕವನ್ನು ಕಾರ್ಯಾಲಯ ಸೂಚಿಸುತ್ತದೆ. ಕೆಲವೊಮ್ಮೆ ಆರೇಳು ತಿಂಗಳು ಕಾಯಬೇಕಾಗಿ ಬರುವುದೂ ಉಂಟು. ಕೆಲವೊಮ್ಮೆ ಐದಾರು ದಿನಗಳಲ್ಲಿ ಸಾಯುವ ಅವಕಾಶ ಬಂದರೂ ಬರಬಹುದು. 
 ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವ ವ್ಯಕ್ತಿ ಕಾರ್ಯಾಲಯಕ್ಕೆ ಹೋಗಿ ಅಜರ್ಿ ಸಲ್ಲಿಸುತ್ತಾನೆ. ಹದಿನೈದು ದಿನಗಳಲ್ಲಿ ಆತ್ಮಹತ್ಯಾ ದಿನಾಂಕವನ್ನು ಹೇಳುವುದಾಗಿ ಕಾರ್ಯಾಲಯ ಹೇಳಿ ಕಳಿಸುತ್ತದೆ. ಅವನು ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಅಲ್ಲೊಬ್ಬಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇವನು ಅವಳನ್ನು ಮಾತನಾಡಿಸುತ್ತಾನೆ. ಅವಳಿಗೆ ಐದು ತಿಂಗಳ ನಂತರ ಸಾಯೋ ದಿನ ನಿಗದಿಯಾಗಿರುತ್ತದೆ. ಅವಳಿಗೆ ಐದು ತಿಂಗಳು ಕಾಯಲು ಮನಸ್ಸಿಲ್ಲ. ಉಳಿಯಲು ಮನೆ ಇಲ್ಲ. ನೋಡಿಕೊಳ್ಳಲು ಯಾರೂ ಇಲ್ಲ.
 ಈತ ಆಕೆಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವನಿಗೂ ಐದು ತಿಂಗಳು ಕಾಯುವ ಮನಸ್ಸಿರುವುದಿಲ್ಲ. ಅದರ ಬಗ್ಗೆ ಮಾತನಾಡುತ್ತಾ ವಾರ ಉರುಳುತ್ತದೆ. ತಿಂಗಳೂ ಉರುಳುತ್ತದೆ. ಕ್ರಮೇಣ ಅವರಿಬ್ಬರೂ ಪ್ರೀತಿಸತೊಡಗುತ್ತಾರೆ. ಮದುವೆಯಾಗುತ್ತಾರೆ. ಪ್ರೀತಿ ಗಾಢವಾಗುತ್ತಿದ್ದ ಹಾಗೆ ಬದುಕ ಬೇಕು ಅನ್ನಿಸುತ್ತದೆ. ಸಾಯುವ ದಿನ ಸಮೀಪವಾಗುತ್ತಾ ಹೋಗುತ್ತಿದ್ದ ಹಾಗೆ ಅವರಿಬ್ಬರೂ ಬದುಕಲು ನಿರ್ಧರಿಸಿ ತಮ್ಮ ಆತ್ಮಹತ್ಯೆಯ ಅಜರ್ಿಯನ್ನು ವಾಪಾಸು ಪಡೆಯಲು ನಿರ್ಧರಿಸಿರುತ್ತಾರೆ. 
 ಆದರೆ ಅಧಿಕಾರಿಗಳೂ ಅದಕ್ಕೆ ಅನುಮತಿ ಕೊಡುವುದಿಲ್ಲ...ಸಾಯುತ್ತೀರಿ ಎಂದು ಹೇಳಿದ್ದಾಗಿದೆ. ನಿಮ್ಮ ಕಡತಗಳು ವಿಲೇವಾರಿಯಾಗಿವೆ. ಈಗ ಅದನ್ನು ಹಿಂತೆಗೆಯುವಂತಿಲ್ಲ. ಆ ದಿನಾಂಕದಂದು ಬಂದು ಸಾಯಿರಿ ! ಎಂದು ರಾಜಾಜ್ಞೆಯಾಗುತ್ತದೆ. ಈ ಮಧ್ಯೆ  ಅವರ ರಕ್ತ ಸಂಬಂಧಿಗಳು ಯಾರಾದರೂ ಸಾಯುವ ನಿಧರ್ಾರ ಮಾಡಿದರೆ, ಆತ್ಮಹತ್ಯಾ ದಿನವನ್ನು ಅವರಿಗೆ ವಗರ್ಾಯಿಸಬಹುದು ಎಂದು ಸಲಹೆ ಕೊಡುತ್ತಾರೆ. 
 ಅವರು ತಮ್ಮ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಹುಡುಕಾಟದಲ್ಲಿ ತೊಡಗುತ್ತಾರೆ. ಯಾರೂ ಸಿಗುವುದಿಲ್ಲ. ಹತಾಷೆ ಆವರಿಸುತ್ತದೆ. ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಬದುಕು ರೇಜಿಗೆ ಅನಿಸುತ್ತದೆ. ಅವಳು ಮೊದಲಿನಂತಿಲ್ಲ ಎಂದು ಅವನು ಭಾವಿಸುತ್ತಾನೆ. ಅವನು ಹೀಗಿರಲಿಲ್ಲ ಎಂದು ಅವಳು ಕೊರಗುತ್ತಾಳೆ. ಇದಕ್ಕಿಂತ ಸಾಯೋದೇ ವಾಸಿ ಅಂತ ಅವಳು ಒಳಗೊಳಗೇ ತೀಮರ್ಾನ ಮಾಡಿ ಬದುಕುವ ಯೋಚನೆ ಕೈ ಬಿಡುತ್ತಾಳೆ. 
 ಅಷ್ಟು ಹೊತ್ತಿಗೆ ಮದುವೆಯಾದವರಿಗೆ ಸಾಯುವ ಅವಕಾಶವಿಲ್ಲ. ಅವರ ಅಜರ್ಿಗಳನ್ನು ನಿರಾಕರಿಸಲಾಗಿದೆ ಕೇವಲ ಪ್ರೇಮಿಗಳಿಗೆ ಮಾತ್ರ ಸಾಯುವ ಅವಕಾಶವೆಂದು ಕಾನೂನು ತಿದ್ದುಪಡಿಯಾಗಿರುತ್ತದೆ.
 ಅವರಿಗೆ ಮದುವೆಯಾಗಿದೆ. ಅವರು ಪ್ರೇಮಿಗಳೂ ಅಲ್ಲ. ಹೀಗಾಗಿ ಬದುಕುವಂತಿಲ್ಲ, ಸಾಯುವಂತಿಲ್ಲ"
----
ಹೇಗಿದೆ ಕತೆ? ಯಾಕೆ ಓದಬೇಕು? ಚೆಂದದ ಕತೆಗಳಿಗಾಗಿಯಾ? ಯಾಕೆ ಬರೆಯಬೇಕು ಇಷ್ಟೆಲ್ಲಾ? ಅದಕ್ಕೂ ಮತ್ತೆರಡು ಚೆಂದದ ಕತೆಯಿದೆ. ಇಂತಹ ಅನೇಕ ಜಿಜ್ಞಾಸೆಗಳ ಒಳ ಸುಳಿ, ತಿರುಳಗಳ ಹೂರಣಗಳ ಹೊತ್ತು ತಂದ ಹೊತ್ತಗೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಅಲ್ಲವೇ ಅಲ್ಲ.( ನನ್ನ ಸ್ವಂತ ಅಭಿಪ್ರಾಯ) ಹಾಗಾಗಿ ಮತ್ತೊಮ್ಮೆ ಓದಿದೆ. 
 ಜೋಗಿಗೆ ನಾ ಕೇಳಬೇಕು, ಇಂತಹ ಕಾಡುವ  ಸಾಲುಗಳನ್ನು ಎಲ್ಲಿಂದ ಎತ್ತಿಟ್ಟುಕೊಂಡೆ. ತಣ್ಣನೆಯ ಆಹ್ಲಾದಂತಹ ಕತೆಗಳನ್ನು ಎಲ್ಲಿಂದ ಹೆಕ್ಕಿ ತಂದೆ. ಮಾತಿನ ಸುಂದರ ಸೀರೆ ಉಡಿಸೋದು ನೀನು ಎಲ್ಲಿಂದ ಕಲಿತೆ? 
ಶ್ರೀಧರ್ ಎಸ್. ಸಿದ್ದಾಪುರ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...