Friday, March 2, 2018

ಮಾತೇ ಆಡದೆ ಬುದ್ಧಿ ಕಲಿಸುವ ಒಬ್ಬ ಹಳೇ ಗೆಳೆಯ....

 ಇತನ ಬಗ್ಗೆ ಹೇಳಿ ಮುಗಿಸಲಾರೆ. ಜಗಳವೇ ಆಡದ ನನ್ನ ಗೆಳೆಯ. ಅನೇಕ ಯುವಕರ ಪ್ರೇರಣಾ ಶಕ್ತಿ. ನನ್ನಂಥವರು ಸಾಹಿತ್ಯದೆಡೆಗೆ ಆಕಷರ್ಿಸುವಂತೆ ಮಾಡಿದ ಪುಣ್ಯಾತ್ಮ ಹೇಳುತ್ತಾ ಹೋದರೆ ಮುಗಿಯದ ಪದ ಬಂಡಿಯಾದೀತು. ನಿಮ್ಮ ಊಹೆ ಸರಿ. ಯಂ                            ಡ                   ಮೂ                       ರಿ                 ವೀ                           ರೇಂ                       ದ್ರ                            ನಾ                        ಥ್.
Yandamuri Veerendranath, me and Ashok
ಯಂಡಮೂರಿ ಎಂದರೆ ಎನೋ ಒಂದು ಹುಚ್ಚು, ಪುಳಕ. ಅವರ ಪುಸ್ತಕಗಳನ್ನೇ ಪಾರಾಯಣ ಮಾಡಿದ ಕಾಲವೊಂದಿತ್ತು. ನಮ್ಮ ಮೇಲೆ ಅಪಾರ ಪ್ರಭಾವ ಬೀರಿದ ಒಬ್ಬ ಲೇಖಕ. ಸಾಹಿತ್ಯದೆಡೆಗೆ ಸಾಮಾನ್ಯರನ್ನು ಸೆಳೆದ ಅಪ್ರತಿಮ ಮಾಂತ್ರಿಕ! ಪಿಯು ಕಲಿಯುವ ದಿನಗಳಲಿ ಪುಸ್ತಕ ಓದಿಗಿಂತ ಕಾದಂಬರಿ ಓದಿ, ಕ್ರಿಕೆಟ್ ಆಡಿದ್ದೆ ಹೆಚ್ಚು! ಆದರೂ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದೆ. ಕೆಲಸವೂ ಸಿಕ್ಕಿತ್ತು. ಜೆ. ಸಿ ಯವರು ಅವರನ್ನು ಒಮ್ಮೆ ಕುಂದಾಪುರಕ್ಕೆ ಕರೆದು ಕಾರ್ಯಗಾರ ಮಾಡಿಸಿದ್ದರು. ಅವರೊಂದಿಗೆ ಒಂದಿಡಿ ದಿನ ಕಳೆಯುವ ಭಾಗ್ಯ ಒದಗಿ ಬಂದಿತ್ತು. ಅಂದು ಜೊತೆಗೆ ಗೆಳೆಯ ಅಶೋಕನಿದ್ದ. ಆಟ, ಮಾತು-ಕತೆ, ಸಂವಾದ ಹೀಗೆ ಹತ್ತು ವಿವಿಧ ಕೆಲಸದಿಂದ ಒಂದಿಡಿ ದಿನ ನಮ್ಮನ್ನು ಹಿಡಿದಿಟ್ಟಿದ್ದರು. 'ಉತ್ತರ ಹೇಳಿ ಬಹುಮಾನ ಗೆಲ್ಲಿ' ಆಟದಲ್ಲಿ ಮೊದಲು ಉತ್ತರ ಹೇಳಿ ಬಹುಮಾನ ಪಡೆದ ಪುಳಕ ಮರೆಯಲುಂಟೇ. ಸಂವಾದದಲ್ಲಿ ಅವರ ಪುಸ್ತಕದ ಮೇಲೊಂದು ಪ್ರಶ್ನೆ ಕೇಳಿದ್ದೆ. ಅದೇನೆಂದರೆ 45 ನಿಮಿಷದಲ್ಲೇ ಅಡುಗೆ ಮಾಡಬಹುದೇ? ಎಂದು. ನನ್ನ ಮನೆಗೆ ಬನ್ನಿ ಮಾಡಿ ತೋರಿಸುವೆ ಎಂದು ಪೋನ್ ಸಂಖ್ಯೆ ನೀಡಿ ಆಹ್ವಾನಿಸಿದ್ದರು! ಸಮಯದ ಸದುಪಯೋಗಕ್ಕೆ ಅದ್ಭುತ ಉದಾಹರಣೆ ಎಂದರೆ ಯಂಡಮೂರಿ! ಊಟದ ಸಮಯವನ್ನು ವ್ಯರ್ಥವಾಗಲೂ ಬಿಡದೇ, ಊಟ ಪ್ಯಾಕ್ ಮಾಡಿ ಮರವಂತೆ ಬೀಚ್ಗೆ ಹೋಗಿ, ದಾರಿಯಲ್ಲೇ ಊಟಮಾಡಿಕೊಂಡು, ಮರವಂತೆ ಬೀಚ್ ಸವಿದು ಬಂದು ಸಮಯ ಉಳಿಸಿಕೊಂಡಿದ್ದು ಇನ್ನೂ ನೆನಪಿದೆ.

2 comments:

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...