Thursday, March 26, 2020

ಅಳಿಲ ಧ್ಯಾನ!



ಅಳಿಲ ಮರಿಯೇ
ಅಳಿಲ ಮರಿಯೇ
ಎಲ್ಲಿರುವೆ?
ತುಪಾಕಿಯ ಮೇಲೆ
ಕುಂತಿರುವೆ.
ಅಯ್ಯೋ ರಾಮ
ಏನು ಕೆಲಸ
ಅಲ್ಲಿ ನಿನಗೆ?
ಬೇಗ ಸೇರೆ 
ಮನೆಗೆ.
'ತುಪಾಕಿ ಮಾಮ
ಬಂದರೆ ಕೈಯ
ಮುಗಿವೆ
ಹೊಡೆಯದಿರು ಗುಂಡು
ಎನುವೆ.
ನಾಕು ಜನರ ಪ್ರಾಣ
ಉಳಿಸಿ ಬರುವೆ.

ಶ್ರೀಧರ್ ಎಸ್. ಸಿದ್ದಾಪುರ. ಮಾರ್ಚ್ ೨೨.
#ಪುರುಸೊತ್ತು_2020.

#ಮಕ್ಕಳ_ಪದ್ಯಗಳು.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...